• Samvada
  • Videos
  • Categories
  • Events
  • About Us
  • Contact Us
Thursday, February 2, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಪಾಕಿಗಳೆಲ್ಲೋ ದೂರದಲಿಲ್ಲ!

Vishwa Samvada Kendra by Vishwa Samvada Kendra
January 6, 2021
in Articles
250
0
ಪಾಕಿಗಳೆಲ್ಲೋ ದೂರದಲಿಲ್ಲ!
491
SHARES
1.4k
VIEWS
Share on FacebookShare on Twitter

ಸಂತೋಷ್ ಜಿ ಆರ್

ರಾಜ್ಯಾದ್ಯಂತ ಗ್ರಾಮಪಂಚಾಯಿತಿ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಹಳ್ಳಿಹಳ್ಳಿಗಳಲ್ಲಿ ಸಡಗರ ಮುಗಿಲು ಮುಟ್ಟಿದೆ. ಗೆದ್ದ ಅಭ್ಯರ್ಥಿಗಳ ಸಂಭ್ರಮಾಚರಣೆ. ಮೆರವಣಿಗೆ, ಸಿಹಿ ಹಂಚುವಿಕೆಯ ಭರಾಟೆ ಕಣ್ಣಿಗೆ ರಾಚುತ್ತಿದೆ. ಇದು ಅಗತ್ಯವೇ? ಎಂಬುದು ಬೇರೆ ಪ್ರಶ್ನೆಯೂ ತೋರದಿರುವುದಿಲ್ಲ. ಒಂದು ಅವಿಭಕ್ತ ಕುಟುಂಬದಲ್ಲಿ ಜವಾಬ್ದಾರಿಯೊಂದಕ್ಕೆ ಸದಸ್ಯನೊಬ್ಬನ ಆಯ್ಕೆ ನಡೆಯುವಷ್ಟು ಸೌಹಾರ್ದ ವಾತಾವರಣದಲ್ಲಿ ಚುನಾವಣೆಗಳು ನಡೆಯಬೇಕಿತ್ತು. ಆದರೆ ಈ ಚುನಾವಣೆಗಳಲ್ಲೂ ಹಣ, ಆಮೀಷ, ರಾಜಕೀಯ ಜಿದ್ದಾಜಿದ್ದಿಗಳು ಕೆಲಸ ಮಾಡಿದ್ದು ಸುಳ್ಳಲ್ಲ.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಇದಕ್ಕಿಂತಲೂ ಅಪಾಯಕಾರಿ ಬೆಳವಣಿಗೆ ಎಂದರೆ ಗ್ರಾಮ ಪಂಚಾಯಿತಿಗಳಲ್ಲಿ ದೇಶವಿರೋಧಿ ಶಕ್ತಿಗಳು ಸಹ ಗೆದ್ದು ಬಂದಿರುವುದು. ಎಸ್ ಡಿ ಪಿ ಐ ಅನ್ನು ಗ್ರಾಮಮಟ್ಟದಿಂದಲೂ ಬೆಳೆಸಲು ಅದರ ನಾಯಕರು ಮಾಡುತ್ತಿರುವ ಪ್ರಯತ್ನ ಈಗ ಗೋಚರವಾಗುತ್ತಿದೆ. ದೇಶವಿರೋಧಿ ಚಟುವಟಿಕೆಗಳಲ್ಲೇ ತನ್ನನ್ನು ತೊಡಗಿಸಿಕೊಂಡಿರುವ ಪಕ್ಷವೊಂದು ಕೊಲೆ, ದೊಂಬಿಗಳು ನಡೆಸುವವರನ್ನೇ ಕಾರ್ಯಕರ್ತರನ್ನಾಗಿ ಗುರುತಿಸುವುದು ಸಹಜ. ಇಂತಹ ಸಂಘಟನೆ ಭಾರತದ ಕಾನೂನು, ಪ್ರಜಾಪ್ರಭುತ್ವವನ್ನು ದುರುಪಯೋಗ ಪಡಿಸಿಕೊಂಡು ಮುಂದುವರೆಯುತ್ತಿರುವುದು ಆಘಾತಕಾರಿ.  

