• Samvada
Wednesday, May 25, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

‘ಅಸ್ಸಾಮಿನ ಭವಿಷ್ಯ ರಾಷ್ಟ್ರೀಯವಾದಿ ನಾಯಕತ್ವದ ಕೈಯಲ್ಲಿ ಸುರಕ್ಷಿತ’ : ಮಂಥನ ಬೆಂಗಳೂರು ಕಾರ್ಯಕ್ರಮದಲ್ಲಿ ರಾಮ್ ಮಾಧವ್

Vishwa Samvada Kendra by Vishwa Samvada Kendra
July 3, 2016
in News Digest
250
0
‘ಅಸ್ಸಾಮಿನ ಭವಿಷ್ಯ ರಾಷ್ಟ್ರೀಯವಾದಿ ನಾಯಕತ್ವದ ಕೈಯಲ್ಲಿ ಸುರಕ್ಷಿತ’ : ಮಂಥನ ಬೆಂಗಳೂರು ಕಾರ್ಯಕ್ರಮದಲ್ಲಿ ರಾಮ್ ಮಾಧವ್

Ram Madhav addressing in Manthana Bengaluru event on THE ASSAM TRIUMPH on July 02, 2016

491
SHARES
1.4k
VIEWS
Share on FacebookShare on Twitter

ಬೆಂಗಳೂರು 2 ಜುಲೈ 2016: ಭಾರತೀಯ ಜನತಾ ಪಾರ್ಟಿಯಂತಹ ರಾಷ್ಟ್ರವಾದಿ ಪಕ್ಷ ಆಸ್ಸಾಮಿನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚಿಸಿರುವುದಕ್ಕೆ ಒಂದು ವಿಶೇಷ ಅರ್ಥವಿದೆ. ಆಸ್ಸಾಮಿನ ಜನರು ಅಗಾಧಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡಿದ್ದಾರೆ ಈ ಗೆಲುವಿನಿಂದಾಗಿ ಆಸ್ಸಾಮಿನ ಭವಿಷ್ಯ ರಾಷ್ಟ್ರೀಯವಾದಿ ನಾಯಕತ್ವದ ಕೈಯಲ್ಲಿ ಸುರಕ್ಷಿತವಾಗಿದೆಯೆಂದು ಇಂದು ಭಾರತೀಯರು ಸಂತುಷ್ಟರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಇಂಡಿಯಾ ಫೌಂಡೇಶನ್ ನಿರ್ದೇಶಕ ಹಾಗೂ ಆರೆಸ್ಸೆಸ್ ಪ್ರಚಾರಕ ರಾಮ್ ಮಾಧವ್ ಹೇಳಿದ್ದಾರೆ. ಅವರು ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯ ಟೀಚರ‍್ಸ್ ಕಾಲೇಜು ಸಭಾಂಗಣದಲ್ಲಿ ಆಸ್ಸಾಮ್ ವಿಕ್ರಮ – ಪೂರ್ವೋತ್ತರ ರಾಜ್ಯಗಳಲ್ಲಿ ಸೈದ್ಧಾಂತಿಕ ಒಪ್ಪಿಗೆಯಲ್ಲಿ ವರ್ಧನೆ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರೀಯವಾದಿ ವಿಚಾರ ವೇದಿಕೆ – ಮಂಥನ ಆಯೋಜಿಸಿದ ಕಾರ್ಯಕ್ರಮದಲ್ಲಿ ಇತ್ತೀಚಿನ ಆಸ್ಸಾಮ್ ಚುನಾವಣೆಯಲ್ಲಿ ಬಿಜೆಪಿ ಪಡೆದ ಗೆಲುವಿನ ಕುರಿತು ರಾಮ ಮಾಧವ ಅನುಭವಗಳನ್ನು ಹಂಚಿಕೊಂಡರು.

