• Samvada
Monday, May 16, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಸರ್ವಶಕ್ತ ರಾಷ್ಟ್ರವಾಗಿ ಭಾರತ: ವಿವೇಕಾನಂದರ 150 ಜಯಂತಿ ಕಾರ್ಯಕ್ರಮದಲ್ಲಿ ಡಾ.ಕೆ.ಕಸ್ತೂರಿರಂಗನ್

Vishwa Samvada Kendra by Vishwa Samvada Kendra
January 12, 2013
in News Digest
250
0
ಸರ್ವಶಕ್ತ ರಾಷ್ಟ್ರವಾಗಿ ಭಾರತ: ವಿವೇಕಾನಂದರ 150 ಜಯಂತಿ ಕಾರ್ಯಕ್ರಮದಲ್ಲಿ ಡಾ.ಕೆ.ಕಸ್ತೂರಿರಂಗನ್
491
SHARES
1.4k
VIEWS
Share on FacebookShare on Twitter

ಪುತ್ತೂರು: 12-01-2013:   ಇಂದು ನಾವು ಕಾಣುವ ಅನೇಕಾನೇಕ ಜಾಗತಿಕ ಸಂಶೋಧನೆಗಳು ಈ ಹಿಂದೆಯೇ ಭಾರತದ ಮಣ್ಣಿನಲ್ಲಿ ಖುಷಿ, ಮಹರ್ಷಿಗಳ ಕಾಲದಲ್ಲಿ ವಿಶಿಷ್ಟ ರೀತಿಯಲ್ಲಿ ಉಕ್ತವಾದಂತಹವುಗಳಾಗಿವೆ. ಪ್ರಸ್ತುತ ಭಾರತ ವಿವಿಧ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಸರ್ವಶಕ್ತ ರಾಷ್ಟ್ರವಾಗಿ ಮೂಡಿಬರುವತ್ತ ದಾಪುಗಾಲಿಡುತ್ತಿದೆ. ಇಂತಹ ದೇಶಕ್ಕೆ ಮಾರ್ಗದರ್ಶನ ಮಾಡಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದು ಇಸ್ರೋದ ಮಾಜಿ ಅಧ್ಯಕ್ಷ, ಭಾರತ ಸರಕಾರದ ಯೋಜನಾ ಆಯೋಗದ ಸದಸ್ಯ ಪದ್ಮವಿಭೂಷಣ ಡಾ.ಕೆ.ಕಸ್ತೂರಿ ರಂಗನ್ ಹೇಳಿದರು.

READ ALSO

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಮಹೋತ್ಸವ ಸಮಿತಿಯ ನಿರ್ದೇಶನದಲ್ಲಿ ನಡೆದ ಸ್ವಾಮಿ ವಿವೇಕಾನಂದರ ನೂರೈವತ್ತನೇ ಜಯಂತಿಯ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ವಿವೇಕಾನಂದ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರು ಕೇವಲ ಒಬ್ಬ ಸಂತನಲ್ಲ. ಅವರೊಬ್ಬ ವಿಜ್ಞಾನಿ, ತರ್ಕಶಾಸ್ತ್ರಜ್ಞ ಹಾಗೂ ಚಿಂತಕ. ಮಾತ್ರವಲ್ಲದೆ ಓರ್ವ ಪ್ರಾಮಾಣಿಕ ನಿರ್ಭೀತ ವ್ಯಕ್ತಿ. ಅವರು ಮಾಡಿದ ಘನ ಕಾರ್ಯಗಳು ಸಮಾಜದ ಮಂದಿಯ ಕಣ್ಣು ತೆರೆಸಬಹುದಾದ ಮಾಧ್ಯಮಗಳಾಗಿವೆ. ಅವರ ಸಾಧನೆಗಳನ್ನು ಅರಿಯುವುದಕ್ಕೆ ಒಬ್ಬನ ಜೀವಿತಾವಧಿಯೂ ಸಾಲದು. ವಿವೇಕಾನಂದರು ಭಾರತದ ಸರ್ವಸ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡವರಾಗಿದ್ದರು. ಅಂತಹ ಮಾದರಿ ವ್ಯಕ್ತಿಯ ಹೆಸರಿನಲ್ಲಿ ನಡೆಯುವ ವಿವೇಕಾನಂದ ವಿದ್ಯಾಸಂಸ್ಥೆಗಳು ಸಮಾಜಕ್ಕೆ ಉತ್ತಮ, ಪರಿಪೂರ್ಣ ಶಿಕ್ಷಣ ನೀಡುವುದಕ್ಕೆ ಸಾಧ್ಯ ಎಂದರು.

