• Samvada
  • Videos
  • Categories
  • Events
  • About Us
  • Contact Us
Sunday, June 4, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ರಾಷ್ಟ್ರಕ್ಕಾಗಿ ಮೊರೆಯಿಡುವ ಸಂತನುದಿಸಿದ ದಿನ : “ರಾಕ್ ಡೇ!”

Vishwa Samvada Kendra by Vishwa Samvada Kendra
December 25, 2021
in Articles
250
0
ರಾಷ್ಟ್ರಕ್ಕಾಗಿ ಮೊರೆಯಿಡುವ ಸಂತನುದಿಸಿದ ದಿನ : “ರಾಕ್ ಡೇ!”
492
SHARES
1.4k
VIEWS
Share on FacebookShare on Twitter

“ನನಗಿಂದು ತಿಳಿಯಿತು ನನ್ನ ಜನ್ಮೋದ್ದೇಶ ! ಪಶ್ಚಿಮ ದೇಶಗಳಿಗೆ ಹೋಗುವೆನು. ಅಲ್ಲಿ ಭೋಗವಾದಿಗಳ ಹೃದಯದಲ್ಲಿ ಸನಾತನ ವೇದಧರ್ಮದ ಉಪನಿಷತ್ ಪ್ರಖರಜ್ಯೋತಿಯನ್ನು ಬೀರುವೆನು. ಅವರು ಭಾರತಾಂಬೆಗೆ ತಲೆಬಾಗಿ ಆಕೆಗೆ ನೆರವಾಗುವಂತೆ ಮಾಡುವೆನು. ಆಕೆಯ ದುರ್ಗತಿಯನ್ನು ಪರಿಹರಿಸಲೆಳಸುವೆನು. ಭಾವಸಮಾಧಿ ಅಲ್ಲಿರಲಿ ! ನಿರ್ವಿಕಲ್ಪ ಸಮಾಧಿ ಸದ್ಯಕ್ಕೆ ಒತ್ತಟ್ಟಿಗಿರಲಿ ! ನನ್ನಾತ್ಮಮುಕ್ತಿ ಸದ್ಯಕ್ಕೆ ಮುಕ್ತಾಯವಾಗಿರಲಿ! ನಿಜವಾದ ಧರ್ಮವನ್ನು ಜಗತ್ತಿಗೆ ಬೋಧಿಸುವೆನು. ಜಗತ್ತನ್ನು ಎಚ್ಚರಿಸುವೆನು. ಭರತಖಂಡವನ್ನು ಮೇಲೆತ್ತುವೆನು. ಹೇ ಜನನಿ, ಪುಣ್ಯಭೂಮಿ, ಆರ್ಯಮಾತೆ, ವೇದಪೂಜಿತೆ, ನನ್ನನ್ನು ಆಶೀರ್ವದಿಸು ! ಹೇ ಗುರುದೇವ, ಕೃಪಾಕರ, ನನಗೆ ಶಕ್ತಿಯನ್ನು ನೀಡು!” ಹೀಗೆಂದು ರಾಷ್ಟ್ರೊದ್ದಾರಕ್ಕಾಗಿ ಟೊಂಕಕಟ್ಟಿ ನಿಂತ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ಜನ್ಮೋದ್ದೇಶವನ್ನು ಅರಿತದ್ದು ಕನ್ಯಾಕುಮಾರಿಯ ಬಂಡೆಯ ಮೇಲೆ ಹಾಗೂ ಈ ಮಾತನ್ನು ಆಡಿದ್ದೂ ಅಲ್ಲಿಯೇ..!


