• Samvada
Thursday, May 26, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others Mangalore Sanghik

ಮಂಗಳೂರು : ಫೆಬ್ರವರಿ 3ರ ಐತಿಹಾಸಿಕ ವಿಭಾಗ ಸಾಂಘಿಕ್ ಸಮಾವೇಶಕ್ಕೆ ಭರದ ಸಿದ್ಧತೆ; ಭಾಗವತ್ ರಿಂದ ಭಾಷಣ

Vishwa Samvada Kendra by Vishwa Samvada Kendra
January 26, 2013
in Mangalore Sanghik
251
0
ಮಂಗಳೂರು : ಫೆಬ್ರವರಿ 3ರ ಐತಿಹಾಸಿಕ ವಿಭಾಗ ಸಾಂಘಿಕ್ ಸಮಾವೇಶಕ್ಕೆ ಭರದ ಸಿದ್ಧತೆ;  ಭಾಗವತ್ ರಿಂದ ಭಾಷಣ

ಮಂಗಳೂರು : ಫೆಬ್ರವರಿ ೩ ರಂದು ಐತಿಹಾಸಿಕ ವಿಭಾಗ ಸಾಂಘಿಕ್ ಸಮಾವೇಶಕ್ಕೆ ಭರದ ಸಿದ್ಧತೆ; ಭಾಗವತ್ ರಿಂದ ಭಾಷಣ ಭರದ ಸಿದ್ಧತೆ

493
SHARES
1.4k
VIEWS
Share on FacebookShare on Twitter

ರಾಷ್ಟ್ರೀಯ ಸ್ವಯಂಸೇವಕ ಸಂಘ

ಸಂಘನಿಕೇತನ, ಮಣ್ಣಗುಡ್ಡೆ, ಪ್ರತಾಪನಗರ, ಮಂಗಳೂರು

READ ALSO

VIDEO: RSS Vibhag Sanghik of Mangalore

Full Text of RSS Chief Mohan Bhagwat’s Speech at Mangalore Sanghik

ದಿನಾಂಕ :  26-01-2013

ಮಂಗಳೂರು : ಫೆಬ್ರವರಿ ೩ ರಂದು ಐತಿಹಾಸಿಕ ವಿಭಾಗ ಸಾಂಘಿಕ್ ಸಮಾವೇಶಕ್ಕೆ ಭರದ ಸಿದ್ಧತೆ; ಭಾಗವತ್ ರಿಂದ ಭಾಷಣ  ಭರದ ಸಿದ್ಧತೆ
— ಮಂಗಳೂರು : ಫೆಬ್ರವರಿ ೩ ರಂದು ಐತಿಹಾಸಿಕ ವಿಭಾಗ ಸಾಂಘಿಕ್ ಸಮಾವೇಶಕ್ಕೆ ಭರದ ಸಿದ್ಧತೆ; ಭಾಗವತ್ ರಿಂದ ಭಾಷಣ ಭರದ ಸಿದ್ಧತೆ

ಪತ್ರಿಕಾ ಪ್ರಕಟಣೆ

ಭಾರತೀಯ ಜನಮಾನಸದಲ್ಲಿ ದೇಶಭಕ್ತಿ, ಸ್ವಾಭಿಮಾನದ ಜಾಗೃತಿಗಾಗಿ ಸಂಘಟಿತ ಪ್ರಯತ್ನವಾಗಿ ಆರಂಭವಾದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ. ೧೯೨೫ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಆರಂಭವಾದ ಸಂಘದ ಕಾರ್ಯಚಟುವಟಿಕೆ ೧೯೪೦ರ ದಶಕದಲ್ಲೇ ಮಂಗಳೂರು ಪ್ರದೇಶವನ್ನು ಪ್ರವೇಶಿಸಿತ್ತು. ೮ ದಶಕಗಳ ನಿರಂತರ ಪರಿಶ್ರಮದ ತಪಸ್ಸಿನ ಫಲವಾಗಿ ಮಂಗಳೂರು, ಉಡುಪಿ, ಪುತ್ತೂರು, ಕಾಸರಗೋಡು, ಕೊಡಗು ಪ್ರದೇಶದಲ್ಲಿ ಸಂಘಶಕ್ತಿ ಅಸಾಧಾರಣವೆಂಬಂತೆ ಹೊರಹೊಮ್ಮಿದೆ. ಬೈಂದೂರಿನ ಶಿರೂರು ಹೊಳೆಯಿಂದ ಕುಶಾಲನಗರದ ಕಾವೇರಿ ತಟದವರೆಗೆ ಹಬ್ಬಿರುವ ಸಂಘದ ಈ ಮಂಗಳೂರು ವಿಭಾಗದಲ್ಲಿನ ಶೇ. ೮೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಘದ ಕಾರ್ಯಚಟುವಟಿಕೆಯಿದೆ.

ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಾಸರಗೋಡು, ಮಂಜೇಶ್ವರ, ಮೂಡಬಿದ್ರೆ, ಬ್ರಹ್ಮಾವರ, ಮಂಗಳೂರು ಗ್ರಾಮಾಂತರ, ಮುಲ್ಕಿ ಸೇರಿದಂತೆ ಅನೇಕ ತಾಲೂಕುಗಳಲ್ಲಿ ಸಂಘದ ಕಾರ‍್ಯಚಟುವಟಿಕೆ ಎಲ್ಲ ಗ್ರಾಮಗಳಿಗೆ ಹಬ್ಬಿದೆ. ಪಶ್ಚಿಮ ಪಟ್ಟದ ತಪ್ಪಲಿನಲ್ಲಿರುವ ಬಾಂಜಾರು, ಎಳನೀರು, ಕೋಲೋಡಿ, ಈದು, ಹಳ್ಳಿಹೊಳೆಯಂತಹ ವನವಾಸಿ ಹಾಡಿಗಳಲ್ಲೂ ಸಂಘದ ’ನಮಸ್ತೇ ಸದಾ ವತ್ಸಲೇ…’ ಪ್ರಾರ್ಥನೆ ಅನುರಣಿಸುತ್ತಿದೆ.

ಸಂಘಟಿತ ಸಮಾಜ ಕಟ್ಟುವುದರೊಂದಿಗೆ2೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಲವು ರೀತಿಯ ಸಮಾಜಮುಖಿ ಚಟುವಟಿಕೆಗಳಿವೆ. ಸಂಪೂರ್ಣ ಜಲಸಾಕ್ಷರ ಗ್ರಾಮದ ಖ್ಯಾತಿಯ ಇಡ್ಕಿದು ಸೇರಿದಂತೆ ಕನ್ಯಾಡಿ, ಪಾಲ್ತಾಡಿ, ಗೋಳ್ತಮಜಲು, ನೇರಳಕಟ್ಟೆ ಇತ್ಯಾದಿ ಗ್ರಾಮಗಳು ಗ್ರಾಮವಿಕಾಸದ ಮುಂಚೂಣಿಯಲ್ಲಿವೆ.

Kenjaru Maidan; the venue of Vibhag Maha Sanghik-2013
Kenjaru Maidan; the venue of Vibhag Maha Sanghik-2013

ಶಿಕ್ಷಣ, ಸೇವೆ, ಸಹಕಾರ, ಧಾರ್ಮಿಕ, ರಾಜಕೀಯ ರಂಗಗಳಲ್ಲಿ ಸಂಘದ ಸ್ವಯಂಸೇವಕರು ಮಂಚೂಣಿಯಲ್ಲಿದ್ದು ಕಾರ್ಯನಿರತರಾಗಿದ್ದಾರೆ.

ವಿಜ್ಞಾನದಿಂದ ಆಧ್ಯಾತ್ಮದವರೆಗೆ ನಮ್ಮ ಅಸ್ಖಲಿತ ವಿಚಾರಗಳಿಂದ ಭಾರತವನ್ನು ಅನನ್ಯವಾಗಿ ಪ್ರಭಾವಿಸಿರುವ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ವರ್ಷಾಚರಣೆಯನ್ನು ವಿಶಿಷ್ಟ ರೂಪದಲ್ಲಿ ಸಂಘಟಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಸಿದೆ.

ಇದೇ ಫೆ. 3 ರಂದು ನಡೆಯಲಿರುವ ’ಸಾಂಘಿಕ್’ ರೂಪಗೊಂಡಿರುವುದು ಈ ಹಿನ್ನೆಲೆಯಲ್ಲಿ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್‌ಜೀ ಭಾಗವತರವರು ‘ಸಾಂಘಿಕ್’ನಲ್ಲಿ ಪಾಲ್ಗೊಳ್ಳುತ್ತಿರುವುದು ಉತ್ಸಾಹದ ಸಿದ್ಧತೆ ಇಮ್ಮಡಿಗೊಳ್ಳಲು ಕಾರಣವಾಗಿದೆ.

