• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಅರಣ್ಯ ಭೂಮಿಯಲ್ಲಿ ಅಕೇಸಿಯಾ ಬೇಡವೇ ಬೇಡ!: ತೀರ್ಥಹಳ್ಳಿಯಲ್ಲಿ ಪರಿಸರ ಚಿಂತಕರ ಕಾರ್ಯಾಗಾರ

Vishwa Samvada Kendra by Vishwa Samvada Kendra
August 12, 2011
in News Digest
250
0
ಅರಣ್ಯ ಭೂಮಿಯಲ್ಲಿ ಅಕೇಸಿಯಾ ಬೇಡವೇ ಬೇಡ!: ತೀರ್ಥಹಳ್ಳಿಯಲ್ಲಿ ಪರಿಸರ ಚಿಂತಕರ ಕಾರ್ಯಾಗಾರ

Krushi Prayog Parivar organised this seminar

491
SHARES
1.4k
VIEWS
Share on FacebookShare on Twitter

ನೆಡುತೋಪಿನಲ್ಲಿ ಮತ್ತೆ ಮತ್ತೆ ಅರಣ್ಯ ಕಾನೂನು ಉಲ್ಲಂಘನೆ

ಅರಣ್ಯ ಭೂಮಿಯಲ್ಲಿ ಅಕೇಸಿಯಾ ಬೇಡವೇ ಬೇಡ!

 ತೀರ್ಥಹಳ್ಳಿಯಲ್ಲಿ ಅಕೇಸಿಯಾ ಮಾತುಕತೆ

READ ALSO

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

 ತೀರ್ಥಹಳ್ಳಿ, Ausust 11: ಪಶ್ಚಿಮ ಘಟ್ಟದಲ್ಲಿ ಅಕೇಸಿಯಾ ನೆಡುತೋಪುಗಳನ್ನು ಸಂಪೂರ್ಣ ನಿಷೇಧಿಸಬೇಕು. ಈಗಾಗಲೇ ಕಣಿವೆಗಳಲ್ಲಿ ಬೆಳೆಸಲಾದ ನೆಡುತೋಪನ್ನು ಬದಲಿಸಿ ಸ್ಥಳೀಯ ಸಸ್ಯ ಬೆಳೆಸುವ ಕಾರ್ಯ ನಡೆಯಬೇಕೆಂಬ ಒಕ್ಕೊರಲಿನ ಅಭಿಪ್ರಾಯ ಮಲೆನಾಡಿನಲ್ಲಿ ಅಕೇಸಿಯಾ ನೆಡುತೋಪುಗಳ ಕುರಿತ ಕಾರ್ಯಾಗಾರದಲ್ಲಿ ವ್ಯಕ್ತವಾಗಿದೆ. ವಿಶ್ವದ ಅತ್ಯಂತ ಪ್ರಮುಖ ಜೀವ ಸಂಕುಲಗಳ ತಾಣವನ್ನು ಅಕೇಸಿಯಾ ಕಣಿವೆಯಾಗಿ ಬದಲಿಸುತ್ತಿರುವ ಅರಣ್ಯ ಇಲಾಖೆ ಹಾಗು ಮೈಸೂರು ಪೇಪರ್ ಮಿಲ್ಸ್ ಕೃತ್ಯವನ್ನು ಸಭೆ ತೀವ್ರವಾಗಿ ಖಂಡಿಸಿದೆ.

Krushi Prayog Parivar organised this seminar

ತೀರ್ಥಹಳ್ಳಿಯ ಪುರುಷೋತ್ತಮ ಸಭಾಂಗಣದಲ್ಲಿ ಅಗಸ್ಟ್ 11ರ ಗುರುವಾರ ಇಡೀ ದಿನ ಅಕೇಸಿಯಾ ಕುರಿತ ಮಾತುಕತೆ ಕಾರ್ಯಕ್ರಮ  ನಡೆಯಿತು.ಪುರುಷೋತ್ತಮ ಸಾವಯವ ಕೃಷಿ ಪರಿವಾರ,ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಹಾಗು ಮಲೆನಾಡು ಜಾಗೃತ ವೇದಿಕೆಗಳು ಸಂಯುಕ್ತವಾಗಿ ಕಾರ್ಯಕ್ರಮ ಸಂಘಟಿಸಿದ್ದವು. ಲೇಖಕ ಶಿವಾನಂದ ಕಳವೆ ಬರೆದ  ಪಶ್ಚಿಮ ಘಟ್ಟದ ಅಕೇಸಿಯಾ ನೆಡುತೋಪುಗಳ ಕುರಿತ ಅಧ್ಯಯನ ಗ್ರಂಥ ಅರಣ್ಯಜ್ಞಾನದ ಹತ್ಯಾಕಾಂಡ ಪುಸ್ತಕ ಬಿಡುಗಡೆ ವಿಶೇಷ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯಿತು.