ಅದು ಮಾಗಿಯ ದಿನಗಳ ಉಷಃಕಾಲ. ಸಮಸ್ತ ಹಿಂದೂಗಳಿಗೆ ಪವಿತ್ರ ಕ್ಷೇತ್ರವೆನಿಸಿದ, ಭರತಭೂಮಿಯ ತುತ್ತತುದಿ ಪುರಾಣ ಪ್ರಸಿದ್ಧ ಕನ್ಯಾಕುಮಾರಿಗೆ ಸ್ವಾಮಿ ವಿವೇಕಾನಂದರು ತಿರುವನಂತಪುರದಿಂದ ನಾಗರಕೋಯಿಲ್ ಮಾರ್ಗವಾಗಿ ಆಗಮಿಸಿದ್ದರು. ಯಾವ ಜಗನ್ಮಾತೆಯ ಕಾರ್ಯಕ್ಕೆ ಸ್ವಾಮಿಜಿ ಹೊರಟಿದ್ದರೋ ಅದೇ ದಕ್ಷಿಣೇಶ್ವರದ ಭವತಾರಿಣಿ, ಕಾಳಿಘಾಟಿನ ಕಾಳಿ ಇಲ್ಲಿ ಕನ್ನಿಕಾಪರಮೇಶ್ವರಿಯಾಗಿ- ಕನ್ಯಾಕುಮಾರಿಯಾಗಿ ವಿರಾಜಿಸುತ್ತಿದ್ದಾಳೆ. ಇಂತಹ ತೀರ್ಥಕ್ಷೇತ್ರಕ್ಕೆ ಬಂದ ಸ್ವಾಮಿಜಿ ನೇರವಾಗಿ ತಾಯ ಬಳಿಗೋಡುವ ಶಿಶುವಿನಂತೆ ಕಾತರರಾಗಿ ಮಹಾಮಾತೆಯ ದರ್ಶನಕ್ಕೆ ಧಾವಂತದಿಂದ ಮಂದಿರ ಪ್ರವೇಶಿಸಿದರು. ದೇವಿಯೆದುರು ದೀರ್ಘದಂಡ ನಮಸ್ಕಾರ ಸಮರ್ಪಿಸಿ ಭಾವಪರವಶರಾದರು. ಅವರ ಹೃದಯದಿಂದ ಪ್ರಾರ್ಥನೆಯೊಂದು ತಾನೇ ತಾನಾಗಿ ಹೊರಹೊಮ್ಮಿತು: “ಹೇ ಜಗನ್ಮಾತೆ, ನನಗೆ ಸ್ವರ್ಗ ಬೇಡ, ಮುಕ್ತಿ ಬೇಡ. ನನ್ನ ಭಾರತದ ಕೋಟಿಕೋಟಿ ದೀನ-ದಲಿತ-ದರಿದ್ರರನ್ನು ಮೇಲೆತ್ತುವ ಸನ್ಮಾರ್ಗದೋರು!”ಎಂದು. ಆಹಾ..‌! ಅದೆಂಥ ಪಾರ್ಥನೆ? ಸ್ವಾರ್ಥಕ್ಕಾಗಿಯೇ ದೇವರ ಬಳಿ ಮೊರೆಯಿಡುವ ಪ್ರಾಪಂಚಿಕರ ನಡುವೆ ತರುಣ ಸಂನ್ಯಾಸಿಯೊಬ್ಬ ಮಾತೃಭೂಮಿಯ ಮುಕ್ತಿಗಾಗಿ ಮೊರೆಯಿಡುತ್ತಿದ್ದಾನೆಂದರೆ ಆತನ ಹೃದಯ ವೈಶಾಲ್ಯತೆ ಹೇಗಿರಬೇಕು? ರಾಷ್ಟ್ರಕ್ಕಾಗಿ ಅಂತಃಕರಣ ಹೇಗೆ ತುಡಿಯುತ್ತಿದ್ದಿರಬೇಕು? ಆಲೋಚಿಸಿ.
