• Samvada
  • Videos
  • Categories
  • Events
  • About Us
  • Contact Us
Thursday, February 9, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಸಮಚಿತ್ತದ ಸಮದರ್ಶಿ: ಅಶೋಕಪುರಂನಲ್ಲಿ ಆರೆಸ್ಸೆಸ್ ಬೆಳೆದ ಕಥನ  | ಪುಸ್ತಕ ಪರಿಚಯ

Vishwa Samvada Kendra by Vishwa Samvada Kendra
July 18, 2020
in Others
250
0
ಸಮಚಿತ್ತದ ಸಮದರ್ಶಿ: ಅಶೋಕಪುರಂನಲ್ಲಿ ಆರೆಸ್ಸೆಸ್ ಬೆಳೆದ ಕಥನ  | ಪುಸ್ತಕ ಪರಿಚಯ
492
SHARES
1.4k
VIEWS
Share on FacebookShare on Twitter

‘ನಗುವಂಗೆ ಬಿಡಿಸಿದ ರಂಗೋಲಿ’ 

ಸಮಚಿತ್ತದ ಸಮದರ್ಶಿ: ಅಶೋಕಪುರಂನಲ್ಲಿ ಆರೆಸ್ಸೆಸ್ ಬೆಳೆದ ಕಥನ  | ಪುಸ್ತಕ ಪರಿಚಯ 

 ಲೇಖನ: ವಾದಿರಾಜ

ಮೈಸೂರಿನ ಅಶೋಕಪುರಂ ಮಹಾಭಾರತದ ಹಸ್ತಿನಾಪುರವಿದ್ದಂತೆ . ಸುಮಾರು ಎರಡು ಕಿ ಮೀ ವ್ಯಾಪ್ತಿಯಲ್ಲಿ ಹದಿಮೂರು ಬೀದಿಗಳ ನಡವೆ ಹರಡಿಕೊಂಡಿರುವ ಅಶೋಕಪುರಂಗೆ ಹಿಂದೆ ದೊಡ್ಡಹೊಲಗೇರಿ ಎಂದು ಕರೆಯಲಾಗುತ್ತಿತ್ತು . ಹಲವು ಚರ್ಚೆ , ಸಂವಾದ , ಪ್ರತಿಭಟನೆ , ಸಂಘರ್ಷ , ತಿಕ್ಕಾಟ , ಬೀದಿರಂಪಗಳ ನಡುವೆ ಇಲ್ಲಿಯ ಜನರ ವ್ಯಕ್ತಿತ್ವಗಳು ರೂಪುಗೊಂಡಿವೆ .

ಅಶೋಕಪುರಂನ ಬೆಳಗು ಹೇಗಿರುತ್ತದೆ ಎಂದರೆ ‘ ಈಗ ಎದ್ದಿಯವ್ವ ಕೂಸೆ , ಏ ಮಾವ ಯಾಕಡೆ , ಲೇ ಮೊಗಾ ಬೀದಿಗೆ ವಸಿ ಮೆಲ್ಗೆ ಸಗಣಿ ಹಾಕಪ್ಪ ….. ಧೂಳು ಎದ್ದುಬಿದ್ದು ಕುಣಿದಾಡ್ತಾದೆ , ನೀರ್ ಹಾಕ್ಬಿಟ್ಟು ಗುಡುಸಪ್ಪ , ರಂಗೋಲಿ ನಗುವಂಗೆ ಬಿಡಿಸವ್ವಾ … ದೀಪ ಉರ್ದಂಗೆ ಇರಬೇಕು ನಕ್ಷತ್ರ ಮಿಂಚ್ದಂಗೆ … ‘ ಇಂತಹ ವರ್ಣರಂಜಿತ ಅಶೋಕಪುರಂನಲ್ಲಿ ಹುಟ್ಟಿ ೮೦ ವರ್ಷಗಳ ತುಂಬು ಜೀವನ ನೆಡಸಿದ ರಾಮಕೃಷ್ಣ ಕಳೆದವರ್ಷ ಅಕ್ಟೋಬರ್ ೩ರಂದು ತೀರಿಕೊಂಡರು . ಅಶೋಕಪುರಂಗೆ ಅರೆಸ್ಸೆಸ್ ನ್ನು ೧೯೬೫ ರಲ್ಲಿ ಪರಿಚಯಿಸಿ ನೂರಾರು ಜನರ ಬದುಕನ್ನು ರೂಪಿಸಿದವರು ರಾಮಕೃಷ್ಣ . ಆ ಕಾಲದಿಂದ ಜೊತೆಗೆದ್ದ ಗೆಳೆಯರು ಅಗಲಿದ ರಾಮಕೃಷ್ಣರವರ ನಿಸ್ಪೃಹ ಬದುಕಿಗೆ ಅಕ್ಷರ ರೂಪಕೊಡಲು ನಿರ್ಧರಿಸಿದರು .

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಕಡೆಂಗೋಡ್ಲು ಶಂಕರಭಟ್ ಕಾವ್ಯ ಪುರಸ್ಕಾರಕ್ಕೆ ಪಾತ್ರರಾಗಿರುವ ಕವಿ , ಲೇಖಕ ಅಶೋಕಪುರಂ ಗೋವಿಂದರಾಜುರವರ ಪರಿಶ್ರಮದಿಂದ ಈ ‘ ಸಮಚಿತ್ತದ ಸಮದರ್ಶಿ’ ಯ ನೆನಪಿನ ಯಾತ್ರೆ ಹೊರಬಂದಿದೆ .

ಇದು ರಾಮಕೃಷ್ಣರೊಬ್ಬರ ನೆನಪಿನ ಯಾತ್ರೆಯಾಗುವುದು ಸಾಧ್ಯವಿರಲಿಲ್ಲ . ಏಕೆಂದರೆ ರಾಮಕೃಷ್ಣ , ವೆಂಕಟರಾಮು , ಶ್ರೀನಿವಾಸಪ್ರಸಾದ್ ( ಈಗ ಲೋಕಸಭಾ ಸದಸ್ಯರು ) – ಸದಾ ಜೊತೆಗೇ ಇರುತ್ತಿದ್ದ ಜೀವದ ಗೆಳೆಯರು – ‘ ಚಡ್ಡಿ ‘ ದೋಸ್ತರು ! ಪುಸ್ತಕ ಈ ಮೂವರ ಕಥೆಯನ್ನೂ ಹೇಳುತ್ತದೆ . ಅಷ್ಟಕ್ಕೆ ನಿಲ್ಲದೆ – ಇವರೆಲ್ಲ ಆ ಕಾಲದಲ್ಲಿ ಅಶೋಕಪುರಂನ ಆರೆಸ್ಸೆಸನ ಹನುಮಾನ್ ಶಾಖೆಯ ರೂವಾರಿಗಳಾದ್ದರಿಂದ ಇವರೊಂದಿಗೆ ದೊಡ್ಡ ಪಟಾಲಮ್ಮು ಇತ್ತು . ಪಟಾಲಮ್ಮಿನ ಭಾಗವಾಗಿದ್ದ ಜವರಯ್ಯ , ಮುದ್ದು ಚಲುವಯ್ಯ , ವುರ್ಗಿ ಜವರ , ರಘುನಾಥ , ಮಹದೇವ , ವೆಂಕಟರಾಜು , ರಾಮಸ್ವಾಮಿ , ಚಿಕ್ಕವೀರಯ್ಯ , ಚಾಮುಂಡಿ , ಮಹಾಲಿಂಗು , ನಾರಾಯಣಸ್ವಾಮಿ , ಶ್ರೀಕಂಠ , ಸಿದ್ದಪ್ಪಾಜಿ , ಧರ್ಮಗುರು , ನರಸಿಂಹ , ಚನ್ನರಸು , ರಾಚಯ್ಯ , ಗೋವಿಂದರಾಜು , ಗಂಗಾಧರ , ಶಾಂತರಾಜು , ಬಸವರಾಜು , ಕುಮಾರಸ್ವಾಮಿ , ಅನಂದಮೂರ್ತಿ ಮುಂತಾದವರೆಲ್ಲರೂ ರಾಮಕೃಷ್ಣರ ಕಥೆಯೊಂದಿಗೆ ಹೆಜ್ಜೆ ಹಾಕುತ್ತಾರೆ .
ರಾಮಕೃಷ್ಣರವರು ಅರೆಸ್ಸೆಸ್ ನಲ್ಲಿ ಕಲಿತ ‘ ಸಂಕಟದಲ್ಲಿದ್ದವರ ನೆರವಿಗೆ ಧಾವಿಸುವ ‘ ಗುಣದಿಂದಾಗಿ ಕಥೆ ಎಲ್ಲ ಬೀದಿ – ಮನೆಗಳನ್ನು ಪ್ರವೇಶಿಸುತ್ತದೆ , ಓದಿ ಮುಗಿಸುವಾಗ ಇಡೀ ಅಶೋಕ ಪುರಂ ತನ್ನ ಕಥೆ ಬಿಚ್ಚಿ ಹೇಳಿಕೊಂಡಂತೆ ಅನಿಸುತ್ತದೆ .

