• Samvada
  • Videos
  • Categories
  • Events
  • About Us
  • Contact Us
Wednesday, February 1, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಆಧಾರ್ ಕಾರ್ಡ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಮನವಿ

Vishwa Samvada Kendra by Vishwa Samvada Kendra
May 23, 2014
in News Digest
251
0
ಆಧಾರ್ ಕಾರ್ಡ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಮನವಿ
492
SHARES
1.4k
VIEWS
Share on FacebookShare on Twitter

952228_orig

ರಿಗೆ,                                                               ದಿನಾಂಕ : ೨೬.೦೩.೨೦೧೪

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

      ಮಾನ್ಯ ರಾಷ್ಟ್ರಪತಿಗಳು,

      ಭಾರತ ಸರ್ಕಾರ,

ನವದೆಹಲಿ.

ಮಾನ್ಯರೇ,

ಆಧಾರ್ ಕಾರ್ಡ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ (೨೪.೦೩.೨೦೧೪) ಆದೇಶವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ದೇಶಾದ್ಯಂತ ರಾಷ್ಟ್ರಪತಿಗಳಿಗೆ ಮನವಿ

ಈಗಾಗಲೇ ಅನೇಕ ವರ್ಷಗಳಿಂದ ಚರ್ಚಿತವಾಗುತ್ತಿರುವ ಆಧಾರ್ ಕಾರ್ಡ್‌ನ್ನು ಅಕ್ರಮವಾಗಿ ನಮ್ಮ ವಿದೇಶಿಯರಿಗೂ ಅಂದರೆ ಬಾಂಗ್ಲಾದೇಶ, ನೇಪಾಳ್, ಪಾಕಿಸ್ತಾನ್ ಮತ್ತು ಅನೇಕ ದೇಶಗಳಿಗೆ ಸೇರಿದ ವಲಸಿಗರಿಗೆ ((immigrants)  ನೀಡಿರುವ ಬಗ್ಗೆ ದೇಶದ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ವಿಪರೀತವಾಗಿ ಸುದ್ದಿಯಾಗುತ್ತಿದೆ. ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ಪಡೆಯಲು ದೇಶದ ದೆಹಲಿ, ಕೋಲ್ಕತ್ತ, ಅಸ್ಸಾಂ, ಬೆಂಗಳೂರು ಹೀಗೆ ಅನೇಕ ಕಡೆಗಳಲ್ಲಿ ಕಂಡು ಬಂದಿರುವಂತೆ ಭಾರತದವರೆಂದು ಹೇಳಿಕೊಳ್ಳಲು ಯಾವುದೇ ಆಧಾರಗಳನ್ನು ಒದಗಿಸದೆ ಬರೀ…. ಫೋಟೋವನ್ನು ನೀಡಿ ೫೦೦ ರಿಂದ ೫೦೦೦ ರೂ.ಗಳವರೆಗೆ ಲಂಚ ಕೊಟ್ಟು ಆಧಾರ್ ಕಾರ್ಡ್ ನಂಬರ್ ಪಡೆದಿರುವ ಬೇಕಾದಷ್ಟು ಉದಾಹರಣೆಗಳು ದೇಶದುದ್ದಗಲಕ್ಕೂ ಲಭ್ಯವಾಗಿವೆ. ಆಧಾರ್ ಕಾರ್ಡ್‌ನ ನಂಬರ್ ಪಡೆಯಲು ಬಯೋಮೆಟ್ರಿಕ್ ಮಾಹಿತಿಯನ್ನೂ ನೀಡದೆ ಯಾರದೋ ಕೈ ಬೆರಳಿನ ಬೆರಳಚ್ಚನ್ನು ಇನ್ನಾರಿಗೋ ನೀಡಿ, ಯಾರದೋ ಕಣ್ಣಿನ ಮಾಹಿತಿಯನ್ನು ಇನ್ನಾರಿಗೋ ನೀಡಿ, ಆಧಾರ್ ಕಾರ್ಡ್ ನಂಬರ್ ನೀಡಲಾಗಿದೆ. ಇದರಲ್ಲಿ ಬಾಂಗ್ಲಾ, ಪಾಕಿಸ್ಥಾನ್, ನೇಪಾಳ ಮುಂತಾದ ದೇಶಗಳಿಗೆ ಸೇರಿದ ಲಕ್ಷಾಂತರ ಸಂಖ್ಯೆಯಲ್ಲಿ ವಲಸಿಗರು ಭಾರತದಲ್ಲಿ ನೆಲೆಸಿದ್ದಾರೆ. ಇದರಿಂದ ಭಾರತದ ಸುರಕ್ಷತೆಗೆ ಭಾರೀ ದೊಡ್ಡ ಸವಾಲು ನಮ್ಮೆದುರಿಗಿದೆ.

