• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ವಿವೇಕಾನಂದ-150: ಪೈವಳಿಕೆ ಪಂಚಾಯತ್ ಮಟ್ಟದ ಯುವ ಸಮಾವೇಶ

Vishwa Samvada Kendra by Vishwa Samvada Kendra
August 28, 2013
in News Digest
250
0
ವಿವೇಕಾನಂದ-150: ಪೈವಳಿಕೆ ಪಂಚಾಯತ್ ಮಟ್ಟದ ಯುವ ಸಮಾವೇಶ
491
SHARES
1.4k
VIEWS
Share on FacebookShare on Twitter

Paivalike ಪೈವಳಿಕೆ  August 27: ಪೈವಳಿಕೆ ಪಂಚಾಯತ್ ಮಟ್ಟದ ಯುವಸಮಾವೇಶವು ಅಗಸ್ಟ್ 25 ರಂದು ಕಾಯರ್ ಕಟ್ಟೆ ಸರಕಾರಿ  ಪ್ರೌಢ ಶಾಲೆಯಲ್ಲಿ ನಡೆಯಿತು.ಯುವಸಮಾವೇಶದ ಉದ್ಘಾಟನೆಯ ನಂತರ ಉಪನ್ಯಾಸಕರಾಗಿ  ಬಂದ ಮೂಡಬಿದಿರೆಯ ಆಳ್ವಾಸ್ ಕಾಲೇಜ್ ಶ್ರೀ ಆದಿತ್ಯ ಭಟ್,ಮಾತನಾಡಿ ರಾಷ್ಟ್ರೀಯ ಚಿಂತಕರೊಬ್ಬರು ನಮ್ಮಲ್ಲಿ ಭಾರತ ಹಾಗೂ ಇಂಡಿಯಾ  ಎಂಬ ಎರಡು ಸಂಸ್ಕೃತಿ ಇದೆ.’ಇಂಡಿಯಾ ಎಲ್ಲಾ ಕಡೆಗಳಲ್ಲೂ ಕಾಣಲು ಸಾಧ್ಯ ,ಆದರೆ ‘ಭಾರತ ‘ ವನ್ನು ಕಾಣುವುದು ತುಂಬಾ ಕಷ್ಟ ,ಆದರೆ  ಇಲ್ಲಿ  ಇಂದು ಯುವ ಭಾರತವನ್ನು  ಕಾಣುತ್ತಿದ್ದೇನೆ  ಎಂದರು. ಸ್ವಾಮೀ ವಿವೇಕಾನಂದರ ತತ್ವ ಸಿದ್ಧಾಂತಗಳ ಅಧ್ಯಯನ ಹಾಗೂ ಆಚರಣೆ  ಯಾಕೆ ಮಾಡಬೇಕು ಎಂಬುದನ್ನು ನಾವೆಲ್ಲರೂ ತಿಳಿಯಲೇಬೇಕು.

