• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಮಲೆನಾಡುಗಿಡ್ಡ ಗೋತಳಿಗೆ ಭಾರೀ ಬೇಡಿಕೆ

Vishwa Samvada Kendra by Vishwa Samvada Kendra
January 6, 2021
in Others
250
0
ಮಲೆನಾಡುಗಿಡ್ಡ ಗೋತಳಿಗೆ ಭಾರೀ ಬೇಡಿಕೆ
492
SHARES
1.4k
VIEWS
Share on FacebookShare on Twitter
ಅಂಕಣ ಕೃಪೆ: ಪ್ರಜಾವಾಣಿ

ಕೋವಿಡ್ ಲಾಕ್‍ಡೌನ್ ನಂತರದಲ್ಲಿ ಜಾನುವಾರುಗಳ ಸಾಗಾಣಿಕೆಯಲ್ಲಿ ದಿಢೀರ್ ಏರಿಕೆಯಾಗಿದೆ. ಹೈನುಗಾರಿಕೆಗಾಗಿ ಹಸು, ಎಮ್ಮೆಗಳ ಕೊಡುಕೊಳ್ಳುವಿಕೆ, ತತ್ಸಂಬಂಧದ ಸಾಗಾಟ ಸಾಮಾನ್ಯವಾದರೂ ಕೊರೊನಾ ಕಾರಣದಿಂದ ನಾಡಿನ ಒಂದು ಗೋತಳಿಗೆ ಏಕಾಏಕಿ ಬೇಡಿಕೆ ಸೃಷ್ಟಿಯಾಗಿರುವುದು ಅನಿರೀಕ್ಷಿತವಷ್ಟೇ ಅಲ್ಲ ವಿಶೇಷ ಕೂಡ.

ಕಳೆದ ವರ್ಷ ಎಲ್ಲರೂ ಹೆಚ್ಚು ಚರ್ಚೆ ಮಾಡಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕಾಯಿಲೆಗೆ ಬ್ರೇಕ್ ಹಾಕುವುದಕ್ಕೆ ಸಂಬಂಧಿಸಿದ ವಿಷಯ. ಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಹೊರಳುವುದರ ನಡುವೆಯೇ ದೇಸಿ ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕಾಗಿನ ಬೇಡಿಕೆ ಒಮ್ಮೆಲೇ ಹೆಚ್ಚಿದೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ, ಹುಟ್ಟೂರಿನಲ್ಲಿ ಅವಜ್ಞೆಗೆ ತುತ್ತಾಗಿರುವ ‘ಮಲೆನಾಡುಗಿಡ್ಡ’ ತಳಿ ಹಸುಗಳ ಹಣೆಬರಹವನ್ನು ಕೋವಿಡ್ ಬದಲಾಯಿಸಿದಂತೆ ತೋರುತ್ತಿದೆ. ಅವುಗಳ ಸಾಮರ್ಥ್ಯದ ನಿಜ ಮೌಲ್ಯಮಾಪನವಾಗುತ್ತಿದೆ.

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಪಶ್ಚಿಮಘಟ್ಟದ ತಪ್ಪಲವಾಸಿ ಈ ಮಲೆನಾಡುಗಿಡ್ಡ ಜಾನುವಾರುಗಳದ್ದು ಹೆಸರೇ ಹೇಳುವಂತೆ ತುಂಬಾ ಕುಳ್ಳು ಶರೀರ. ತುಸು ನಾಚಿಕೆ, ಅಂಜಿಕೆಯ ಸ್ವಭಾವ. ಎತ್ತರ ಒಂದು ಮೀಟರ್ ದಾಟದು. ದೇಹದ ತೂಕ ಹೆಚ್ಚೆಂದರೆ ಒಂದೂವರೆ ಕ್ವಿಂಟಲ್ ಅಷ್ಟೆ. ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ಇವುಗಳ ಸಹಜ ಆವಾಸ ಪ್ರದೇಶಗಳು. ಎಂತಹದ್ದೇ ಗಾಳಿ, ಮಳೆ, ಚಳಿ, ಬಿಸಿಲಿಗೆ ಜಗ್ಗದ ತಳಿಯಿದು. ಹೈನು, ಗೊಬ್ಬರ, ಕೃಷಿ ಕಾರ್ಯಕ್ಕಾಗಿ ಬಳಕೆಯಾಗುವ ಗಿಡ್ಡಗಳು ಕಾಡುಮೇಡಲ್ಲಿ ಅಲೆದು ಹುಲ್ಲು, ಸೊಪ್ಪುಸದೆಗಳನ್ನು
ಮೇಯುತ್ತಾ ಮಾಲೀಕನ ಮುತುವರ್ಜಿಯಿಲ್ಲದೆ ತಮ್ಮಷ್ಟಕ್ಕೆ ತಾವೇ ಬದುಕು ಕಟ್ಟಿಕೊಳ್ಳುವ ಪಶುಗಳು. ಹಾಗಾಗಿ ನಿರ್ವಹಣಾ ವೆಚ್ಚ ಬಹುತೇಕ ಶೂನ್ಯ.