ಯಾವುದೇ ಕರಪತ್ರ, ಬ್ಯಾನರ್, ಪೋಸ್ಟರ್‌ಗಳ ಮುದ್ರಣವಿಲ್ಲದೆ ಮನೆ, ಮನೆಯ ಭೇಟಿಯ ಮೂಲಕ ಈ ಬೃಹತ್ ಸಾಂಘಿಕ್ ರೂಪಗೊಳ್ಳುತ್ತಿದೆ. ಸಾಂಘಿಕ್‌ನಲ್ಲಿ ಪಾಲ್ಗೊಳ್ಳುವ ಸ್ವಯಂಸೇವಕರು ತಮ್ಮದೇ ವೆಚ್ಚದಲ್ಲಿ ’ಗಣವೇಷ’ ಎಂದೇ ಪರಿಚಿತವಾಗಿರುವ ಸಂಘದ ಸಮವಸ್ತ್ರ ಹೊಂದಿರಬೇಕು. ಈಗಾಗಲೇ ಬೈಂದೂರಿನಿಂದ ಕುಶಾಲನಗರದವರೆಗಿನ ಮಂಗಳೂರು ವಿಭಾಗದ ಎಲ್ಲ ೧೧೫೨ ಗ್ರಾಮಗಳನ್ನು ಸಂಘದ ಕಾರ್ಯಕರ್ತರು ತಲುಪಿದ್ದಾರೆ. ನೂರಾರು ಗ್ರಾಮಗಳಲ್ಲಿ ಪ್ರತಿ ಮನೆಯಿಂದಲೂ ಸ್ವಯಂಸೇವಕರು ಸಿದ್ಧಗೊಳ್ಳುತ್ತಿರುವುದು ವಿಶೇಷವೆನಿಸಿದೆ.

ಫೆ. 3ರ ಸಾಂಘಿಕ್ ಮಂಗಳೂರು ಸಮೀಪದ ಬಜ್ಪೆ ವಿಮಾನ ನಿಲ್ದಾಣದ ಮುಂಭಾಗ ಕೆಂಜಾರಿನ 65 ಎಕರೆ ಪ್ರದೇಶದಲ್ಲಿ ಮಧ್ಯಾಹ್ನ 3ಕ್ಕೆ ಸಮಾವೇಶಗೊಳ್ಳಲಿದೆ. ಮೈದಾನವನ್ನು ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡಿದ್ದು ಉಳಿದ ಸಿದ್ಧತೆಗಳು ಭರದಿಂದ ಸಾಗಿವೆ.

ಫೆ. 3 ರಂದು ಉಡುಪಿ, ಮಂಗಳೂರು, ಕಾಸರಗೋಡು, ಪುತ್ತೂರು, ಕೊಡಗು ಪ್ರದೇಶಗಳಿಂದ ಪ್ರವಾಹದಂತೆ ಹರಿದು ಬರಲಿರುವ ಸ್ವಯಂಸೇವಕರಿಗೆ ಹೊರವಲಯದಲ್ಲಿ ಪ್ರತ್ಯೇಕ ಭೋಜನ ಶಾಲೆ, ವಾಹನ ನಿಲುಗಡೆ ಸೇರಿದಂತೆ ಇಡೀ ಕಾರ್ಯಕ್ರಮದ ವಿವರವಾದ ನೀಲನಕ್ಷೆ ಸಿದ್ಧಪಡಿಸಲಾಗಿದೆ.

ಪತ್ರಕರ್ತರಿಗೆ ಆಮಂತ್ರಣ

ಫೆ. 3ರ  ಈ ಸಾಂಘಿಕ್ ಹಾಗೂ ಸರಸಂಘಚಾಲಕರಾದ ಶ್ರೀ ಮೋಹನಭಾಗವತ್‌ರವರ ವಿಚಾರವನ್ನು ವರದಿ ಮಾಡಲು ಪತ್ರಕರ್ತರಿಗೆ ಈ ಮೂಲಕ ಆಮಂತ್ರಿಸಲಾಗಿದೆ. ಫೆ. 3ರಂದು ಮಧ್ಯಾಹ್ನ 2.30 ಹೋಟೆಲ್ ವುಡ್‌ಲ್ಯಾಂಡ್ಸ್‌ನಿಂದ ಪತ್ರಕರ್ತರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ.

