• Samvada
  • Videos
  • Categories
  • Events
  • About Us
  • Contact Us
Sunday, February 5, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Organisation Profiles

KRUSHI PRAYOG PARIVAR – ಕೃಷಿ ಪ್ರಯೋಗ ಪರಿವಾರ

nagesh by nagesh
April 11, 2011
in Organisation Profiles
248
0
498
SHARES
1.4k
VIEWS
Share on FacebookShare on Twitter

೧೯೯೦ರ ದಶಕ. ಬೇಸಿಗೆಯ ಒಂದು ದಿನ. ಶರಾವತಿ ಹಿನ್ನೀರಿನ ಮಧ್ಯದಲ್ಲಿರುವ ಸಣ್ಣ ಗ್ರಾಮ ತುಮರಿಯಲ್ಲಿ ಕೃಷಿಕರಿಗಾಗಿ ಒಂದು ಶಿಬಿರವನ್ನೇರ್ಪಡಿ ಸಲಾಗಿತ್ತು.  ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಡಾ|| ಉಪೇಂದ್ರ ಶೆಣೈ ಮತ್ತು ತೀರ್ಥಹಳ್ಳಿಯ ಪ್ರಗತಿಪರ ಸಾವಯವ ಕೃಷಿಕರಾದ ಪುರುಷೋತ್ತಮರಾಯರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶಿಬಿರದಲ್ಲಿ ಶೆಣೈಯವರು ಕೃಷಿಕರಿಗಿರುವ ಸಮಸ್ಯೆಗಳ ಪಟ್ಟಿ ಮಾಡಲು ಹೇಳಿದರು. ಸುಮಾರು ೪೦ ಸಮಸ್ಯೆಗಳ ಆ ಪಟ್ಟಿಯಲ್ಲಿ ರಾಸಾಯನಿಕ ಕೃಷಿಯಿಂದುಂಟಾಗುತ್ತಿದ್ದ ಸಮಸ್ಯೆಯೂ ಒಂದು. ಎಲ್ಲಾ ಸಮಸ್ಯೆಗಳ ಬಗ್ಗೆ ಆಳವಾದ ಚಿಂತನ ಮಂಥನ ನಡೆದ ಬಳಿಕ `ಕೃಷಿ ಪ್ರಯೋಗ ಪರಿವಾರ’ ಎನ್ನುವ ಹೆಸರಿನಲ್ಲಿ ಸಮಾನ ಮನಸ್ಕ ಕೃಷಿಕರ ಗುಂಪು ಪ್ರಾರಂಭಿಸುವುದೆಂಬ ನಿರ್ಧಾರಕ್ಕೆ ಬರಲಾಯಿತು.

ಆಧ್ಯಾತ್ಮಿಕ ಮತ್ತು ನೈತಿಕ ತಳಹದಿಯ ಆಧಾರದ ಮೇಲೆ ಪ್ರಕೃತಿಸ್ನೇಹಿಯಾದ ಹಾಗೂ ಬೃಹತ್ ಬಂಡವಾಳದ ಅಗತ್ಯವಿಲ್ಲದ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಿ ಜಾರಿಗೊಳಿ ಸುವುದು. ಅಂತಹ ಯಶಸ್ವಿ ಅಭಿವೃದ್ಧಿ ಮಾದರಿಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ದೂರದೃಷ್ಟಿಯ ಗುರಿ ಕೃಷಿ ಪ್ರಯೋಗ ಪರಿವಾರದ್ದು. ಆ ನಿಟ್ಟಿನಲ್ಲಿ ಪಾರಂಪರಿಕವಾದ ಸ್ವಾವಲಂಬೀ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದು, ವೈವಿಧ್ಯಮಯ ಸಸ್ಯಸಂಪತ್ತು ಮತ್ತು ರಾಸಾಯನಿಕರಹಿತ ಕೃಷಿಯ ಸಹಾಯದಿಂದ  ಸ್ಥಳೀಯ ಚಿಕಿತ್ಸಾ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ರಾಜಕೀಯದ ಪ್ರಭಾವಕ್ಕೊಳಗಾಗದೆ ರಚನಾತ್ಮಕವಾದ ಅಭಿವೃದ್ಧಿಯನ್ನು ಸಾಧಿಸುವ ಬಗ್ಗೆ ಯುವಜನರಿಗೆ ತರಬೇತಿ ನೀಡುವುದು  ಹೀಗೆ ಮೂರು ಮುಖ್ಯ ಅಂಶಗಳ ಆಧಾರದ ಮೇಲೆ ಪರಿವಾರವು ಕೆಲಸ ಮಾಡಲು ಪ್ರಾರಂಭಿಸಿತು.

