• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಬೆಂಗಳೂರಿನ ಅಕ್ಷಯನಗರದ ಚೊಚ್ಚಲ ‘ಮಂಥನ’ದಲ್ಲಿ ಸಂಸದ ತೇಜಸ್ವಿ ಸೂರ್ಯ ಉಪನ್ಯಾಸ

Vishwa Samvada Kendra by Vishwa Samvada Kendra
August 14, 2019
in Articles
250
0
ಬೆಂಗಳೂರಿನ ಅಕ್ಷಯನಗರದ ಚೊಚ್ಚಲ ‘ಮಂಥನ’ದಲ್ಲಿ  ಸಂಸದ ತೇಜಸ್ವಿ ಸೂರ್ಯ ಉಪನ್ಯಾಸ

ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವಿ ಸೂರ್ಯ

491
SHARES
1.4k
VIEWS
Share on FacebookShare on Twitter

11 ಆಗಸ್ಟ್ 2019, ಬೆಂಗಳೂರು: ಮಹಾನಗರದ, ಅಕ್ಷಯನಗರದ ವಾದಿರಾಜ ಕಲಾ ಭವನದಲ್ಲಿ ಭಾನುವಾರದಂದು “ಮಂಥನ” ಚಿಂತಕರ ಚಾವಡಿಯ ಮೊದಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ‘ನವ ಭಾರತ’ದ (New India) ವಿಷಯದ ಭಾಷಣಕಾರರಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿನಯ್ ಬೈಜಲ್ ರವರು ವಹಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೇಗೂರು ನಗರ ಸಂಘಚಾಲಕರಾಗಿರುವ ಸೀತಾರಾಮ್ ಭಟ್ ರವರೂ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯರವರು ನ್ಯೂ ಇಂಡಿಯಾದ ಕಲ್ಪನೆಯನ್ನು ಹಂಚಿಕೊಳ್ಳುತ್ತಾ ಜಮ್ಮು ಕಾಶ್ಮೀರದಲ್ಲಿ ವಿಧಿ 370 ತೆಗೆದುಹಾಕುವ ನಿರ್ಧಾರ ನವ ಭಾರತ ಕಲ್ಪನೆಯ ಇತ್ತೀಚಿನ ಉದಾಹರಣೆ. ಕಾಶ್ಮೀರ ಭಾರತದ ಅಂಗವಾಗಿರುವುದು ಕೇವಲ ಸಂವಿಧಾನದ ಒಂದು ಅನುಚ್ಛೇದದಿಂದಲ್ಲ. ಆದಿಶಂಕರರು ಸ್ಥಾಪಿಸಿದ ಶಾರದಾ ಪೀಠ ಹಾಗೂ ನೂರಾರು ವರ್ಷಗಳಿಂದ ನಾವು ಸ್ತುತಿಸುವ ‘ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನೀ’ ಎಂಬ ಸ್ತೋತ್ರದ ಕಾಲದಿಂದಲೂ ಕಾಶ್ಮೀರ ಭಾರತದ ಭಾಗವಾಗಿತ್ತು. ಈ ಕಲ್ಪನೆಯನ್ನು ಶ್ಯಾಮ್ ಪ್ರಸಾದ್ ಮುಖರ್ಜೀ ಹಾಗೂ ದೀನ್ ದಯಾಳ್ ಉಪಾಧ್ಯಾಯರವರು ಜೀವಂತವಾಗಿಟ್ಟಿದ್ದರು. ವಾಜಪೇಯಿ, ಆಡ್ವಾನಿಯವರುಗಳು ಮುಂದುವರಿಸಿದರು. ಇಂತಹ ದಿಗ್ಗಜರ ಹಾಗೂ ಅಸಂಖ್ಯಾತ ಕಾರ್ಯಕರ್ತರ ತ್ಯಾಗ ತಪಸ್ಸು ಈಗಿನ ನಾಯಕತ್ವಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳುವ ಶಕ್ತಿ ನೀಡಿದೆ. ಹೀಗಾಗಿ New India ಎನ್ನುವ ಕಲ್ಪನೆ ಪೂರ್ವಜರ ತಪಸ್ಸು, ಹಿರಿಯರ ಹೋರಾಟ ಹಾಗೂ ನವಯುವಕರ ಉತ್ಸಾಹದ ಸಮ್ಮಿಳನ ಎಂದು ವ್ಯಾಖ್ಯಾನಿಸಿದರು.