ರಾಮಕೃಷ್ಣ ಹನುಮಾನ್ ಶಾಖೆಯಲ್ಲಿ ಕಬ್ಬಡ್ಡಿ , ದೊಣ್ಣೆವರಸೆ , ಕವಾಯಿತು ಕಲಿಸಿದ್ದಷ್ಟೆ ಅಲ್ಲ , ಊರ ಮಕ್ಕಳಿಗೆ ಮನೆಪಾಠ ಮಾಡಿದರು , ಶಾಖೆಗೆ ಬಂದವರು ಯಾರೂ ಫೇಲಾಗದಂತೆ ನೋಡಿಕೊಂಡರು . ಆರೆಸ್ಸೆಸ್ ನ ಪ್ರಭಾವ ಬಳಸಿ ಮೈಸೂರಿನ ಪ್ರಸಿದ್ಧ ವೈದ್ಯರನೆಸಿದ್ದ ಡಾ ಬಾಪಟ್ , ಡಾ ಸಮೀರ ರವರನ್ನು ವಾರಕ್ಕೆರಡು ಸಲ ಕರೆಸಿ ವೈದ್ಯಕೀಯ ಶಿಬಿರ ನೆಡಸಿದರು . ಸಾವು – ನೋವುಗಳಿಗೆ ಹೆಗಲು ಕೊಟ್ಟರು .

೧೯೬೮ – ೬೯ ರಲ್ಲಿ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅಶೋಕಪುರಂಗೆ ಭೇಟಿಕೊಟ್ಟು ಸಿದ್ದಪ್ಪಾಜಿ ಗುಡಿಯಲ್ಲಿ ಸಭೆ ನೆಡಸಿದ್ದರು . ಆ ಸಭೆಯಲ್ಲಿ ರಾಮಕೃಷ್ಣ ಎದ್ದು ನಿಂತು ‘ ನೀವು ಬರುತ್ತೀರಿ , ಸುಳ್ಳು ಭರವಸೆಯ ಭಾಷಣ ಮಾಡಿ ಹೋಗುತ್ತೀರಿ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ . ಇಂತಹ ಕಾರ್ಯಕ್ರಮಗಳಿಂದ ಏನು ಪ್ರಯೋಜನ ? ‘ ಎಂದು ಮುಖ್ಯಮಂತ್ರಿಗಳನ್ನೇ ಪ್ರಶ್ನಿಸಿದ್ದರು . ಸಭೆಯ ನಂತರ ನಿಜಲಿಂಗಪ್ಪ ಪ್ರಶ್ನೆ ಕೇಳಿದ ಆ ಹುಡುಗನನ್ನು ಕರೆತನ್ನಿ , ಅವನಿಗೊಂದು ಸರ್ಕಾರಿ ನೌಕರಿ ಕೊಡಿಸೋಣ ‘ ಎಂದರು . ಆ ಕಾಲದಲ್ಲೇ ಎಲೆಕ್ಟ್ರಿಕಲ್ ಡಿಪ್ಲೋಮಾ ಮಾಡಿದ್ದ ರಾಮಕೃಷ್ಣ ಸರ್ಕಾರಿ ನೌಕರಿಯನ್ನು ಒಪ್ಪಲಿಲ್ಲ .

