• Samvada
Monday, May 23, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಕನ್ನಡ ಕೃತಿಗಳ ಮೌಲ್ಯ ಅರ್ಥೈಸುವ ‘ಸುಕೃತಿ’

Vishwa Samvada Kendra by Vishwa Samvada Kendra
November 25, 2021
in News Digest
250
0
ಕನ್ನಡ ಸಾಹಿತ್ಯಗಳ ವಿಡಿಯೋ ಪರಿಚಯ ಮಾಡುತ್ತಿರುವ ‘ಸುಕೃತಿ’
491
SHARES
1.4k
VIEWS
Share on FacebookShare on Twitter


‘ಒಲವೆಂಬ ಹೊತ್ತಿಗೆಯ ಓದ ಬಯಸುವ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ ಹುಚ್ಚ;
ಹಗಲಿರುಳು ದುಡಿದರೂ ಹಲ ಜನುಮ
ಕಳೆದರೂ ನೀ ತೆತ್ತಲಾರೆ ಬರೀ ಅಂಚೆ ವೆಚ್ಚ’


ಎಂಬ ಅಂಬಿಕಾತನಯದತ್ತರ ವಾಣಿ ನಮಗೆಲ್ಲ ಅರಿವೇ ಇದೆ. ಮೇಲ್ನೋಟದಲ್ಲಿ ಓದಿದಾಕ್ಷಣ ಇದೇನೋ ಓಲವಿನ ಬಗ್ಗೆ ಹೇಳುತ್ತಿದ್ದಾರೇನೋ ಎಂಬ ಭಾವ ಮೂಡಿದರೂ ಆಳಕ್ಕೆ ಇಳಿದಾಗ ಅರಿವಿಗೆ ಬರುವುದು ಇಲ್ಲಿ ನಡೆಯುತ್ತಿರುವುದು ಸು‘ಕೃತಿ’ಯ ಪರಿಚಯ ಎಂದು. ‘ಸುಕೃತಿ’ – ಈಗಾಗಲೇ ಸಾವಿರಾರು ಮಂದಿಯ ಮೆಚ್ಚುಗೆ ಪಡೆದು ಮುನ್ನಡೆಯುತ್ತಿರುವ ಫೇಸ್‍ಬುಕ್ ಪೇಜ್ ಹಾಗೂ ಯೂಟ್ಯೂಬ್ ಚಾನೆಲ್. ಹೆಸರೇ ಸೂಚಿಸುವಂತೆ ಇದರ ಮುಖ್ಯ ಕಾರ್ಯೋದ್ದೇಶವೇ ಉತ್ತಮ ಪುಸ್ತಕ ಪರಿಚಯಮಾಡಿಕೊಡುವುದು.

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ಒಂದೂವರೆ ವರ್ಷಗಳ ಹಿಂದೆ ಗೆಳೆಯರೊಬ್ಬರು ಮಾತಿನ ಭರದಲ್ಲಿ ನಾನು ಓದಿದ ಯಾವುದಾದರೂ ಒಳ್ಳೆಯ ಕೃತಿಯ ಪರಿಚಯ ಮಾಡಿ ಈ ‘ಸುಕೃತಿ’
ಮೇಲ್ ಐಡಿಗೆ ಕಳುಹಿಸಿ ಎಂದು ಹೇಳಿದಾಗ ಕೊಂಚವೇ ಒಳಗೆ ನಡುಗಿದ್ದೆ. ಜನರ ಪರಿಚಯ ಕೇಳಿದ್ದೆ, ಇದೆಂಥ ‘ಪುಸ್ತಕ ಪರಿಚಯ’ !! ಎಂಬುದು ಸೋಜಿಗ ಹುಟ್ಟಿಸಿತ್ತು. ಹೊಸತನದೆಡೆಗೆ ಮುಖಹೊರಳಿಸಲು ಅಂಜಿಕೆ ಏಕೆ ? ನೋಡೇಬಿಡುವ ಎಂದು ಕಳುಹಿಸಿದ ವಿಡಿಯೋ ಮುಂದಿನ ಸರಣಿಯಲ್ಲಿಪರದೆಯಲ್ಲಿ ಹೊರಳಿದಾಗ ಆದ ಆನಂದ ಅಷ್ಟಿಷ್ಟಲ್ಲ. ಹೀಗೇ ದಿನಗಳೆದಂತೆ ಸುಕೃತಿಯಲ್ಲಿ ಬರುತ್ತಿದ್ದ ಹೊಸ-ಹಳೆಯ ಪುಸ್ತಕಗಳ ಸಾಲು ಸಾಲು ಪರಿಚಯಾತ್ಮಕ ವಿಡಿಯೋಗಳು, ಅದರ ಕರಾರುವಾಕ್ಕು ಮಾಹಿತಿ, ಸ್ಪಷ್ಟನಡೆ, ಸಮಗ್ರ ವಿಷಯ – ಕನಿಷ್ಟ ಸಮಯ, ವಿಶ್ವದಾದ್ಯಂತ ಇರುವ ಕನ್ನಡಿಗರ ಮಾತುಗಳು, ಸಾಮಾನ್ಯರೆನಿಸಿದರೂ ಅಸಮಾನ್ಯವಾಗಿ ಪರಿಚಯಿಸುವ ಜನರ ವಾಕ್‍ಚಾತುರ್ಯ, ದಿಗ್ಗಜ ವಾಗ್ಮಿಗಳು, ವಿವಿಧ ಕ್ಷೇತ್ರದ ಸಾಧಕರು, ವಿವಿಧ ವಯೋಮಾನದವರು ಮಾತನಾಡಿದ್ದು ; ಇವೆಲ್ಲವೂ ನನ್ನನ್ನು ಮತ್ತಷ್ಟು ಕುತೂಹಲಕ್ಕೆ ತಳ್ಳುತ್ತಾ ಸಾಗಿತು.