ಉಜಿರೆಯಲ್ಲಿನ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಇಬ್ಬರು ಎಸ್ ಡಿ ಪಿ ಐ ಹುರಿಯಾಳುಗಳು ವಿಜಯೋತ್ಸವ ನಡೆಸಿದ್ದಾರೆ. ಆಗ ಕೇಳಿಬಂದದ್ದು ‘ಪಾಕಿಸ್ತಾನ್ ಜಿಂದಾಬಾದ್ ಘೋಷಣೆ’. ರಾಜಕೀಯ, ಸಾಮಾಜಿಕ ಸಂಘಟನೆಗಳು ವಿಭಿನ್ನ ವಿಚಾರಧಾರೆಗಳನ್ನು ಹೊಂದಿರುವುದು ತಪ್ಪೇನಲ್ಲ. ಅದು ಅಭಿವ್ಯಕ್ತಿ ಮತ್ತು ಅಭಿಪ್ರಾಯ ಸ್ವಾತಂತ್ರ್ಯದ ಪ್ರತೀಕವೂ ಹೌದು. ಇದೇ ನಮ್ಮ ದೇಶದ ಪ್ರಜಾಪ್ರಭುತ್ವದ ಸೊಗಸು. ಇದಕ್ಕೆ ಸಂವಿಧಾನದ ರಕ್ಷಣೆಯೂ ಇದೆ. ಆದರೆ  ಈ ಸ್ವಾತಂತ್ರ್ಯ ದೇಶಕ್ಕೆ ಮಾರಕವಾದರೆ? ಮುಲಾಜಿಲ್ಲದೆ ಇದನ್ನು ಕಠಿಣ ಕ್ರಮಗಳಿಂದ ದಮನಿಸಲೇ ಬೇಕು.

ದೈಹಿಕ ಹಲ್ಲೆ, ಕೊಲೆ ಹಾಗೂ ಗಲಭೆಗಳನ್ನು ಮಾಡುವುದರ ಮೂಲಕ ಹಿಂದುಗಳಲ್ಲಿ ಹೆದರಿಕೆಯನ್ನು ಮುಸಲ್ಮಾನರಲ್ಲಿ ಮತೀಯ ಉನ್ಮಾದವನ್ನೂ ಹೆಚ್ಚಿಸಲು ಎಸ್.ಡಿ.ಪಿ.ಐ ಪಕ್ಷ ಪ್ರಯತ್ನಿಸುತ್ತಿರುವುದು  ಹಿಂದೆಯೂ ಬಹು ಬಾರಿ ಸಾಬೀತಾಗಿದೆ. ಇದನ್ನು ನಿಷೇಧಿಸದೇ ಬಿಟ್ಟಿರುವುದಕ್ಕೆ ಯಾವ ಕಾರಣವೋ ಗೊತ್ತಿಲ್ಲ. ಹಿಂದಿನ ಸಿಮಿಯಂತಹ ಕ್ರಿಮಿನಲ್ ಕೂಟಗಳೇ ಈಗ ಕೆ ಎಫ್ ಡಿ, ಪಿ ಎಫ್ ಐ ಗಳಾಗಿವೆ. ಇಂತಹವುಗಳ ರಾಜಕೀಯ ಮುಖ ಎಸ್ ಡಿ ಪಿ ಐ.  ಸಿದ್ಧರಾಮಯ್ಯನವರು ತಮ್ಮ ಆಡಳಿತ ಕಾಲದಲ್ಲಿ ಈ ದುಷ್ಟಕೂಟಗಳನ್ನು ತಮ್ಮ ಮಡಿಲಲ್ಲಿಟ್ಟುಕೊಂಡೇ ಸಲಹಿದರು. ರಾಜ್ಯಾದ್ಯಂತ ಅನೇಕ ದುಷ್ಕೃತ್ಯಗಳಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದ ಈ ಸಂಘಟನೆಗಳ ಗೂಂಡಾಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದರು, ಕೇಸುಗಳನ್ನು ತೆಗೆದು ಹಾಕಿದರು. ದೇಶದ, ರಾಜ್ಯದ ಹಿತಕ್ಕಿಂತ ಪಕ್ಷಸ್ವಾರ್ಥವೇ ಪ್ರಮುಖವೆಂದು ಭಾವಿಸುವ ವ್ಯಕ್ತಿ ಮಾತ್ರ ಇಂತಹ ನಾಡದ್ರೋಹದ ಕಾರ್ಯ ಮಾಡಲು ಸಾಧ್ಯ.

