• Samvada
Wednesday, May 18, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ರಾಷ್ಟ್ರೋತ್ಥಾನ ಸಾಹಿತ್ಯ: ‘ನೌಕಾಘಾತ’ ಮತ್ತು ‘ಗದರ್ ಚಳವಳಿ’ ಪುಸ್ತಕ ಬಿಡುಗಡೆ

Vishwa Samvada Kendra by Vishwa Samvada Kendra
December 8, 2014
in Others
250
0
ರಾಷ್ಟ್ರೋತ್ಥಾನ ಸಾಹಿತ್ಯ: ‘ನೌಕಾಘಾತ’ ಮತ್ತು ‘ಗದರ್ ಚಳವಳಿ’ ಪುಸ್ತಕ ಬಿಡುಗಡೆ
491
SHARES
1.4k
VIEWS
Share on FacebookShare on Twitter

ರಾಷ್ಟ್ರೋತ್ಥಾನ ಸಾಹಿತ್ಯಾಂದೋಲನದ ಅಧ್ಯಯನವಾಗಬೇಕು

ಬೆಂಗಳೂರು ಡಿಸೆಂಬರ್ 7:  “ರಾಷ್ಟ್ರಕವಿ ಕುವೆಂಪುರವರು, ಒಂದು ದೇಶವನ್ನು ಒಟ್ಟುಗೂಡಿಸುವ ಸಾಹಿತ್ಯವೇ ದೈವೀ ಸಾಹಿತ್ಯ ಹಾಗೂ ದೇಶವನ್ನು ಒಡೆಯುವ ಸಾಹಿತ್ಯ ರಾಕ್ಷಸೀ ಸಾಹಿತ್ಯ. ದೇಶವನ್ನು ಒಡೆಯುವ ಸಾಹಿತ್ಯವನ್ನು ತಿರಸ್ಕರಿಸಬೇಕು ಹಾಗೂ ದೇಶವನ್ನು ಕೂಡಿಸುವ ಸಾಹಿತ್ಯ  ಹೆಚ್ಚುಹೆಚ್ಚು ಪ್ರಕಟವಾಗಬೇಕು ಎಂದಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಸಂಗತಿಗಳನ್ನು ಪ್ರತಿಭಾವಂತ ಲೇಖಕರಿಂದ ಬೆಳಕು ಕಾಣಿಸಬೇಕು ಎಂಬುದು ಕುವೆಂಪು ಅವರ ಕನಸಾಗಿತ್ತು. ರಾಷ್ಟ್ರೋತ್ಥಾನ ಸಾಹಿತ್ಯ, ಅಂತಹ ಕನಸನ್ನು ಅನೇಕ ನೆಲೆಗಳಲ್ಲಿ ನನಸು ಮಾಡುತ್ತಾ ಬಂದಿದೆ. ಕನ್ನಡದಲ್ಲಿ ಹೇಗೆ ನವೋದಯ, ದಲಿತ, ಬಂಡಾಯ ಸಾಹಿತ್ಯವನ್ನು ಅಧ್ಯಯನಕ್ಕೆ, ಚರ್ಚೆಗೆ ಹಚ್ಚಿರುವಂತೆ ಕಳೆದ 49 ವರ್ಷಗಳಿಂದ ಪುಸ್ತಕ ಪ್ರಕಟಣೆಯಲ್ಲಿ ತೊಡಗಿರುವ ರಾಷ್ಟ್ರೋತ್ಥಾನದ ಸಾಹಿತ್ಯದ ಆಂದೋಲನದ ಕುರಿತು ಚರ್ಚೆ ನಡೆಯಬೇಕಾದ ಅಗತ್ಯವಿದೆ” ಎಂದು ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಬಿ.ವಿ. ವಸಂತ್‌ಕುಮಾರ್ ಅವರು ಅಭಿಪ್ರಾಯಪಟ್ಟರು.

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

LLV_3139

ರಾಷ್ಟ್ರೋತ್ಥಾನ ಸಾಹಿತ್ಯ ಬೆಂಗಳೂರಿನ ಆರ್ ವಿ ಟೀಚರ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ನೌಕಾಘಾತ’ ಮತ್ತು ‘ಗದರ್ ಚಳವಳಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

