• Samvada
Thursday, August 18, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

‘Nirmalya’ book release at Chikmagaluru

Vishwa Samvada Kendra by Vishwa Samvada Kendra
September 1, 2018
in News Digest
240
0
‘Nirmalya’ book release at Chikmagaluru

Normally book release at Chikmagaluru

491
SHARES
1.4k
VIEWS
Share on FacebookShare on Twitter

29 ಆಗಸ್ಟ್ 2018, ಚಿಕ್ಕಮಗಳೂರು: ಆರೆಸ್ಸೆಸ್ಸಿನ ಹಿರಿಯ ಪ್ರಚಾರಕ ದಿ|| ನ. ಕೃಷ್ಣಪ್ಪನವರ ಕುರಿತಾದ ,  ಹಿರಿಯ ಪ್ರಚಾರಕರಾದ ಶ್ರೀ ಚಂದ್ರಶೇಖರ ಭಂಡಾರಿ ರಚಿತ ‘ನಿರ್ಮಾಲ್ಯ’ ಗ್ರಂಥದ ಲೋಕಾರ್ಪಣ ಸಮಾರಂಭ ಚಿಕ್ಕಮಗಳೂರು ನಗರದ ‘ಸಮರ್ಪಣಾ’ದಲ್ಲಿ ಜರುಗಿತು. ಗ್ರಂಥದ ಲೋಕಾರ್ಪಣೆಯನ್ನು ಶ್ರೀಯುತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ನೆರವೇರಿಸಿದರು. ಶ್ರೀಮತಿ ಗಿರಿಜಾ ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಯುತ ಹಿರೇಮಗಳೂರು ಕಣ್ಣನ್ ಗ್ರಂಥದ ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸಿನ ಶ್ರೀ ಅಶೋಕ್, ಸಮರ್ಪಣಾ ಟ್ರಸ್ಟ್‌ನ ಶ್ರೀ ನರೇಂದ್ರ ಪೈ ಹಾಗೂ ಪ್ರಜ್ಞಾದ ಶ್ರೀ ನಾಗೇಶ್ ಉಪಸ್ಥಿತರಿದ್ದರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

Nirmalya book release at Chikmagaluru

 