ಧ್ಯಾನಾರೂಢನಾಗಿ ಮಾತೆಯೆದುರು ಮೊರೆಯಿಡುತ್ತ ನಿಂತಿದ್ದ ಯೋಗಿಗೆ ಒಮ್ಮೆಲೆ ಮೈತಿಳಿದೆದ್ದು ಏರೆತ್ತರದ ಅಲೆಗಳನೆಬ್ಬಿಸುತ್ತಾ ಭೋರ್ಗರೆಯುತ್ತಿದ್ದ ಸಮುದ್ರದತ್ತ ದಿಟ್ಟಿಸಲಾರಂಭಿಸಿದ. ಕ್ಷಣಮಾತ್ರದಲ್ಲಿ ಕಡಲೆಡೆಗೆ ಧಾವಿಸಿ ಅಲ್ಲಿರುವ ಅಂಬಿಗರಿಗೆ ಅನತಿ ದೂರದಲಿ ಕಾಣುವ ಬಂಡೆಯೆಡೆಗೆ ಕರೆದೊಯ್ಯಲು ಭಿನ್ನವಿಸಿಕೊಂಡ, ಆದರೆ ಅವರೋ ದುಡ್ಡಿಗಾಗಿ ದುಡಿಯುವ ಜನ, ನಿತ್ಯದ ಮಾಮೂಲಿ ಶುಲ್ಕ ಕೇಳಿದರು! ಈ ಸಂನ್ಯಾಸಿಯ ಬಳಿಯೋ ಭರಿಸಲು ಬಿಡಿಗಾಸೂ ಇರಲಿಲ್ಲ. ತಡಮಾಡದೆ ಮೊರೆವ ಕಡಲಿಗೆ ಧುಮುಕಿಯೇ ಬಿಟ್ಟರು! ಸಮುದ್ರವೋ ಅಳತೆಗೆ ನಿಲುಕದ ಆಳ, ದಡದೆಡೆಗೆ ತಳ್ಳುವ ಅಲೆಗಳು, ಭಯಂಕರ ಜಲಚರಗಳು, ಒಮ್ಮೆ ಮುಳುಗಿದರೆ ಹುಡುಕಿದರೂ ಸಿಗದಷ್ಟು ಕ್ರೌರ್ಯಭರಿತ ಸದ್ದು! ಅಬ್ಬಾ ಅಂತಹ ಸಾಗರದಲಿ ತೆರೆಗಳ ಸೀಳಿಕೊಂಡು ಎರಡು ಫರ್ಲಾಂಗ್ ದೂರದಲ್ಲಿದ್ದ ಬಂಡೆಯ ಮೇಲೆ ಶಿಲಾರೋಹಣಗೈದು ಸ್ಥಾಪಿತವಾದರು ಸ್ವಾಮಿಜಿ. ಅಕ್ಕ-ಪಕ್ಕದಲ್ಲಿ ಗಾಳ ಹಾಕಿಕೊಂಡಿದ್ದ ಮೀನುಗಾರರು, ಸಮುದ್ರ ಸ್ನಾನಕ್ಕೆಂದು ಬಂದಿದ್ದ ಚಾರಣಿಗರು, ದೇವಾಲಯದ ಅರ್ಚಕರು, ದೋಣಿಯಲ್ಲಿ ಸಾಗಿದ್ದ ಬೆಸ್ತರೆಲ್ಲಾ ಈ ಮಾನವಕೇಸರಿಯ ಗುಂಡಿಗೆಯ ಧೈರ್ಯ ನೋಡಿ ಒಂದುಕ್ಷಣ ಬೆಕ್ಕಸ ಬೆರಗಾಗಿದ್ದರು. 