yuva samavesha (2)
ಭಾರತದಲ್ಲಿ ಸುಮಾರು 30  ವರ್ಷಗಳ ಕಾಲ ಇದ್ದ ಇಂಗ್ಲೆಂಡ್ ಮೆಕೋಲೆ ಎನ್ನುವ ವಿದ್ವಾಂಸ 1834ರಲ್ಲಿ ತನ್ನ ದೇಶಕ್ಕೆ ಮರಳಿ ಅಲ್ಲಿಯ ಪಾರ್ಲಿಮೆಂಟ್ ನಲ್ಲಿ ತನ್ನಅಧ್ಯಯನದ ವರದಿ ಕೊಡುತ್ತಾನೆ. ಅದರಲ್ಲಿ ಆತ “ನಾನು ಭಾರತದ ಉದ್ದಗಲಕ್ಕೂ ಸುಮಾರು  30 ವರ್ಷ ತಿರುಗಿದ್ದೇನೆ, ಆದರೆ  ಒಬ್ಬನೇ ಒಬ್ಬ ಭಿಕ್ಷುಕನನ್ನು  ನೋಡಲಿಲ್ಲ “. ಆದರೆ ಭಾರತದಲ್ಲಿ ಇಂದು 34% ಜನರಿಗೆ ಎರಡು ಹೊತ್ತಿನ ಊಟ ದೊರೆಯುತ್ತಿಲ್ಲ ಎಂಬುದು ಬೇಸರದ ಸಂಗತಿ . ಅಷ್ಟೇ ಅಲ್ಲ ನಮ್ಮ ದೆಹಲಿಯೊಂದರಲ್ಲೇ ಚಳಿಯಿಂದ ಸಾಯುವರ ಸಂಖ್ಯೆ  ವರ್ಷಕ್ಕೆ ಸರಾಸರಿ 60. ಅಷ್ಟೇ ಅಲ್ಲದೆ ಮಹಿಳೆಯರ ಮೇಲಿನ ದೌರ್ಜನ್ಯ , ಮಾದಕ ವ್ಯಸನ  ಹಾಗೂ ಕೊಲೆ ಮೊದಲಾದುವುಗಳು ಹೆಚ್ಚಾಗಿವೆ.
ವಿವೇಕಾನಂದರ ಸಿದ್ಧಾಂತ ಗಳ ಅನುಷ್ಠಾನವನ್ನು ಸರಕಾರ ಹಾಗೂ ನಾವು ಮಾಡುತ್ತಿದ್ದರೆ  ಖಂಡಿತ ಈ ಸಾಮಾಜಿಕ ಸಮಸ್ಯೆಗಳು ಬರುತ್ತಿರಲಿಲ್ಲ.
ಮಹಾನ್ ವ್ಯಕ್ತಿ ಗಳನ್ನು  ಎರಡು  ರೀತಿಯಲ್ಲಿ ಕೊಲೆ ಮಾಡುತ್ತೇವೆ ಎಂದು ಹೇಳಬಹುದು. ಮೊದಲನೆಯದಾಗಿ ಮಹಾನ್ ವ್ಯಕ್ತಿಯೊಬ್ಬರನ್ನು ಕೇವಲ ಅವರ ಜೀವನದ ಯಾವುದೋ ಒಂದು ಘಟನೆ , ಅಥವಾ ಅವರ ಒಂದು ಗುಣದ ಆಧಾರದಲ್ಲಿ ಮಾತ್ರ ಗುರುತಿಸಿ ಅವರ ಇನ್ನಿತರ ಚಿಂತನೆಯನ್ನು ಅಧ್ಯಯನ ನಡೆಸದೆ ಇರುವುದಾಗಿದೆ . ಉದಾಹರಣೆಗೆ ಸ್ವಾಮಿ ವಿವೇಕಾನಂದ ಅಂದಾಗ ಚಿಕಾಗೋ  ಭಾಷಣ , ಗಾಂಧೀಜಿ -ಅಹಿಂಸೆ ,ಭಗತ್ ಸಿಂಗ್ – ಹಿಂಸಾತ್ಮಕ ಹೋರಾಟ ಎಂಬುದಾಗಿ ಗುರುತಿಸುತ್ತೇವೆ . ಎರಡನೇ ರೀತಿಯಲ್ಲಿ ನಾವು ಮಹಾನ್ ವ್ಯಕ್ತಿಯ ಮೂರ್ತಿಯನ್ನು ಸ್ಥಾಪಿಸಿ , ಅವರ ಸಿದ್ಧಾಂತವನ್ನು ಕಾರ್ಯರೋಪಕ್ಕೆ ತರದೇ ಅಷ್ಟಕ್ಕೇ ಬಿಟ್ಟು ಬಿಡುವುದಾಗಿದೆ . ಈಗ ಕಾಲ ಬಂದಿದೆ,ಹಾಗಾಗಿ ಇಂತಹ ಕಾರ್ಯಕ್ರ ಮಗಳ ಮೂಲಕ ಸ್ವಾಮೀ ವಿವೇಕಾನಂದರ ತತ್ವ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವುದರ ಮೂಲಕ ಅವರಿಗೆ ನಿಜವಾದ ನಮನವನ್ನು ಸಲ್ಲಿಸಬೇಕು ಎಂದರು .