ಅಪ್ರತಿಮ ರೋಗನಿರೋಧಕ ಶಕ್ತಿ ನಿಸರ್ಗದ ಬಳುವಳಿ. ತುಂಬಾ ವಿಳಂಬವಾಗಿ 2012ರಲ್ಲಿ ತಳಿ ಮಾನ್ಯತೆ ಪಡೆದ ಇವುಗಳ ಸಂಖ್ಯೆ ಅಂದಾಜು 10 ಲಕ್ಷ. ಮಲೆನಾಡುಗಿಡ್ಡದ ಹಾಲಿಗೆ ವಿಶೇಷ ಮೌಲ್ಯವಿದೆ. ವಿಶಿಷ್ಟ ರುಚಿ, ವಾಸನೆ, ಕ್ಯಾಲ್ಷಿಯಂ, ಪ್ರೋಟೀನ್, ಹಿತಕರ ಕೊಬ್ಬು, ಅಗತ್ಯ ವಿಟಮಿನ್‍ಗಳ ಆಗರವಾಗಿರುವ ಹಾಲು ತುಂಬಾ ಪೌಷ್ಟಿಕರವಷ್ಟೇ ಅಲ್ಲ ಸುಲಭವಾಗಿ ಜೀರ್ಣವಾಗುವ ಗುಣವುಳ್ಳದ್ದು. ಹಾಗಾಗಿ ಕಂದಮ್ಮಗಳಿಂದ ಹಿಡಿದು ವೃದ್ಧರು, ರೋಗಿಗಳಿಗೂ ಇದು ಅಮೃತ ಎಂದು ಪರಿಗಣಿಸಲ್ಪಟ್ಟಿದೆ. ಸರಾಸರಿ ಎರಡು ಲೀಟರ್‌ನಿಂದ ಮೂರು ಲೀಟರ್ ಹಾಲು ಕರೆಯುವ ಈ ಹಸುಗಳು ಉತ್ತಮವಾಗಿ ನಿರ್ವಹಣೆ ಮಾಡಿದಾಗ ಐದು ಲೀಟರ್‌ ತನಕ ಉತ್ಪಾದನಾ ಸಾಮರ್ಥ್ಯ ಹೊಂದಿವೆ.

ಆಯುರ್ವೇದದಲ್ಲೂ ಈ ತಳಿಯ ಹಾಲಿಗೆ ವಿಶೇಷ ಮಹತ್ವ ಇರುವುದರಿಂದ ಬೇಡಿಕೆ ಹೆಚ್ಚು. ಮಿಶ್ರತಳಿ ಹಸುಗಳ ಹಾಲಿನ ದರ ಲೀಟರ್‌ಗೆ ಐವತ್ತರ ಒಳಗಿದ್ದರೆ ಮಲೆನಾಡುಗಿಡ್ಡದ ಸಾವಯವ ಹಾಲು ನೂರು ರೂಪಾಯಿಗೂ ಸಿಗದು! 

