• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಸಶಕ್ತ ಹಿಂದು ಸಮಾಜ ನಿರ್ಮಾಣಕ್ಕೆ ಅಣಿಯಾಗೋಣ : ಮೋಹನ್‌ಜೀ ಭಾಗವತ್

Vishwa Samvada Kendra by Vishwa Samvada Kendra
September 11, 2011
in News Digest
250
0
ಸಶಕ್ತ ಹಿಂದು ಸಮಾಜ ನಿರ್ಮಾಣಕ್ಕೆ ಅಣಿಯಾಗೋಣ : ಮೋಹನ್‌ಜೀ ಭಾಗವತ್
491
SHARES
1.4k
VIEWS
Share on FacebookShare on Twitter

ಸಶಕ್ತ ಹಿಂದು ಸಮಾಜ ನಿರ್ಮಾಣಕ್ಕೆ ಅಣಿಯಾಗೋಣ : ಮೋಹನ್‌ಜೀ ಭಾಗವತ್

READ ALSO

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಮೈಸೂರು  September-10: ಸಶಕ್ತ ಹಿಂದು ಸಮಾಜ ನಿರ್ಮಾಣಕ್ಕೆ ಸಂಘದ ಸ್ವಯಂಸೇವಕರು ಕಟಿಬದ್ದರಾಗಬೇಕು. ಈ ದೇಶವನ್ನು ಕಾಡುತ್ತಿರುವ ಹಲವು ಬಗೆಯ ಸಮಸ್ಯೆಗಳಿಗೆ ಅದೊಂದೇ ಸೂಕ್ತ ಉತ್ತರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ.ಪೂ. ಮೋಹನ್ ಭಾಗವತ್ ಕರೆ ನೀಡಿದರು.

ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಮಾವೇಶಗೊಂಡ ದಕ್ಷಿಣ  ಪ್ರಾಂತದ ತಾಲ್ಲೂಕುಸ್ತರದ ಕಾರ‍್ಯಕರ್ತರು ಹಾಗೂ ಮೈಸೂರು ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳ 2500ಕ್ಕೂ  ಹೆಚ್ಚು ಗಣವೇಷಧಾರಿ ಸ್ವಯಂಸೇವಕರನ್ನುದ್ದೇಶಿಸಿ ಅವರು ಬೌದ್ದಿಕ್‌ವರ್ಗದಲ್ಲಿ ಮಾತನಾಡಿ, ಶುದ್ದ ಚಾರಿತ್ಯದ ವ್ಯಕ್ತಿಗಳನ್ನು ನಿರ್ಮಿಸಿ ಮೇಲ್ಪಂಕ್ತಿಹಾಕಿದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ವಿಶ್ವಾಸವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ಅಣ್ಣಾಹಜಾರೇನೇತೃತ್ವದ ಭ್ರಷ್ಠಾಚಾರ ವಿರೋಧಿ ಆಂದೋಲನದ ಪ್ರಸ್ತಾಪ ಮಾಡಿದ ಭಾಗವತ್‌ರವರು, ಕೇವಲ ಆಂದೋಲನ ಮಾಡಿದ ಮಾತ್ರದಿಂದ ಭ್ರ್ರಷ್ಟಾಚಾರ ನಿರ್ಮೂಲನೆಯಾಗದು ಭ್ರಷ್ಟಾಚಾರ ಜನರ ಮನದಿಂದ ದೂರವಾಗಬೇಕು. ಅಂತಹ ಮಾನಸಿಕತೆ ಸರ್ವತ್ರ ನಿರ್ಮಾಣವಾದರೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೆಂದು ಚೆನ್ನೈ ಬೌದ್ದಿಕ್‌ನಲ್ಲಿ ತಿಳಿಸಿದ್ದೆ. ಅದೇದಿನ ಅಣ್ಣಾ ಹಜಾರೆ ನಿರಶನ ಸಮಾಪ್ತಿಗೋಳಿಸಿ ಇದೇ ಅಂಶಗಳನ್ನು ತಿಳಿಸಿದ್ದರು. ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪುತ್ತೂರು ಬೈಠಕ್‌ನಲ್ಲಿ ಕೈಗೊಂಡ ನಿರ್ಣಯದಂತೆ ಸಂಘವು, ಯಾರೇ ಇದರ ವಿರುದ್ದ ಹೋರಾಟ ನಡೆಸಿದರೂ ಅದಕ್ಕೆ ಬೆಂಬಲ ನೀಡಲಿದೆ. ಸಂಘದ ಸ್ವಯಂಸೇವಕರು ಅದರಂತೆಯೇ ನಡೆದುಕೊಂಡಿದ್ದಾರೆ ಎಂದರು. ಸಮಾಜದಲ್ಲಿ ಎಲ್ಲರೂ ಸಂಯಮಿತ ಸರಳ ಪ್ರಾಮಾಣಿಕ ಜೀವನ ನಡೆಸಿದಾಗಲೇ ಭ್ರಷ್ಟಾಚಾರದ ಪಿಡುಗಿಗೆ ಕಡಿವಾಣ ಹಾಕಬಹುದೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಯೋತ್ಪಾದನೆ, ಭ್ರಷ್ಠಾಚಾರ, ಅಸ್ಪೃಷ್ಯತೆ ಮುಂತಾದ ಹಲವು ದೋಷಗಳು ನಮ್ಮ ಸಮಾಜವನ್ನು ಕಾಡುತ್ತಿದೆ. ಅವನ್ನೆಲ್ಲ ತೆಗೆದು ಹಾಕದೆ ದೇಶ ಪರಮವೈಭವ ಸ್ಥಿತಿಗೆ ತಲುಪಲು ಸಾಧ್ಯವಿಲ್ಲ. ಹಿಂದು ಸಮಾಜದಲ್ಲಿ ಹುದುಗಿರುವ ಆತ್ಮವಿಸ್ಮೃತಿ, ಅಸಂಘಟಿತ ಸ್ಥತಿ ತೊಲಗಿಸಿ ಇದೊಂದು ಚೈತನ್ಯಮಯ ಸಮಾಜ ಎಂಬ ಭಾವನೆ ಮೂಡಿಸಬೇಕಾಗಿದೆ. ಜಾತಿ ಭಾಷೆ, ಪಂಥ, ಪ್ರಾಂತ, ಮೊದಲಾದ ಸಂಕುಚಿತ ದೃಷ್ಠಿ ತೊರೆದು ಸ್ವಾಭಿಮಾನಸಂಪನ್ನ ರಾಷ್ಟ್ರವಾಗಬೇಕು. ಇದು ಸಂಘದ ದೃಷ್ಠಿ ಎಂದರು. ಗಾಂಧೀಜಿ, ಅಂಬೇಡ್ಕರ್, ಸುಭಾಶ್ಚಂದ್ರಬೋಸ್ ಮೊದಲಾದ ಮಹನೀಯರು ಕೂಡ ಡಾ.ಜೀ ಪ್ರತಿಪಾದಿಸಿದ ಅಂಶಗಳನ್ನೇ ಪ್ರತಿಪಾದಿಸಿದ್ದರು ಎಂದವರು ಹೇಳಿದರು.