ಫೆ. 1 ರಂದು ಮಧ್ಯಾಹ್ನ 3.30ಕ್ಕೆ ವಿಮಾನ ನಿಲ್ದಾಣದ ಎದುರಿನ ಕೆಂಜಾರು ಮೈದಾನದಲ್ಲಿನ ಸಿದ್ಧತೆ ಹಾಗೂ ಸಾಂಘಿಕ್‌ನ ವಿಶೇಷತೆಗಳನ್ನು ವಿವರಿಸಲು ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ. ಹೋಟೆಲ್ ವುಡ್‌ಲ್ಯಾಂಡ್ಸ್‌ನಿಂದ ವಾಹನ ವ್ಯವಸ್ಥೆ ಮಧ್ಯಾಹ್ನ 2.30ಕ್ಕೆ ಇರುತ್ತದೆ.

ದಯವಿಟ್ಟು ಬನ್ನಿ

ನಿಮ್ಮ ಸಹಕಾರ, ಸಹಯೋಗದ ನಿರೀಕ್ಷೆಯಲ್ಲಿ

(ಡಾ| ವಾಮನ ಶೆಣೈ)

ವಿಭಾಗ ಸಂಘಚಾಲಕ

ಸಂಪರ್ಕ ದೂರವಾಣಿ : 9480582027 / 9880621824

  • email
  • facebook
  • twitter
  • google+
  • WhatsApp

Related Posts

Mangalore Sanghik

VIDEO: RSS Vibhag Sanghik of Mangalore

February 4, 2013
Photo Gallery: Mangalore RSS Sanghik-2013
Mangalore Sanghik

Full Text of RSS Chief Mohan Bhagwat’s Speech at Mangalore Sanghik

February 4, 2013
ವಿವೇಕಾನಂದರ ಚಿಂತನೆಗಳ  ಅನುಷ್ಠಾನರೂಪವೇ ಆರೆಸ್ಸೆಸ್- ಮೋಹನ್ ಭಾಗವತ್
Mangalore Sanghik

ವಿವೇಕಾನಂದರ ಚಿಂತನೆಗಳ ಅನುಷ್ಠಾನರೂಪವೇ ಆರೆಸ್ಸೆಸ್- ಮೋಹನ್ ಭಾಗವತ್

November 26, 2013
Photo Gallery: Mangalore RSS Sanghik-2013
Mangalore Sanghik

Photo Gallery: Mangalore RSS Sanghik-2013

February 12, 2013
Mangalore Vibhag Sanghik creates history; Sarasanghachalak addressed mammoth Gathering
Mangalore Sanghik

Mangalore Vibhag Sanghik creates history; Sarasanghachalak addressed mammoth Gathering

February 3, 2013
ಮಂಗಳೂರು: ಸಾಮಾನ್ಯ ಜನರ ಅಸಾಮಾನ್ಯ ಸಂಘಟಿತ ಪ್ರಯತ್ನವೆನಿಸಿದ ಆರೆಸ್ಸೆಸ್  ಸಾಂಘಿಕ್ ಗೆ ಸಿದ್ಧತೆ ಪೂರ್ಣ
Mangalore Sanghik

ಮಂಗಳೂರು: ಸಾಮಾನ್ಯ ಜನರ ಅಸಾಮಾನ್ಯ ಸಂಘಟಿತ ಪ್ರಯತ್ನವೆನಿಸಿದ ಆರೆಸ್ಸೆಸ್ ಸಾಂಘಿಕ್ ಗೆ ಸಿದ್ಧತೆ ಪೂರ್ಣ

November 26, 2013
Next Post
Sri Sri Ravi Shankar communicated globally through Online Video chat in ‘Google Hangout’

Sri Sri Ravi Shankar communicated globally through Online Video chat in 'Google Hangout'

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 25, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

EDITOR'S PICK

“Hindu or Bharatiya Samskriti is our identity” says RSS Sarasanghachalak Mohan Bhagwat; Akhil Bharatiya Shrung Ghosh Shibir concludes in Bengaluru

“Hindu or Bharatiya Samskriti is our identity” says RSS Sarasanghachalak Mohan Bhagwat; Akhil Bharatiya Shrung Ghosh Shibir concludes in Bengaluru

January 15, 2016
Nation salutes Bhagat Sing on 104th Birth Anniversary

Nation salutes Bhagat Sing on 104th Birth Anniversary

September 27, 2011
Mathru Samavesha, a gathering of women at Hindu Shakti Sangama

Mathru Samavesha, a gathering of women at Hindu Shakti Sangama

January 30, 2012
Atma Nirbhar Bharath: Freedom from the despondency created by Covid-19

Atma Nirbhar Bharath: Freedom from the despondency created by Covid-19

June 8, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • Alapuzha – One arrested for provocative sloganeering during PFI rally
  • ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ
  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In