 ಅತ್ಯಂತ ಗಂಭೀರವಾದ ಮತ್ತೊಂದು ಸಂಗತಿಯೆಂದರೆ ಆಧಾರ್ ಕಾರ್ಡ್‌ನ ನಂಬರ್ ವಿತರಣೆ ಸಂಪೂರ್ಣ ಯೋಜನೆಯನ್ನು ವಿದೇಶಿ ಕಂಪನಿ L-1 Identity Solutions ಗೆ ಕೊಟ್ಟಿರುವುದರಿಂದ ಇಷ್ಟು ದೊಡ್ಡ Data Bank ನ ಮಾಹಿತಿಯ ಗೌಪ್ಯತೆ ಹಾಗೂ ಸುರಕ್ಷತೆಯ ಬಗ್ಗೆ ಬಹುದೊಡ್ಡ ಪ್ರಶ್ನೆ ನಮ್ಮ ಮುಂದಿದೆ. ಈ ಯೋಜನೆಗೆ ಪತ್ರಿಕೆಗಳಲ್ಲಿ ಸುದ್ದಿಯಾಗಿರುವಂತೆ ೧೮,೦೦೦ ಕೋಟಿ ದೇಶದ ಸಾರ್ವಜನಿಕರ ಹಣವನ್ನು ಬೊಕ್ಕಸದಿಂದ ಖರ್ಚು ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಆದೇಶಕ್ಕೆ ಸ್ವಾಗತ: ದಿನಾಂಕ ೨೪ ಮಾರ್ಚ್ ೨೦೧೪ ರಂದು ತ್ರಿ ಸದಸ್ಯರ ಪೀಠ ಮೇಲಿರುವ ಎಲ್ಲಾ ಸಂಗತಿಗಳು ಹಾಗೂ ಕೋರ್ಟ್‌ನಲ್ಲಿ ಆಧಾರ್ ಕಾರ್ಡ್‌ನ ಬಗ್ಗೆ ವಾದಗಳನ್ನು ಆಲಿಸಿ ದೇಶಕ್ಕೆ ಸುರಕ್ಷೆ, ದೇಶದ ನಾಗರೀಕರು ಸುರಕ್ಷತೆ, ದೇಶದ ಸಾರ್ವಭೌಮತ್ವದ ಸುರಕ್ಷೆಯಿಂದ ನೀಡಿರುವ ಮಧ್ಯಂತರ ಆದೇಶವನ್ನು ಅತ್ಯಂತ ಗೌರವಪೂರ್ಣವಾದದ್ದು ಮತ್ತು ಐತಿಹಾಸಿಕವಾದದ್ದೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಭ್ರಷ್ಟಾಚಾರದ ವಿರುದ್ಧ ಯುವಜನತೆ ಸ್ವಾಗತಿಸುತ್ತದೆ.

ರಾಷ್ಟ್ರಪತಿಗಳು ಕೇಂದ್ರ ಸರ್ಕಾರ ಮತ್ತು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವಿರುದ್ಧ ಕ್ರಮ ತೆಗೆದುಕೋಳ್ಳಲು ಒತ್ತಾಯಿಸಿ ಮನವಿ:

      ಆಧಾರ ಗುರುತಿನ ಚೀಟಿಯ ಪ್ರಸ್ತುತತೆಯ ಬಗ್ಗೆ ಚನ್ನೈ, ಮುಂಬಯಿ, ಬೆಂಗಳೂರು, ಚಂಡೀಗಢ, ದೆಹಲಿ ಸೇರಿದಂತೆ ಇತರೆ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಹಾಗೂ ಸುಪ್ರೀಂಕೋರ್ಟ್‌ನಲ್ಲಿಯೂ ಪ್ರಶ್ನಿಸಲಾಗಿದೆ.

      ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಇದು ಕೂಡ ಒಂದು. ಸರ್ಕಾರದ ಕಲ್ಯಾಣಕಾರಿ ಯೋಜನೆಗಳನ್ನು ಜನರಿಗೆ ನೇರ ತಲುಪಿಸುವುದು. ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಸೌಲಭ್ಯವನ್ನು ಪಡೆಯಬಹುದು, ವಾಹನ ಚಾಲನಾ ಪರವಾನಿಗೆ, ರೇಷನ್ ಕಾರ್ಡ್, ನೇರವಾಗಿ ಬಳಕೆದಾರರ ಖಾತೆಗೆ ಹಣ ಪಡೆಯಬಹುದಾದದ ವಿವಿಧ ಅನುಕೂಲತೆಗಳನ್ನು ಇದರಲ್ಲಿ ಸೇರ್ಪಡೆಗೊಳಿಸಲಾಗಿದೆ. ಆದರೆ ಇವುಗಳೆಲ್ಲಾ ವಿದೇಶಿಯರಿಗೆ ತಲುಪಬೇಕೆ?

      ಕೇಂದ್ರ ಸರ್ಕಾರದ ಈ ಆಧಾರ್ ಯೋಜನೆಯ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ವಾದ ನಡೆಯುತ್ತಿದೆ. ದೇಶದಲ್ಲಿರುವ NPR (National Population Register)   ರಾಷ್ಟ್ರೀಯ ಜನಸಂಖ್ಯಾ ನೊಂದಣಿ ದಾಖಲೆ ಅಂದರೆ ಪೌರತ್ವದ ದಾಖಲೆವಿರುವಾಗ ಮತ್ತೆ ಇದು ಬೇಕೆ? ಬೇಕೆಂದಾದರೆ  ಆಧಾರ್‌ನ ಕಾರ‍್ಯವೇನು? ಈ ಎಲ್ಲ ವಿಷಯಗಳು ಸಂಸತ್‌ನಲ್ಲಿ ಚರ್ಚೆಯೇ ನಡೆಯಲಿಲ್ಲವೇಕೆ?

      ಈ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೇ ಸರ್ಕಾರಿ ಯೋಜನೆಗಳು, ಅನುಕೂಲತೆಗಳನ್ನು ಜನರಿಗೆ ನೇರವಾಗಿ ತಲುಪಿಸಬಹುದು. ಆದರೆ ಅರ್ಹರಿಗೆ ತಲುಪಿಸುತ್ತಿದೆಯೇ ಎಂಬ ಪ್ರಶ್ನೆ ದೇಶದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ. ಅನರ್ಹರಿಗೆ ವಿದೇಶಿಯರಿಗೆ, ಪಕ್ಕದ ರಾಷ್ಟ್ರಗಳ ಜನರಿಗೆ  ಆಧಾರ್ ಗುರುತಿನ ಚೀಟಿ ಲಭ್ಯವಾಗಿರುವ ಬಗ್ಗೆ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ವರಿದಿಯಾಗಿದೆ. ಇದಕ್ಕೆ ಹೊಣೆಗಾರರು ಯಾರು? ಈ ಬಗ್ಗೆ  ಸರ್ಕಾರ ಮೌನವೇಕೆ ವಹಿಸಿದೆ?