ನೋಡ ನೋಡುತ್ತಿದ್ದಂತೆ ವೀರಸಾವರ್ಕರ್ ಸರಣಿ, ಎಸ್.ಎಲ್.ಭೈರಪ್ಪರ ಸರಣಿ, ಸ್ವಾಮಿ ವಿವೇಕಾನಂದರ ಸರಣಿ, ಕನ್ನಡ ರಾಜ್ಯೋತ್ಸವದ ಸರಣಿಗಳಲ್ಲಿ ಉಚ್ಚನೀಚವೆಂಬ ಭೇದವಿಲ್ಲದೆ ಸರ್ವರಿಗೂ ‘ಸುಕೃತಿ’ ಅವಕಾಶ ಕಲ್ಪಿಸಿತ್ತು. ಕಳೆದ ವಿಶ್ವ ಪುಸ್ತಕ ದಿನದಂದು 10 ವರ್ಷದ ಪುಟ್ಟ ಬಾಲಕಿಯಿಂದ ಹಿಡಿದು 80ರ ವಯೋಮಾನದವರೆಗಿನ ಜನರನ್ನು ಸಂದರ್ಶಿಸಿ, ಅವರಿಗೆ ಪುಸ್ತಕಗಳಲ್ಲಿ ಕುತೂಹಲ ಹುಟ್ಟಿಸುವ ಸಂಗತಿಗಳಾವುವು ಎಂಬ ಪ್ರಶ್ನೋತ್ತರ ಸರಣಿ ಎಲ್ಲರನ್ನು ಆಕರ್ಷಿಸಿತ್ತು. ಪ್ರತಿವಾರ ಒಂದೋ ಎರಡು ವಿಡಿಯೋ ಬರುತ್ತದಾದರೂ ‘ಯಾವ ಪುಸ್ತಕ ಪರಿಚಯದ ವಿಡಿಯೋ ಇಂದು ಬರುತ್ತದೆ?!’ ಎಂಬುದು ಯಾರ್ಯಾರಿಗೂ ಸುಳಿವೇ ಇಲ್ಲದೆ ದುತ್ತೆಂದು ಬಂದು ನಮ್ಮನ್ನು ದಿಗ್ಬ್ರಾಂತರನ್ನಾಗಿ ಮಾಡುವುದರ ಜೊತೆಗೆ ಸಂತೋಷವನ್ನೂ ನೀಡುತ್ತದೆ.