ಕಡುಬಡತನದಿಂದಾಗಿ ೭ ನೇ ತರಗತಿಗೆ ಓದು ನಿಲ್ಲಿಸಿದ್ದ ಶಾಖೆಯ ಹುಡುಗ ಜವರಯ್ಯನಿಗೆ ಪಾಠಮಾಡಿ ಖಾಸಗಿಯಾಗಿ ಹತ್ತನೇ ತರಗತಿ ಪರೀಕ್ಷೆ ಕಟ್ಟಿಸಿದ್ದರು ರಾಮಕೃಷ್ಣ . ಕೊನೆಗೆ ಜವರಯ್ಯ ಡಾ. ಮ ನ ಜ ಆದರು . ಮಾನಸ ಗಂಗೋತ್ರಿಯಲ್ಲಿ ಪ್ರಾಧ್ಯಪಕರಾದರು . ವಿಧ್ಯಾರ್ಥಿಯಾಗಿದ್ದಾಗಲೇ ಮ ನ ಜ ‘ ಡಾ ಅಂಬೇಡ್ಕರ್ – ವಿಧ್ಯಾರ್ಥಿಜೀವನ ‘ ಎಂಬ ೨೦೦ ಪುಟಗಳ ಪುಸ್ತಕ ಬರೆದರು . ರಾಮಕೃಷ್ಣ ಹಣ ಹೊಂದಿಸಿ ಪುಸ್ತಕ ಮುದ್ರಿಸಿ ತಂದರು , ಮಾತ್ರವಲ್ಲ ಆಗಲೇ ಧರ್ಮಶ್ರೀ , ವಂಶವೃಕ್ಷ ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿದ್ದ ಎಸ್ ಎಲ್ ಭೈರಪ್ಪರವರನ್ನು ಅಶೋಕಪುರಂಗೆ ಕರೆಸಿ ಬಿಡುಗಡೆ ಕಾರ್ಯಕ್ರಮ ಮಾಡಿದರು .

ದೊಗಳೆ ಚಡ್ಡಿ , ದೊಣ್ಣೆ ಹಿಡಿದು ಊರತುಂಬ ಠಳಾಯಿಸುವ ಈ ಹುಡುಗರ ಬಗ್ಗೆ ಊರ ಹಿರಿಯರಿಗೆ ಏನೋ ಅನುಮಾನ . ಕಿವಿ ಊದುವವರದ್ದು ಕಾರುಬಾರು ಬೇರೆ . ಅದೊಂದು ಭಾನುವಾರ ಆರೆಸ್ಸೆಸ್ ನಡೆಸುತ್ತಿದ್ದ ರಾಮಕೃಷ್ಣ , ವೆಂಕಟರಾಮುರವರನ್ನು ಪಂಚಾಯ್ತಿ ಎದುರು ವಿಚಾರಣೆಗೆ ನಿಲ್ಲಿಸಲಾಯ್ತು . ಊರ ಯಜಮಾನರಾಗಿದ್ದ ಕೂಸಯ್ಯ , ದೊಡ್ಡವೆಂಕಟಯ್ಯ , ಪುಟ್ಟಸ್ವಾಮಣ್ಣ ಮತ್ತಿತರರು ವಿಚಾರಣೆ ನೆಡಸಿದರು . ತಾಸಿಗೂ ಮೀರಿ ವಿಚಾರಣೆ ನೆಡಯಿತು . ‘ ನಾವು ಒಳ್ಳೆಯದನ್ನು ಕಲಿಯುತ್ತಿದ್ದೇವೆ , ಕಲಿಸುತ್ತಿದ್ದೇವೆ ‘ ಎಂಬ ವೆಂಕಟರಾಮುರವರ ಮಾತು ಅಲ್ಲಿದ್ದವರಿಗೆ ಅರ್ಥವಾಗಲಿಲ್ಲ . ಆರೆಸ್ಸೆಸ್ ಶಾಖೆ ಮಾಡುವುದನ್ನು ನಿಲ್ಲಿಸುವಂತೆ ಪಂಚಾಯ್ತಿ ಆದೇಶಿಸಿತು . ಹುಡುಗರು ಒಪ್ಪಲಿಲ್ಲ . ‘ ನಾವು ಈ ಒಳ್ಳೆ ಕೆಲಸ ಮಾಡುವವರೆ ‘ ಎಂದು ಎದ್ದು ನಿಂತರು . ಕೊನೆಗೆ ಪಂಚಾಯ್ತಿ ವೆಂಕಟರಾಮು , ರಾಮಕೃಷ್ಣ ರವರ ಕುಟುಂಬಕ್ಕೆ ಬಹಿಷ್ಕಾರ ಸಾರಿದರು . ಆದರೂ ಆರೆಸ್ಸೆಸ್ ಚಟುವಟಿಕೆ ನಿಲ್ಲಲಿಲ್ಲ . ಕಾಲ ಸರಿದಿದೆ . ಈಗ ವೆಂಕಟರಾಮು ಆರೆಸ್ಸೆಸನ ರಾಜ್ಯ ಅಧ್ಯಕ್ಷರು . ಕೆಲ ವರ್ಷಗಳ ಹಿಂದೆ ವೆಂಕಟರಾಮು , ಮೋಹನ ಭಾಗವಾತರೊಂದಿಗೆ ವೇದಿಕೆಯಲ್ಲಿ ಕುಳಿತ ವಿಶಾಲ ಸಭೆಯ ಫೋಟೊವನ್ನು ಪ್ರಜಾವಾಣಿಯ ಮುಖಪುಟದಲ್ಲಿ ನೋಡಿ ಇಡೀ ಅಶೋಕಪುರಂ ಸಂಭ್ರಮಿಸಿತ್ತು . ಮಾತ್ರವಲ್ಲ ಈಗ ಊರಜನ ವೆಂಕಟರಾಮುವನ್ನೆ ಪಂಚಾಯ್ತಿಗೆ ಯಜಮಾನನನ್ನಾಗಿ ನೇಮಿಸಿಕೊಂಡಿದ್ದಾರೆ .