ಅಕೇಸಿಯಾ ನೆಡುತೋಪುಗಳ ವಿರುದ್ದ ಕಳೆದ ಮೂರು ದಶಕಗಳಿಂದ ಹೋರಾಡುತ್ತಿರುವ ತೀರ್ಥಹಳ್ಳಿ,ಕೊಪ್ಪ,ಶಿವಮೊಗ್ಗ ಪ್ರದೇಶಗಳಿಂದ 170ಕ್ಕೂ ಹೆಚ್ಚು ಕೃಷಿಕರು,ಪರಿಸರ ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೋವು ತೋಡಿಕೊಂಡರು.ಗೋಮಾಳ,ಸೊಪ್ಪಿನಬೆಟ್ಟ  ಸಮಸ್ಯೆ ವಿವರಿಸಿದರು. ತೀರ್ಥಹಳ್ಳಿಯ ಭಾರತೀಪುರ,ಗುಡ್ಡೆಕೊಪ್ಪಗಳಲ್ಲಿ ಕೃಷಿ ನೆಲವನ್ನು ಉಳುಮೆ ಮಾಡಿದಂತೆ ರಿಪ್ಪಿಂಗ್ ಯಂತ್ರದಿಂದ ಉಳುಮೆ ಮಾಡಿ ಅಕೇಸಿಯಾ ನೆಡಲಾಗಿದೆ. ಅಪಾರ ಪ್ರಮಾಣದ ಮಣ್ಣು ಸವಕಳಿಯಾಗಿದೆ. ಶರಾವತಿ ನದಿ ಮೂಲವಾದ ಅಂಬುತೀರ್ಥದಲ್ಲಿ ಎಳೆಯ ಅಕೇಸಿಯಾ ಗಿಡಗಳಿಗೆ ಗೆದ್ದಲು ತಿನ್ನುತ್ತವೆಂದು ಥಿಮೇಟ್ ವಿಷ ಹಾಕಲಾದ ಆತಂಕಕಾರಿ ಕೃತ್ಯ ನಡೆದಿದೆ.ಬಿದಿರು,ನೈಸರ್ಗಿಕ ಗಿಡಗಳನ್ನು ನಾಶಪಡಿಸುತ್ತ ಅಕೇಸಿಯಾ ಬೆಳೆಸುವ ಕಾರ್ಯ  ನಡೆಯುತ್ತಿರುವದನ್ನು ಭಾಗವಹಿಸಿದವರು ದಾಖಲೆ ಸಹಿತ ವಿವರಿಸಿದರು.