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!


ಭಕ್ತಪ್ರೀಯ ಶಿವನ ಒಲಿಸಿಕೊಳ್ಳಲು ಕನ್ಯಾಕುಮಾರಿ ದೇವಿ ಧ್ಯಾನಗೈದ ‘ಶ್ರೀಪಾದ ಶಿಲೆ’ಯ ಮೇಲೆ ಶಾಕ್ತರ ನಂಬಿಕೆಯಂತೆ ತಪಸ್ಸನ್ನಾಚರಿಸಲು ಸೂಕ್ತಸ್ಥಳವೆಂದು ಭಾವಿಸಿದ್ದ ವಿವೇಕಾನಂದರು ಅಲ್ಲಿಯೇ ಪದ್ಮಾಸನದಲ್ಲಿ ಕುಳಿತರು. ಇದೀಗ ಅವರ ಮನದಲ್ಲಿ ಹೊಯ್ದಾಡುತ್ತಿದ್ದ ಭಾವತರಂಗಗಳು ಭುಗಿಲೇಳಲಾರಂಭಿಸಿದವು, ಸ್ವಾಮಿಜಿ ಗಾಢ ಧ್ಯಾನದಲಿ ಮುಳುಗಿಬಿಟ್ಟರು. ಹಾಗಿದ್ದರೆ ಅವರ ಧ್ಯಾನದ ವಸ್ತು ಯಾವುದಿದ್ದೀತು ಹೇಳಿ? ನಾವಾಗಿದ್ದರೋ ಪ್ರೀತಿಸುವ ಹುಡುಗಿ, ಮೋಹಿಸುವ ಕುಟುಂಬ, ಆಶಿಸುವ ಸಂಬಂಧವಾಗಿರುತ್ತಿತ್ತು. ಆದರೆ ಸ್ವಾಮಿಜಿಗೆ ಧ್ಯಾನದ ವಸ್ತು ಸಾಕ್ಷಾತ್ “ಭಾರತ!”ವೇ ಆಗಿತ್ತು. ಸ್ವಾಮಿಜಿ ಭಾರತದ ಭೂತ-ವರ್ತಮಾನ-ಭವಿಷದ್ಗಳ ದೀರ್ಘಾಲೋಚನೆಯಲ್ಲಿ ಮುಳುಗಿದರು. ಭವ್ಯ ಭಾರತ ವೈಭವದ ಅಧಃಪತನಕ್ಕೆ ಕಾರಣವೇನು? ಭಾರತದ ಈ ದಾರಿದ್ಯಕ್ಕೆ ಕಾರಣರಾರು? ಎಂಬಿತ್ಯಾದಿ ವಿಚಾರಗಳ ಕುರಿತಾಗಿ ಸುದೀರ್ಘ ಚಿಂತನೆಯಲ್ಲಿ ಮುಳುಗಿದರು. ಭಾರತದ ಸ್ಥಿತಿ ನೆನೆದು ಕಣ್ಣೀರಿಟ್ಟರು; ಒಮ್ಮೊಮ್ಮೆ ಚಿಂತೆಗಳ ಭರದಲ್ಲಿ ಏದುಸಿರು ಬಿಟ್ಟರು; ಮತ್ತೊಮ್ಮೊಮ್ಮೆ “ಹೇ ಜನನಿ, ಹೇ ಭಾರತಮಾತೆ, ಹೇ ನನ್ನ ಜನನಿ, ಹೇ ನನ್ನ ಭಾರತ ಮಾತೆ” ಎಂದು ಉದ್ಘೋಷಿಸಿ ಅಶ್ರುತರ್ಪಣಗೈದರು! ಮೂರುದಿನಗಳ ಕಾಲ ನಿರಂತರ ಧ್ಯಾನದಲ್ಲಿ ಮುಳುಗಿದ ವೀರ ಸಂನ್ಯಾಸಿ ನೈಜ ಭಾರತದ ಸಾಕ್ಷಾತ್ಕಾರ ಮಾಡಿಕೊಂಡರು. ತನ್ನ ಬದುಕಿನ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಿಕೊಂಡರು. ಧರ್ಮವೇ ಸಮಸ್ತ ಭಾರತದ ಜೀವನಾಡಿ; ಅತ್ಯುನ್ನತ ಆಧ್ಯಾತ್ಮಿಕ ಪುನರ್ಜಾಗೃತಿಯಿಂದ ಮಾತ್ರ ಭಾರತ ಮತ್ತೆ ಮೇಲೇಳಲು ಸಾಧ್ಯ ಎಂಬುದನ್ನು ಕಂಡುಕೊಂಡರು. ಭಾರತದ ಅವನತಿಗೆ ಕಾರಣ ಧರ್ಮವಲ್ಲ; ಬದಲಾಗಿ ಧರ್ಮ ಅನುಷ್ಠಾನದಲ್ಲಿ ಬಾರದಿರುವುದು – ಬಾಳಿನೊಂದಿಗೆ ಬೆರೆತಾಗ ಬೃಹದದ ಪರಿಣಾಮ ಉಂಟು ಮಾಡುವ ಮಹಾಶಕ್ತಿ ಧರ್ಮ ಎಂಬ ಸ್ಪಷ್ಟದರ್ಶನ ಅವರಿಗಾಯ್ತು. ಸಮಸ್ತ ಭಾರತದ ಚಿತ್ರಣವೊಮ್ಮೆ ಕಣ್ಮುಂದೆ ಹಾದುಹೋಯ್ತು! ಜನಸಾಮಾನ್ಯರ ಸಂಕಟಗಳಿಗೆ, ನೋವುಗಳಿಗೆ, ಆಕ್ರಂದನಕ್ಕೆ, ಅವನತಿ ಹಾಗೂ ತುಳಿತಕ್ಕೆ ಪರಿಹಾರ ತ್ಯಾಗ ಮತ್ತು ಸೇವೆ ಎಂಬ ಮಹದಾದರ್ಶಗಳೆಂದರಿತರು ಸ್ವಾಮಿಜಿ.


