• Samvada
  • Videos
  • Categories
  • Events
  • About Us
  • Contact Us
Sunday, February 5, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ

Vishwa Samvada Kendra by Vishwa Samvada Kendra
January 31, 2021
in Articles
253
0
ರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ
497
SHARES
1.4k
VIEWS
Share on FacebookShare on Twitter

ರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ
– ಡಾ. ಹ ವೆಂ ಕಾಖಂಡಿಕಿ, ಕನ್ನಡ-ಸಂಸ್ಕೃತಿ ಪರಿಚಾರಕರು

(ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನದ ನಿಮಿತ್ತ ಈ ವಿಶೇಷ ಲೇಖನ)

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

“ವಿಶ್ವಮಾತೆಯ ಗರ್ಭಕಮಲಜಾತ – ಪರಾಗ
ಪರಮಾಣು ಕೀರ್ತಿ ನಾನು!
ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು!”

“ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ! ನಿನಗೆ!
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ”

“ಒಂದೇ ಒಂದೇ ಒಂದೇ ಕರ್ನಾಟಕ ಒಂದೇ……
………………………….
………………..”
ಹೀಗೆನ್ನದ ಹೆರವರು ಅವರಿದ್ದರು ಒಂದೇ
ಇರದಿದ್ದರು ಒಂದೇ “

ಇಂತಹ ೧೪೫೦ಕ್ಕೂ ಹೆಚ್ಚು ಅಮರ ಕವಿತೆಗಳನ್ನು ಕನ್ನಡಕ್ಕೆ ಕೊಟ್ಟ ‘ಸಾವಿರದ ಕವಿ’, ‘ಶಬ್ದ ಗಾರುಡಿಗ’, ‘ವರಕವಿ’ ಅಂಬಿಕಾತನಯದತ್ತ ( ದತ್ತಾತ್ರೇಯ ರಾಮಚಂದ್ರ ಬೇಂದ್ರೆ) ೧೮೯೬ ಜನವರಿ ೩೧ (ಮಾಘ ವದ್ಯ ಪ್ರತಿಪದೆ, ಮನ್ಮಥ ನಾಮ ಸಂವತ್ಸರ) ರಂದು ಧಾರವಾಡದ ಪೋತ್ನಿಸ್ ಗಲ್ಲಿಯ ಗುಣಾರಿಯವರ ಮನೆಯಲ್ಲಿ ಜನಿಸಿದರು.
ಇವರ ಕೈಯಲ್ಲಿ ಆಡದ ವಿಷಯವೇ ಇರಲಿಲ್ಲ. ಜನ್ಮ ಜನ್ಮಾಂತರದ ಸಂಸ್ಕಾರ, ಸಂಸ್ಕೃತಿ, ಮಡುಗಟ್ಟಿ ಮತ್ತೆ ಅವರಲ್ಲಿ ಬಂದಿತ್ತೇನೋ ಎನ್ನುವಷ್ಟು ಪ್ರಖರವಾಗಿ ಬೆಳೆದು ಕನ್ನಡ ಭಾಷೆ, ಸಂಸ್ಕೃತಿಗೆ ಹಿರಿದಾದ ಕಾಣಿಕೆ ನೀಡಿದರು.

ಅವರ ಒಂದೊಂದು ಕವನವೂ ಓದಿದಷ್ಟು ಹೊಸ ಹೊಸ ಅರ್ಥವನ್ನು ಹೊರ ಹಾಕುತ್ತಲೇ ಇರುತ್ತವೆ.

ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಧಾರವಾಡದ ವಿಕ್ಟೋರಿಯಾ ( ಇಂದಿನ ವಿದ್ಯಾರಣ್ಯ ಶಾಲೆ ) ಶಾಲೆಯಲ್ಲಿ ಅವರು ಓದಿದರು. ಮುಂದಿನ ದಿನಗಳಲ್ಲಿ ಅವರು ಅದೇ ಶಾಲೆಯಲ್ಲಿ ಶಿಕ್ಷಕರೂ ಆಗಿದ್ದರು. ಕಾಲೇಜು ಶಿಕ್ಷಣ ಪುಣೆಯಲ್ಲಿ, ಎಮ್ ಎ ಪದವಿಯನ್ನು ಮುಂಬಯಿ ವಿಶ್ವವಿದ್ಯಾಲಯದಿಂದ ಪಡೆದರು. ಗದುಗಿನಲ್ಲಿ ಕೂಡಾ ಕೆಲ ಕಾಲ ಶಿಕ್ಷಕರಾಗಿದ್ದರು. ಅವರ ‘ನರಬಲಿ’ ಕವಿತೆ ಬ್ರಿಟಿಷ್‌ ಆಡಳಿತದ ಕೆಂಗಣ್ಣಿಗೆ ಗುರಿಯಾಯಿತು. ಬ್ರಿಟಿಷ್ ಸರ್ಕಾರ ಈ ಕವನ ತಮ್ಮ ವಿರುದ್ಧ ಬರೆದದ್ದು ಎಂದು ತೀರ್ಮಾನಿಸಿ ಅವರಿಗೆ ಜೇಲುವಾಸ ಶಿಕ್ಷೆ ನೀಡಿ ಬೆಳಗಾವಿ ಹಿಂಡಲಗಾ ಜೇಲಿಗೆ ಕಳಿಸಿತು. ನಂತರದಲ್ಲಿ ಧಾರವಾಡ ಹತ್ತಿರದ ಗ್ರಾಮ ಮುಗದದಲ್ಲಿ ಸ್ಥಾನ ಬದ್ಧತೆ ಶಿಕ್ಷೆ ಅಡಿ ಒಂದು ಮನೆಯಲ್ಲಿ ಇಟ್ಟಿತು. ಮಹತ್ವದ ವಿಷಯವೆಂದರೆ ಈ ಯಾವ ಸಂಗತಿಗಳೂ ಅವರ ಒಳ ಅಂತಃಶಕ್ತಿಯನ್ನು ಕುಂದಿಸಲಿಲ್ಲ. ಎಲ್ಲಾ ‘ಅವನಿಚ್ಛೆ’ ಎಂದು ದೃಢವಾಗಿ ನಂಬಿದ್ದ ಕವಿ ಬರೀ ಬದುಕಲಿಲ್ಲ, ಬಾಳಿದರು.

ದ ರಾ ಬೇಂದ್ರೆ, 1896 – 1981

ಧಾರವಾಡ, ಹುಬ್ಬಳ್ಳಿ, ಗದಗ, ಪುಣೆ ಮೊದಲಾದ ಕಡೆ ಶಿಕ್ಷಕರಾಗಿ ಕೆಲಸ ಮಾಡಿದರಾದರೂ ಕರ್ನಾಟಕದಲ್ಲಿ ಕಾಯಮ್ ಉದ್ಯೋಗ ಅವರಿಗೆ ಸಿಗಲೇ ಇಲ್ಲ. ನಿಜಕ್ಕೂ ಇದೊಂದು ಸೋಜಿಗದ ಸಂಗತಿ. ಹನ್ನೆರಡು ವರ್ಷಗಳ ಕಾಲ ಸೊಲ್ಲಾಪುರ ಡಿ ಎ ವ್ಹಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ೧೯೫೬ರಲ್ಲಿ ನಿವೃತ್ತಿ ಹೊಂದಿದರು. ಆಗ ಅವರಿಗೆ ಅರವತ್ತು ವರ್ಷ.

ಮುಂದಿನ ಹತ್ತು ವರ್ಷಗಳ ಕಾಲ ಅಂದರೆ ೧೯೫೬ ರಿಂದ ೧೯೬೬ ರ ವರೆಗೆ ಧಾರವಾಡ ಆಕಾಶವಾಣಿ ಕೇಂದ್ರದ ಸಾಹಿತ್ಯ ಸಲಹಾಗಾರರಾಗಿ ಸೇವೆ ಸಲ್ಲಿಸಿದರು. ಈ ವೇಳೆಯಲ್ಲಿ ಧಾರವಾಡ ಆಕಾಶವಾಣಿ ಕೇಂದ್ರ ಅತ್ಯುತ್ತಮವಾದ ಕಾರ್ಯಗಳನ್ನು ನೀಡಿ ದೇಶದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು.