ಜಾಗತೀಕರಣಕ್ಕೂ, ಮಲೆನಾಡಿನ ಅಕೇಸಿಯಾಕರಣಕ್ಕೂ ನೇರ ಸಂಬಂಧವಿದೆ. ಮಾರುಕಟ್ಟೆ ಬೆಂಬಲಿತ ಆರ್ಥಿಕನೀತಿಯನ್ನು ಅರಣ್ಯ ಅಭಿವೃದ್ಧಿಯಲ್ಲಿ ಅಳವಡಿಸಿ ಎಕಜಾತಿಯ ನೆಡುತೋಪು ಅಭಿವೃದ್ಧಿ ಮಾಡಲಾಗಿದೆಯೆಂದು ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ವಿವರಿಸಿದರು. ಇಂದು ಅಕೇಸಿಯಾವನ್ನು ಜನ ಒಪ್ಪಿದ್ದಾರೆಂದು ಅನೇಕರು ಹೇಳುತ್ತಾರೆ. ಬೇರೆ ಸಸ್ಯಗಳಿಲ್ಲದ ಕಾರಣಕ್ಕೆ ಇದರ ಅವಲಂಬನೆ ಜಾಸ್ತಿಯಾಗಿದೆ.ನಮ್ಮ ದನಕರುಗಳು ತೀವ್ರವಾಗಿ ಹಸಿದಾಗ ಗೋಡೆಗೆ ಹಾಕಿದ ಸಿನೆಮಾ ಪೋಸ್ಟರ್ ತಿನ್ನುತ್ತವೆ. ಹಾಗಂತ ದನಕರುಗಳ ಮುಖ್ಯ ಆಹಾರ ಸಿನೆಮಾ ಪೋಸ್ಟರ್ ಎಂದು ಹೆಚ್ಚು ಹೆಚ್ಚು ಪೋಸ್ಟರ್ ಹಚ್ಚಲು ತೀರ್ಮಾನಿಸುವಂತಹ ಮೂರ್ಖತನ ಇದು ಎಂದರು.

ರಾಜ್ಯದಲ್ಲಿ ಅಕೇಸಿಯಾ ನೆಡುತೋಪಿನ ಪರಿಣಾಮಗಳನ್ನು ಬರಹಗಾರ ಶಿವಾನಂದ ಕಳವೆ ಸ್ಲೈಡ್ಸ್‌ಗಳ ಮೂಲಕ ಪ್ರಸ್ತುತಪಡಿಸಿದರು. ಪಶ್ಚಿಮ ಘಟ್ಟದಲ್ಲಿ ಅಕೇಸಿಯಾ ನಿಷೇಧಿಸುವ ಸುತ್ತೋಲೆ ದೊಡ್ಡ ಮೋಸವಾಗಿದೆ. ಕ್ರಿ,ಶ 1994ರಲ್ಲಿ ಅಕೇಸಿಯಾ ಬಗೆಗೆ ಇದ್ದ ಪ್ರಸ್ಥಾಪವನ್ನು ಪುನರುಚ್ಚರಿಸಲಾಗಿದೆ. ನಿಯಮಮೀರಿ ಕಣಿವೆಗಳಲ್ಲಿಯೂ ಅಕೇಸಿಯಾ ಬೆಳೆಸುವ ಕೆಲಸ ಈಗಲೂ ನಡೆಯುತ್ತಿದೆ. ಗ್ರಾಮ ಅರಣ್ಯ ಸಮಿತಿಗೆ ಆದಾಯದ ಆಮಿಷತೋರಿಸಿ ಅಕೇಸಿಯಾ ಅಭಿವೃದ್ಧಿಯಾಗಿದೆ. ನೆಡುತೋಪು ಕಟಾವಿನಲ್ಲಿ ಅರಣ್ಯ ಹಾಗು ಪರಿಸರ ಕಾನೂನುಗಳ ಸ್ಪಷ್ಟ ಉಲ್ಲಂಘನೆ ನಡೆದಿದೆ.