ಹಸಿದ ಹೊಟ್ಟೆಗೆ ಧರ್ಮ ಬೋಧನೆ ಯೋಗ್ಯವಲ್ಲ! ಮೃಗಗಳಂತೆ ವಾಸಿಸುತ್ತಿರುವ ಬಡಜನರಿಗೆ ಹಾಗೂ ಹಳ್ಳಿಯ ಜನರಿಗೆ ನಾವು ಸಂನ್ಯಾಸಿಗಳು ನಿಸ್ವಾರ್ಥದಿಂದ ವಿದ್ಯಾಭಾಸ ನೀಡುತ್ತಾ, ಚಂಡಾಲರಿಂದ ಮೊದಲ್ಗೊಂಡು ಪ್ರತಿಯೊಬ್ಬನ ಒಳ್ಳೆಯ ಮಾರ್ಗವನ್ನು ಹುಡುಕಬೇಕು; ನಮ್ಮ ದೇಶದ ಬಡವರೆಲ್ಲ ಶಾಲೆಗೆ ಹೋಗಲಾರದಷ್ಟು ದರಿದ್ರರು. ಕಾವ್ಯ, ಸಾಹಿತ್ಯ ಓದುವುದರಿಂದ ಅವರಿಗೇನೂ ಪ್ರಯೋಜನವಿಲ್ಲ ಅವರಿಗೆ ಮೂಲಭೂತ ಶಿಕ್ಷಣ ಕೊಡುವುದು ಅಗತ್ಯ. ಭಾರತದ ಎಲ್ಲ ದುರವಸ್ಥೆಗೆ ಕಾರಣ ತನ್ನತನವನ್ನು ಕಳೆದುಕೊಂಡಿರುವುದು; ದೋಷವಿರುವುದು ಧರ್ಮದಲ್ಲಲ್ಲ, ಜನರಲ್ಲಿ! ಇದನ್ನು ಸರಿಪಡಿಸಬೇಕಿದೆ. ಆದರೆ ನಾನೋ ಒಬ್ಬ ಬಡ ಸಂನ್ಯಾಸಿ, ನಾನೊಬ್ಬನೇ ಏನು ಮಾಡಲು ಸಾಧ್ಯ? ಎಂದು ಬೇಸಸುತ್ತಿದ್ದ ಸ್ವಾಮಿಜಿಯ ಮೊಗದೊಳಗಿನ ನಿರಾಷೆಯ ಚಿಹ್ನೆ ಅಳಿಸಿ ಯಾರನ್ನೋ ಕಂಡವರಂತೆ ಚಕ್ಕನೆ ಬೆಚ್ಚಿ ಕೈಮುಗಿದು “ಹೇ ಗುರುದೇವ, ಹೇ ಗುರುದೇವ ನಿನ್ನ ಕೃಪೆಯೊಂದಿರಲಿ! ನನಗೆಲ್ಲಾ ಸಾಧ್ಯವಾಗುವುದು. ಸಮಸ್ತ ಭರತಖಂಡವನ್ನು ಸಂಚರಿಸಿ ಅದರ ಹೃದಯವನ್ನು ಅರಿತಿದ್ದೇನೆ. ನೂತನ ಚೇತನಶಕ್ತಿ ಅದರ ಅಂತರಾಳದಲ್ಲಿ ಅಡಗಿದೆ. ಅದನ್ನು ಎಚ್ಚರಿಸಲು ಪ್ರಯತ್ನಪಡುತ್ತೇನೆ. ಸೊಂಟಕಟ್ಟಿ ನಿಲ್ಲುತ್ತೇನೆ. ಅರಸನ ಅರಮನೆಗಳ ಸಜ್ಜೆಯ ಮೇಲೆ ಪವಡಿಸಿದ್ದೇನೆ; ತಿರುಕನ ಗುಡಿಸಲುಗಳಲ್ಲಿ ನೆಲದ ಮೇಲೆ ಮಲಗಿದ್ದೇನೆ. ಭಾರತ ಮಾತೆಯನ್ನು ಅಪಾದಮಸ್ತಕವಾಗಿ ಅರಿತಿದ್ದೇನೆ. ಈ ಮಹಾ ಸಮುದ್ರವನ್ನು ದಾಟುವೆನು, ಐಶ್ವರ್ಯದಲ್ಲಿ ಓಲಾಡುತಿಹ ಪಶ್ಚಿಮ ದೇಶಗಳಿಗೆ ಹೋಗಿ ನನ್ನ ಮೇಧಾಶಕ್ತಿಯಿಂದ ಸಂನ್ಯಾಸ ಧರ್ಮಕ್ಕೆ ವಿರುದ್ಧವಾಗಿ ಧನಾರ್ಜನೆ ಮಾಡುವೆನು, ಮಾತೆಯ ಉದ್ದಾರಕ್ಕೆ ಯತ್ನ ಮಾಡುವೆನು. ನನಗೆ ಮುಕ್ತಿ ಬೇಡ, ಸುಖ ಬೇಡ, ದರಿದ್ರ ನಾರಾಯಣರ ಸೇವೆ ಮಾಡುವೆನು. ಹೇ ಜನನಿ, ಹೇ ಗುರುದೇವ ಕೃಪೆಮಾಡು! ನೆರವಾಗು!” ಎಂದು ದೇಶಭಕ್ತ ವಿರಾಗಿ ಪ್ರಾರ್ಥಿಸಿದನು. ಈಗ ಅವರಿಗೆ ಕಾಣುತ್ತಿದ್ದುದು ಕೇವಲ ಭಾರತದ ಕೋಟ್ಯಾನುಕೋಟಿ ದೀನ-ದಲಿತ-ದರಿದ್ರರು ಮಾತ್ರ.