೧೯೧೮ ರಲ್ಲಿ ಅವರ ಮೊದಲ ಕವಿತೆ ‘ತುತ್ತೂರಿ’ ಪ್ರಭಾತ ಪತ್ರಿಕೆಯಲ್ಲಿ ಪ್ರಕಟವಾಯಿತು.
ಮುಂದಿನ ೬೩ ವರ್ಷಗಳ ಕಾಲ ಎಡಬಿಡದೆ ಸಾಹಿತ್ಯ ಸಾಗರವನ್ನೇ ಕನ್ನಡಿಗರಿಗೆ ನೀಡಿದರು.
ಅವರು ಬದುಕಿದ್ದ ಕಾಲದಲ್ಲಿ ೨೬ ಕವನ ಸಂಕಲನಗಳು ಪ್ರಕಟವಾಗಿವೆ. ಮರಣೋತ್ತರ ಹತ್ತು ಕವನ ಸಂಕಲನಗಳು ಹೊರ ಬಂದವು. ೨೦೦೩ ರಲ್ಲಿ ಅವರ ಸಮಗ್ರ ಕವಿತೆಗಳನ್ನು ಭಾಷ್ಯ, ವಿವರ, ಕೃತಿ ಸೂಚಿ ಸಹಿತ “ಔದುಂಬರ ಗಾಥೆ” ಎನ್ನುವ ಮಹಾಕಾವ್ಯವನ್ನೇ ಕರ್ನಾಟಕಕ್ಕೆ ಬೇಂದ್ರೆ ಅವರ ಮಗ ಡಾ.ವಾಮನ ಬೇಂದ್ರೆ ನೀಡಿದರು. ಡಾ.ಕೆ ಎಸ್ ಶರ್ಮಾ ಪ್ರಕಟಿಸಲು ಸಹಕರಿಸಿದರು ಇದಲ್ಲದೆ ಹದಿನಾಲ್ಕು ನಾಟಕಗಳು, ಕಥೆಗಳು, ಪ್ರಬಂಧಗಳು, ವಿಮರ್ಶೆ, ಭಾಷಣಗಳು, ಬರಹಗಳು ಹೀಗೆ ಎಲ್ಲವನ್ನೂ ಒಂದೆಡೆ ಸೇರಿಸಿ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ನೀಡಿ ಮಹದುಪಕಾರ ಮಾಡಿದ್ದಾರೆ ವಾಮನ ಬೇಂದ್ರೆಯವರು.

ಬೇಂದ್ರೆ ಅವರ ಗೇಯ ಗೀತೆಗಳನ್ನು ಅನೇಕ ಗಾಯಕರು ಹಾಡಿ ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ. ರಂಗಭೂಮಿ ಕಲಾವಿದರು ಅವರ ಎಲ್ಲಾ ನಾಟಕಗಳನ್ನು ರಂಗದ ಮೇಲೆ ಪ್ರದರ್ಶಿಸಿದ್ದಾರೆ. ಅವರ ಮೇಲೆ ಹತ್ತಾರು ಸಂಶೋಧನಾ ಪ್ರಬಂಧಗಳು ಹೊರ ಬಂದಿವೆ. ಹತ್ತಾರು ವಿಮರ್ಶಾ ಕೃತಿಗಳು ಸಹ ಹೊರ ಬಂದಿವೆ.