Ram Madhav addressing in Manthana Bengaluru event on THE ASSAM TRIUMPH on July 02, 2016
Ram Madhav addressing in Manthana Bengaluru event on THE ASSAM TRIUMPH on July 02, 2016

ರಾಮ್ ಮಾಧವ್ ಅವರ ಭಾಷಣದ ಸಾರಾಂಶ:
ಆಸ್ಸಾಮಿನಲ್ಲಿ ಬಿಜೆಪಿಯನ್ನು ಅರ್ಥೈಸಿಕೊಳ್ಳಬೇಕಾದರೆ ಅಲ್ಲಿನ ಜನಸಂಖ್ಯಾ ಹಂಚಿಕೆಯನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ಕೆಲವು ಜಿಲ್ಲೆಗಳಲ್ಲಿ ಶೇಕಡ 60-75ವರೆಗೆ ಮತದಾರರು ನುಸುಳುಕೋರರಾಗಿದ್ದಾರೆ. ಆದರೂ ಆಸ್ಸಾಮಿನ ಮತದಾರರು ಬಹುದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಮತನೀಡಿದ್ದಾರೆ.2011ರ ಚುನಾವಣೆಯಲ್ಲಿ ಬಿಜೆಪಿ ೧೧.೫ ಶೇ. ಮತ ಪಡೆದಿತ್ತು ೨೦೧೪ರ ಲೋಕಸಭಾ ಚುನಾವಣೆಯಲ್ಲಿ 36 ಶೇ. ಮತ ಪಡೆದಿತ್ತು ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ. 43 ಮತಪಡೆದು ಬಿಜೆಪಿ ನೇತೃತ್ವದ ಎನ್‌ಡಿಎ 86 ಸ್ಥಾನಗಳನ್ನು ಗೆದ್ದಿತು. ಕೇವಲ ಬಿಜೆಪಿ ಸ್ಪರ್ಧಿಸಿದ 89 ಸ್ಥಾನಗಳ ಪೈಕಿ 60ರಲ್ಲಿ ಗೆಲುವು ಸಾಧಿಸಿತು.

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

IMG_7954
ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಜನಪ್ರಿಯತೆಯೂ ಒಂದು ಕಾರಣ. ಜೊತೆಗೆ ಮೂರು ಪ್ರಮುಖ ಕಾರಣಗಳಿಂದ ಇಂತಹ ಅಭೂತಪೂರ್ವ ಗೆಲುವು ಸಾಧ್ಯವಾಯಿತು.
ಮೊದಲನೆಯದಾಗಿ ಈ ಚುನಾವಣೆಯು ನಮಗೆ ಕೊನೆಯ ಅವಕಾಶ ಎಂದು ನಾವು ಅಂದುಕೊಂಡಿದ್ದೆವು. ಮೂರು ಕೋಟಿ ಜನಸಂಖ್ಯೆಯ ಆಸ್ಸಾಮಿನಲ್ಲಿ ಒಂದು ಕೋಟಿ ವಿದೇಶಿ ನುಸುಳುಕೋರರೆ ತುಂಬಿರುವಾಗ ಮುಂದಿನ ಐದು ವರ್ಷಗಳಲ್ಲಿ ಜನಸಂಖ್ಯೆ ಹಂಚಿಕೆಯಿಂದ ಏನಾಗಬಹುದು ಎನ್ನುವುದು ಊಹಿಸುವುದು ಕಷ್ಟ. ಆಸ್ಸಾಮಿ ಸಂಸ್ಕೃತಿ, ಸಂಪ್ರದಾಯ, ವೈವಿಧ್ಯಮಯ ಪದ್ಧತಿಗಳು, ಕಾಮಾಕ್ಯ ಮಂದಿರ, ಪವಿತ್ರ ಬ್ರಹ್ಮಪುತ್ರ ಒಟ್ಟಾರೆ ಆಸ್ಸಾಮಿನ ಅಸ್ಮಿತೆಗೇ ತೀವ್ರ ಸಂಕಷ್ಟ ಒದಗಿತ್ತು. ಆದ್ದರಿಂದ ಆಸ್ಸಾಮಿನ ಗುರುತನ್ನು ಉಳಿಸುವ ದೃಷ್ಟಿಯಿಂದ ಈ ಗೆಲುವು ಅತ್ಯಂತ ಪ್ರಮುಕವಾಗಿತ್ತು.
ಎರಡನೆಯದಾಗಿ ಹದಿನೈದು ವರ್ಷಗಳ ಕಾಂಗ್ರೆಸ್ ದುರಾಡಳಿತ. ಉದಾಹರಣೆಗೆ ಆಸ್ಸಾಮಿನ ಯುವಜನಾಂಗ ಬಿಎ, ನರ್ಸಿಂಗ್ ಮುಂತಾದ ಶಿಕ್ಷಣ ಪಡೆಯಲೂ ಕರ್ನಾಟಕದಂತಹ ದೂರದ ರಾಜ್ಯಗಳಿಗೆ ಹೋಗಬೇಕಾದ ಪರಿಸ್ಥಿತಿ ಇದ್ದು ಮೂಲಭೂತ ಶಿಕ್ಷಣ ಸೌಲಭ್ಯದ ವ್ಯವಸ್ಥೆಯೂ ಸರಿಯಾಗಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಆಸ್ಸಾಂ ಕೊನೆಯ ನಾಲ್ಕು ರಾಜ್ಯಗಳಲ್ಲೊಂದಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ತೀವ್ರ ನಿರ್ಲಕ್ಷಕ್ಕೊಳಗಾಗಿತ್ತು.