ಇಷ್ಟು ದಿನ ತನ್ನಾತ್ಮ ಮುಕ್ತಿಗಾಗಿ, ಧರ್ಮಕ್ಕಾಗಿ,  ಲೋಕ ಹಿತಕ್ಕಾಗಿ ಪ್ರಾರ್ಥಿಸಿದ ಸಂನ್ಯಾಸಿಗಳ ಮಧ್ಯ ರಾಷ್ಟ್ರಕ್ಕಾಗಿ ಮೊರೆಯಿಡುವ ಸಿಡಲ ಸಂತನೊಬ್ಬ ಉದಿಸಿದ್ದ. ಸನಾತನ ವೇದಧರ್ಮದ ರಾಯಭಾರಿ ತಯಾರಾಗಿದ್ದ, ವೇದೋಪನಿಷತ್ತುಗಳ ಸಾರವನು ಪಶ್ಚಿಮಕೆ ಒಯ್ಯುವ ಸಾರಥಿ ಸಿದ್ಧನಾಗಿದ್ದ. ಈ ಕ್ಷಣದಲ್ಲೇ ಸ್ವಾಮಿಜಿಯಲ್ಲಡಗಿದ್ದ ಸಮಾಜ ಸುಧಾರಕ ಮೈದಳೆದ; ಅವರಲ್ಲಡಗಿದ್ದ ರಾಷ್ಟ್ರ ನಿರ್ಮಾಪಕ ಹೊರಬಂದ; ಅಂತರ್ಯದಲ್ಲಿದ್ದ ಜಗದ್ರೂವಾರಿ- ವಿಶ್ವಶಿಲ್ಪಿ ಜಾಗೃತನಾದ. ಇಲ್ಲಿಂದಲೇ ಸ್ವಾಮಿ ವಿವೇಕಾನಂದರು ಮುಂದೆ ಜಗತ್ತಿನಾದ್ಯಂತ ಆರ್ಯಮಾತೆಯ ವೈಭವವನ್ನು ಸಾರಲು ಪ್ರೇರಣೆ ಪಡೆದರು. ಇದು ಘಟಿಸಿದ್ದು 1892ರ ಡಿಸೆಂಬರ್ 25ರಂದು! ಈ ದಿನವನ್ನು ಇದೀಗ ಪ್ರತಿವರ್ಷ ಸನಾತನ ಧರ್ಮೀಯ ಭಾರತೀಯರೆಲ್ಲಾ “ರಾಕ್ ಡೇ” ಆಗಿ ಆಚರಿಸಲಾರಂಭಿಸಿದ್ದಾರೆ. ಆದಿಗುರು ಶಂಕರರಂತೆ ಸನಾತನ ಧರ್ಮದ ಪುನರುತ್ಥಾನಕ್ಕೆ ದೀಕ್ಷೆ ತೊಟ್ಟು ಯಶಸ್ವಿಯಾದ ವಿವೇಕಾನಂದರ ಸಾಕ್ಷಾತ್ಕಾರದ ದಿನವನ್ನು ವಿಜೃಂಭಿಸುತ್ತಿದ್ದಾರೆ. ರಾಷ್ಟ್ರದ ತಾರುಣ್ಯ ಬದಲಾಗುತ್ತಿದೆ, ದಾಸ್ಯದ ಕಪ್ಪು ಛಾಯೆ ಮರೆಯಾಗಿ ಸೂರ್ಯರಶ್ಮಿ ಭರತ ಭೂಮಿಯ‌ ಬೆಳಗುತಿದೆ. ಈ ಸಂದೇಶ ಜಗದ ಮೂಲೆ-ಮೂಲೆ ತಲುಪಲಿ, ವಿವೇಕಾನಂದರ ಸಂದೇಶ ಮನೆ- ಮನಗಳಲ್ಲಿ ಮೊಳಗಲಿ, ಅವರ ಕನಸಿನ ಧರ್ಮಾನುಷ್ಠಾನ ವಾಗಲಿ. “ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್ಸಮರ್ಥಾ ಭವತ್ವಾಶಿಷಾ ತೇ ಭೃಶಮ್!!”ಎಂಬ ಪ್ರಾರ್ಥನೆಯ ಸಾಲುಗಳಂತೆ ಇಂದಿನ ನವ-ಯುವಮನಸ್ಸುಗಳೆಲ್ಲಾ ಒಂದಾಗಿ ಭಾರತ ಮಾತೆಯನ್ನು ಮತ್ತೆ ಸಿಂಹಾಸನಾರೂಢಳಾಗಿಸಿ, ಮತ್ತೆ ಆಕೆಯನ್ನು ಪರಮ ವೈಭವಕ್ಕೇರಿಸಿ “ವಿಶ್ವಗುರು”ವನ್ನಾಗಿಸುವಂತಾಗಲಿ.