ಸ್ವಾಮೀ ವಿವೇಕಾನಂದರು ಸಮಾಜಸುಧಾರಕರಾಗಿ ವಿದ್ಯಾಭಾಸ,ಬಡವರು ಹಾಗೂ  ದೀನ ದಲಿತರ ಸೇವೆ ಮೊದಲಾದ ವಿಷಯಗಳಲ್ಲಿ ಅನೇಕ ಕ್ರಾಂತಿಯನ್ನು ಮಾಡಿದವರಾಗಿದ್ದಾರೆ. ಒಮ್ಮೆ  ಪಶ್ಚಿಮ ಬಂಗಾಳದಲ್ಲಿ ಒಂದು ವಾರದ ಉಪನ್ಯಾಸದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪ್ರತಿದಿನ ಪ್ರಶ್ನೆಗಳನ್ನು ಕೇಳುತ್ತಿದ್ದ , ಆದರೆ ಸ್ವಾಮೀಜಿ ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ . ಅದಕ್ಕೆ ಕಾರಣವನ್ನು ಕೇಳಿದಾಗ , ಪ್ರಶ್ನೆ ಕೇಳಿದ ವ್ಯಕ್ತಿ ಯಾವುದೇ ರೀತಿಯಲ್ಲಿ ಇತರರಿಗೆ ಸಹಾಯ ಮಾಡಿದ ವ್ಯಕ್ತಿಯಲ್ಲ,ಹಾಗಾಗಿ ಅಂಥವನ ಪ್ರಶ್ನೆಗೆ ಉತ್ತರ ಕೊಡುವುದು ವ್ಯರ್ಥ ಎಂಬ ಕಾರಣವನ್ನು ಸ್ವಾಮೀಜಿ ಕೊಡುತ್ತಾರೆ. ಹಾಗೆಯೇ 1894 ರಲ್ಲಿ ಮೈಸೂರಿನ ಮಹಾರಾಜರಿಗೆ ಬರೆದ ಪತ್ರದಲ್ಲಿ ಸ್ವಾಮೀ ವಿವೇಕಾನಂದರು “ಬಡ ಹುಡುಗನಿಗೆ ಶಿಕ್ಷಣ ಪಡೆಯಲು ಸಾಧ್ಯವಿಲ್ಲವಾದಲ್ಲಿ ಶಿಕ್ಷಣವೇ ಅವನಿದ್ದಲ್ಲಿಗೆ ಹೋಗಲಿ ” ಎಂದು ಬರೆದಿದ್ದರು. ದರಿದ್ರ ದೇವೋಭವ ಎಂದು ಹೇಳಿದ ಅವರು ಬಡವರ, ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣು ಎಂದಿದ್ದರು. ನಮ್ಮ ದೇಶದಲ್ಲಿರುವ ಸಾವಿರಾರು ಸಂತರ ಪ್ರವಚನದ ಜೊತೆಯಲ್ಲಿ ಶಿಕ್ಷಣದವನ್ನೂ ನೀಡಬೇಕು   ಎಂಬ ಸ್ವಾಮೀಜಿಯ ಮಾತನ್ನು ನೆನಪಿಸಿದರು  .
ಇನ್ನು ವ್ಯಕ್ತಿತ್ವ  ವಿಕಸನಗಾರರಾಗಿ ಸ್ವಾಮೀಜಿ ಯವರ ವಿಚಾರವನ್ನು ನೋಡಿದಾಗ ಅವರು “ಇನ್ನೊಬ್ಬರನ್ನು ದೂರುವುದು, ಶಪಿಸುವುದು ಬೇಡ, ಸಮಸ್ಯೆಯನ್ನು ಗೆಲ್ಲುವ ಸಾಮರ್ಥ್ಯ ನಿನ್ನಲ್ಲಿದೆ” ಎನ್ನುವ ಮಾತನ್ನು ಹೇಳಿದರು. ಅವರ ಪ್ರಕಾರ  ಮಾನವನ  ಎಲ್ಲಾ ಪ್ರಯತ್ನಗಳಿಗೂ 3 ಹಂತಗಳಿರುತ್ತವೆ,ಅವುಗಳು  ಅಪಮಾನ , ವಿರೋಧ ಹಾಗೂ ಸ್ವೀಕಾರ. ಮೂರನೆಯ ಹಂತ ತಲುಪಲು ಛಲದಿಂದ ಪ್ರಯತ್ನಿಸಿದರೆ ಮಾತ್ರ ಸಾಧ್ಯ ಎಂದು ಹೇಳಿದ್ದರು.