ಪದ್ಮಶ್ರೀ ಪ್ರಶಸ್ತಿ, ವಿಶ್ವವಿದ್ಯಾಲಯ ಡಾಕ್ಟರೇಟ್, ನೂರಾರು ಸ್ಥಳಗಳಲ್ಲಿ ಮಾನ ಸನ್ಮಾನಗಳು ಅವರು ಬದುಕಿದ್ದಾಗ ದೊರಕಿದವು. ಅದರಿಂದ ಅವರು ಉಬ್ಬಲಿಲ್ಲ. ದೊರಕದಿದ್ದರೂ ಕೊರಗುತ್ತಿರಲಿಲ್ಲ. ಸ್ವಾಭಿಮಾನಿ ಕವಿ ಅವರಾಗಿದ್ದರು. ವೇದ, ಉಪನಿಷತ್ತು, ಎಲ್ಲಾ ಧರ್ಮಗ್ರಂಥಗಳು, ವಿಜ್ಞಾನ, ಸಂಖ್ಯಾಶಾಸ್ತ್ರ, ಖಗೋಳ, ಭೂಗೋಳ, ಜ್ಯೋತಿಷ್ಯ, ಹೀಗೆ ಎಲ್ಲಾ ಆಯಾಮಗಳನ್ನು ಅಭ್ಯಾಸ ಮಾಡಿದ್ದ ಅವರು ಅವುಗಳ ಕುರಿತು ಗಂಟೆಗಳ ಕಾಲ ಮಾತನಾಡಬಲ್ಲವರಾಗಿದ್ದರು. ಅನ್ಯಾಯ, ಭ್ರಷ್ಟಾಚಾರ, ಇತ್ಯಾದಿ ವಿಷಯಗಳನ್ನು ಖಂಡಿಸುತ್ತಿದ್ದರು. ಒಳ್ಳೆಯದನ್ನು ಬೆಂಬಲಿಸುತ್ತಿದ್ದರು. ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಕೃತಿಗಳಿಗೆ ಮುನ್ನುಡಿ ಬರೆದು ಹುರುಪು ತುಂಬುತ್ತಿದ್ದರು.

ಇಂತಹ ರಸ ಋಷಿ ದ ರಾ ಬೇಂದ್ರೆ ೧೯೮೧ ಅಕ್ಟೋಬರ್ ೨೬ {ಅಶ್ವಿನ್ ವದ್ಯ ಚತುರ್ದಶಿ) ದೀಪಾವಳಿ ನರಕ ಚತುರ್ದಶಿಯಂದು ನಮ್ಮನ್ನು ಅಗಲಿದರು. ಇಂತಹ ಮಹಾನ್ ಚೇತನಕ್ಕೆ ನಮೋ ನಮಃ.

  • email
  • facebook
  • twitter
  • google+
  • WhatsApp
Tags: AmbikatanayadattaDa ra bendre

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಪೇಜಾವರ ಶ್ರೀಗಳಿಂದ ಬಳ್ಳಾರಿಯ ಹರಿಶ್ಚಂದ್ರ ಸೇವಾಬಸ್ತಿಯಲ್ಲಿ ಪಾದಯಾತ್ರೆ

ಪೇಜಾವರ ಶ್ರೀಗಳಿಂದ ಬಳ್ಳಾರಿಯ ಹರಿಶ್ಚಂದ್ರ ಸೇವಾಬಸ್ತಿಯಲ್ಲಿ ಪಾದಯಾತ್ರೆ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Full text of RSS Senior Functionary Ram Madhav’s speech on North-East Crisis issue at Bangalore

Full text of RSS Senior Functionary Ram Madhav’s speech on North-East Crisis issue at Bangalore

September 8, 2012
ರಾಷ್ಟ್ರ ಸೇವಿಕಾ ಸಮಿತಿ ವಿಜಯದಶಮಿ ಉತ್ಸವ, ಪಥಸಂಚಲನ: ಮಾತೆಯರಿಗೆ ಸ೦ಸ್ಕಾರ, ಪ್ರೇರಣೆ ದೊರೆತಾಗ ರಾಷ್ಟ್ರ ಭಕ್ತಿ ಸ೦ತತಿ ನಿರ್ಮಾಣವಾಗುತ್ತದೆ

ರಾಷ್ಟ್ರ ಸೇವಿಕಾ ಸಮಿತಿ ವಿಜಯದಶಮಿ ಉತ್ಸವ, ಪಥಸಂಚಲನ: ಮಾತೆಯರಿಗೆ ಸ೦ಸ್ಕಾರ, ಪ್ರೇರಣೆ ದೊರೆತಾಗ ರಾಷ್ಟ್ರ ಭಕ್ತಿ ಸ೦ತತಿ ನಿರ್ಮಾಣವಾಗುತ್ತದೆ

November 5, 2018
Overwhelming support for ‘Youth Against Corruption’ 3 days Mahadharnas

Overwhelming support for ‘Youth Against Corruption’ 3 days Mahadharnas

December 2, 2011
Assam Burning – Does this not signal a larger problem in the near future?

Assam Burning – Does this not signal a larger problem in the near future?

December 9, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In