ಏಪ್ರಿಲ್ 14, 2020ರ ಅಂಬೇಡ್ಕರ್ ಜಯಂತಿ ದಿನದಂದು ಈ ಶ್ರೇಷ್ಠ ಕಾರ್ಯಕ್ಕೆ ಅಡಿ ಇಟ್ಟು ಇಂದಿಗೆ ಒಂದೂವರೆ ವರ್ಷ ಸಾರ್ಥಕವಾಗಿ ಸಾಗಿ ಬಂದಿದೆ. ಈಗಾಗಲೇ 178 ಪುಸ್ತಕಗಳನ್ನು 139 ಮಂದಿ ಪರಿಚಯಿಸಿಕೊಟ್ಟಿದ್ದಾರೆ. ಅದರಲ್ಲೂ ಬಹಳಷ್ಟು ಮಂದಿ ಸ್ವಪ್ರೇರಣೆಯಿಂದಲೇ ಪುಸ್ತಕ ಪರಿಚಯ ಮಾಡಿದ್ದಾರೆ. ಈ ಕೆಲಸದಲ್ಲೂ ಮಹಿಳೆಯರದ್ದೇ ಮೇಲುಗೈ ಎನ್ನಲು ಹೆಮ್ಮೆಯೆನಿಸುತ್ತಿದೆ. ಬರೋಬ್ಬರಿ 69 ಮಹಿಳೆಯರು ಈ ಕೆಲಸದಲ್ಲಿ ಸೈ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಸಾಧನೆಯ ಹಾದಿಯಲ್ಲಿರುವ ಈ ಸುಕೃತಿಯನ್ನು ತಮ್ಮ ಹೆಗಲಿಗೆ ಪೇರಿಸಿಕೊಂಡು ಸಾಗುತ್ತಿರುವವರು ಬೆಂಗಳೂರಿನ ಐಟಿ ಉದ್ಯೋಗಿ ಪ್ರಮೋದ್ ನವರತ್ನ ಹಾಗು ಸ್ನೇಹಿತರು. ಇವರ ಪ್ರಕಾರ ಕನ್ನಡ ಸಾಹಿತ್ಯವಿರುವ ಕನ್ನಡವನ್ನು ಟೀಕಿಸದ, ಕೀಳೆಂದು ತೋರದ, ಹಾಸ್ಯಾಸ್ಪದವಲ್ಲದ ಯಾವುದೇ ಕನ್ನಡ ಪುಸ್ತಕವಿದ್ದರೂ ಅದು ಪರಿಚಯಕ್ಕೆ ಯೋಗ್ಯ ಎನ್ನುತ್ತಾರೆ. ಎಷ್ಟೋ ಪುಸ್ತಕಗಳು ಶ್ರೇಷ್ಠ ಚಿಂತನೆಗಳಿಂದ ಕೂಡಿದ್ದರೂ ಅದು ಜನರಿಗೆ ತಲುಪುವ ನಿಟ್ಟಿನಲ್ಲಿ ಯಾವುದೋ ಕಾರಣದಿಂದ ಹೊರಗುಳಿದಿರುತ್ತದೆ. ಇನ್ನು ಬಹಳಷ್ಟು ಪುಸ್ತಕಗಳು ಹೆಸರು ಮಾಡಿದ್ದರೂ ಅದರೊಳಗೆ ಯಾವ ಅಂಶವಿದೆ ಎಂಬುದನ್ನು ಸಂಪೂರ್ಣ ಅರಿವಿಗೆ ಬರದ ಹೊರತು ಜನರು ಅದನ್ನು ಖರೀದಿಸಲು ಅಭಿರುಚಿ ತೋರಿಸುವುದಿಲ್ಲ. ಇನ್ನು ಎಷ್ಟೋ ಹಳೆಯ ಪುಸ್ತಕಗಳು ಹೊಸ ತಲೆಮಾರಿಗೆ ಪರಿಚಯವಿರುವುದೇ ಇಲ್ಲ. ಈ ಎಲ್ಲ ಅಂಶಗಳನ್ನು ಮನನ ಮಾಡಿ ಈ ‘ಸುಕೃತಿ’ ಪುಸ್ತಕ ಪರಿಚಯವನ್ನು ಹೆಣೆಯಲಾಗಿದೆ ಎನ್ನುತ್ತಾರೆ.

