• Samvada
  • Videos
  • Categories
  • Events
  • About Us
  • Contact Us
Monday, June 5, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ರಥಸಪ್ತಮಿ ವಿಶೇಷ : ರೋಗ ನಿವರಣೆಗೆ, ದೇಹದಾರ್ಡ್ಯ ಹಾಗೂ ಒಳ್ಳೆಯ ಆರೋಗ್ಯಕ್ಕೆ ಸೂರ್ಯನ ಆರಾಧನೆ ಮಾಡೋಣ

Vishwa Samvada Kendra by Vishwa Samvada Kendra
February 19, 2021
in Articles
252
0
ರಥಸಪ್ತಮಿ ವಿಶೇಷ : ರೋಗ ನಿವರಣೆಗೆ, ದೇಹದಾರ್ಡ್ಯ ಹಾಗೂ ಒಳ್ಳೆಯ ಆರೋಗ್ಯಕ್ಕೆ  ಸೂರ್ಯನ ಆರಾಧನೆ ಮಾಡೋಣ
495
SHARES
1.4k
VIEWS
Share on FacebookShare on Twitter

ಲೇಖನ: ನಿತಿನ್ ಕೊರಳ್ಳಿ, ಯೋಗ ಶಿಕ್ಷಕ.

ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿಯನ್ನು ರಥಸಪ್ತಮಿ ಎಂದು ಕರೆಯುತ್ತಾರೆ. ಸೂರ್ಯನು ರಥವನ್ನೆರಿದ ದಿನವನ್ನು ರಥಸಪ್ತಮಿಯನ್ನಾಗಿ ಆಚರಿಸುತ್ತಾರೆ. ಆ ದಿನ ಸೂರ್ಯನು ಕಶ್ಯಪ ಮತ್ತು ಅದಿತಿದೇವಿಯ ಮಗನಾಗಿ ಜನಿಸಿದ ದಿನ, ಆದ್ದರಿಂದ ಆವತ್ತು ಸೂರ್ಯಜಯಂತಿ ಎಂದೂ ಕರೆಯುತ್ತಾರೆ. ಸೂರ್ಯನು ಏಳು ಕುದುರೆಗಳಿರುವ ರಥವನ್ನು ಏರಿ ಅದರ ಪಥವನ್ನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಚಲಿಸುವ ವಿಶೇಷ ದಿನ ರಥ ಸಪ್ತಮಿ.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಸೂರ್ಯನು ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ಈ ಮೂಲಕ ಭೂಮಿಯಲ್ಲಿ ವಾಸಿಸುವ ನಮಗೆ ನವ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ. ಚಳಿಗಾಲದಿಂದಾಗಿ ಮುದುಡಿದ್ದ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ.

ನಮಗೆಲ್ಲರಿಗೂ ತಿಳಿದಂತೆ, ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದಲೇ ನಡೆಯುತ್ತಿದೆ. ಸೂರ್ಯನಿಲ್ಲದ ಜೀವನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ಪ್ರತ್ಯಕ್ಷವಾಗಿ ಕಾಣುವ ಸೂರ್ಯನ ಆರಾಧನೆ ಋಗ್ ವೇದದ ಕಾಲದಿಂದಲೂ ಚಾಲ್ತಿಯಲ್ಲಿದೆ.

