• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Blog

ಗಡಿನಾಡ ಹೃದಯ ಬಡಿತದ ಮಿಡಿತವಾದ ಕವಿ ಶಾಂತರಸ

Vishwa Samvada Kendra by Vishwa Samvada Kendra
April 7, 2022
in Blog
256
0
503
SHARES
1.4k
VIEWS
Share on FacebookShare on Twitter

ಕನ್ನಡದ ಹಿರಿಯ ಕವಿ ಶಾಂತರಸರು. ಶಾಂತರಸ ಅವರು ರಾಯಚೂರು ಜಿಲ್ಲೆಯ ಹೆಂಬೆರಳು ಹಳ್ಳಿಯಲ್ಲಿ ಜನಿಸಿದರು. ಕನ್ನಡದ ಹೆಸರಾಂತ ಸಾಹಿತಿ,ಕನ್ನಡಪರ ಹೋರಾಟಗಾರರು.ಗಜ಼ಲ್ ಸಾಹಿತ್ಯ,ಕಥೆ,ಹೀಗೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ನಡೆಸಿದವರು.ಅಲ್ಲದೆ ಪ್ರಕಟಣೆಯನ್ನು ಮಾಡಿದವರು.

ಇವರು 2006ರಲ್ಲಿ ಬೀದರದಲ್ಲಿ ಜರುಗಿದ 72ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಅವರ ಅಧ್ಯಕ್ಷೀಯ ನುಡಿಯ ಕೆಲವು ತುಣುಕುಗಳು ಇಂದಿಗೂ ಸ್ಮರಣಾರ್ಹ.

READ ALSO

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

1.ಸಮ್ಮೇಳನ ಪಟ್ಟ ದಲಿತರಿಗೆ ಸಿಗಲಿ
ಎಪ್ಪತ್ತೊಂದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಮೇಲು ಜಾತಿಯ ಪ್ರತಿಭೆಗಳಲ್ಲೆ ಹಂಚಿಹೋಗಿವೆ.  ಮುಂಬರುವ ಸಮ್ಮೇಳನದಲ್ಲಾದರೂ  ದಲಿತ ಪ್ರತಿಭೆಗಳನ್ನು ಗುರುತಿಸಿ ಕನ್ನಡ ನುಡಿ ತಾಯಿಯ ಚೊಚ್ಚಲ ಪಟ್ಟ ನೀಡಲಿ. ತನ್ಮೂಲಕ ನೆಲಪರಂಪರೆ ಉತ್ತರೋತ್ತರವಾಗಿ ಉತ್ತುಂಗಕ್ಕೇರಲಿ ಎಂದು ಆಶಿಸೋಣ.