“ಶತ್ರುಗಳ ಜೊತೆ ಸೇರಿದ ಸ್ವದೇಶಿಯರಿಂದಾಗಿಯೇ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾರತೀಯರಿಗೆ ಹಲವು ಬಾರಿ ಸೋಲುಂಟಾಯಿತು. ಅಲೆಗ್ಸಾಂಡರ್ ಕಾಲದಿಂದಲೂ ಕಂಡುಬರುತ್ತಿರುವುದು ಭಾರತದ ದುರಂತಗಳಲ್ಲೊಂದು. ಅಲೆಕ್ಸಾಂಡರ್‌ನನ್ನು ಎದುರಿಸುವ ಶಕ್ತಿ ಪುರೂರವನಿಗಿತ್ತು. ಆದರೆ ಅಂಬಿ ಎನ್ನುವ ಭಾರತೀಯ ಅಲೆಕ್ಸಾಂಡರ್‌ಗೆ ಸಹಾಯ ಮಾಡಿದ್ದರಿಂದ ಪುರೂರವ ಸೋಲುಂಡ, ಇಂತಹ ಅನೇಕ ಘಟನೆಗಳನ್ನು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಣಬಹುದು. ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕೋಮಗಾತ ಮರು ಮತ್ತು ಗದರ್ ಚಳವಳಿಗಳಲ್ಲಿಯೂ ಇಂತಹದ್ದೇ ಸ್ಥಿತಿಯಿತ್ತು. ಕೃಪಾಳ್ ಸಿಂಗ್ ದ್ರೋಹವೆಸಗಿದ. ಇಂತಹ ದ್ರೋಹಿಗಳು ತಲತಲಾಂತರಗಳಿಂದಲೂ ಹುಟ್ಟಿಕೊಳ್ಳುತ್ತಿರುವುದು ಭಾರತದ ದುರಂತ” ಎಂದರು.

ದೇಶ ಎಂದರೆ ಅನೇಕರಿಗೆ ಉಂಡು ಮಲಗುವ ಛತ್ರ, ವಸತಿ ನಿಲಯ ಹಾಗೂ ಮಣ್ಣಿನ ತುಂಡು. ಆದರೆ ದೇಶವೆಂದರೆ ಜಗಜ್ಜನನಿ, ಜಗನ್ಮಾತೆ, ತಮ್ಮದೇ ವ್ಯಕ್ತಿತ್ವ ಎಂದು ಭಾವಿಸಿದವರಿಂದಲೇ ಸ್ವಾತಂತ್ರ್ಯ ಹೋರಾಟಗಳು ನಡೆದವು. ಬರಗಾಲ, ಪ್ಲೇಗ್‌ಮಾರಿ ಹಾಗೂ ಬ್ರಿಟಿಷರ ದಬ್ಬಾಳಿಕೆಗಳ ನಡುವೆ ನಡೆದ ಕೆಚ್ಚಿನ ಹೋರಾಟಗಳ ಕಥನವನ್ನು ಎರಡೂ ಪುಸ್ತಕಗಳು ಹೊಂದಿವೆ. ಗುಲಾಮರಿಗೆ ಯಾವ ದೇಶದಲ್ಲೂ ಬೆಲೆಯಿಲ್ಲ ಎಂಬುದನ್ನು ನೌಕಾಘಾತ ಪುಸ್ತಕ ಸಾರಿ ಹೇಳುತ್ತದೆ. ಗುರುದೀತ ಸಿಂಗ್‌ನನ್ನು ಜೈಲಿಗಟ್ಟಲು ಕರೆದೊಯ್ಯುವಾಗ 2 ಲಕ್ಷ ಜನರು ಸೇರುತ್ತಾರೆ ಎಂದರೆ ಕೋಮಗಾತ ಎಂಬುದು ವ್ಯಕ್ತಿಯೋರ್ವನ ಹುಂಬತನದ ಸಾಹಸವಲ್ಲ, ಬ್ರಿಟಿಷರ ಸೋಗಲಾಡಿತನವನ್ನು ಹೊರಹಾಕಲು ನಡೆಸಿದ ದಿಟ್ಟತನ ಹಾಗೂ ಪ್ರಜ್ಞಾಪೂರ್ವಕ ಪ್ರಯೋಗ ಎಂಬುದು ದೃಢವಾಗುತ್ತದೆ ಎಂದು ಈ ಎರಡು ಪುಸ್ತಕಗಳ ವಿಶೇಷತೆಗಳನ್ನು ವಿವರಿಸಿದರು.