ಕ್ರಿಯಾಶಿಲ ಮತ್ತು ಸೃಜನಶೀಲ ವಿಜ್ಞಾನಿಗಳನ್ನು ಭಾರತ ಹೊಂದಿದೆ. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅದೆಷ್ಟೋ ಮಂದಿಗಳು ನಮ್ಮಲ್ಲಿರುವುದು ದೇಶದ ಉತ್ಕೃಷ್ಟತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯೆನಿಸಿದೆ. ಪ್ರತಿಯೊಬ್ಬ ವ್ಯಕ್ತಿಯೂ ನಿರ್ದಿಷ್ಟ ಗುರಿಯನ್ನು ಹೊಂದಿ ನಿರಂತರ ಪ್ರಯತ್ನವನ್ನು ಧಾರೆಯೆರೆದಲ್ಲಿ ಯಶಸ್ಸು ಖಚಿತ. ಕಾಲೇಜು ಜೀವನದಿಂದ ಸಮಾಜಕ್ಕೆ ಅಡಿಯಿಟ್ಟಂದಿನಿಂದ ನಿಜವಾದ ಅಧ್ಯಯನ ವಿಧಾನ ಜಾರಿಗೆ ಬರುತ್ತದೆ ಎಂದು ತಿಳಿಸಿದರು.

ಭಾರತದಲ್ಲಿ ಸಾಧನೆಗೆ ಅಪಾರ ಅವಕಾಶಗಳಿವೆ. ಪ್ರಯತ್ನಿಸಿದರೆ ಅಸಾಧ್ಯವಾದದ್ದು ಇಲ್ಲಿ ಯಾವುದೂ ಇಲ್ಲ. ಹಾಗಾಗಿ ಭವಿಷ್ಯದ ಮಂದಿಯನ್ನು ಅದ್ಭುತ ಸಾಧ್ಯತೆಗಳು ಸ್ವಾಗತಿಸಲಿವೆ ಎಂದರಲ್ಲದೆ ಪಶ್ಚಿಮ ಕರಾವಳಿಯ ಈ ಪ್ರದೇಶ ಅಸಾಮಾನ್ಯ ಭೂಭಾಗವಾಗಿದೆ ಎಂದು ಅಭಿಪ್ರಾಯಿಸಿದರು.

ದಿಕ್ಸೂಚಿ ಭಾಷಣ ಮಾಡಿದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಬೌದ್ಧಿಕ್ ಪ್ರಮುಕ್ ವಿ.ನಾಗರಾಜ್ ಮಾತನಾಡಿ ಸಮಾಜದಲ್ಲಿ ಕ್ಷಾತ್ರವರ್ಚಸ್ಸು ಕಳೆಗುಂದಿದ್ದ 19ನೇ ಶತಮಾನದಲ್ಲಿ ಜನ್ಮತಾಳಿದ ಸ್ವಾಮಿ ವಿವೇಕಾನಂದರು ಆಧುನಿಕ ಭಾರತದ ಕನಸನ್ನು ಕಂಡ ಮಹಾನ್ ಚೇತನ. ಭಾರತವನ್ನು ಸಶಕ್ತಗೊಳಿಸುವ ಸಾಧ್ಯತೆ ಇರುವುದು ಯುವಜನರಲ್ಲಿ. ಹಾಗಾಗಿ ಯುವಜನರನ್ನು ಪ್ರೇರೇಪಿಸುವ ಶಿಕ್ಷಣ ಅಗತ್ಯ ಎಂದು ಮನಗಂಡವರು ವಿವೇಕಾನಂದರು ಎಂದರು.

ವೇದಾಂತ ಹಾಗೂ ಸಿದ್ಧಾಂತಗಳನ್ನು ಸಮನ್ವಯಗೊಳಿಸಿ ರಾಷ್ಟ್ರ ಭಕ್ತಿಯನ್ನು ಸಮಾಜದಲ್ಲಿ ಭಿತ್ತಿದ ವಿವೇಕಾನಂದರು ತಮ್ಮ ಭಾಷಣದ ಮೂಲಕ ಇಡೀ ದೇಶದಲ್ಲಿ ಸಂಚಲನವನ್ನು ಉಂಟುಮಾಡಿದವರು. ಅಪ್ರತಿಮ ರಾಷ್ಟ್ರಭಕ್ತರಾಗಿ, ಅದ್ಭುತ ಹಿಂದೂ ಚಿಂತಕರಾಗಿ ಜಗತ್ತಿಗೇ ವಿಸ್ಮಯ ಮೂಡಿಸಿದವರು ಎಂದು ನುಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಅಧ್ಯಕ್ಷತೆ ವಹಿಸಿ ಈ ವರ್ಷ ವಿವೇಕಾನಂದ 150ನೇ ಜನ್ಮಜಯಂತಿಯ ಅಂಗವಾಗಿ ವಿದ್ಯಾವರ್ಧಕ ಸಂಘವು ಕೈಗೊಳ್ಳಲಿರುವ ಕಾರ್ಯಗಳ ಬಗೆಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಮಾರ್ಗದರ್ಶಕ ಕೆ.ರಾಮ ಭಟ್, ಕಾರ್ಯದರ್ಶಿ ಇ.ಶಿವಪ್ರಸಾದ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವೇಕಾನಂದ ಜಯಂತಿಯ ಪ್ರಯುಕ್ತ ವಿವೇಕಾನಂದ ಪದವಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂತೆಯೇ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಆಂತರಿಕವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೂ ಬಹುಮಾನ ವಿತರಣೆ ನಡೆಯಿತು. ಅಲ್ಲದೆ ರಾಮ ಭಟ್ ರಚಿಸಿದ ‘ವಿವೇಕಾನಂದರ ಕನಸು ನನಸಾಗಿಸುವಾ, ಭವ್ಯಭಾರತ ನಿರ್ಮಿಸುವಾ..’ ಕಾವ್ಯವನ್ನು ಪ್ರಸ್ತುತಪಡಿಸಲಾಯಿತು.    ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಪಿಸಿದ ವಿಕಸನ ಪತ್ರಿಕೆಯನ್ನು ವಿತರಿಸಲಾಯಿತು.