READ ALSO

Reaching the Unreached : Vanavasi Kalyana Karnataka’s seva to tribal community during #Covid19 lockdown

Applications invited for TAPAS and SAADHANA projects

ವಿವಿಧ ಆಯಾಮಗಳಲ್ಲಿ ನಡೆಯುತ್ತಿರುವ ಕೃಷಿ ಪ್ರಯೋಗ ಪರಿವಾರದ ಚಟುವಟಿಕೆಗಳ ಸ್ಥೂಲ ಪರಿಚಯ ಇಲ್ಲಿದೆ.

ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಕೃಷಿಕರ ಜಮೀನಿನಲ್ಲಿ ಅನೇಕ ಪ್ರಯೋಗಗಳನ್ನು ನಡೆಸುತ್ತಿದೆ ಪರಿವಾರ. ಅವುಗಳಲ್ಲಿ ಗೋಮೂತ್ರದ ಬಳಕೆ, ಬೆಳೆಗೆ ದ್ರವರೂಪದಲ್ಲಿ ಗೊಬ್ಬರ ಕೊಡುವುದು, ಸಸ್ಯಗಳ ಮೇಲೆ ಚಂದ್ರನ ಚಲನೆಯ ಪ್ರಭಾವ ಮುಂತಾದ ವಿಷಯಗಳ ಮೇಲಿನ ಪ್ರಯೋಗಗಳು ನಡೆಯುತ್ತಿವೆ.  ಅಲ್ಲದೇ, ಅಡಿಕೆಗೆ ಬರುವ ಹಳದಿ ಎಲೆ ರೋಗಕ್ಕೆ ವೃಕ್ಷಾಯುರ್ವೇದದ ಆಧಾರದ ಮೇಲೆ ಅಭಿವೃದ್ಧಿಪಡಿಸಿರುವ ಮದ್ದನ್ನು ಪರೀಕ್ಷಿಸಲಾಗುತ್ತಿದೆ. ಭಾರತದ ಕೃಷಿ ಮಾರುಕಟ್ಟೆಯಿಂದ ಕೃಷಿಕರಿಗೂ ಬಳಕೆದಾರರಿಗೂ ಪ್ರಯೋಜನ ವಿಲ್ಲ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ.

ಆ ನಿಟ್ಟಿನಲ್ಲಿ ಕೃಷಿಕ-ಬಳಕೆದಾರ ಸಂಪರ್ಕ ಕಾರ್ಯಕ್ರಮಗಳನ್ನು ಪರಿವಾರ ನಡೆಸುತ್ತಿದೆ.     ಪರ್ಯಾಯ ಕೃಷಿ ಪದ್ಧತಿಯ ಬಗ್ಗೆ ಉಪನ್ಯಾಸ, ಕಾರ್ಯಾಗಾರ ಮತ್ತು ತರಬೇತಿ ನಡೆಸುವುದು ಪರಿವಾರದ ಇನ್ನೊಂದು ಮುಖ್ಯ ಕೆಲಸ. ಕರ್ನಾಟಕದ ೧೩ ಜಿಲ್ಲೆಗಳ ಹಲವಾರು ಹಳ್ಳಿಗಳಲ್ಲಿ ಪರಿವಾರವು ಇಂತಹ ಕಾರ್ಯಾಗಾರಗಳನ್ನು ಆಯೋಜಿಸಿದೆ,  ಭಾಗವಹಿಸಿದೆ.