ಆ ದಿನ ಮಹಿಳೆಯರು ಸೂರ್ಯೋದಯದ ಒಳಗೆ ಎದ್ದು ಮನೆಯ ಮುಂದೆ ಸಗಣಿಯಿಂದ ಸಾರಿಸಿ ಅಲ್ಲಿ ರಥದ ಮಧ್ಯ ಸೂರ್ಯನಿರುವ ರಂಗೋಲಿ ಬಿಡಿಸುವುದು ವಿಶೇಷ. ನಂತರ ಮನೆಯವರೆಲ್ಲರೂ ಎಕ್ಕದ ಎಲೆಗಳನ್ನು(ಎಕ್ಕದ ಎಲೆ ಸೂರ್ಯನಿಗೆ ಬಹಳ ಪ್ರೀತಿ) ಭುಜಗಳ ಮೇಲೆ ಇಟ್ಟುಕೊಂಡು ಸ್ನಾನ ಮಾಡಬೇಕು. ನಂತರ ಸೂರ್ಯಮಂತ್ರಗಳನ್ನ ಹೇಳಿ ಸೂರ್ಯನಮಸ್ಕಾರ ಮಾಡಿದಲ್ಲಿ ಸೂರ್ಯನ ಕೃಪೆ ನಮ್ಮ ಮೇಲೆ ಖಂಡಿತ ಬೀಳುವುದು. ರಥಸಪ್ತಮಿಯ ದಿನ ಸೂರ್ಯನಮಸ್ಕಾರ ಯಜ್ಞ ನಡೆಸಿದಲ್ಲಿ ತುಂಬಾ ಶ್ರೇಯಸ್ಕರ. ಎಷ್ಟೋ ಕಡೆಗಳಲ್ಲಿ 108 ಸೂರ್ಯನಮಸ್ಕಾರಗಳನ್ನು ಆಯೋಜಿಸಿರುತ್ತಾರೆ. ಅದನ್ನು ಸೂರ್ಯನಮಸ್ಕಾರ ಯಜ್ಞ ಅಂತಲೂ ಕರೆಯುತ್ತಾರೆ. ಅದರಲ್ಲಿ ಭಾಗವಹಿಸುವ ಜನರು ತಮಗೆ ಸಾಧ್ಯವಾದಷ್ಟು ಸೂರ್ಯನಮಸ್ಕಾರವನ್ನು ಮಾಡಬಹುದಾಗಿರುತ್ತದೆ.

ಸೂರ್ಯನಮಸ್ಕಾರದ ಅಭ್ಯಾಸವು ಮನಸ್ಸು,ದೇಹ ಮತ್ತು ಉಸಿರಾಟದ ವ್ಯವಸ್ಥೆಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.”ಆರೋಗ್ಯಂ ಭಾಸ್ಕರಾಧಿಚ್ಛೇತ್”ಅಂದರೆ ಸೂರ್ಯ ಆರೋಗ್ಯದಾಯಿ, ವೈಜ್ಞಾನಿಕವಾಗಿಯೂ ಇದು ಸಾಬಿತಾಗಿದೆ.ಸೂರ್ಯನ ಕಿರಣಗಳಲ್ಲಿ ವಿಟಾಮಿನ್ ’ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ರೋಗ ನಿವರಣೆಗೆ, ದೇಹದಾರ್ಡ್ಯ ಹಾಗೂ ಒಳ್ಳೆಯ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕು. ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯವರ್ಧನೆಯಾಗುತ್ತದೆ. ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಾಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ದಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬಿತಾಗಿದೆ.

ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಸೂರ್ಯನಮಸ್ಕಾರದಿಂದ ಆಗುವ ಲಾಭಗಳುಯಾವುವೆಂದರೆ:ಮನಸ್ಸಿಗೆ ಶಾಂತಿದೊರೆತು ಉಲ್ಲಾಸಿತವಾಗಿರುತ್ತೆ. ಜೀರ್ಣಕ್ರಿಯೆ ಉತ್ತಮವಾಗುತ್ತೆ. ಮೂಳೆಗಳು ಗಟ್ಟಿಮುಟ್ಟಾಗುತ್ತವೆ. ರಕ್ತಸಂಚಲನೆಯನ್ನು ಅಭಿವೃದ್ದಿಗೊಳಿಸುತ್ತದೆ. ತ್ವಚೆಗೆ ಹೊಳಪು ನೀಡುತ್ತದೆ. ತೂಕ ಇಳಿಸಲು ಸಹಕಾರಿ.

ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ,ಈಜಿಪ್ಟ ಹೀಗೆ ಅನೇಕ ದೇಶಗಳಲ್ಲಿ ಆಚರಿಸುತ್ತಾರೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ.

ರಥಸಪ್ತಮಿಯಂದು ಹಾಲನ್ನು ಉಕ್ಕಿಸಿ ಅದೇ ಹಾಲಿನಿಂದ ಗೋದಿ ಪಾಯಸ ಮಾಡಿ ಸೂರ್ಯನಿಗೆ ನೈವೇದ್ಯ ಮಾಡಿದಲ್ಲಿ ನಮ್ಮ ದಾರಿದ್ರ್ಯ ನಾಶವಾಗುತ್ತೆ ಅನ್ನೊ ಪ್ರತೀತಿ. ಹೊಸ ಕೆಲಸ ಪ್ರಾರಂಭಕ್ಕು ಈ ದಿನ ಒಳ್ಳೆಯದು. 5 ವರ್ಷದೊಳಗಿನ ಮಕ್ಕಳಿಗೆ ರಥ ಸಪ್ತಮಿಯಂದು ಹಣ್ಣು ಎರಿಯುವ ಪದ್ಧತಿ (ವಿವಿಧ ಹಣ್ಣುಗಳನ್ನು ತುಂಡರಿಸಿ,ಮಂಡಕ್ಕಿ,ಬಳಸಿ ಅದರಿಂದ ಮಕ್ಕಳಿಗೆ ಎರಿಯುವುದು) ಕೆಲವು
ಸಂಪ್ರದಾಯದಲ್ಲಿದೆ. ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದಿಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವೆ??