ತನಿಖೆ ನಡೆಸಿದರೆ ಮೈನಿಂಗ್ ಕರ್ಮಕಾಂಡದಂತೆ ದೊಡ್ಡ ಹಗರಣ ಬೆಳಕಿಗೆ ಬರುತ್ತದೆ. ಪಶ್ಚಿಮ ಘಟ್ಟದ ರಕ್ಷಣೆಗೆ ಅರಣ್ಯ ಇಲಾಖೆಗೆ ಪರ್ಯಾಯವಾಗಿ ಸಮಾಜದ ಪರಿಸರ ಆಸಕ್ತರ ಪಶ್ಚಿಮ ಘಟ್ಟ ರಕ್ಷಣಾ ಪಡೆ ಕೆಲಸ ಮಾಡುವ ಅಗತ್ಯವಿದೆಯೆಂದು ಕಳವೆ ಅಭಿಪ್ರಾಯ ಪಟ್ಟರು.  ಪಶ್ಚಿಮ ಘಟ್ಟದ ಅಕೇಸಿಯಾ ನೆಡುತೋಪುಗಳ ಬಗೆಗೆ ಮಲೆನಾಡು ಜಾಗೃತ ವೇದಿಕೆ ೧೪ವರ್ಷಗಳಿಂದ ನಡೆಸಿದ ನ್ಯಾಯಾಲಯ ಹೋರಾಟದ ವಿವರಗಳನ್ನು ಮಲೆನಾಡು ಜಾಗೃತ ವೇದಿಕೆ ಮುಖ್ಯಸ್ಥ ಕೆ.ಜಿ.ಶ್ರೀಧರ ಪ್ರಸ್ತುತಪಡಿಸಿದರು. ಸತತ ಹೋರಾಟದ ಪರಿಣಾಮ  3812 ಹೆಕ್ಟೇರ್ ಗೋಮಾಳ ಹಾಗು ೪೬೬೫ಹೆಕ್ಟೇರ್ ವನ್ಯಜೀವಿ ಸಂರಕ್ಷಣಾ ಪ್ರದೇಶಗಳು ಈಗ ಮೈಸೂರು ಪೇಪರ್ ಮಿಲ್ಸ್ ನೆಡುತೋಪು ವ್ಯಾಪ್ತಿಯಿಂದ ಹೊರಗಿಡುವ ನಿರ್ಧಾರವಾಗಿದೆ. ಮೂಲ ಒಪ್ಪಂದದಂತೆ ಎಮ್‌ಪಿಎಮ್ ಹೆಕ್ಟೇರಿಗೆ ೪೦ ಶ್ರೀಗಂಧದ ಗಿಡ ಬೆಳೆಸಬೇಕಿತ್ತು. ಇದರಿಂದ ಈಗ ೧೦.೦೦೦ಕೋಟಿ ಆದಾಯ ದೊರೆಯಬೇಕಿತ್ತು. ಆದರೆ ಶ್ರೀಗಂಧ ನೆಡಲಾಗಿಲ್ಲ. ಸರಕಾರಕ್ಕೆ ಆದ ನಷ್ಟವನ್ನು ಎಮ್‌ಪಿಎಮ್  ತುಂಬಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿವರ್ಷ ನೆಡುತೋಪುಗಳಲ್ಲಿ ಅರಣ್ಯ ಕಾನೂನು ಉಲ್ಲಂಘನೆ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ. ಕಾನೂನು ಕಾಯುವವರು ಯಾರು ಎಂಬ ಪ್ರಶ್ನೆ ಉದ್ಬವಿಸಿದೆ ಎಂದು ಶ್ರೀಧರ ವಿಷಾದಿಸಿದರು. ಸಾವಯವ ಕೃಷಿ ಪರಿವಾರದ ಕಾರ್ಯಕರ್ತ ಸರು ದಿನೇಶ್ ಮಾತನಾಡಿ ಮಲೆನಾಡಿನ ನಮ್ಮ ಮಕ್ಕಳು ಕಾಡು ಹಣ್ಣುಗಳನ್ನು ಕಳಕೊಂಡಿದ್ದೇವೆ. ದನಕರುಗಳ ಮೇವು ಸಂಪೂರ್ಣ ನಾಶವಾಗಿದೆ ಎಂದರು.

