• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ನಾವುಂದದಲ್ಲಿ ಕೆದಿಲಾಯರ ಭಾರತ ಪರಿಕ್ರಮ ಯಾತ್ರೆ

Vishwa Samvada Kendra by Vishwa Samvada Kendra
November 7, 2012
in News Digest
250
0
ನಾವುಂದದಲ್ಲಿ ಕೆದಿಲಾಯರ ಭಾರತ ಪರಿಕ್ರಮ ಯಾತ್ರೆ

Bharat Parikrama Yatra-Naavunda Nov-7-2012

491
SHARES
1.4k
VIEWS
Share on FacebookShare on Twitter

ಕುಂದಾಪುರ November 07, 2012 : ಅಖಂಡ ಭಾರತ ನಿರ್ಮಾಣಕ್ಕಾಗಿ ಹಾಗೂ ಗ್ರಾಮ ವಿಕಾಸಕ್ಕಾಗಿ ಮತ್ತು ಗ್ರಾಮಗಳಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವ ಸಲುವಾಗಿ ಆರೆಸ್ಸೆಸ್ಸ್‌ನ ಅಖಿಲ ಭಾರತೀಯ ಸೇವಾ ಪ್ರಮುಖ ಸೀತಾರಾಮ ಕೆದಿಲಾಯ ಆರಂಭಿಸಿರುವ ಭಾರತ ಪರಿಕ್ರಮ ಯಾತ್ರೆ ಬುಧವಾರ ನಾವುಂದ ಪುರ ಪ್ರವೇಶ ಮಾಡಿದೆ.

Bharat Parikrama Yatra-Naavunda Nov-7-2012

ಗಂಗೊಳ್ಳಿಯಿಂದ ಬೆಳಿಗ್ಗೆ 6.೦೦ ಗಂಟೆಗೆ ಹೊರಟ ಪಾದಯಾತ್ರೆ ನಾಯಕವಾಡಿ ತ್ರಾಸಿ ಮಾರ್ಗವಾಗಿ ಮರವಂತೆ ಗ್ರಾಮ ಪ್ರವೇಶಿಸಿದಾಗ ಮಹಾರಾಜ ಸ್ವಾಮಿ ದೇವಸ್ಥಾನ ಎದುರುಗಡೆ ದೇವಳದ ಆಡಳಿತ ಮೊಕ್ತೇಸರ ರಾಮಚಂದ್ರ ಹೆಬ್ಬಾರ್ ಮತ್ತು ರಾಜು ಕುರು ರಾಮದಾಸ್ ಖಾರ್ವಿ ಹೂಮಾಲೆ ಹಾಕಿ ಸ್ವಾಗತಿಸಿದರು. ಮುಂದೆ ಮರವಂತೆ ಸುಬ್ರಹ್ಮಣ್ಯ ದೇವಸ್ಥಾನ ಧರ್ಮದರ್ಶಿ ತಿಮ್ಮ ದೇವಾಡಿಗ ದಂಪತಿ ಕೆದಿಲಾಯರನ್ನು ಸ್ವಾಗತಿಸಿದರು. ಮರವಂತೆಯ ಶ್ರೀ ರಾಮಮಂದಿರದಲ್ಲಿ ಕೆದಿಲಾಯರನ್ನು ಗೌರವಿಸಲಾಯಿತು.

READ ALSO

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

ಯಾತ್ರೆಯು ನಾವುಂದ ಗ್ರಾಮವನ್ನು ಪ್ರವೇಶಿಸಿದ ಸಂದರ್ಭ ನಾವುಂದ ಜುಮ್ಮಾ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಬಿ. ಎಸ್. ಮೊಹಿದ್ದಿನ್, ಎನ್. ಅಬ್ದುಲ್ಲಾ ತೌಫೀಕ್, ಎನ್. ಸಿ. ಖಾದರ್, ಅಬ್ದುಲ್ ಹಮೀದ್, ಅಬ್ದುಲ್ ಕಾದಿರ್ ಬಡಾಕೆರೆ ಸಹಿತ ಅನೇಕ ಮುಸ್ಲಿಂ ಧಾರ್ಮಿಕ ಮುಖಂಡರು ಶಾಲು ಹೊದಿಸಿ ಫಲ ತಾಂಬೂಲ ನೀಡಿ ಗೌರವಿಸಿದರು. ಎಲ್ಲಾ ವರ್ಗದ ಸ್ವಾಗತ ಗೌರವಗಳನ್ನು ಪಡೆಯುತ್ತಾ ನಾವುಂದ ಪ್ರಗತಿಪರ ಕೃಷಿಕ ವೆಂಕಟರಮಣ ಗಾಣಿಗರ ಮನೆಗೆ ತಲುಪಿ ವಿಶ್ರಾಂತಿ ಪಡೆದ ಕೆದಿಲಾಯರು,  11.00 ಗಂಟೆಗೆ ಜುಮ್ಮಾ ಮಸೀದಿ ಜಮಾತ್ ಅಧ್ಯಕ್ಷ ಮೊಹಿದ್ದೀನ್ ತೌಫೀಕ್ ಇವರೊಂದಿಗೆ ರಾಷ್ಟ್ರೀಯ ವಿಚಾರ ಧಾರೆಗಳ ಬಗ್ಗೆ ಸಮಾಲೋಚನೆ ನೆಡೆಸಲಾಯಿತು. ಮದ್ಯಾಹ್ನ ಡಾ|| ರಾಘವನ್ ನಂಬಿಯಾರ್‌ರವರ ಮನೆಯಲ್ಲಿ ಭಿಕ್ಷಾನ್ನ ಸ್ವೀಕರಿಸಿದರು.