ಭಾಷೆ ಮಾತನಾಡುವುದರಿಂದ ಉಳಿಯುವುದಲ್ಲ, ಓದುವುದರಿಂದ ಉಳಿಯುವಂಥದ್ದು. ಮುದ್ರಿಸಿಟ್ಟ ಪುಸ್ತಕಗಳು ತಲತಲಾಂತರದ ಆಸ್ತಿಯಾಗಿ ಮುಂಬರುವ ಪೀಳಿಗೆಗೆ ನೈಜ ಉಡುಗೊರೆಗಳಾಗಿ ಸ್ವೀಕಾರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬರೆಯುವವರ ಸಂಖ್ಯೆ ಓದುವವರ ಸಂಖ್ಯೆಗಿಂತಲೂ ಹೆಚ್ಚಾಗಿರುವುದು ಒಂದು ಅಸಮತೋಲನವನ್ನು ಉಂಟುಮಾಡಿದೆ. ಇದನ್ನು ಸಮತೋಲನ ಮಾಡುವುದಕ್ಕಿರುವ ಒಂದೇ ಮಾರ್ಗ ಓದು. ಕೇವಲ ಮಾಹಿತಿಗಾಗಿ ಹಾತೊರೆಯುವವರು ಯಾವುದೋ ಆ್ಯಪ್‍ಗಳ ಮೊರೆ ಹೋಗುತ್ತಾರೆಯೇ ಹೊರತು ನೈಜ ಜ್ಞಾನದಾಹವಿರುವ ವ್ಯಕ್ತಿ ಓದಿ ಓದಿ ವಿಕಾಸವಾಗುತ್ತಾನೆ . ಅಂತಹವರಿಗೆ ಸುಕೃತಿಯ ಪುಸ್ತಕ ಪರಿಚಯ ಮಾಲಿಕೆಗಳು ಬಿಚ್ಚಿಟ್ಟ ಖಜಾನೆಯಂತೆ ಭಾಸವಾಗುತ್ತದೆ. ಕನ್ನಡದ ಉಳಿವಿಗೆ ಹಾಗೂ ಏಳಿಗೆಗೆ ಅಣುರೇಣು ತೃಣಕಾಷ್ಠದಂತಹ ಕಾರ್ಯ ಮಾಡಿದರೂ ಕೂಡ ಅದೊಂದು ಶ್ರೇಷ್ಠತಮ ಕೆಲಸವಾಗಿ ಹೊರಹೊಮ್ಮುತ್ತದೆ. ಈಗ ಮುಂಬರುವ ನವೆಂಬರ್‍ನಲ್ಲೂ ಕೂಡ 1 ರಿಂದ 30 ರವರೆಗೆ ಮತ್ತಷ್ಟು ಪುಸ್ತಕಗಳ ಪರಿಚಯ ಮಾಲಿಕೆಗೆ ನವವಧುವಿನಂತೆ ಸುಕೃತಿ ಸಜ್ಜಾಗಿ ನಿಂತಿರುವುದು ಎಲ್ಲರ ಕುತೂಹಲ ಗರಿಗೆದರಿದಂತೆ ಭಾಸವಾಗಿದೆ. “ಕನ್ನಡ ಕೃತಿಗಳ ತಿಳಿಯೋಣ ಕನ್ನಡ ಕಂಪನು ಸವಿಯೋಣ”ಎಂಬ ಧ್ಯೇಯದೊಂದಿಗೆ ಕನ್ನಡ ಕೃತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ತಲುಪಿಸುತ್ತಿರುವ ಸುಕೃತಿಯ ಕಾರ್ಯ ಸ್ತುತ್ಯಾರ್ಹ. ಪುಸ್ತಕ ಪರಿಚಯ ಮಾಲಿಕೆಯನ್ನು ನೋಡಿ, ನೀವು ಪುಸ್ತಕಕ್ಕೆ
ಪರಿಚಿತರಾಗಿ.


ಕೃಪೆ : ವಿಜಯವಾಣಿ

  • email
  • facebook
  • twitter
  • google+
  • WhatsApp
Tags: book reviewSukrutiSukruti Kannada book introduction

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
ಖ್ಯಾತ ವಿದ್ವಾಂಸ ಡಾ. ಕೆ. ಎಸ್.ನಾರಾಯಣಾಚಾರ್ಯ ನಿಧನಕ್ಕೆ ದತ್ತಾತ್ರೇಯ ಹೊಸಬಾಳೆ ಸಂತಾಪ

ಖ್ಯಾತ ವಿದ್ವಾಂಸ ಡಾ. ಕೆ. ಎಸ್.ನಾರಾಯಣಾಚಾರ್ಯ ನಿಧನಕ್ಕೆ ದತ್ತಾತ್ರೇಯ ಹೊಸಬಾಳೆ ಸಂತಾಪ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

RSS Celebrates Independence Day, Sarasanghachalak Mohan  Bhagwat hoists National Flag at Palakkad

RSS Celebrates Independence Day, Sarasanghachalak Mohan Bhagwat hoists National Flag at Palakkad

August 15, 2017
Those 15 days, Article series by Sri Prashant Pole ; Day 1

Those 15 days, Article series by Sri Prashant Pole ; Day 1

August 2, 2018
RSS Sarasanghachalak Mohan Bhagwat inaugurated Rashtra Sevika Samiti’s 3day PRERANA SHIBIR at NewDelhi

RSS Sarasanghachalak Mohan Bhagwat inaugurated Rashtra Sevika Samiti’s 3day PRERANA SHIBIR at NewDelhi

November 11, 2016
Most waited Janam TV’s office opened at Kerala

Most waited Janam TV’s office opened at Kerala

July 7, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In