READ ALSO

ಒಂದು ಪಠ್ಯ – ಹಲವು ಪಾಠ

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಪೂರ್ಣ ಭಾಷಣ ಕೇಳಿ

ಮುಂದುವರೆದು ಮಾತನಾಡುತ್ತಾ ತೇಜಸ್ವಿ ಸೂರ್ಯರವರು
ಬರೀ ಹಗರಣಗಳೇ ನಡೆಯುತಿದ್ದ ಕಾಲದಲ್ಲಿ ಮೊದಲ ಬಾರಿಗೆ ಜನರು ಸರ್ಕಾರದ ಬೊಕ್ಕಸಕ್ಕೆ ಆಗುವ ಲಾಭದ ಅಥವಾ ಉಳಿತಾಯದ ಬಗ್ಗೆ ಮಾತನಾಡುವಂತಾಯಿತು. direct benefit transfer ಸ್ಕೀಮ್ ನ ಮೂಲಕ ಪ್ರತೀ ವರ್ಷ ಭಾರತದ ಬೊಕ್ಕಸಕ್ಕೆ ಆಗುತ್ತಿದ್ದ 1 ಲಕ್ಷ ಕೋಟಿ ನಷ್ಟವನ್ನು ತಡೆಗಟ್ಟಲಾಯಿತು ಎಂದರು. ಹೀಗೆ ಜನಧನ, ಉಜ್ವಲ, ಮುದ್ರಾ ಇಂತಹ ಹಲವಾರು ಯೋಜನೆಗಳು ಒಂದು ಸರಕಾರ ಜನಸ್ನೇಹಿ ಪಾರದರ್ಶಕ ಆಡಳಿತ ನೀಡಬಹುದೆಂಬ ನಂಬಿಕೆ ಜನಮಾನಸದಲ್ಲಿ ಮೂಡಿಸಿದೆ ಎಂದು ತಿಳಿಸಿದರು.

ಕಳೆದ 5 ವರ್ಷಗಳಲ್ಲಿ ಹೇಗೆ ವಿದೇಶಿ ನೀತಿಯನ್ನು ಸುಧಾರಣೆ ಮಾಡಲಾಯಿತು ಎನ್ನುವದರ ಬಗ್ಗೆ ಕೂಡ ಬೆಳಕು ಚೆಲ್ಲಿದರು. ಇತರ ರಾಷ್ಟ್ರಗಳು ಭಾರತವನ್ನು ನೋಡವ ರೀತಿಯಷ್ಟೇ ಅಲ್ಲದೇ ಭಾರತೀಯರಾದ ನಾವು ನಮ್ಮನ್ನು ನೋಡುವ ರೀತಿಯಲ್ಲಿ ಕೂಡ ಬದಲಾಗಿದೆ. ಭಯೋತ್ಪಾದನೆ ವಿರುದ್ಧ ಭಾರತ ದಿಟ್ಟ ಕ್ರಮ ಕೈಗೊಂಡಾಗ ಇಡೀ ವಿಶ್ವ ಸಮೂಹ ಭಾರತದ ಪರವಾಗಿ ನಿಂತಿದ್ದು New India ದ ಶಕ್ತಿಗೆ ಕೊಟ್ಟ ಗೌರವ.

ಸರ್ಕಾರದ ಪ್ರಸ್ತುತ ಕಾರ್ಯಕ್ಷಮತೆಯ ಬಗ್ಗೆಯ ಎಲ್ಲ ವಿವರಗಳು ಹಾಗೂ ಸರ್ಕಾರದ ಎಲ್ಲ ಯೋಜನೆಗಳ ಬಗ್ಗೆ ಮಾಹಿತಿಯನ್ನು gov.in ವೆಬ್ಸೈಟ್ ಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದಾಗಿದೆ. ಆಡಳಿತಾತ್ಮಕ ಪಾರದರ್ಶಕತೆ ಹೊಸ ಭಾರತದ ಗುಣಲಕ್ಷಣ ಎಂದರು.

ಹೊಸ ಭಾರತಕ್ಕೆ ಸಂಬಧಿಸಿದ ಎಲ್ಲಾ ಮಾಹಿತಿಗಳು “ನೀತಿ ಆಯೋಗ್ ನ್ಯೂ ಇಂಡಿಯಾ @ ೭೫” ನಲ್ಲಿ ಲಭ್ಯವಿದ್ದು ಸಾರ್ವಜನಿಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕೂಡ ಹಂಚಿಕೊಳ್ಳಬೇಕಾಗಿ ವಿನಂತಿಸಿದರು.

ಇವೆಲ್ಲ ಸಾಧ್ಯವಾಗಿದ್ದು ನರೇಂದ್ರ ಮೋದಿಯವರ ನಾಯಕತ್ವದಿಂದ. ಆ ನಾಯಕತ್ವದ ಶಕ್ತಿಯ ಮೂಲ ಹೊಸ ಭಾರತದ ಆಸೆ ಆಕಾಂಕ್ಷೆಗಳು ಹಾಗೂ ರಾಷ್ಟ್ರ ಸರ್ವ ಪ್ರಥಮ ಎಂಬ ಭಕ್ತಿ.

ಈ ಎಲ್ಲಾ ಕಾರಣದಿಂದಾಗಿಯೇ ೨೦೧೯ರಲ್ಲಿ ೨೦೧೪ ಕ್ಕಿಂತ ದೊಡ್ಡ ಜನಾಶೀರ್ವಾದ ಸಿಕ್ಕಿತು. ಈ ಆಶೀರ್ವಾದ ದೊಡ್ಡ ಕೆಲಸ ಮಾಡುವುದಕ್ಕಾಗಿ ದೊರೆತದ್ದು ಮತ್ತು ಆ ಕೆಲಸಗಳನ್ನು ಮಾಡುವುದು ನಿಶ್ಚಿತ ಎಂದರು.