ರಥಸಪ್ತಮಿಯ ದಿನ ಸ್ನಾನ ಮಾಡುವಾಗ ಹೇಳಬೇಕಾದ ಶ್ಲೋಕ:

ಯದ್ಯತ್ ಜನ್ಮ ಕೃತಂ ಪಾಪಂ
ಮಯಾ ಸಪ್ತಸು ಜನ್ಮಸು
ತನ್ಮೇ ರೋಗಂ ಚ ಶೋಕಂ ಚ
ಮಾಕರೀ ಹಂತು ಸಪ್ತಮೀ

ಏತತ್ ಜನ್ಮ ಕೃತಂ ಪಾಪಂ
ಯಚ್ಚ ಜನ್ಮಾಂತರಾರ್ಜಿತಂ
ಮನೋ ವಾಕ್ ಕಾಯಜಂ ಯಚ್ಚ
ಜ್ಞಾತಾ ಜ್ಞಾತೇಚ ಯೇ ಪುನಃ

ಇತಿ ಸಪ್ತವಿಧಂ ಪಾಪಂ
ಸ್ನಾನಾನ್ಮೇ ಸಪ್ತ ಸಪ್ತಿಕೇ
ಸಪ್ತವ್ಯಾಧಿ ಸಮಾಯುಕ್ತಂ
ಹರಮಾಕರಿ ಸಪ್ತಮಿ

ಸಪ್ತ ಸಪ್ತ ಮಹಾಸಪ್ತ
ಸಪ್ತದ್ವೀಪಾ ವಸುಂಧರಾ
ಸಪ್ತಾರ್ಕ ಪರ್ಣಮಾದಾಯ
ಸಪ್ತಮೀ ರಥಸಪ್ತಮೀ

  • email
  • facebook
  • twitter
  • google+
  • WhatsApp
Tags: rathasaptamisuryanamaskar

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಭಾರತವನ್ನು ಪುನರ್ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಲು ಧರಂಪಾಲರನ್ನು ಓದಿಕೊಳ್ಳಬೇಕು : ಆರೆಸ್ಸೆಸ್ ಸಹ ಸರಕಾರ್ಯವಾಹ ಸುರೇಶ ಸೋನಿ

ಭಾರತವನ್ನು ಪುನರ್ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಲು ಧರಂಪಾಲರನ್ನು ಓದಿಕೊಳ್ಳಬೇಕು : ಆರೆಸ್ಸೆಸ್ ಸಹ ಸರಕಾರ್ಯವಾಹ ಸುರೇಶ ಸೋನಿ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

Day-523: Bharat Parikrama enters Himachal Pradesh; after successful Kashmir Visit of 32days

Day-523: Bharat Parikrama enters Himachal Pradesh; after successful Kashmir Visit of 32days

January 13, 2014
SAMARTHA BHARATA concludes; RSS Sahsarakaryavah Dattaji calls to participate in the activities of RSS

SAMARTHA BHARATA concludes; RSS Sahsarakaryavah Dattaji calls to participate in the activities of RSS

August 25, 2014
Sept 1: Intellectual Seminar on ‘The New Age Contradictions’ in Bangalore ‘ಹೊಸ ಕಾಲದ ವೈರುಧ್ಯಗಳು’

Sept 1: Intellectual Seminar on ‘The New Age Contradictions’ in Bangalore ‘ಹೊಸ ಕಾಲದ ವೈರುಧ್ಯಗಳು’

August 27, 2013
Jagruta Hindu Sangama at BC Road ‘ಜಾಗೃತ ಹಿಂದೂ ಸಂಗಮ’ – ಕೇಸರಿಮಯವಾದ ಬಿ ಸಿ ರೋಡು.

Jagruta Hindu Sangama at BC Road ‘ಜಾಗೃತ ಹಿಂದೂ ಸಂಗಮ’ – ಕೇಸರಿಮಯವಾದ ಬಿ ಸಿ ರೋಡು.

November 9, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In