೧೯೬೭ – ೬೮ – ೬೯ ರಲ್ಲಿ ಶ್ರೀನಿವಾಸಪ್ರಸಾದ್ , ವೆಂಕಟರಾಮು ಬೇಸಿಗೆ ರಜೆಯಲ್ಲಿ ಒಂದು ತಿಂಗಳ ಆರೆಸ್ಸೆಸ್ ತರೆಬೇತಿಗಳನ್ನು ಪಡೆದರು . ಹೀಗೆ ತರಬೇತಿ ಪಡೆದವರು ಅರೆಸ್ಸೆಸ್ ಚಟುವಟಿಕೆ ಬೆಳೆಸಲು ‘ ವಿಸ್ತಾರಕ ‘ ರಾಗಿ ಹೋಗುವುದು ವಾಡಿಕೆ . ಹಾಗೇ ೧೯೬೯ರಲ್ಲಿ ಶ್ರೀನಿವಾಸ ಪ್ರಸಾದ್ , ವೆಂಕಟರಾಮು ಪಿರಿಯಾಪಟ್ಟಣ ತಾಲೂಕಿನ ಕಂಪಾಲಪುರ , ಕಂದೇಗಾಲ , ಚಿಲ್ಕುಂದ ಗ್ರಾಮಗಳಲ್ಲಿ ವಿಸ್ತಾರಕರಾಗಿ ಹದಿನೈದು ದಿನ ತಂಗಿದ್ದರು . ದಲಿತರು , ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲೇ ಶಾಖೆಗೆ ಬರುತ್ತಿದ್ದರು . ಹಾರಣ್ಣ – ತೂರಣ್ಣ , ಕಬ್ಬಡ್ಡಿ ಇತ್ಯಾದಿ ಆಟಗಳ ಮೂಲಕವೇ ಜಾತಿಭಾವವನ್ನು ಕರಗಿಸಿ ಸೋದರತ್ವವನ್ನು ಕಂಡರಿಯದ ಊರಿನಲ್ಲಿ ಬೆಳೆಸಿದ್ದು ವಿಸ್ತಾರಕರಿಗೆ ಅವಿಸ್ಮರಣೀಯ ಅನುಭವ , ಜೀವನದ ಬುತ್ತಿ .

ಅಸ್ಪೃಶ್ಯರೆ ವಾಸ ಮಾಡುತ್ತಿದ್ದ ಅಶೋಕಪುರಂನಲ್ಲಿ ಒಂದೆರಡು ಸವರ್ಣೀಯರ ಮನೆಗಳೂ ಇದ್ದವು . ಆರನೇ ಬೀದಿಯ ಬಳ್ಳಮ್ಮನ ಮನೆಯ ಪಕ್ಕದಲ್ಲಿದ್ದ ಲಿಂಗಾಯತರೊಬ್ಬರು ನೆಡೆಸುತ್ತಿದ್ದ ಮನೆ ಹೊಟೇಲ್ಲಿನ ಬಗೆ , ಬಗೆ ದೋಸೆಗಳು ಹೇಗೆ ಬೆಳಗಿನ ತಿಂಡಿಯ ಅಭ್ಯಾಸವಿಲ್ಲದ ಅಶೋಕಪುರಂನವರನ್ನು ಬದಾಲಾಯಿಸಿತೆಂಬ ರಸಮಯ ವಿವರಗಳು ಬಂದು ಹೋಗುತ್ತದೆ .