ಕಾಂಗ್ರೆಸ್, ಗಾಂಧೀ, ನೆಹರೂ ಅವರೇ ಸ್ವಾತಂತ್ರ್ಯ ತಂದುಕೊಟ್ಟರು ಎಂಬುದೇ ಇಂದಿಗೂ ಚಾಲ್ತಿಯಲ್ಲಿದೆ. ರಕ್ತಚೆಲ್ಲಿದ ಅನೇಕ ಕ್ರಾಮತಿಕಾರಿಗಳೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುಗಾರಿಕೆ ಹೊಂದಿದ್ದಾರೆ ಎಂಬುದು ಮನವರಿಕೆಯಾಗಬೇಕು. ದೇಶ್ಕಾಗಿ ದುಡಿದವರಾರು, ದೇಶದ ವಿರುದ್ಧ ಕೆಲಸಮಾಡಿದವರು ಯಾರು ಎಂಬುದನ್ನು ತಿಳಿಸುವಲ್ಲಿ ಇಂತಹ ಪುಸ್ತಕಗಳು ನೆರವಾಗುತ್ತವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ. ಆರ್. ಎಲ್.ಎಂ. ಪಾಟೀಲ್ ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಎಸ್.ಆರ್. ರಾಮಸ್ವಾಮೀ ಅವರು, ದೇಶದೊಳಗಿನ ಅನೇಕ ಸಾಹಸಗಾಥೆಗಳೇ ಭಾರತೀಯ ಯುವಪೀಳಿಗೆಗೆ ಇಂದು ತಿಳಿದಿಲ್ಲ. ಇನ್ನು ವಿದೇಶೀ ನೆಲದಲ್ಲಿ ನಡೆದ ಗದರ್ ಹಾಗೂ ಕೋಮಗಾತ ಮರು ನೌಕಾಪ್ರಕರಣದಂತಹ  ಹೋರಾಟಗಳ ಅರಿವಂತೂ ದೂರದ ಮಾತೇ ಸರಿ ಎಂದು ವಿಷಾದ ವ್ಯಕ್ತಪಡಿಸಿದರು. ಈ ಕೊರತೆಯನ್ನು ತುಂಬುವ ಪ್ರಯತ್ನವನ್ನು ಈ ಪುಸ್ತಕಗಳಲ್ಲಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಮೈ.ಚ. ಜಯದೇವ್, ಲೇಖಕ ಚಕ್ರವರ್ತಿ ಸೂಲಿಬೆಲೆ, ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಉತ್ಥಾನ ಮಾಸಪತ್ರಿಕೆಯ ಸಂಪಾದಕ ಕಾಕುಂಜೆ ಕೇಶವ ಭಟ್ಟ್, ರಾಷ್ಟ್ರೋತ್ಥಾನ ಸಾಹಿತ್ಯದ ವಿಘ್ನೇಶ್ ಭಟ್, ಅರುಣ್ ಶೌರಿ ಸಾಹಿತ್ಯ ಮಾಲೆ ಹಾಗೂ ವಾಯ್ಸ್ ಆಫ್ ಇಂಡಿಯಾ ಸಂಚಿಕೆಯ ಗೌರವ ಸಂಪಾದಕ ಮಂಜುನಾಥ ಅಜ್ಜಂಪುರ, ವಿಕ್ರಮ ಮಾಸಪತ್ರಿಕೆಯ ಸಂಪಾದಕ ದು.ಗು. ಲಕ್ಷ್ಮಣ್, ಮಲ್ಲಾರ ಪತ್ರಿಕೆಯ ಸಂಪಾದಕ ಬಾಬು ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

  • email
  • facebook
  • twitter
  • google+
  • WhatsApp

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post
Mangaluru: Massive protest held by VHP- Bajarangadal condemning attack on Datta Peetha pilgrims at Ulaibettu

Mangaluru: Massive protest held by VHP- Bajarangadal condemning attack on Datta Peetha pilgrims at Ulaibettu

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ನಮ್ಮ ಕಾರ‍್ಯದ ಯಶಸ್ಸು ಅನುಕೂಲ-ಪ್ರತಿಕೂಲ ವಾತಾವರಣವನ್ನು ಅವಲಂಬಿಸಿಲ್ಲ

April 4, 2010
ರಸ್ತೆ ನಿರ್ಮಾಣದಲ್ಲಿ ಹಿಂದಿನ 66 ವರ್ಷ ಮೀರಿಸಿದ ಮೋದಿ ಸರ್ಕಾರ. ದೂರ ಮತ್ತು ವೇಗದಲ್ಲಿ ಮೋದಿಗೆ ಸಾಟಿಯಿಲ್ಲ

ರಸ್ತೆ ನಿರ್ಮಾಣದಲ್ಲಿ ಹಿಂದಿನ 66 ವರ್ಷ ಮೀರಿಸಿದ ಮೋದಿ ಸರ್ಕಾರ. ದೂರ ಮತ್ತು ವೇಗದಲ್ಲಿ ಮೋದಿಗೆ ಸಾಟಿಯಿಲ್ಲ

March 26, 2021
Babri Masjid demolition was just an incident says Supreme Court

Babri Masjid demolition was just an incident says Supreme Court

January 18, 2012
Assam violence – Appeal to donate for relief activities

Assam violence – Appeal to donate for relief activities

July 27, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In