ವಿದ್ಯಾರ್ಥಿನಿಯರಾದ ಶ್ರೇಯಾ ಕೊಳತ್ತಾಯ, ಅದಿತಿ, ರಶ್ಮಿ ಹಾಗೂ ನಂದಿನಿ ಪ್ರಾರ್ಥಿಸಿದರು. ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ರಾಧಾಕೃಷ್ಣ ಭಕ್ತ ಸ್ವಾಗತಿಸಿದರು. ಅಧ್ಯಕ್ಷ ವಿ.ವಿ.ಭಟ್, ಐಎಎಸ್ ಪ್ರಸ್ತಾವನೆಗೈದರು. ಪದವಿ ಕಾಲೇಜು ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ವಿವೇಕಾನಂದ ಜಯಂತಿ ಸ್ಪರ್ಧೆಗಳ ಬಗೆಗೆ ಮಾಹಿತಿ ನೀಡಿದರು. ಪ್ರೊ.ವೆಂಕಟ್ರಮಣ ಭಟ್ ಹಾಗೂ ಡಾ.ದಿನೇಶ್ಚಂದ್ರ ವಿಜೇತರ ಪಟ್ಟಿ ವಾಚಿಸಿದರು. ಡಾ.ತಾಳ್ತಜೆ ವಸಂತಕುಮಾರ್ ವಂದಿಸಿದರು. ಉಪನ್ಯಾಸಕರುಗಳಾದ ಡಾ.ಶ್ರೀಶಕುಮಾರ್, ರಾಕೇಶ್ ಕುಮಾರ್ ಕಮ್ಮಜೆ ಹಾಗೂ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಬಳಿಕ ಡಾ.ಕಸ್ತೂರಿ ರಂಗನ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನೂತನ ಕಟ್ಟಡದ ಉದ್ಘಾಟನೆ: ಕಾರ್ಯಕ್ರಮಕ್ಕೂ ಮೊದಲು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಇದರ ನೂತನ ಮೆಕ್ಯಾನಿಕಲ್ ಮತ್ತು ಸಿವಿಲ್ ಪ್ರಯೋಗಾಲಯದ ಸಂಕೀರ್ಣವನ್ನು ಪದ್ಮವಿಭೂಷಣ ಡಾ.ಕೆ.ಕಸ್ತೂರಿ ರಂಗನ್ ಉದ್ಘಾಟಿಸಿದರು.

  • email
  • facebook
  • twitter
  • google+
  • WhatsApp

Related Posts

News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
News Digest

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022
Next Post
NEW DELHI: Year long celebrations of 150th birth anniversary of Vivekananda, inaugurated

NEW DELHI: Year long celebrations of 150th birth anniversary of Vivekananda, inaugurated

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Snippet news about Hindu Shakthi Sangam

January 22, 2012
NEW DELHI: Virat Hindu Sammelan हिन्दू ही आगे के उद्घोष के साथ संपन्न हुआ विराट हिन्दू सम्मेलन

NEW DELHI: Virat Hindu Sammelan हिन्दू ही आगे के उद्घोष के साथ संपन्न हुआ विराट हिन्दू सम्मेलन

March 1, 2015
RSS pitches in to save Baji Rao Peshwa’s tomb

RSS pitches in to save Baji Rao Peshwa’s tomb

April 29, 2013
‘RSS condemns the murder of Dr MM Kalburgi, demands earliest arrest of culprits’: Prant Karyavah Aravind Deshpande

‘RSS condemns the murder of Dr MM Kalburgi, demands earliest arrest of culprits’: Prant Karyavah Aravind Deshpande

September 1, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In