IMG_7786
ಮೂರನೆಯದಾಗಿ ಪೂರ್ವೋತ್ತರ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಸಲುವಾಗಿ ಆಸ್ಸಾಮಿನಲ್ಲಿ ಗೆಲುವು ಅಗತ್ಯವಾಗಿತ್ತು.
ವಿದೇಶಿ ನುಸುಳುಕೋರ ವಿಷಯವನ್ನು ಸಂಪೂರ್ಣ ನಿರ್ಲಕ್ಷಿಸಿದ ಹಿಂದಿನ ಸರ್ಕಾರ ಅವರರನ್ನು ಮತಬ್ಯಾಂಕ್ ಆಗಿ ಕಂಡಿತ್ತು. ಈ ಗೆಲುವುದಿನಿಂದ ಅಂತಹ ನೀತಿ ಕೊನೆಗೊಳ್ಳಲಿದ್ದು ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಬಾಂಗ್ಲಾದೇಶದ ಸರ್ಕಾರದೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು ಗಡಿಗಳನ್ನು ಗುರುತಿಸಲಾಗಿದೆ. ೨೦೧೬ರ ಕೊನೆಯ ವೇಳೆಗೆ ಗಡಿಗಳಲ್ಲಿ ಬೇಲಿ ನಿರ್ಮಿಸಿ ಹಾಗೂ ಗಡಿಗುಂಟ ಭದ್ರತಾ ಪಡೆಯ ಕಣ್ಗಾವಲಿನ ಮೂಲಕ ನುಸುಳುವಿಕೆಯನ್ನು ಸಂಪೂರ್ಣ ತಡೆಯಲಾಗುವುದು. ಮುಂದಿನ ವರ್ಷದ ವೇಳೆಗೆ ಆಸ್ಸಾಮಿನಲ್ಲಿ ರಾಷ್ಟ್ರೀಯ ನಾಗರಿಕರ ರಿಜಿಸ್ಟರ್ ಕಾರ್ಯ ಕೂಡ ಪೂರ್ಣಗೊಳ್ಳಲಿದ್ದು ನುಸುಳುಕೊರರನ್ನು ಗುರುತಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಆಸ್ಸಾಮಿನಲ್ಲಿ ಸ್ಥಾಪನೆಯಾಗಿರುವ ರಾಷ್ಟ್ರವಾದಿ ಸರ್ಕಾರ ದೇಶದ ಸಮಗ್ರತೆಗೆ ಕುಂದಾಗದಂತೆ ರಕ್ಷಿಸುವುದು.
ದಕ್ಷಿಣ ಏಷಿಯ ದೇಶಗಳ ವಿದೇಶಿ ಸಂಬಂಧದ ವಿಷಯದಲ್ಲಿ ಪೂರ್ವೋತ್ತರ ರಾಜ್ಯಗಳು ತುಂಬಾ ಮಹತ್ವವಾದ ಪಾತ್ರವನ್ನು ವಹಿಸುತ್ತವೆ. ಬಾಂಗ್ಲಾದೇಶ, ಮ್ಯಾನಮಾರ್ ಮೂಲಕ ದಕ್ಚಿಣ ಏಷಿಯ ದೇಶಗಳಿಗೆ ಭೂಸಂಪರ್ಕ ಕಲ್ಪಿಸಬಹುದು. ಈ ದೃಷ್ಟಿಯಿಂದ ಭಾರತದ ಲುಕ್ ಈಸ್ಟ್ ನೀತಿಗೆ ಪೂರ್ವೋತ್ತರ ರಾಜ್ಯಗಳು ತುಂಬ ಪ್ರಮುಖವಾದವು. ಆದರೆ ಈ ಪ್ರದೇಶದಲ್ಲಿನ ಹಿಂಸೆ ಮತ್ತು ಪ್ರಕ್ಷುಬ್ಧತೆಯಿಂದಾಗಿ ಇದಕ್ಕೆ ಹಿನ್ನೆಡಯಾಗಿತ್ತು. ಇಂದು ಪೂರ್ವೋತ್ತರ ರಾಜ್ಯಗಳ ರಹದಾರಿಯೆಂದೇ ಕರೆಯುವ ಆಸ್ಸಾಮಿನಲ್ಲಿ ರಾಷ್ಟ್ರವಾದಿ ಸರ್ಕಾರದ ಸ್ಥಾಪನೆಯಿಂದ ಈ ಕಾರ್ಯಕ್ಕೆ ವೇಗ ಸಿಗಲಿದೆ. ಆಸ್ಸಾಮ್ ದಕ್ಷಿಣ ಏಷಿಯಾ ರಾಷ್ಟ್ರಗಳ ಸಂಭಂಧದ ರಹದಾರಯಾಗಲಿದೆ. ಹಾಗೇಯೆ ಈ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಅನೇಕ ಚಟುವಟಿಕೆಗಳನ್ನು ನಾವು ಕಾಣಲಿದ್ದೇವೆ.
ಆಸ್ಸಾಮ್ ಗೆಲುವಿನ ನಂತರ ಪೂರ್ವೋತ್ತರ ರಾಜ್ಯಗಳ ರಾಜಕೀಯ ಪಕ್ಷಗಳನ್ನು ಒಂದುಗೂಡಿಸಿ ನಾರ್ಥ ಈಸ್ಟ್ ಡೆಮೊಕ್ರಾಟಿಕ್ ಅಲಾಯನ್ಸ್ (NEDA) ಸ್ಥಾಪಿಸಲಾಗಿದೆ. ಕೇವಲ ಆಸ್ಸಾಮಿನಲ್ಲಷ್ಟೇ ಅಲ್ಲದೇ ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯ ಮಿತ್ರಪಕ್ಷ ಅಧಿಕಾರದಲ್ಲಿದೆ, ನಾಗಾಲ್ಯಾಂಡಿನ ಸರ್ಕಾರದಲ್ಲಿ ಬಿಜೆಪಿ ಪಾಲುದಾರನಾಗಿದೆ. ಸಿಕ್ಕಿಂನಲ್ಲಿ ಅಧಿಕಾರ ಹಿಡಿದ ಪಕ್ಚ ಒಕ್ಕೂಟದ ಸದಸ್ಯನಾಗಿದೆ. ಹಾಗೇ ಮೇಘಾಲಯದ ಪ್ರಮುಖ ರಾಜಕೀಯ ಪಕ್ಷಗಳು, ಮೀಜೋರಾಮ್‌ನ ಮೀಜೋ ಡೆಮೊಕ್ರಾಟಿಕ್ ಫ್ರಂಟ್ ಎನ್‌ಎಡಿಎನ ಸದಸ್ಯ ಪಕ್ಚಗಳಾಗಿವೆ. ಒಂದು ಕಾಲದಲ್ಲಿ ಪ್ರಾದೇಶಿಕ ಪ್ರತ್ಯೇಕತಾವಾದಿಗಳಾಗಿದ್ದ ಪಕ್ಷಗಳು ಇಂದು ಎನ್‌ಎಡಿಎನ ಸದಸ್ಯರಾಗಿವೆ. ಇದು ಭಾರತದೊಂದಿಗೆ ಪೂರ್ವೋತ್ತರ ರಾಜ್ಯಗಳ ಬಂಧವನ್ನು ಬಲಗೊಳಿಸಿ ರಾಷ್ಟ್ರೀಯ ಸಮಗ್ರತೆಯನ್ನು ಗಟ್ಟಿಗೊಳಿಸುತ್ತಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯವಾಹ ನಾ ತಿಪ್ಪೇಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೋಷಿಯಲ್ ಮೀಡಿಯಾ ಕಾರ್ಯಕರ್ತ ಕಿರಣಕುಮಾರ್ ಪರಿಚಯಿಸಿ ಸ್ವಾಗತಿಸಿದರು. ಮಂಥನದ ಡಾ. ರಘೋತ್ತಮ ನಿರ್ವಹಿಸಿ ವಂದಿಸಿದರು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶಾಸಕ ಹಾಗೂ ಹಿರಿಯ ಬಿಜೆಪಿ ನಾಯಕ ಸುರೇಶ್‌ಕುಮಾರ, ಸಂಘ ಪರಿವಾರದ ಹಿರಿಯರು ಉಪಸ್ಥಿತರಿದ್ದರು.