2.ಪ್ರಾದೇಶಿಕ ಅಸಮಾನತೆ
ಅಖಂಡ ಕರ್ನಾಟಕದ ಶಿರೋಮಕುಟವೂ, ಹೈದ್ರಾಬಾದ್ ಕರ್ನಾಟಕ ಧರಿಸೀಮೆಯೂ ಎನಿಸಿಕೊಂಡಿರುವ ಈ ಬೀದರಿನಲ್ಲಿ ಈಗಾಗಲೇ ಅಖಿಲ ಭಾರತ ಮಟ್ಟದ ಎರಡು ಸಮ್ಮೇಳನಗಳು ಜರುಗಿಹೋಗಿವೆ. ಇದು ಮೂರನೇ ಸಮ್ಮೇಳನ. ಬದುಕಿನುದ್ದಕ್ಕೂ ಈ ಭಾಗವನ್ನು ಕುರಿತು ಧ್ವನಿ ಎತ್ತಿದ ನಾನು ಪ್ರಸ್ತುತ ಸಮ್ಮೇಳನಾಧ್ಯಕ್ಷನಾಗಿರುವ ವಿಶೇಷ ಅವಕಾಶವನ್ನು ಬಳಸಿಕೊಂಡು ಕೆಲವು ವಿಷಯಗಳನ್ನು ಪ್ರಸ್ತಾಪಿಸಬೇಕು. ಹೈದ್ರಾಬಾದ್ ಕರ್ನಾಟಕದ ಸ್ವಾತಂತ್ರ್ಯ ಚಳುವಳಿ, ಸ್ವಾತಂತ್ರ್ಯೋತ್ತರ ಇತಿಹಾಸ ಮತ್ತು ನನ್ನ ಬದುಕಿನ ಚರಿತ್ರೆ ಅಭಿನ್ನ. ನೈಜಾಂ ಇಲಾಖೆಯ ಹೃದಯಭಾಗವಾಗಿದ್ದ ಬೀದರ, ಗುಲಬರ್ಗಾ, ರಾಯಚೂರು, ಕೊಪ್ಪಳ ಈ ಜಿಲ್ಲೆಗಳು ಸ್ವಾತಂತ್ರ್ಯಪೂರ್ವಕಾಲದಿಂದಲೂ ಕನ್ನಡವನ್ನು ಉಳಿಸಿ ಬೆಳೆಸಲು ಅವಿರತ ಶ್ರಮಪಟ್ಟಿವೆ. ಭಾಲ್ಕಿಯ ಚೆನ್ನಬಸವ ಪಟ್ಟದ್ದೇವರು ಆಳರಸ ನಿಜಾಮರ ಒತ್ತಡದ ನಡುವೆಯೂ ಹೊರಗೆ ಉರ್ದು ಬೋರ್ಡು ಹಾಕಿ ಒಳಗೆ ಕನ್ನಡ ಶಾಲೆಗಳನ್ನು ನಡೆಸಿದ್ದಾರೆ.  ನನ್ನಂಥ ಬಡವಿದ್ಯಾಗಳಿಗಾಗಿ ಮುಷ್ಟಿ ಫಂಡ್ ಅಂದರೆ ಮನೆಮನೆಗೆ ಭಾರವಾಗದಂತೆ ಒಂದು ಹಿಡಿಹಿಟ್ಟು ಭಿಕ್ಷೆ ಎತ್ತಿ ವಸತಿ  ನಿಲಯಗಳನ್ನು  ನಡೆಸಿದ್ದಾರೆ. ಅಂದು ಭಾಲ್ಕಿ ಅಪ್ಪನವರು, ಪ್ರಭುರಾವ ಕಂಬಳಿವಾಲಾ ಇಂಥವರು ಆಳರಸರನ್ನು ಎದುರು ಹಾಕಿಕೊಂಡು ಕನ್ನಡ ಶಾಲೆಗಳನ್ನು ನಡೆಸಿರದಿದ್ದರೆ ನಾನು ಕನ್ನಡ ಕವಿಪಟ್ಟ ಹೊತ್ತು ಇವತ್ತು ಈ ವೇದಿಕೆ ಮೇಲೆ ನಿಲ್ಲುವ ಪ್ರಮೇಯವೇ ಬರುತ್ತಿರಲಿಲ್ಲ.

3.ಸ್ವಾಯತ್ತ ಸಂಸ್ಥೆಗಳು
ಸರಕಾರವು ರಾಜ್ಯದಲ್ಲಿರುವ ವಿವಿಧ ಅಕಾಡೆಮಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಸಮಿತಿ ಮುಂತಾದ ಸ್ವಾಯುತ್ತ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡಿ ಅಷ್ಟೇ ಅಲ್ಲ ಅಕಾಡೆಮಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ವಿವಿಧ ಜಿಲ್ಲೆಗಳಲ್ಲಿ ವಿಕೇಂದ್ರೀಕರಣಗೊಂಡು ಕಾರ್ಯ ನಿರ್ವಹಿಸುವಂತಾಬೇಕು. ಈ ಸಂಸ್ಥೆಗಳಾದರೂ ರಾಜಧಾನಿ ಕೇಂದ್ರಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಪ್ರತಿ ಹಳ್ಳಿ, ಪ್ರತಿ ವ್ಯಕ್ತಿಗೂ ಕಾರ್ಯಕ್ರಮಗಳನ್ನು ಮುಟ್ಟಿಸಬೇಕು. ಇಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಅಲಕ್ಷಿತರು ಹೆಚ್ಚೆಚ್ಚು ತೊಡಗುವಂತೆ ನಿಗಾ ವಹಿಸಬೇಕು. ಈ ಮೇಲಿನ ಎಲ್ಲ ಅಕಾಡೆಮಿಗಳು ಗಡಿಭಾಗಗಳಲ್ಲಿ ವಿಶೇಷ ಮುತುವರ್ಜಿ ವಹಿಸಿ ಕಾರ್ಯಕ್ರಮ ನಡೆಸುವ ಮೂಲಕ ಈ ಜನತೆಯಲ್ಲಿ ನಾಡು-ನುಡಿಯ ಪ್ರೇಮ ಗಟ್ಟಿಗೊಳಿಸುವಂತೆ ಮಾಡಬೇಕು. ಈ ತೆರನ ಸಾಂಸ್ಕೃತಿಕ ಅಸ್ಮಿತೆಯನ್ನು  ತಾಜಾಗೊಳಿಸುವ ಮೂಲಕವೇ ಅವರಲ್ಲಿ ಅವರಿಸಿಕೊಂಡಿರುವ ಅನಾಥ ಪ್ರಜ್ಞೆ, ಅಭದ್ರತೆಯನ್ನು ಹೋಗಲಾಡಿಸಬೇಕು.