ಆ ದಿನಗಳಲ್ಲಿ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದರೂ ಸಂಘದ ವಲಯದಲ್ಲಿ ವೆಂಕಣ್ಣ ಎಂದೇ ಜನಪ್ರಿಯರಾಗಿದ್ದ ಪ್ರೊ ವೆಂಕೋಬರಾವ್ ಹನುಮಾನ್ ಶಾಖೆಗೆ ನಿರಂತರ ಭೇಟಿಕೊಟ್ಟು ಹುಡುಗರಲ್ಲಿ ಭೌದ್ದಿಕ ಆಸಕ್ತಿ ರೂಪಿಸಿದವರು . ಈ ಪುಸ್ತಕಕ್ಕಾಗಿ ಬರೆದ ಲೇಖನದಲ್ಲಿ ವೆಂಕಣ್ಣ ‘ ನಾನು ವೇದ , ಉಪನಿಷತ್ತು ಓದಿದವನಾದರೂ , ದಲಿತಕೇರಿಯಲ್ಲಿ ಹುಟ್ಟಿ ಬೆಳೆದ ಹೃದಯ ಶ್ರೀಮಂತಿಕೆಯ ನಿನ್ನ ವ್ಯಕ್ತಿತ್ವವೇ ಪರಿಪೂರ್ಣವಾದದ್ದು , ನನ್ನದಲ್ಲ ‘ ಎಂದು ರಾಮಕೃಷ್ಣರವರ ಬಗ್ಗೆ ಹೇಳಿದ್ದಾರೆ .

ದಲಿತ ಚಳವಳಿಯ ಕೇಂದ್ರವಾಗಿ ರೂಪಗೊಂಡ ಅಶೋಕಪುರಂನಲ್ಲಿ ಆರೆಸ್ಸೆಸ್ ನ ಬೆಳವಣಿಗೆಯ ಕಥೆಯನ್ನು ೩೦೦ ಪುಟಗಳಲ್ಲಿ ಈ ಪುಸ್ತಕ ಚೊಕ್ಕವಾಗಿ ಹೇಳುತ್ತದೆ . ಸಾಮಾಜಿಕ ಅಧ್ಯಯನದ ಆಸಕ್ತರಿಗೆ ಒಳ್ಳೆಯ ಓದು , ಆಕಾರ .

ಪುಸ್ತಕದ ಲೇಖಕ : ಅಶೋಕಪುರಂ ಗೋವಿಂದರಾಜು ದೂ : 07411099510

  • email
  • facebook
  • twitter
  • google+
  • WhatsApp
Tags: RSS in mysuru

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
My BHARAT: 15-day Statewide Online Youth Campaign to commence from August 1, 2020 #MyBharat

My BHARAT: 15-day Statewide Online Youth Campaign to commence from August 1, 2020 #MyBharat

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ

November 7, 2021
ಕನ್ನಡ ಸಾಹಿತ್ಯಗಳ ವಿಡಿಯೋ ಪರಿಚಯ ಮಾಡುತ್ತಿರುವ ‘ಸುಕೃತಿ’

ಕನ್ನಡ ಕೃತಿಗಳ ಮೌಲ್ಯ ಅರ್ಥೈಸುವ ‘ಸುಕೃತಿ’

November 25, 2021
Actress Nayanthara converted to Hinduism at Arya Samaj

Actress Nayanthara converted to Hinduism at Arya Samaj

August 8, 2011
ಕೊರೋನಾ ಕಾರಣದಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ ಆಶ್ರಯ ನೀಡಲು  ಬೆಂಗಳೂರಿನ ಅಮೃತ ಶಿಶು ನಿವಾಸ

ಕೊರೋನಾ ಕಾರಣದಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ ಆಶ್ರಯ ನೀಡಲು ಬೆಂಗಳೂರಿನ ಅಮೃತ ಶಿಶು ನಿವಾಸ

May 5, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In