ಒಬ್ಬ  ರಾಷ್ಟಭಕ್ತನನ್ನಾಗಿ ನೋಡಿದಾಗ ಸ್ವಾಮೀ ವಿವೇಕಾನಂದರು ನಮ್ಮ ಪರಕೀಯ ದಾಸ್ಯತೆಯ ಕುರಿತಾಗಿ “ಕೇವಲ 40 ಮಿಲಿಯನ್ ಬ್ರಿಟಿಷರು 300 ಮಿಲಿಯನ್ ಭಾರತೀಯರನ್ನುಆಳಲು ಈ ವಿಷಯದಲ್ಲಿ ಅವರಿಗಿದ್ದ ಏಕತೆ ಕಾರಣವಾಗಿದೆ. ಯಾವಾಗ ಭಾರತೀಯರು ಒಂದಾಗುತ್ತರೋ  ಆಗ ಮಾತ್ರ ನಮಗೆ ಜಗತ್ತನ್ನು ಗೆಲ್ಲಲು ಸಾಧ್ಯ , ನಮ್ಮಲ್ಲಿ ಶಾಂತಿ ಹಾಗು ನೆಮ್ಮದಿ ಉಳಿಸಲು ಸಾಧ್ಯ”ಎಂದು ಹೇಳಿದ್ದರು. ನಮ್ಮಲ್ಲಿ ಬೇರೆ ಬೇರೆ ಸಂಸ್ಕೃತಿಯಿದೆ, ಈ  ವಿವಿಧತೆಯನ್ನು ದೂರಗೊಳಿಸಿ ಏಕತೆಯನ್ನು ಎತ್ತಿ ಹಿಡಿಯುವಲ್ಲಿ ಸ್ವಾಮೀ ವಿವೇಕಾನಂದರ  ಪಾತ್ರ ದೊಡ್ಡದಾಗಿದೆ .
ಹಿಂದು ಧರ್ಮದ ಸಂತರಾಗಿ ಸ್ವಾಮೀಜಿಯವರು ದ್ವೈತ , ಅದ್ವೈತ , ವಿಶಿಷ್ಟಾದ್ವೈತ ಗಳು ಹಿಂದು ಧರ್ಮದ ಜಾಗತಿಕ ದೃಷ್ಟಿಕೋನದ ಮಜಲುಗಳು ಎಂದು ಹೇಳಿದರು. ಆದರೆ ದುರದೃಷ್ಟವಶಾತ್ ನಮ್ಮಲ್ಲಿದ್ದ ಭಿನ್ನತೆಯನ್ನು ವೈಭವೀಕರಿಸಿ ನಾವು ಭಿನ್ನರೆಂದು ವಿದೇಶೀಯರ ಮುಂದೆ ತೋರಿಸಿಕೊಳ್ಳುತ್ತೇವೆ. ಆದರೆ ಸ್ವಾಮೀ ವಿವೇಕಾನಂದರು ಇದನ್ನು ಒಂದೆ ತಥ್ಯದ ಹಲವು ಮಜಲುಗಳು ಎಂದು ಎಲ್ಲವನ್ನು ಒಂದೇ ಎಂದು ಪ್ರತಿಪಾದಿಸಿದವರು ಎಂದು ಹೇಳಿದರು.
ನಾವು ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇಳಿರಬಹುದು , ಒಬ್ಬ ಭಾರತೀಯ ವಿದೇಶದ ಯಾವುದೇ ವಿಶ್ವ ವಿದ್ಯಾಲಯಕ್ಕೆ ಹೋದರೆ ತಾನು ಭಾರತದವ ಎಂದು ಹೇಳಿದ ತಕ್ಷಣವೇ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  ಇರುವ ಭಾರತವಲ್ಲವೇ ಎಂದು ಕೇಳುತ್ತಾರೆ. ಈ   ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ಥಾಪನೆಯನ್ನು   ಜೆಮ್ ಶೆಡ್ ಟಾಟಾ  ಅವರು ಸ್ವಾಮೀ ವಿವೇಕಾನಂದರ ಪ್ರೇರಣೆಯಿಂದ ಮಾಡಿದ್ದರು .ಸಂಸ್ಥೆಯ ಸ್ಥಾಪನೆಯ ನಂತರ ಜೆಮ್ ಶೆಡ್ ಟಾಟಾ  ಅವರು ಸ್ವಾಮೀ ವಿವೇಕಾನಂದರಲ್ಲಿ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮುಖ್ಯಸ್ಥರನ್ನಾಗಿ ಆಹ್ವಾನಿಸಿ ಪತ್ರ ಬರೆಯುತ್ತಾರೆ. ವಿಜ್ಞಾನದ ಬಗ್ಗೆ ಇದ್ದ ಅರಿವನ್ನು ಕೂಡ ನಾವು ಈ ಮೂಲಕ ತಿಳಿಯಬಹುದು.