ಕೊನೆಯಲ್ಲಿ ನೂರು ವರ್ಷದ ನಂತರವೂ ಹೊಸ ಭಾರತದ ಹೊಸ ಕಲ್ಪನೆಯಿರುತ್ತದೆ. ಆ ಹೊಸ ಕಲ್ಪನೆಯ ಮೂಲ ಕೂಡ ರಾಷ್ಟ್ರೀಯತೆಯ ಸಿದ್ಧಾಂತವೇ ಆಗಿರುತ್ತದೆ ಎಂದರು.

ನಂತರ ಮಾತನಾಡಿದ ವಿನಯ್ ಬೈಜಲ್ ರವರು ಸಂಕ್ಷಿಪ್ತವಾಗಿ ಆರೋಗ್ಯಕರವಾದ ಆಹಾರ ವಿಧಾನಗಳ ಬಗ್ಗೆ ಕೆಲವು ಮಾತುಗಳನ್ನು ಆಡಿದರು. ದೇಸಿ ಆಹಾರ ಪದ್ಧತಿ, ದೇಸಿ ಪ್ರವಾಸ ಅಂತಹುಗಳಿಂದ ದೇಸಿ ಆರ್ಥಿಕ ಬೆಳವಣಿಗೆಯಲ್ಲಿ ನಾವು ಭಾಗಿಯಾಗಬೇಕೆಂದರು.

ಕೊನೆಯಲ್ಲಿ ತೇಜಸ್ವಿ ಸೂರ್ಯರವರು ಸಭಿಕರ ಕೆಲವು ಪ್ರಶ್ನೆಗಳಿಗೆ ಉತ್ತರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ನಿಧನರಾದ ದೇಶ ಕಂಡ ಶ್ರೇಷ್ಠ ನಾಯಕಿ ಸುಷ್ಮಾ ಸ್ವರಾಜರಿಗೆ ಹಾಗೂ ಪ್ರಕೃತಿ ವಿಕೋಪದಲ್ಲಿ ನಿಧನರಾದ ಸಹದೇಶವಾಸಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಸಂತ್ರಸ್ತರು ಶೀಘ್ರ ಸಹಜಜೀವನಕ್ಕೆ ಮರಳಲೆಂದು ಪ್ರಾರ್ಥಿಸಲಾಯಿತು. ನಂತರ ವೇದಿಕೆಯಲ್ಲಿನ ಅತಿಥಿಗಳಿಂದ ಭಾರತ ಮಾತೆಗೆ ಪುಷ್ಪಾರ್ಚನೆ ಮತ್ತು ಕುಮಾರಿ ಇಂಚರ ಅವರಿಂದ ದೇಶಭಕ್ತಿ ಗೀತೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು.

ಸರಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಜನ ಸೇರಿದ್ದರು.
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 

  • email
  • facebook
  • twitter
  • google+
  • WhatsApp
Tags: Mp tejaswi suryaTejaswi Surya new india

Related Posts

Articles

ಒಂದು ಪಠ್ಯ – ಹಲವು ಪಾಠ

May 24, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Next Post
ಕೋಲಾರದಲ್ಲಿ ವಿಶೇಷ ಚೇತನ ಮಕ್ಕಳ ಜೊತೆ ರಕ್ಷಾ ಬಂಧನ

ಕೋಲಾರದಲ್ಲಿ ವಿಶೇಷ ಚೇತನ ಮಕ್ಕಳ ಜೊತೆ ರಕ್ಷಾ ಬಂಧನ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Photo Gallery: Na Krishnappaji – A Memorable Personality of all time in RSS Karnataka

‘Krishnappaji – a Mahameru of love and affection’; writes J Nandakumar

August 23, 2015
North East students at ABVP national conference at Bangalore

North East students at ABVP national conference at Bangalore

January 5, 2011
RSS inspired Bharatiya Mazdoor Sangh (BMS) observes 61st Foundation Day across Bharat

RSS inspired Bharatiya Mazdoor Sangh (BMS) observes 61st Foundation Day across Bharat

July 23, 2016
ರಾಷ್ಟ್ರೋತ್ಥಾನ ರಕ್ತ ಕೇಂದ್ರ 2020-21ರ ಸಾಲಿನ ಅತಿ ಹೆಚ್ಚು ರಕ್ತ ಸಂಗ್ರಹ ಮಾಡಿದ ರಕ್ತ ಕೇಂದ್ರ

ರಾಷ್ಟ್ರೋತ್ಥಾನ ರಕ್ತ ಕೇಂದ್ರ 2020-21ರ ಸಾಲಿನ ಅತಿ ಹೆಚ್ಚು ರಕ್ತ ಸಂಗ್ರಹ ಮಾಡಿದ ರಕ್ತ ಕೇಂದ್ರ

October 1, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In