   ಆಧಾರ್ ಯೋಜನೆ ಜಾರಿಯಾದಂದಿನಿಂದ ಸಂವಿಧಾನ ತಜ್ಞರು, ಅನೇಕ ಸಂಘಟನೆಗಳು ಇದನ್ನು ಪ್ರಶ್ನಿಸಿವೆ. ಭಾರತದ ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ಕದಿಯಲು ಅವಕಾಶ ನೀಡುವ ಈ ಯೋಜನೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಈ ಯೋಜನೆ ಕಾನೂನಿನ ಅಡಿಪಾಯವಿಲ್ಲ ಇತ್ಯಾದಿ ಸಂಗತಿಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಅವರು ಆಧಾರ್‌ನ್ನು ಕಡ್ಡಾಯಗೊಳಿಸಬಾರದು ಎಂದು ಹೇಳಿದ್ದಾರೆ. ಈಗ ವಿಭಾಗೀಯ ಪೀಠ ಕಡ್ಡಾಯಗೊಳಿಸಬಾರದು ಎಂದು ಆದೇಶ ನೀಡಿದೆ.

      ಆಧಾರ್ ಯೋಜನೆಗೆ ಕಾನೂನಿನ ಬಲವಿಲ್ಲ ಕಾರ‍್ಯಾಂಗದ ಮೂಲಕ ಆದೇಶ ಹೊರಡಿಸಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಅಗತ್ಯವಿರುವ ಮಸೂದೆಯನ್ನು ಸಂಸತ್ತಿನಲ್ಲಿ ರೂಪಿಸಿ ಒಪ್ಪಿಗೆ ಪಡೆದುಕೊಂಡು ಜಾರಿಗೊಳಿಸಬೇಕಾಗಿತ್ತು. ಅಲ್ಲದೇ ಆಧಾರ್ ಗುರುತಿನ ಚೀಟಿ ಪಡೆಯಬೇಕಾದರೆ ವ್ಯಕ್ತಿಯ ಬಯೋಮೇಟ್ರಿಕ್ (ಜೈವಿಕ ಮಾಹಿತಿ) ಮಾಹಿತಿಯನ್ನು ಈಗ ವಿದೇಶಿ ಕಂಪೆನಿಗೆ ನೀಡಬೇಕಾಗಿದೆ. ಇದು ಎಷ್ಟು ನ್ಯಾಯೋಚಿತವಾದದ್ದು?

ಆದ್ದರಿಂದ ಸುಪ್ರೀಂಕೋರ್ಟ್ ನೀಡಿರುವ  ಆಧಾರ್ ಗುರುತಿನ ಚೀಟಿಯನ್ನು ಕಡ್ಡಾಯವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂಬ ಆದೇಶವನ್ನು ಜಾರಿಗೊಳಿಸಲು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು. ಈ ಯೋಜನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಸಾರ್ವಜನಿಕರ ೧೮,೦೦೦ ಕೋಟಿ ಹಣವನ್ನು (ಈ ಯೋಜನೆಗೆ ಖರ್ಚಾದ ಹಣ) ಸರ್ಕಾರದ ಬೊಕ್ಕಸಕ್ಕೆ ಹಿಂತಿರುಗಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಭ್ರಷ್ಟಾಚಾರದ ವಿರುದ್ಧ ಯುವಜನತೆ ವಿನಂತಿಸಿಕೊಳ್ಳುತ್ತದೆ.

ವಂದನೆಗಳೊಂದಿಗೆ,

ರವಿಕುಮಾರ್.ಎನ್

ರಾಷ್ಟ್ರೀಯ ಸಹಸಂಚಾಲಕರು, Youth Against Corruption

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Audio: RSS Prarthana ‘Namaste Sada Vatsale Mathrubhoome’

Audio: RSS Prarthana 'Namaste Sada Vatsale Mathrubhoome'

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Walkathon held to Promote International Yoga Day at Hubballi

Walkathon held to Promote International Yoga Day at Hubballi

June 18, 2015
‘Vidya Mitra’: A unique initiative for Govt School students to imbue academic skills at Mysore

‘Vidya Mitra’: A unique initiative for Govt School students to imbue academic skills at Mysore

April 3, 2012
ದೇಸೀ ಗೋತಳಿಯ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ: ಚಂದ್ರಶೇಖರ ಭಂಡಾರಿ

ದೇಸೀ ಗೋತಳಿಯ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ: ಚಂದ್ರಶೇಖರ ಭಂಡಾರಿ

October 4, 2015
Govt draft of Lokpal Bill-2011

Govt draft of Lokpal Bill-2011

June 22, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In