  • email
  • facebook
  • twitter
  • google+
  • WhatsApp
Tags: 25thdecemberrockdayswami vivekananda

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ವನವಾಸಿ ಕಲ್ಯಾಣಾಶ್ರಮ ವನವಾಸಿಗಳ ಭರವಸೆಯ ತಾಣ

ವನವಾಸಿ ಕಲ್ಯಾಣಾಶ್ರಮ ವನವಾಸಿಗಳ ಭರವಸೆಯ ತಾಣ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

Poorvanchal VIDYARTHI MILAN at Mangalore; NE Students happy on RSS Initiatives

Poorvanchal VIDYARTHI MILAN at Mangalore; NE Students happy on RSS Initiatives

August 23, 2012
ABVP welcomes and supports IIT-Madras’s decision to de-recognize anti-social group

ABVP welcomes and supports IIT-Madras’s decision to de-recognize anti-social group

June 7, 2015
ಮೈಸೂರಿನಲ್ಲಿ ‘ಹೈಫಾ ಯುದ್ಧದ ಶತಮಾನ’ ಸಂಭ್ರಮಾಚರಣೆ : ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತಿ #100YearsofHaifa

ಮೈಸೂರಿನಲ್ಲಿ ‘ಹೈಫಾ ಯುದ್ಧದ ಶತಮಾನ’ ಸಂಭ್ರಮಾಚರಣೆ : ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತಿ #100YearsofHaifa

September 24, 2018
Nationwide Blood Donation Camps by Bajarangadal on Nov 2 as a part of VHPs Golden Jubilee

Nationwide Blood Donation Camps by Bajarangadal on Nov 2 as a part of VHPs Golden Jubilee

October 31, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In