ವೃಕ್ಷಾಯುರ್ವೇದ, ಜಾನುವಾರು ಚಿಕಿತ್ಸಾ ಪದ್ಧತಿ, ಜೀವ ಚೈತನ್ಯ ಕೃಷಿ, ನಮ್ಮ ಕಾಮಧೇನು, ನೀರ ನೆಮ್ಮದಿಗೆ ನೂರೆಂಟು ದಾರಿಗಳು, ಕುಂಕುಮ, ಕದಿರು ಮುಂತಾದ ಪುಸ್ತಕಗಳನ್ನು ಪ್ರಕಟಿಸಿದೆ.

ಕೃಷಿಗೆ ಬೇಕಾದ ಯಂತ್ರೋಪಕರಣಗಳ ಸಂಶೋಧನೆಗೆ ಪ್ರೋತ್ಸಾಹ. ನೆಲ್ಲಿಕಾಯಿಯನ್ನು ಕತ್ತರಿಸಿ ರಸವನ್ನು ತೆಗೆಯಲು ಬೇಕಾದ ಉಪಕರಣವನ್ನು ಗ್ರಾಮೀಣ ಪ್ರದೇಶದ ಮೆಕ್ಯಾನಿಕ್ ಒಬ್ಬರ ಮೂಲಕ ಸಂಶೋಧಿಸಿ ಪ್ರಚುರಪಡಿಸಿದೆ. ಅಲ್ಲದೇ, ನೆಲ್ಲಿಕಾಯಿಯ ಉಪಯೋಗದ ಬಗ್ಗೆ ತಿಳುವಳಿಕೆ ನೀಡಿದ್ದರಿಂದಾಗಿ ನೆಲ್ಲಿ ಮರಗಳನ್ನು ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ.

ಇದುವರೆಗೆ ಸುಮಾರು ೩೦,೦೦೦ ಮಹಿಳೆಯರಿಗೆ ಶುದ್ಧ ಕುಂಕುಮ ತಯಾರಿಕೆಯ ತರಬೇತಿ ನೀಡಿದೆ. ಇದು ರಾಸಾಯನಿಕ ಕುಂಕುಮದ ಹಾವಳಿಯನ್ನು ಕಡಿಮೆ ಮಾಡಿದ್ದಲ್ಲದೇ, ಕೆಲವು ಕುಟುಂಬ ಗಳಿಗೆ ಒಂದು ಆದಾಯದ ಮೂಲವಾಗಿದೆ.

ಗೋ ಉತ್ಪನ್ನಗಳಾದ ಗೋಮೂತ್ರ, ಹಾಲು, ಮೊಸರು, ಮಜ್ಜಿಗೆ ಮೊದಲಾದವು ಗಳನ್ನು ಕೃಷಿಯಲ್ಲಿ ಕೀಟನಾಶಕವಾಗಿ, ಗೊಬ್ಬರವಾಗಿ ಬಳಸುವ ಬಗ್ಗೆ ತರಬೇತಿ ಮತ್ತು ಪ್ರಚಾರ.

ವೈವಿಧ್ಯಮಯವಾದ ಬೀಜಸಂಪತ್ತನ್ನು ರಕ್ಷಿಸಲು, ಪರಸ್ಪರ ಬೀಜಗಳನ್ನು ಹಂಚಿಕೊಳ್ಳಲು ಬೀಜ ಬ್ಯಾಂಕ್ ಸ್ಥಾಪನೆ.

ಮಳೆ ಕೊಯ್ಲಿನ ಬಗ್ಗೆ ತರಬೇತಿ ಮತ್ತು ಪ್ರಚಾರ. ಶಾಲೆಗಳಲ್ಲಿ ಇದರ ಬಗ್ಗೆ ಕಾರ್ಯಕ್ರಮ.

ಸರ್ಕಾರದ `ಸಾವಯವ ಗ್ರಾಮ’ ಯೋಜನೆಯಲ್ಲಿ ಭಾಗಿಯಾಗಿ ಕೆಲವು ಗ್ರಾಮಗಳನ್ನು ಸಂಪೂರ್ಣ ಸಾವಯವ ಮಾಡುವತ್ತ ಪ್ರಯತ್ನ.

