• Samvada
Sunday, May 22, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Photo

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ : ಒಂದು ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

Vishwa Samvada Kendra by Vishwa Samvada Kendra
December 1, 2020
in News Photo, Photos
250
3
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ : ಒಂದು ವಿಶ್ಲೇಷಣೆ  #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ
491
SHARES
1.4k
VIEWS
Share on FacebookShare on Twitter

ಈ ವರ್ಷ, ವಿಶ್ವ ಸಂವಾದ ಕೇಂದ್ರ, ಕರ್ನಾಟಕ  ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ ನಡೆಸಿತು. ಆನ್ಲೈನ್ ನಲ್ಲಿ ಕೇಳಲಾದ ಪ್ರಶ್ನೆಗಳಿಗೆ, ಆಯ್ಕೆಗಳನ್ನು ಮತಗಳ ಮೂಲಕ ದಾಖಲಿಸಬಹುದಾಗಿತ್ತು. ದಿನಕ್ಕೆ ಎರಡರಂತೆ  ಒಟ್ಟು ೧೨ ಪ್ರಶ್ನೆಗಳನ್ನು ನಮ್ಮ ಫೇಸ್ಬುಕ್, ಟ್ವಿಟರ್ ಹಾಗೂ ವಾಟ್ಸಾಪ್ ಸ್ನೇಹಿತರೊಂದಿಗೆ ಹಂಚಿಕೊಳ್ಳಲಾಗಿತ್ತು. ಪ್ರತಿ ಪ್ರಶ್ನೆಗೆ ೧೦ ಆಯ್ಕೆಗಳು ಹಾಗೂ ಪ್ರತಿಯೊಬ್ಬರೂ ೩ ಮತಗಳನ್ನು ಚಲಾಯಿಸಬಹುದಿತ್ತು. ಪ್ರತಿ ಪ್ರಶ್ನೆಗೆ ೨೪ ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಸಾವಿರಾರು ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಆಯ್ಕೆಗಳಿಗೆ ಮತ ಚಲಾಯಿಸಿದ್ದಾರೆ.

ಕರ್ನಾಟಕ, ಕನ್ನಡ, ಕನ್ನಡ ನಾಡು ಎಂದ ಕೂಡಲೇ, ಕೆಲವರು ಸಿನಿಮಾಗಳು ಕನ್ನಡವನ್ನು ಪ್ರತಿನಿಧಿಸುತ್ತವೆ ಎಂದು ನಂಬುತ್ತಾರೆ. ಕನ್ನಡ ಉಳಿಯಬೇಕಾದರೆ ಕನ್ನಡ ಸಿನಿಮಾ ಮಾತ್ರ ನೋಡಬೇಕು ಎಂಬುದು ಅವರ ಅಂಬೋಣ. ಕೆಲ ಕನ್ನಡ ಸಿನಿಮಾಗಳು, ಜನರ ಜೀವನವನ್ನೇ ಬೆಳಗಿಸಿರುತ್ತವೆ. ಸಿನಿಮಾ ಎಂಬ ಮಾಧ್ಯಮದಿಂದ ಕನ್ನಡ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯ ಎಂಬುದು ಹಲವರ ಅಭಿಪ್ರಾಯ. ತಕ್ಕಮಟ್ಟಿಗೆ ಇದು ನಿಜವೂ ಹೌದು.  ಇನ್ನು ಸಿನಿಮಾ ಒಳಗಿಳಿದರೆ ಅದರಲ್ಲಿನ ನಾಯಕ ನಟ, ನಟಿ, ಪೋಷಕ ನಟ, ನಿರ್ದೇಶಕ, ಗಾಯಕ- ಗಾಯಕಿಯರು – ಇವರನ್ನೇ ಆರಾಧ್ಯ ದೈವ ಎಂದು ಪರಿಗಣಿಸುವ ಜನರಿರುತ್ತಾರೆ. ಸಿನಿಮಾ – ಬೆಳ್ಳಿ ಪೆರದೆ ಒಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತದೆಯಾದರೆ, ಕಿರುತೆರೆಯ  ಕಾರ್ಯಕ್ರಮಗಳು, ಅವುಗಳ ನಿರೂಪಣೆ, ಸಾರುವ ಸಂದೇಶ ಈಗಿನ ದಿನಗಳಲ್ಲಿ ತನ್ನದೇ ರೀತಿಯಲ್ಲಿ ಆಕರ್ಷಿಸುತ್ತಿದೆ. ಕೆಲ ಕಿರುತೆರೆಯ ಕಾರ್ಯಕ್ರಮಗಳು ದಾಖಲೆಗಳನ್ನು ಸೃಷ್ಟಿಸಿವೆ.  ಈ ರೀತಿಯ ನಮ್ಮ ಕನ್ನಡ ಕಾರ್ಯಕ್ರಮಗಳನ್ನು ಬೇರೆ ರಾಜ್ಯಗಳಿಗೆ ಅವರ ಭಾಷೆಯಲ್ಲಿ ತರುವ ಪ್ರಯತ್ನ ನಡೆದರೆ ನಮ್ಮಲ್ಲಿ ಹೆಮ್ಮೆ ಮೂಡದೇ  ಇರದು. 