ಚಿಕ್ಕಮಗಳೂರು: ಸ್ವಂತಕ್ಕಾಗಿ ಏನನ್ನೂ ಬಯಸದ ಆರ್‌ಎಸ್‌ಎಸ್ ಹಿರಿಯ ಪ್ರಚಾರಕರಾದ ದಿ| ನ.ಕೃಷ್ಣಪ್ಪ ಅವರ ಬದುಕು ಎಲ್ಲರಿಗೂ ಪ್ರೇರಣಾದಾಯಕವಾದದ್ದು ಎಂದು ಪರಿವಾರ ಪ್ರಬೋಧಿನಿಯ ಅಖಿಲ ಭಾರತೀಯ ಸಂಯೋಜಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ನಗರದ ಸಮರ್ಪಣಾ ಸಭಾಂಗಣದಲ್ಲಿ ನಗರದ ಪ್ರಜ್ಞಾ ವೇದಿಕೆ ಹಾಗೂ ಸಮರ್ಪಣಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ. ನ.ಕೃಷ್ಣಪ್ಪ ಅವರ ಜೀವನದ ಕುರಿತಾದ ’ನಿರ್ಮಾಲ್ಯ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹುಟ್ಟಿದವರು ಸಾಯಲೇ ಬೇಕು. ಆದರೆ ಯಾರಿಂದಾಗಿ ವಂಶಕ್ಕೊಂದು ಹೆಸರು ಬರುತ್ತದೊ ಅಂತಹವರು ಸಾಯುವುದಿಲ್ಲ. ನ.ಕೃಷ್ಣಪ್ಪ ಅವರ ಬದುಕೂ ಇದೇ ರೀತಿ ಇತ್ತು. ಅವರಿಗೆ ಹೊಸ ಆಲೋಚನೆ ಬಂದಾಗ ಅದನ್ನು ಕಾರ್ಯಗತಗೊಳಿಸಲು ಶಕ್ತರಾದವರನ್ನು ಹುಡುಕಿ ಜವಾಬ್ದಾರಿಯನ್ನು ನೀಡುತ್ತಿದ್ದರು. ಮತ್ತು ಅವರ ಬೆನ್ನ ಹಿಂದೆ ನಿಂತು ಎಲ್ಲ ಶಕ್ತಿ ತುಂಬುತ್ತಿದ್ದರು. ನಂತರ ಅದನ್ನು ಮಾದರಿಯಾಗಿ ಇತರರಿಗೂ ಪರಿಚಯಿಸುತ್ತಿದ್ದರು. ಈ ಮೂಲಕ ಎಲ್ಲರಿಗೂ ಪ್ರೇರಣೆ ಆಗುವ ಕೆಲಸವನ್ನು ಅವರು ಮಾಡುತ್ತಿದ್ದರು ಎಂದರು.
ಕೃಷ್ಣಪ್ಪ ಅವರ ಗುರುಕುಲ ಕಲ್ಪನೆಯೇ ವಿಶಿಷ್ಠವಾದದ್ದು. ವಿದ್ಯೆ, ಅನ್ನ ಮತ್ತು ಔಷಧವನ್ನು ಮಾರಾಟಕ್ಕಿರುವ ವಸ್ತುಗಳಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆದರೆ ಜಗತ್ತು ಇಂದು ನಡೆಯುತ್ತಿರುವುದು ಈ ಮೂರನ್ನು ಮಾಡಿಯೇ, ಆದರೂ ಈ ಕಲ್ಪನೆಯನ್ನು ಸಾಕಾರಗೊಳಿಸಬೇಕು. ವಿದ್ಯೆ ಮಾರಟಕ್ಕಿಲ್ಲ ಎಂಬುದನ್ನು ಮಾಡಿ ತೋರಿಸಬೇಕೆಂಬ ಕಾರಣಕ್ಕೆ ೨೪ ವರ್ಷಗಳ ಹಿಂದೆ ಗುರುಕುಲ ಆರಂಭಿಸಿದರು. ಅಲ್ಲಿ ವಿದ್ಯೆ, ಅನ್ನ, ಔಷಧಿ ಎಲ್ಲವೂ ಉಚಿತವಾಗಿದೆ. ಈ ಮೂಲಕ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಅವರು ಮಾಡಿದ್ದರು ಎಂದರು.
ಕೃಷ್ಣಪ್ಪ ಅವರು ಮನೆ ಬಿಟ್ಟು ಬಂದವರಾಗಿದ್ದರೂ ಯಾರದ್ದೇ ಮನೆ ಕಳಪೆಯಾಗಿರಬಾರದು ಎನ್ನುವ ಅಭಿಲಾಷೆ ಹೊಂದಿದ್ದರು. ಇದಕ್ಕಾಗಿ ಶ್ರೀಮಾತಾ ಹೆಸರಿನಲ್ಲಿ ಕುಟುಂಬ ಪ್ರಭೋದನಕ್ಕೆ ಚಾಲನೆ ನೀಡಿದರು. ನೋಡ ನೋಡುತ್ತಿದ್ದಂತೆ ಅದಕ್ಕೆ ಅಖಿಲ ಭಾರತ ಸ್ವರೂಪ ಬಂತು. ಇದು ಎಲ್ಲರಿಗೂ ಬೇಕಾದ್ದು ಎಂದು ಸಾಮಾನ್ಯರಿಗೆ ಅನ್ನಿಸತೊಡಿಗಿತು.

ರಾಮಾಯಣ ಮತ್ತು ಭಗವದ್ಗೀತೆಯ ಯಾವುದೇ ಪುಟ ತೆರೆದರೂ ಅದರಲ್ಲಿ ಯಾವುದಾದರೊಂದು ಪ್ರೇರಣಾದಾಯಕವಾದ ವಿಷಯ ಸಿಗುತ್ತದೆ ಅದೇ ರೀತಿ ಕೃಷ್ಣಪ್ಪ ಅವರ ಕುರಿತಾದ ನಿರ್ಮಾಲ್ಯ ಗ್ರಂಥ ಸಹ. ಅದು ಸಂಘದ ಸ್ವಯಂ ಸೇವಕರಿಗೆ ಪಠ್ಯ ಪುಸ್ತಕ ಇದ್ದಹಾಗೆ: ಕಜಂಪಾಡಿ ಸುಬ್ರಹ್ಮಣ್ಯ ಭಟ್.

ನಿರ್ಮಾಲ್ಯ ಎಂದರೆ ದೇವರ ಮೇಲಿರುವ ಪುಷ್ಪವಿದ್ದಂತೆ. ಅದನ್ನು ನಾವು ಧಾರಣೆ ಮಾಡಿದರೆ ಸಾಕು ನಮಗೆ ಶಕ್ತಿ ಸಿಗುತ್ತದೆ. ಇನ್ನೊಂದು ನಿರ್ಮಲ ಎಂದರ್ಥ ಅದರಲ್ಲಿ ಕಲ್ಮಶವೇ ಇರುವುದಿಲ್ಲ ಎಂದು ಹೇಳಿದರು.