ಬೆಂಗಳೂರಿನಲ್ಲಿ ಕಳೆದ ವರ್ಷ ೪೦ ಸಾವಿರ ಸ್ವಯಂಸೇವರ ಸಮಾವೇಶ ನಡೆದಾಗ ಅಲ್ಲಿ ಸೇರಿದ್ದ ಸುಮಾರು ೨ಲಕ್ಷ ಜನರು ಕಾರ‍್ಯಕ್ರಮ ಮುಗಿದ ಬಳಿಕ ಕೇವಲ ೪೫ ನಿಮಿಷಗಳಲ್ಲಿ ತಮ್ಮ ವಾಹನಗಳಲ್ಲಿ ಯಾವುದೇ ಟ್ರಾಫಿಕ್ ಜಾಂ ಸಮಸ್ಯೆಗೀಡಾಗದೆ ಚದರಿದರು. ಇಂತಹ ಜಾದು ಸಂಘದಿಂದ ಹೇಗೆ ಸಾಧ್ಯವಾಯಿತು ಎಂಬುದು ಪೋಲೀಸ್ ಅಧಿಕಾರಿಗಳ ಪ್ರಶ್ನೆ. ಅಂತಹ ವಾತಾವರಣ, ಮಾನಸಿಕತೆ ಸಂಘದಲ್ಲಿ ನಿರ್ಮಿಸಿದ್ದರಿಂದಲೇ ಅದು ಸಾಧ್ಯವಾಯಿತು. ದೇಶದ ಪ್ರತಿಯೊಂದು ಗ್ರಾಮದಲ್ಲೂ ಶಾಖೆಯ ಮೂಲಕ ಚಾರಿತ್ರ್ಯಶುದ್ದ, ಪ್ರಾಮಾಣಿಕ ಸ್ವಯಂಸೇವಕರು ತಯಾರಾದರೆ ಇಡೀ ಸಮಾಜದಲ್ಲಿ ಅದರ ಛಾಪು ದಟ್ಟವಾಗಿ ಹರಡಲು ಸಾಧ್ಯವಿದೆ. ಅದಕ್ಕಾಗಿ ಹೆಚ್ಚು ಸಮಯ ಸಂಘಕಾರ‍್ಯಕ್ಕಾಗಿ ಕೊಡಬಲ್ಲ ಪ್ರವಾಸಿ ಕಾರ‍್ಯಕರ್ತರು ಹೊರಬರಬೇಕಾಗಿದೆ. ಎಂದರು. ಸಂಘದ ಚಿಂತನೆಗೆ ಅನುಗುಣವಾಗಿ ನನ್ನ ಕುಟುಂಬ ಇದೆಯಾ? ನನ್ನ ಸಮಯದ ದುಡಿಮೆಯ ೧/೩ಭಾಗ ಸಂಘಕ್ಕಾಗಿ ಮಿಸಲಾಗಿಡುತ್ತಿದ್ದೇನೆಯೇ? ಇಂತಹ ಸಮಾಜಮುಖಿ ಪ್ರಶ್ನೆಗಳನ್ನು ಸ್ವಯಂಸೇವಕರು ತಮ್ಮ ಅಂತರಂಗಕ್ಕೆ ಕೇಳಿಕೊಳ್ಳಬೇಕಾಗಿದೆ. ಈ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಕೊಳ್ಳುವಲ್ಲೇ ದೇಶದ ಪರಮವೈಭವಸ್ಥಿತಿಯ ಸಾಕಾರರೂಪ ಅಡಗಿದೆ ಎಂದವರು ಮಾರ್ಮಿಕವಾಗಿ ತಿಳಿಸಿದರು.

ಸಂಘದ ಕ್ಷೇತ್ರೀಯ ಸಂಘಚಾಲಕರಾದ ಮಾ. ಪರ್ವತರಾವ್, ದಕ್ಷಿಣ ಪ್ರಾಂತ ಸಂಘಚಾಲಕ್ ಮಾ.ವೆಂಕಟರಾಮು, ಮೈಸೂರು ವಿಭಾಗ ಸಂಘಚಾಲಕ್ ಮಾ.ಡಾ.ವಾಮನರಾವ್ ಬಾಪಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕ್ಷೇತ್ರೀಯ ಕಾರ‍್ಯವಾಹ ರಾಮಕೃಷ್ಣ, ಕ್ಷೇತ್ರೀಯ ಪ್ರಚಾರಕ್ ಮಂಗೇಶ್‌ಬೇಂಡೆ, ಮೊದಲಾದ ಪ್ರಮುಖರು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

  • email
  • facebook
  • twitter
  • google+
  • WhatsApp

Related Posts

News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
Next Post
RSS’s Ram Madhav welcomes SC verdict

RSS's Ram Madhav welcomes SC verdict

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

‘If AFSPA lifted from J&K, Pakistan will send terrorists into Valley’, says RSS Chief Mohan Bhagwat

‘If AFSPA lifted from J&K, Pakistan will send terrorists into Valley’, says RSS Chief Mohan Bhagwat

November 14, 2011
ಮಹಾತ್ಮ ಗಾಂಧಿ ಎಂಬ ಮಹಾನ್ ವ್ಯಕ್ತಿತ್ವದ ಶ್ರದ್ಧಾವಂತ ಹಾಗೂ ಪ್ರಜ್ಞಾವಂತ ಹಿಂದು : ಶ್ರೀ ವಿ ನಾಗರಾಜ

Mahatma Gandhiji a faithful and a conscious Hindu : Sri V Nagaraj

October 8, 2018
RSS functionary Ram Madhav’s views on Allahabad Railway Station Stampede Tragedy

राष्ट्रीय सामाजिक-धार्मिक आयोजन परिषद्: डॉ प्रवीण तोगड़िया का सुझाव।

February 11, 2013

Firozabad police arrested 9 people who kidnapped RSS Pracharak

July 9, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In