READ ALSO

ಮೋಹಿನಿ ಅಟ್ಟಂ ನೃತ್ಯಕ್ಕೆ ತಡೆ ಒಡ್ಡಿದ ಕೇರಳದ ಜಸ್ಟೀಸ್ ಕಲಮ್ ಪಾಶಾ

ಗದಗಿನಲ್ಲಿ ಲವ್ ಜಿಹಾದ್ : ಮೋಸ ಹೋದ ಎಂಬಿಎ ಪದವೀಧರೆ

 ಕೆಲವರಿಗೆ ಭಾವ ಗೀತೆಗಳು, ಕವಿಗಳು, ಸಾಹಿತ್ಯ, ಪುಸ್ತಕ, ಕಾದಂಬರಿ ಇವುಗಳು ಕನ್ನಡವನ್ನು ಪ್ರತಿನಿಧಿಸುತ್ತವೆ. ಕನ್ನಡವೆಂಬ ಭಾಷೆ ಉಳಿದಿರುವುದು ಈ ಸಾಹಿತ್ಯದಿಂದಲೇ. ಆದ್ದರಿಂದ ಸಾಹಿತ್ಯ ಕಲಿಸುವ ಪಾಠ, ರೂಪಿಸುವ ಬದುಕು ಅತಿ ವಿಶಿಷ್ಟ ಎಂಬ ಬಲವಾದ ನಂಬಿಕೆ. ಇನ್ನು ಕೆಲವರಿಗೆ ಜಾನಪದ ಸಾಹಿತ್ಯದಲ್ಲಿನ ಸೊಗಡು, ಲಾಲಿತ್ಯ ಕನ್ನಡದ ಭಾವವನ್ನು ಎಲ್ಲರಲ್ಲಿ ಮೂಡಿಸುವಲ್ಲಿ ಪಾತ್ರವಹಿಸುತ್ತವೆ ಎಂದು ಪರಿಭಾವಿಸುತ್ತಾರೆ.

  ನಮ್ಮಲ್ಲಿನ ಭಾಷೆ ಕನ್ನಡವಾದರೂ, ಭಾಷೆಯ ಶೈಲಿ ಊರಿಂದ ಊರಿಗೆ ಬದಲಾಗುತ್ತಾ, ಮೂಲ ಸಂಸ್ಕೃತಿ ಒಂದೇ ಆದರೂ ಆಚರಣಾ ಪದ್ಧತಿ ಬದಲಾಗುತ್ತಾ ಹೋಗುತ್ತವೆ. ತಿಂಡಿ ತಿನಿಸುಗಳು  ಊರಿಂದ ಊರಿಗೆ ಬದಲಾಗುತ್ತವೆ, ಕೆಲ ಜಿಲ್ಲೆಗಳು ಖಾರದ ತಿಂಡಿಗೆ ಪ್ರಖ್ಯಾತಿ ಮತ್ತೆ ಕೆಲವು ಸಿಹಿ ತಿಂಡಿಗೆ. ಊರಿನಿಂದ ಊರಿಗೆ ಹೋದಂತೆ, ಕಾಣ ಸಿಗುವ ಪ್ರೇಕ್ಷಣೀಯ ಸ್ಥಳಗಳ ವೈಖರಿಯೇ ಬೇರೆ. ಕೋಟೆ ಕೊತ್ತಲಗಳು, ಅರಮನೆಗಳು, ದೇವಸ್ಥಾನಗಳು, ಜಲಪಾತಗಳು, ಬೆಟ್ಟಗುಡ್ಡಗಳು ಜನರನ್ನು ತಂತಮ್ಮ ರೀತಿಯಲ್ಲಿ ಆಕರ್ಷಿಸುತ್ತವೆ. ಆದ್ದರಿಂದ ಕೆಲವರಿಗೆ ಈ ಪ್ರವಾಸಿ ತಾಣಗಳು, ತಿಂಡಿ ತಿನಿಸುಗಳು ಅವುಗಳ ಜೊತೆ ಬೆಸೆದಿರುವ ಕಥೆಗಳು, ಅವುಗಳ ಅಂಕಿಅಂಶಗಳು ಜಗತ್ತಿಗೆ ಪರಿಚಯವಾಗಬೇಕು ಹಾಗೂ ಕರ್ನಾಟಕಕ್ಕೇ ಮುಕುಟದಂತಿರುವ ಈ ಸ್ಥಳಗಳು, ತಿಂಡಿ ತಿನಿಸುಗಳು  ಸರ್ವಕಾಲಕ್ಕೂ  ಹೆಮ್ಮೆಯಷ್ಟೇ ಅಲ್ಲದೇ ಅಸೂಯೆಯನ್ನೂ ಹುಟ್ಟಿಸುತ್ತವೆ ಎಂಬ ಭಾವವಿರಿಸಿಕೊಂಡಿರುತ್ತಾರೆ.