BPY-Naavunda Nov-7-2012

ಬಳಿಕ ನಾವುಂದ ಕಮಲಾ ಗಾಣಿಗರ ಮನೆ, ನಾಗರತ್ನ  ಮಂಜಪ್ಪ ಅವರ ಮನೆ ಹಾಗೂ ಹಂಝ ಸಾಹೇಬರ ಮನೆಗೆ ತೆರಳಿ ಕುಶಲೋಪರಿ ನಡೆಸಿದ ಕೆದಿಲಾಯರು, ನಾವುಂದ ಪದವಿಪೂರ್ವ ಕಾಲೇಜಿನಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಊರಿನ ಪ್ರಮುಖರೊಂದಿಗೆ ಚರ್ಚಿಸಿದರು. ವೃದ್ಧಾಶ್ರಮಗಳ ಅಗತ್ಯವಿರುವ ಹಳ್ಳಿಗಳ ರಕ್ಷಣೆ, ಕಾಡು ನಾಶದಿಂದ ಬರಡಾಗುತ್ತಿರುವ ಗ್ರಾಮಗಳ ಉಳಿವು, ಅತಿಯಾದ ರಾಸಾಯನಿಕ ಉಪಯೋಗದಿಂದ ಸತ್ವ ಕಳೆದುಕೊಂಡಿರುವ ಭೂಮಿಯ ಉಳಿವು, ಆಧುನಿಕ ತಂತ್ರಜ್ಞಾನದ ಅತಿಯಾದ ಅವಲಂಬಿಕೆಯಿಂದಾಗಿ ಕಳೆದು ಹೋಗುತ್ತಿರುವ ಗ್ರಾಮ ಪರಂಪರೆಗಳ ಸಂರಕ್ಷಣೆ, ಕ್ಷೀಣಿಸುತ್ತಿರುವ ಗೋ ಸಂಪತ್ತಿನ ಸಂವರ್ಧನೆ, ಜೀವ ಸಂಕುಲಕ್ಕೆ ಅಗತ್ಯವಾದ ಜಲ ಸ್ರೋತಗಳ ಕಾಯಕಲ್ಪ, ಮೊದಲಾದ ವಿಚಾರಧಾರೆಗಳ ಆಧಾರದ ಮೇಲೆ ಯಾತ್ರೆಯನ್ನು ಕೈಗೊಂಡಿರುವುದಾಗಿ ಕೆದಿಲಾಯರು ಸ್ಪಷ್ಟಪಡಿಸಿದರು.

ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಬೈಂದೂರು, ಜಿ.ಪಂ. ಸದಸ್ಯ ಬಾಬು ಹೆಗ್ಡೆ ತಗ್ಗರ್ಸೆ, ನವೀನ್‌ಚಂದ್ರ ಉಪ್ಪುಂದ, ವೀರಭದ್ರ ಶೆಟ್ಟಿ, ತಾ.ಪಂ. ಸದಸ್ಯ ಮಹೇಂದ್ರ ಪೂಜಾರಿ, ನಾಗೇಶ್ ಶೇಟ್, ರಾಜಶೇಖರ್ ನಾವುಂದ, ಪ್ರವೀಣ್ ಪೂಜಾರಿ, ರಾಘವೇಂದ್ರ ಗಾಣಿಗ, ವಿನಯ ನಾಯರಿ, ರಾಜು ಮತ್ತು ಸತೀಶ್ ಮರವಂತೆ ಮುಂತಾದ ಪ್ರಮುಖರು ಯಾತ್ರೆಯಲ್ಲಿ ಭಾಗವಹಿಸಿದ್ದರು.

  • email
  • facebook
  • twitter
  • google+
  • WhatsApp

Related Posts

News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
News Digest

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022
Next Post
Day-91: Bharat Parikrama Yatra at Navunda, Kedilaya keen on Social Harmony for Gram Vikas

Day-91: Bharat Parikrama Yatra at Navunda, Kedilaya keen on Social Harmony for Gram Vikas

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

2Day national seminar on chronology of Indian History at Bengaluru

2Day national seminar on chronology of Indian History at Bengaluru

February 9, 2019
ಹಿಂದು ಮುಸ್ಲಿಮ್ ಐಕ್ಯತೆಗೆ ಆರೆಸ್ಸೆಸ್ ಕರೆ

ಹಿಂದು ಮುಸ್ಲಿಮ್ ಐಕ್ಯತೆಗೆ ಆರೆಸ್ಸೆಸ್ ಕರೆ

September 15, 2010

NEWS IN BRIEF – APRIL 09, 2012

April 9, 2012
स्वामी विवेकानन्द और हिन्दू : writes MG Vaidya

स्वामी विवेकानन्द और हिन्दू : writes MG Vaidya

January 6, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In