4.ಸಮ್ಮೇಳನಗಳು ಸಾರ್ಥಕವೆನಿಸಬೇಕು
ಮಹನೀಯರೇ, ನಮ್ಮ ಮುಂದಿನ ಸಮಸ್ಯೆಗಳು, ಸವಾಲುಗಳು ಸಂಖ್ಯಾತೀತವಾಗುತ್ತಿವೆ.  ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ಕಳೆದ ಅರ್ಧ ಶತಮಾನದಿಂದಲೂ ಈ ನಾಡ ಮನೆಯ ಅಂಗಳದ ಮೂಲೆ ಮೊಡಕುಗಳಲ್ಲಿ ಕಸ ತುಂಬಿಟ್ಟಿದ್ದೇವೆ. ನಮ್ಮ ಮನಸ್ಸುಗಳಲ್ಲಿಯೂ ಸಹಸ್ರಮಾನದ ಮೌಢ್ಯವೆಂಬ ಧೂಳು ತುಂಬಿಬಿಟ್ಟಿದ್ದೇವೆ. ಇದನ್ನು ಹಸನುಗೊಳಿಸಲು ಸಾವಿರ, ಲಕ್ಷ, ಕೋಟಿ ಅಸಂಖ್ಯ ಕೈಗಳು ಮುಂದೆ ಬರಬೇಕು.  ದೇಶವನ್ನು ಆಳುತ್ತಿರುವ ಸರಕಾರ, ಪಕ್ಷಗಳು ನಿಜವಾದ ಜನಪರ ಕಾಳಜಿಯೊಂದಿಗೆ ಮುನ್ನುಗ್ಗಬೇಕು. ಧರ್ಮದ ಮುಖಂಡರು ಸ್ವಾರ್ಥ ಸಂಕುಚಿತತೆಯ ಪರದೆ ಹರಿದು ಅಸಲಿ ಮಾನವೀಯತೆಯ ಹಣತೆ ಹಚ್ಚಬೇಕು. ಅಂದಾಗಲೇ ಇಂಥ ನುಡಿ ಶಬ್ದಗಳಿಗೆ ಅರ್ಥ ಮತ್ತು ಗೌರವ ಬರುತ್ತದೆ. ಇಲ್ಲವಾದರೆ ಸಮ್ಮೇಳನಗಳು ಬರುತ್ತವೆ ಹೋಗುತ್ತವೆ. ಜನರ ಬದುಕು ಮಾತ್ರ ಅದೇ ದುಃಖ ದುಮ್ಮಾನಗಳಲ್ಲಿ ಕೊಳೆಯುತ್ತಿದ್ದರೆ ಇವು ಯಾರಿಗಾಗಿ ಮತ್ತು ಏತಕ್ಕಾಗಿ ಎಂಬ ಪ್ರಶ್ನೆಗಳು ಕಾಡುತ್ತಲೆ ಇರುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಹಂಚಿಕೊಳ್ಳುವ ಹಾದಿಯಲ್ಲಿ ನಾವೂ ನೀವೂ ಹಣತೆಯ ಒಂದೊಂದೇ ಹನಿ ಎಣ್ಣೆಯಾಗಿ ಒಂದಾಗಿ ಜಗವ ಬೆಳೆಸೋಣ.

  • email
  • facebook
  • twitter
  • google+
  • WhatsApp
Tags: gazalkannadaKannada Abhivruddhi PradhikaraKaviliteratureSenior Kannada Writershantarasa

Related Posts

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
Blog

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

September 6, 2022
Blog

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

August 15, 2022
ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
Blog

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

August 15, 2022
ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
Blog

ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

August 14, 2022
Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Next Post

DRDO successfully flight-tests Solid Fuel Ducted Ramjet technology off Odisha coast

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

‘Vikas of Jan, Jameen, Jal, Jangal and Janwar is Bharat’s Vikas;: RSS Sarasanghachalak Mohan Bhagwat at Hoshangabad, MP

‘Vikas of Jan, Jameen, Jal, Jangal and Janwar is Bharat’s Vikas;: RSS Sarasanghachalak Mohan Bhagwat at Hoshangabad, MP

February 9, 2017
ಖಿಲಾಫತ್ ಚಳುವಳಿಗೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ!?

ಖಿಲಾಫತ್ ಚಳುವಳಿಗೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ!?

September 25, 2021
“KNOW YOUR TERRORIST- “- Ram Madhav’s analytic article on Mumbai Blasts.

“KNOW YOUR TERRORIST- “- Ram Madhav’s analytic article on Mumbai Blasts.

July 18, 2011
RAMA JOIS INAUGURATION

National Council Meeting of AKHIL BHARATIYA ADHIVAKTA PARISHAD

January 5, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In