ಜನಸಂಖ್ಯಾ ಸ್ಫೋಟ, ಮಾನವನ ಅತಿಯಾಸೆ, ದುರಾಸೆಯ ಕಾರಣ ಯಥೇಚ್ಛ ಹಸಿರು ಮೇವು ಒದಗಿಸುತ್ತಿದ್ದ ಗೋಮಾಳಗಳು, ಕಾಡುಗಳು ಮಾಯವಾಗಿವೆ. ಗೋಮಾಳಗಳಂತೂ ಈಗ ಕಾಣಸಿಗುವುದು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಮಾತ್ರ! ಭತ್ತದ ಕೃಷಿ ಕಡಿಮೆಯಾಗಿ ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆಗಳ ವಿಸ್ತರಣೆಯೂ ಮೇವಿನ ಅಭಾವ ಸೃಷ್ಟಿಸಿದೆ. ಅತ್ತ ಹಸಿರು ಮೇವೂ ಇಲ್ಲ, ಇತ್ತ ಕೃಷಿತ್ಯಾಜ್ಯವೂ ಇಲ್ಲ. ಕುಪೋಷಣೆಯ ಪರಿಣಾಮ ಈ ಜಾನುವಾರುಗಳು ಸೊರಗುತ್ತಾ ತಮ್ಮ ಶಕ್ತಿ, ಸಾಮರ್ಥ್ಯ ಕಳೆದುಕೊಳ್ಳುತ್ತಿವೆ. ಕಾಯಿಲೆ ಪ್ರತಿರೋಧಕತೆಗೆ ಹೆಸರಾಗಿದ್ದ ತಳಿಯು ಉಣ್ಣೆ ಬಾಧೆ, ಕಾಲುಬಾಯಿ ಜ್ವರ, ಚರ್ಮಗಂಟು ರೋಗ ಸೇರಿದಂತೆ ವಿವಿಧ ವ್ಯಾಧಿಗಳಿಗೆ ತುತ್ತಾಗುತ್ತಿರುವುದು ದೌರ್ಭಾಗ್ಯದ ಸಂಗತಿ. ಹುಲ್ಲುಗಾವಲಿನ ಅತಿಕ್ರಮಣದ ಕಾರಣ ಮೇಯಲು ಹೊರಗೆ ಬಿಟ್ಟಾಗ ಗದ್ದೆ, ತೋಟಗಳ ಬೇಲಿ ಹಾರಿ ಬೆಳೆಹಾನಿ ಮಾಡುವುದರಿಂದ ಮಾನವನ ದೌರ್ಜನ್ಯವೂ ಹೆಚ್ಚಿದೆ. ಹೊಡೆತ, ಬಡಿತ, ಗಾಯ, ಕೈಕಾಲು ಮುರಿತದ ಘಟನೆಗಳಂತೂ ಇತ್ತೀಚೆಗೆ ತೀರಾ ಸಾಮಾನ್ಯ. ಇಂತಹ ತಲೆನೋವುಗಳ ಕಾರಣ ಮಲೆನಾಡ ರೈತರು ಗಿಡ್ಡಗಳ ಸಾಕಾಣಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ತನ್ನ ಸ್ವಾಭಾವಿಕ ಆವಾಸಸ್ಥಾನದಲ್ಲಿ ಅಸಡ್ಡೆಗೆ ಗುರಿಯಾಗಿರುವ ಈ ತಳಿಯ ಬಗ್ಗೆ ಮಲೆನಾಡು ಹೊರತಾದ ಪ್ರದೇಶದಲ್ಲಿ ಒಲವು ಮೂಡುತ್ತಿರುವುದು ನಿಜಕ್ಕೂ ವಿಶೇಷ. ಆರೋಗ್ಯದ ಕುರಿತಾಗಿ ಕಾಳಜಿ ಹೆಚ್ಚಿಸಿರುವ ಈ ಕೋವಿಡ್ ಕಾಲಘಟ್ಟ ಜಂಕ್‌ಫುಡ್‍ನಿಂದ ದೂರವಿರುವ, ವಿಷಮುಕ್ತ ಸಾವಯವ ಆಹಾರದ ಸಂಕಲ್ಪ ತೊಡಿಸಿದೆ. ಕಾಯಿಲೆಯಿಂದ ದೂರವುಳಿಯಲು, ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ದೇಸಿ ಹಾಲಿಗೆ ಬೇಡಿಕೆ ಏರಿದೆ. ಉತ್ತಮ ರೋಗನಿರೋಧಕ ಸಾಮರ್ಥ್ಯ ಹೊಂದಿರುವ, ಗುಣಮಟ್ಟದ ಹಾಲು ನೀಡುವ, ನಿರ್ವಹಣಾ ವೆಚ್ಚ ತುಂಬಾ ಕಡಿಮೆಯಿರುವ ಕಾರಣ ಸಾಕಲು ಸುಲಭವಾಗಿರುವ ಮಲೆನಾಡುಗಿಡ್ಡ ಸಹಜ ಆಯ್ಕೆಯಾಗಿ ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರು, ಮೈಸೂರು, ಕೋಲಾರ, ತುಮಕೂರಿನ ಜೊತೆಗೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಅಂತೆಲ್ಲಾ ವಿವಿಧೆಡೆಗೆ ಸಾಗಾಣಿಕೆಯಾಗುತ್ತಿದೆ.

ಕೊರೊನಾವು ಮಲೆನಾಡುಗಿಡ್ಡ ಗೋವುಗಳ ಮೌಲ್ಯವರ್ಧನೆ ಮಾಡಿದ್ದಂತೂ ದಿಟ.

ಲೇಖಕರು: ಡಾ. ಮುರಳೀಧರಕಿರಣಕೆರೆ, ಮುಖ್ಯ ಪಶುವೈದ್ಯಾಧಿಕಾರಿ, ಬಾಳೆಬೈಲು, ತೀರ್ಥಹಳ್ಳಿ

ಕೃಪೆ: ಪ್ರಜಾವಾಣಿ

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
ಅಸ್ಸಾಂ ನಲ್ಲಿ ವಿದ್ಯಾರ್ಥಿನಿಯರಿಗೆ ನಿತ್ಯ ₹100 ಪ್ರೋತ್ಸಾಹಧನ

ಅಸ್ಸಾಂ ನಲ್ಲಿ ವಿದ್ಯಾರ್ಥಿನಿಯರಿಗೆ ನಿತ್ಯ ₹100 ಪ್ರೋತ್ಸಾಹಧನ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

IM mastermind Riyaz Bhatkal plotted to kill RSS supremo Mohan Bhagwat: Reports

IM mastermind Riyaz Bhatkal plotted to kill RSS supremo Mohan Bhagwat: Reports

April 19, 2012
India successfully test-fires Agni-V, the first Inter Continental Ballistic Missile from Orissa

India successfully test-fires Agni-V, the first Inter Continental Ballistic Missile from Orissa

April 19, 2012
RSS announces new National Team, RSS 3-Day highest apex body meet ABPS Concludes at Jaipur

RSS announces new National Team, RSS 3-Day highest apex body meet ABPS Concludes at Jaipur

August 25, 2019
RSS chief Mohan Bhagwat to attend Sangh Shiksha Varg at Bhopal

RSS chief Mohan Bhagwat to attend Sangh Shiksha Varg at Bhopal

May 23, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In