ನಮ್ಮಲ್ಲಿ ಇಂದಿಗೂ ಬೌದ್ಧಿಕ ದಾಸ್ಯತೆ ಹೋಗಿಲ್ಲ ಉದಾಹರಣೆಗೆ ಕಪ್ಪು ಬಣ್ಣ  ಎಂದಾಗ ಇಂದಿಗೂ ನಮ್ಮಲ್ಲಿ ಕೀಳು ಭಾವನೆಯಿದೆ,ಆದರೆ ನಮ್ಮ ದೇಶದ  ಸಾವಿರಾರು ವರ್ಷಗಳ ಇತಿಹಾಸದಲ್ಲಿ ಕಪ್ಪು ಬಣ್ಣ ಎಂಬುದು ಒಬ್ಬನ ಸೌಂದರ್ಯ ಕ್ಕೆ ಬಣ್ಣ ಮಾನದಂಡವಾಗಿರಲಿಲ್ಲ , ಭಗವಾನ್ ಶ್ರೀಕೃಷ್ಣ ನನ್ನು ಅತ್ಯಂತ ಸುಂದರ ಎಂದು ಹೇಳಿದವರು ನಾವಾಗಿದ್ದೇವೆ. ಆದರೆ ಬೆಳ್ಳಗಿದ್ದರೆ ಮಾತ್ರ ಶ್ರೇಷ್ಠ ಎಂಬುದು ಬ್ರಿಟಿಷರು ನಮ್ಮಲ್ಲಿ ಬೆಳೆಸಿದ ಭಾವನೆಯಾಗಿದೆ . ಸ್ವಾತಂತ್ರ್ಯ ಸಿಕ್ಕಿ 67 ವರ್ಷ ಕಳೆದರೂ ನಾವೂ ಬೌದ್ಧಿಕವಾಗಿ ಬ್ರಿಟಿಷರ ಗುಲಾಮರಾಗಿದ್ದೇವೆ ಎನ್ನುವುದು ದುರದೃಷ್ಟಕರ . ಸಮಯ ಇನ್ನೂ ಮೀರಿಲ್ಲ, ಸಮಾವೇಶದಲ್ಲಿ ಸೇರಿರುವ ನಾವೆಲ್ಲಾ ಯುವಕರು  ವಿವೇಕಾನಂದರ 150 ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ವಿವೇಕಾನಂದ ವಿಚಾರಗಳನ್ನು ತಿಳಿಯುವುದರ ಜೊತೆಯಲ್ಲಿ  ಅದನ್ನು ಕಾರ್ಯರೂಪಕ್ಕೆ ತರುವ ಧೃಢ ಸಂಕಲ್ಪವನ್ನು ಮಾಡೋಣ ಎಂದರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ನಂತರ ವಿವೇಕಾನಂದರ ಕುರಿತಾದ ಚಲನಚಿತ್ರ “ಹೀರೋ”ಪ್ರದರ್ಶನ  ,ಮಾಡಲಾಯಿತು.
ನಂತರ ಕಾಲೇಜು ವಿದ್ಯಾರ್ಥಿ  ಹಾಗೂ ಉದ್ಯೋಗಿ ಯುವಕರ ಪ್ರತ್ಯೇಕ  ಚರ್ಚಾಗೋಷ್ಠಿ ನಡೆಯಿತು. ಸುಮಾರು 150 ತರುಣರು ಹಾಗೂ ವಿದ್ಯಾರ್ಥಿಗಳು   ಪೈವಳಿಕೆ ಪಂಚಾಯತ್ ಮಟ್ಟದ  ಯುವ ಸಮಾವೇಶದಲ್ಲಿ ಉಪಸ್ಥಿತರಿದ್ದರು. ಸಮಾವೇಶದ  ಉದ್ಘಾಟನೆಯನ್ನು  ಶ್ರೀ ರಾಘವ ಬಲ್ಲಾಳ್ , ನಿವೃತ್ತ ಮುಖ್ಯೋಪಾಧ್ಯಾಯರು , ಬೇಕೂರು ಶಾಲೆ ಇವರು ದೀಪ ಬೆಳಗುವುದರ ಮೂಲಕ ನಡೆಸಿದರು. ಈ  ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ  ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ   ಶ್ರೀ ಡಿ  ಮಹಾಲಿಂಗೇಶ್ವರ ಪ್ರಸಾದ್  , ಹಾಗೂ ಶ್ರೀ ಪಿ ಎನ್  ಮೂಡಿತ್ತಾಯ , ನಿವೃತ್ತ ಪ್ರಾಂಶುಪಾಲರು , ಸರಕಾರೀ ಕಾಲೇಜು, ತಲಶೇರಿ ಇವರು ಉಪಸ್ಥಿತರಿದ್ದರು. ಗಣ್ಯರ ಸ್ವಾಗತವನ್ನು ಶ್ರೀ ಶಿವಕೃಷ್ಣ ಎನ್ ನಡೆಸಿ, ಧನ್ಯವಾದವನ್ನು ಶ್ರೀ ಸುಕುಮಾರ ಕೊಜಪ್ಪೆ ನಡೆಸಿದರು. ಶ್ರೀ ಲೋಕೇಶ್ ಜೋಡುಕಲ್ಲು ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post