ಗ್ರಂಥದ ಪರಿಚಯ ಮಾಡಿದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ನ. ಕೃಷ್ಣಪ್ಪನವರು ಕೇವಲ ಸಂಘದ ಪ್ರಚಾರಕರಾಗಿರದೇ ಸಮಾಜದ ಉನ್ನತಿಗೆ ಶ್ರಮಿಸಿದರು. ಅವರನ್ನು ಒಮ್ಮೆ ಭೇಟಿಯಾದ ವ್ಯಕ್ತಿ ಜೀವಮಾನದಲ್ಲಿ ಅವರನ್ನ ಮರೆಯದಂತಹ ವ್ಯಕ್ತಿತ್ವ ಅವರದ್ದಾಗಿತ್ತು. ಆರೆಸ್ಸೆಸ್ಸಿನ ಸ್ವಯಂಸೇವಕರಿಗೆ ಈ ಗ್ರಂಥ ಅತ್ಯಂತ ಪ್ರೇರಣೆಯನ್ನ ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾಶ್ರಮ ಶಾಲೆ ಅಧ್ಯಕ್ಷೆ ಗಿರಿಜಾ ರಾಮಸ್ವಾಮಿ ಮಾತನಾಡಿ, ವಿಶೇಷವಾಗಿ ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು ಜಿಲ್ಲೆಗಳಲ್ಲಿ ಸಂಘದ ಕಾರ್ಯ ಬೆಳೆಯುವಲ್ಲಿ ನ. ಕೃಷ್ಣಪ್ಪನವರ ಪಾತ್ರ ಮಹತ್ವದ್ದಾಗಿದೆ. ಸಂಘವನ್ನು ಸಮಾಜ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರದ ಕಾಲದಲ್ಲಿ ಕೃಷ್ಣಪ್ಪನವರು ಸಂಘವನ್ನ ಕಟ್ಟಿಬೆಳೆಸಿದ ರೀತಿ ಅದ್ಭುತವಾದುದು ಎಂದರು.
ವೇದಿಕೆಯಲ್ಲಿ ಆರೆಸ್ಸೆಸ್ಸಿನ ಜಿಲ್ಲಾ ಕಾರ್ಯವಾಹ ಅಶೋಕ್, ಸಮರ್ಪಣಾ ಟ್ರಸ್ಟ್ನ ಅಧ್ಯಕ್ಷ ನರೇಂದ್ರ ಪೈ, ಪ್ರಜ್ಞಾ ವೇದಿಕೆಯ ಸಂಚಾಲಕ ನಾಗೇಶ್ ಉಪಸ್ಥಿತರಿದ್ದರು.
ರಮೇಶ್ ಸ್ವಾಗತಿಸಿ, ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ ಶರ್ಮ ವೇದಘೋಷ ಮಾಡಿದರು. ಸುಮಾ ಪ್ರಸಾದ್ ಪ್ರೇರಣಾ ಗೀತೆ ಹಾಡಿದರು. ಸುಮಂತ್ ನೆಮ್ಮಾರ್ ವಂದಿಸಿದರು.

 

ವರದಿ : ಸುಮಂತ್ ನೆಮ್ಮಾರ್

 

  • email
  • facebook
  • twitter
  • google+
  • WhatsApp
Tags: Chandrasekhar bhandari nirmalyaNirmalyaNirmalya book release

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Samanvay Baithak starts at Mantralaya

Samanvay Baithak starts at Mantralaya

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

‘Government should take care of migrated Hindus’: Sarakaryavah Bhaiyaji Joshi at Press Conference

‘Government should take care of migrated Hindus’: Sarakaryavah Bhaiyaji Joshi at Press Conference

March 15, 2015
ಧಾರವಾಡ: ಆರೆಸ್ಸೆಸ್ ನ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್ ಆರಂಭ

RSS’ ABKM baithak commences today at Dharwad

October 28, 2021
Veteran Journalist MV Kamath passes away at Manipal, RSS expressed deep condolences

Veteran Journalist MV Kamath passes away at Manipal, RSS expressed deep condolences

October 9, 2014
Yet another Red Terrorism strike in Kerala – RSS leader murdered in Calicut

Yet another Red Terrorism strike in Kerala – RSS leader murdered in Calicut

December 20, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In