ತಜ್ಞರ ವಿಷಯ ಮಂಡನೆಯ ನಂತರ ಮುಕ್ತ ಸಂವಾದ ಕಾರ್ಯಕ್ರಮ ನಡೆಯಿತು.ಪರ್ಯಾಯ ಶಕ್ತಿ ಮೂಲಗಳ ಬಗೆಗೆ ಅಧ್ಯಯನ ನಡೆಸುತ್ತಿರುವ ಶಂಕರಶರ್ಮ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕೃಷಿ ಪ್ರಯೋಗ ಪರಿವಾರದ ಅರುಣ್, ಮಲೆನಾಡು ಜಾಗೃತ ವೇದಿಕೆಯ ಡಾ.ಎ.ಎನ್.ನಾಗರಾಜ  ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀವತ್ಸ ಚಿಕ್ಕನಬೈಲು ಠರಾವು ಮಂಡಿಸಿದರು.

ಮಲೆನಾಡಿನಲ್ಲಿ ಅಕೇಸಿಯಾ ಸೇರಿದಂತೆ ಎಕಜಾತಿಯ ನೆಡುತೋಪು ಅಭಿವೃದ್ಧಿಯನ್ನು  ತಡೆಯುವ ಅಗತ್ಯವಿದೆ. ನಮ್ಮ ಕಾಡಿನ ಬೇಗ ಬೆಳೆಯುವ ಸಸ್ಯಗಳನ್ನು ಗುರುತಿಸಿ ಅರಣ್ಯೀಕರಣದಲ್ಲಿ ಬಳಸುವ ಪ್ರಯತ್ನ ಮಾಡಲಾಗುವದು ಎಂದು ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಅಶೀಸರ ನುಡಿದರು. ಅವರು ತೀರ್ಥಹಳಿಯಲ್ಲಿ ನಡೆದ ಅಕೇಸಿಯಾ ನೆಡುತೋಪು ಚಿಂತನೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕೇಸಿಯಾ ನಿಷೇಧ ಸುತ್ತೋಲೆ ವಿಶೇಷ ಮಹತ್ವವಿಲ್ಲದೇ ಹಳೆಯ ವಿಚಾರಗಳನ್ನು ಪ್ರಸ್ಥಾಪಿಸಿರುವದನ್ನು ಗಮನಿಸಿದ್ದೇನೆ. ನಿಜವಾದ ಅರ್ಥದಲ್ಲಿ ನಿಷೇಧಿಸಲು ಮುಂದೆ ಪ್ರಯತ್ನಿಸಲಾಗುವದೆಂದರು. ಶಾಲಾವನ,ದೇವರಕಾಡು ಮುಂತಾದ ಸ್ಥಳಗಳಲ್ಲಿ ಸ್ಥಳೀಯ ಸಸ್ಯ ಬೆಳೆಸಲು ಹೆಚ್ಚಿನ ಒತ್ತು ನೀಡಲಾಗುವದು ಎಂದರು. ಇದೇ ಸಂದರ್ಭದಲ್ಲಿ ಅಕೇಸಿಯಾ ಸಸ್ಯದ ಕುರಿತು ಶಿವಾನಂದ ಕಳವೆ ಬರೆದ ಪುಸ್ತಕ ಅರಣ್ಯಜ್ಞಾನದ ಹತ್ಯಾಕಾಡ ಕೃತಿ ಬಿಡುಗಡೆಗೊಳಿಸಿದರು. ಜಾಗೃತಿ ಮೂಡಿಸುವ ಉಪಯುಕ್ತ ಮಾಹಿತಿ ಕೃತಿಯಲ್ಲಿದೆ ಎಂದರು.

ಸಮಾರಂಭದಲ್ಲಿ ಪುರುಷೋತ್ತಮ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಶ್ರೀ ನರಸಿಂಹಮೂರ್ತಿ ಉಸ್ಥಿತರಿದ್ದರು. ಎ. ಎನ್.ನಾಗಭೂಷಣ ಕಾರ್ಯಕ್ರಮ ನಿರ್ವಹಿಸಿದರು.

 

Report: ಶಿವಾನಂದ ಕಳವೆ

  • email
  • facebook
  • twitter
  • google+
  • WhatsApp
Tags: malenadinalli-acasia-krushi-prayog-parivar

Related Posts

News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
Next Post
Street children connect to the beggars through Rakhis

Street children connect to the beggars through Rakhis

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಚಿರನಿದ್ರೆಗೆ ತೆರಳಿದ ಚೆಂಬೆಳಕಿನ ಕವಿ

ಚಿರನಿದ್ರೆಗೆ ತೆರಳಿದ ಚೆಂಬೆಳಕಿನ ಕವಿ

February 17, 2022
Laxmanananda Saraswati murder:HC seeks report

Laxmanananda Saraswati murder:HC seeks report

April 21, 2011
RSS inspired Rashtrotthana Parishat’s new building PATANJALI MANDIR inaugurated in Bengaluru

RSS inspired Rashtrotthana Parishat’s new building PATANJALI MANDIR inaugurated in Bengaluru

February 15, 2016
“Dr Kalam, A great visionary who ignited innumerable minds”: RSS Sarasanghachalak Mohan Bhagwat

“Dr Kalam, A great visionary who ignited innumerable minds”: RSS Sarasanghachalak Mohan Bhagwat

July 28, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In