IMG_7799

IMG_8021

IMG_7768 IMG_7957

62aacc1d-689e-4ec7-b161-d5f906dc5cae

IMG-20160703-WA0000

  • email
  • facebook
  • twitter
  • google+
  • WhatsApp

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
‘ಅಸ್ಸಾಮಿನ ಭವಿಷ್ಯ ರಾಷ್ಟ್ರೀಯವಾದಿ ನಾಯಕತ್ವದ ಕೈಯಲ್ಲಿ ಸುರಕ್ಷಿತ’ : ಮಂಥನ ಬೆಂಗಳೂರು ಕಾರ್ಯಕ್ರಮದಲ್ಲಿ ರಾಮ್ ಮಾಧವ್

Assam's future is secured in the leadership of Nationalistic Ideology: #RamMadhavOnAssam in Bengaluru

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಒಂದು ಪಠ್ಯ – ಹಲವು ಪಾಠ

May 24, 2022

EDITOR'S PICK

VHP passes 5 major resolutions, says ‘No Masjid will be allowed in Temple City of Ayodhya’

VHP passes 5 major resolutions, says ‘No Masjid will be allowed in Temple City of Ayodhya’

January 6, 2013
Why Congress MPs boycott tribute ceremony for Savarkar on his birth day?  writes LK ADVANI

ಸರ್ಕಾರಗಳು ಕೊಡಲಿ ಬಿಡಲಿ ಸಾವರ್ಕರ್ ಭಾರತ ರತ್ನವೇ

May 28, 2021
ಶ್ರೀ ಎಸ್ ಉಮೇಶ್ ರಚಿಸಿರುವ ‘ತಾಷ್ಕೆಂಟ್ ಡೈರಿ’ ಲೋಕಾರ್ಪಣೆಗೊಳ್ಳಲು ಸಿದ್ಧ.

ಶ್ರೀ ಎಸ್ ಉಮೇಶ್ ರಚಿಸಿರುವ ‘ತಾಷ್ಕೆಂಟ್ ಡೈರಿ’ ಲೋಕಾರ್ಪಣೆಗೊಳ್ಳಲು ಸಿದ್ಧ.

July 15, 2020
Photo Gallery 4: Hindu Shakti Sangam Hubli

Photo Gallery 4: Hindu Shakti Sangam Hubli

January 28, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In