ಪ್ರತೀ ತಾಲೂಕುಗಳಲ್ಲಿ `ಸಾವಯವ ಕೃಷಿ ಪರಿವಾರ’ಗಳ ರಚನೆ. ಇದುವರೆಗೆ ೧೭೫ಕ್ಕೂ ಹೆಚ್ಚು ತಾಲೂಕುಗಳಲ್ಲಿ ೫೨,೨೦೦ ಕೃಷಿಕರು ಸದಸ್ಯರು.

ಇದುವರೆಗೆ ಪರಿವಾರದ ೫೯೮ ಕೃಷಿಕರು ಶೇ. ೧೦೦ ಸಾವಯವ ಕೃಷಿಯ ಪ್ರಮಾಣಪತ್ರ ಪಡೆದಿದ್ದಾರೆ.

ತೀರ್ಥಹಳ್ಳಿಯಲ್ಲಿ ಕಛೇರಿಯನ್ನು ಹೊಂದಿರುವ ಕೃಷಿ ಪ್ರಯೋಗ ಪರಿವಾರ ಟ್ರಸ್ಟ್‌ನ ೧೦ ಎಕರೆಯಷ್ಟು ಜಮೀನು ಇಂದು ದೇಶದ ವಿವಿಧ ಭಾಗಗಳಿಂದ ಬರುವ ಸಾವಯವ ಕೃಷಿಕರಿಗೆ ಒಂದು ತರಬೇತಿ ಶಾಲೆ, ಸ್ಫೂರ್ತಿಯ ಸೆಲೆ!

 

ವಿಳಾಸ:

ಕೃಷಿ ಪ್ರಯೋಗ ಪರಿವಾರ
ಕುರುವಳ್ಳಿ, ತೀರ್ಥಹಳ್ಳಿ ಅಂಚೆ, ಶಿವಮೊಗ್ಗ ಜಿಲ್ಲೆ.
ದೂರವಾಣಿ : ೯೪೪೯೬ ೨೩೨೭೫

  • email
  • facebook
  • twitter
  • google+
  • WhatsApp

Related Posts

Reaching the Unreached : Vanavasi Kalyana Karnataka’s seva to tribal community during #Covid19 lockdown
Organisation Profiles

Reaching the Unreached : Vanavasi Kalyana Karnataka’s seva to tribal community during #Covid19 lockdown

January 7, 2021
Applications invited for TAPAS and SAADHANA projects
News Digest

Applications invited for TAPAS and SAADHANA projects

August 29, 2018
ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌
News Digest

ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌

August 19, 2018
VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ
Organisation Profiles

VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ

April 11, 2011
VISHWA HINDU PARISHAD – ವಿಶ್ವ ಹಿಂದು ಪರಿಷತ್
Organisation Profiles

VISHWA HINDU PARISHAD – ವಿಶ್ವ ಹಿಂದು ಪರಿಷತ್

April 1, 2011
SAHAKARA BHARATI – ಸಹಕಾರ ಭಾರತಿ :
Organisation Profiles

SAHAKARA BHARATI – ಸಹಕಾರ ಭಾರತಿ :

September 18, 2010
Next Post
VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ

VANAVASI KALYAN ASHRAMA - ವನವಾಸಿ ಕಲ್ಯಾಣ ಆಶ್ರಮ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Nation remembers Social reformer, Second Chief of RSS Guruji Golwalkar on his 108th Jayanti

The importance of not asking for anything

March 9, 2021
ಟಿಪ್ಪೂ ಕುರಿತು ನಿಮಗಿದು ಗೊತ್ತೇ ? ಓದಿ

ಟಿಪ್ಪೂ ಕುರಿತು ನಿಮಗಿದು ಗೊತ್ತೇ ? ಓದಿ

November 7, 2016
VHP ಮುಖಂಡ ಪ್ರವೀಣ್ ತೊಗಡಿಯಾ ಧರ್ಮಸ್ಥಳ ಭೇಟಿ :

VHP ಮುಖಂಡ ಪ್ರವೀಣ್ ತೊಗಡಿಯಾ ಧರ್ಮಸ್ಥಳ ಭೇಟಿ :

January 7, 2014
Raksha Bandhan Greetings from RSS

Raksha Bandhan Greetings from RSS

August 11, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In