ಎಲ್ಲೆಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಆಗಿದೆಯೋ ಅಲ್ಲೆಲ್ಲಾ ಈ ಮುಸ್ಲಿಂ ಸಂಘಟನೆಗಳ ಹೆಸರೇ ಪ್ರಮುಖವಾಗಿ ಕೇಳಿಬರುತ್ತದೆ. ದೊಂಬಿ, ಹಿಂಸೆಗಳ ಘಟನೆಗಳಂತೂ ಅಸಂಖ್ಯ. ತಾವು ಪ್ರಗತಿಪರ ಎಂದುಕೊಳ್ಳುವ ಏಕತೆಯ ವಿರೋಧಿ ಸಂಘಟನೆಗಳು, ನಗರ ನಕ್ಸಲರು, ಕೆಲ ಅಂಡೆಪಿರ್ಕಿ ಸಾಹಿತಿ, ಕವಿ, ಪತ್ರಕರ್ತರು ಇವರ ವೇದಿಕೆಗಳಲ್ಲಿ, ಪ್ರದರ್ಶನಗಳಲ್ಲಿ ಕಾಣಿಸಿಕೊಳ್ಳುವುದು ಇವರ ಮಾರ್ಕೆಂಟಿಗ್ ತಂತ್ರದ ಭಾಗ. ಹೆಸರಿನಲ್ಲಿ ಮತೀಯತೆ ಇಲ್ಲ ಆದರೆ ಅಜೆಂಡಾದಲ್ಲಿ ಸಂಪೂರ್ಣ ಹಿಂದೂದ್ವೇಷ. ಇಂತಹ ಗುಂಪುಗಳನ್ನು ನಿಷೇಧಿಸದಿದ್ದರೆ ಹೋಗಲಿ ಇವರು ನಡೆಸುತ್ತಿರುವ ಕ್ರಿಮಿನಲ್ ಹಾಗೂ ದೇಶವಿರೋಧಿ ಕೃತ್ಯಗಳನ್ನು ಅದು ಆದಾಗಲೇ, ಬಿಡಿ ಬಿಡಿ ಪ್ರಕರಣಗಳಾಗಿ ಆದರೂ ಸರಿ ಉಗ್ರವಾಗಿ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟರಮಟ್ಟಿಗೆ ಆತಂಕ ಎದುರಾಗುತ್ತಿರಲಿಲ್ಲ. ತಿಂಗಳ ಹಿಂದೆಯಷ್ಟೇ ಮಂಗಳೂರಿನ ಕದ್ರಿಯಲ್ಲಿ ಅದರಲ್ಲೂ ನ್ಯಾಯಾಲಯದ ಆವರಣದಲ್ಲೇ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೋಯ್ಬಾ ಪರ ಗೋಡೆ ಬರಹಗಳು ಕಂಡು ಬಂದಿದ್ದವು.

ಹನುಮಜಯಂತಿಗೆ ತಡೆ, ಗಣೇಶನ ಮೆರವಣಿಗೆ ಮೇಲೆ ಕಲ್ಲೆಸೆತ, ಗೋ ಕಳ್ಳತನ, ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ, ಕರೋನಾ ವಿರುದ್ಧ ಕಾರ್ಯ ನಿರ್ವಹಿಸುತ್ತಿದ್ದ ಆರೋಗ್ಯ ಕಾರ್ಯಕರ್ತೆಯರು, ಪೊಲೀಸರ ಮೇಲೆ ಹಲ್ಲೆ ಮತ್ತು ಹಿಂದೂ ಹುಡುಗಿಯರನ್ನು ಹಾರಿಸಿಕೊಂಡು ಹೊಗುವ ಲವ್ ಜಿಹಾದ್, ದೇವಾಯಗಳಲ್ಲಿ ವಿಗ್ರಹ ಭಂಜನ ಈ ಎಲ್ಲ ಪ್ರಕರಣಗಳಲ್ಲೂ ತಪ್ಪದೇ ಕೇಳಿ ಬರುವ ಹೆಸರು ಇವೇ ಸಂಘಟನೆಗಳ ಹಿಂಬಾಲಕರೇ. ಅನೇಕ ಮಸೀದಿಗಳು, ಮೌಲ್ವಿಗಳು ಸಹ ಗೂಂಡಾಗಳ ಪೋಷಕರಾಗಿದ್ದಾರೆ. 

ಇಂತಹ ದುಷ್ಟತನದ ವಿರುದ್ಧ ಪೊಲೀಸರು ಮತ್ತು ಸರ್ಕಾರದ ಗೃಹ ಇಲಾಖೆ ಬರೀ ಹೇಳಿಕೆಗಳಿಗೆ ಸೀಮಿತರಾಗದೇ ತೀವ್ರಕ್ರಮ ಕೈಗೊಂಡರೇ ಮಾತ್ರ ರಾಜ್ಯ ನೆಮ್ಮದಿಯ ಬೀಡಾದೀತು ಇಲ್ಲದೆ ಹೋದರೇ ಹಿಂದೂ ವಿರೋಧಿ, ರಾಷ್ಟ್ರವಿರೋಧಿ ಮೊಟ್ಟೆಗಳಿಗೆ ಕಾವುಕೊಟ್ಟು ಮರಿಮಾಡುವ ಗೂಡಾದೀತು.  

ಲೇಖಕರು: ಸಂತೋಷ್ ಜಿ ಆರ್       
  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ

ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

BIDAR district

November 10, 2010
RSS Sarasanghachalak Bhagwat calls Swayamsevaks: ‘Dedicate first for Nation’s Cause’

RSS Sarasanghachalak Bhagwat calls Swayamsevaks: ‘Dedicate first for Nation’s Cause’

January 22, 2014
RSS Republic Day Special – ‘Patha Sanchalan’ held at Hosadurg, Kanhangad

RSS Republic Day Special – ‘Patha Sanchalan’ held at Hosadurg, Kanhangad

January 27, 2014
Ram madhav talk on integral thought in Bengaluru

Ram madhav talk on integral thought in Bengaluru

February 11, 2018

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In