ಹೀಗೆ ನಾನಾ ತರಹದ ಪ್ರಶ್ನೆಗಳನ್ನು ಮುಂದಿಡುತ್ತಾ, ವಿಶ್ವ ಸಂವಾದ ಕೇಂದ್ರ ಒಟ್ಟು ೧೨ ಪ್ರಶ್ನೆಗಳನ್ನು ಕೇಳಿತು. ಒಂದು ಪ್ರಶ್ನೆ ಹೊರತುಪಡಿಸಿ (ನಮ್ಮಲ್ಲಿ ಬಂದ ಕಡೆಯ ಪ್ರಶ್ನೆ – ಮಾತೃಭಾಷೆಯಲ್ಲಿ ಶಿಕ್ಷಣ ಬೇಕೆ /ಬೇಡವೇ.) ಈ ಪ್ರಶ್ನೆಗಳಿಗೆ ಆಯ್ಕೆಗಳನ್ನು ಒಂದು ತಜ್ಞರ ತಂಡ ರಚಿಸಿತು.  ಎಲ್ಲ ರೀತಿಯ ಜನರು, ವಯಸ್ಸು, ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆಗಳನ್ನು ನೀಡಲಾಗಿತ್ತು. ಅಲ್ಲದೆ ಪ್ರತಿ ಪ್ರಶ್ನೆಗೆ, ಪ್ರತಿಯೊಬ್ಬರಿಗೂ ೩ ಮತಗಳಿದ್ದವು. ಇಷ್ಟವಾಗುವ ೩ ಆಯ್ಕೆಗಳಿಗೆ ಜನರು ಮತ ಚಲಾಯಿಸಬಹುದಾಗಿತ್ತು.

ನವೆಂಬರ್ ಮುಗಿಯುತ್ತ ಬಂತು. ನವೆಂಬರ್ ಎಂದರೆ ಕನ್ನಡದ ತಿಂಗಳು ಎಂದು ಕೇವಲ ಕನ್ನಡಿಗರಷ್ಟೇ ಅಲ್ಲದೆ ಉಳಿದವರೂ ಹೇಳುವಷ್ಟರ ಮಟ್ಟಿಗೆ ನಮ್ಮ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಹೀಗೆ ಬಂದ ಕೆಲ ಪ್ರಶ್ನೆಗಳ ಅಭಿಪ್ರಾಯಗಳನ್ನು ವಿಶ್ಲೇಷಿಸಿ, ಕಂತುಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಓದಿಕೊಳ್ಳಿ. ನಿಮ್ಮ ಅಭಿಪ್ರಾಯವನ್ನು ತಿಳಿಸಿಕೊಡಿ.

-ಸಂಪಾದಕೀಯ ತಂಡ

  • email
  • facebook
  • twitter
  • google+
  • WhatsApp
Tags: #ಕನ್ನಡಕ್ಕಾಗಿ_ಲಿಂಕ್_ಒತ್ತಿ#ಕನ್ನಡದನೆನಪು#ರಾಜ್ಯೋತ್ಸವ_ವಿಶೇಷKannadaRajyotsava

Related Posts

News Digest

ಮೋಹಿನಿ ಅಟ್ಟಂ ನೃತ್ಯಕ್ಕೆ ತಡೆ ಒಡ್ಡಿದ ಕೇರಳದ ಜಸ್ಟೀಸ್ ಕಲಮ್ ಪಾಶಾ

March 23, 2022
News in Brief

ಗದಗಿನಲ್ಲಿ ಲವ್ ಜಿಹಾದ್ : ಮೋಸ ಹೋದ ಎಂಬಿಎ ಪದವೀಧರೆ

March 11, 2022
Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale
ABPS

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale

March 20, 2021
ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ
Photos

ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ

January 15, 2021
ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ
Photos

ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ

January 6, 2021
ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?
Articles

ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?

January 2, 2021
Next Post
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ : ಒಂದು ವಿಶ್ಲೇಷಣೆ  #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

Comments 3

  1. Pingback: ನಿಮಗೆ ಇಷ್ಟವಾದ ಕನ್ನಡದ ಕಾದಂಬರಿ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #
  2. Pingback: ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನ
  3. Pingback: “ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

NEWS IN BRIEF – NOV 17, 2011

November 17, 2011
RSS 3-day National Meet ABKM-2016 to begin tomorrow at Hyderabad, Press Meet by Dr Manmohan Vaidya

RSS 3-day National Meet ABKM-2016 to begin tomorrow at Hyderabad, Press Meet by Dr Manmohan Vaidya

October 22, 2016

ಸಮವಸ್ತ್ರವನ್ನು ಎತ್ತಿ ಹಿಡಿದ‌ ಹೈಕೋರ್ಟ್

March 15, 2022
Manjeshwar: PATH SANCHALAN

Manjeshwar: PATH SANCHALAN

January 17, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In