ನೇರನೋಟ: ‘ಇಂಡಿಯಾ’ - ಭಾರತ ಆಗುವುದು ಯಾವಾಗ?

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ಪ್ರೊ. ಜಿ ವೆಂಕಟಸುಬ್ಬಯ್ಯನವರು ನಮ್ಮನ್ನಗಲಿದ್ದಾರೆ. ಆರೆಸ್ಸೆಸ್ ಸರಕಾರ್ಯವಾಹರ ಶ್ರದ್ಧಾಂಜಲಿ ಸಂದೇಶ

ಪ್ರೊ. ಜಿ ವೆಂಕಟಸುಬ್ಬಯ್ಯನವರು ನಮ್ಮನ್ನಗಲಿದ್ದಾರೆ. ಆರೆಸ್ಸೆಸ್ ಸರಕಾರ್ಯವಾಹರ ಶ್ರದ್ಧಾಂಜಲಿ ಸಂದೇಶ

April 19, 2021

Ghosh Tarang: 3 day Ghosh Sibir (Band training camp) of RSS concluded at Andhra

February 11, 2013
Copenhagen, Denmark: Raksha Bandhan celebrated by Hindu Swayamsevak Sangh

Copenhagen, Denmark: Raksha Bandhan celebrated by Hindu Swayamsevak Sangh

August 13, 2014

NEWS IN BRIEF: OCT 16, 2011

October 18, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In