• Samvada
Sunday, May 29, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಕನ್ನಡ ಪರಿಚಯ ವರ್ಗ – ಆರೆಸ್ಸೆಸ್ಸಿನ ಸಾಫ್ಟ್‌ವೇರಿಗರ ಒಂದು ವಿನೂತನ ಪ್ರಯೋಗ

Vishwa Samvada Kendra by Vishwa Samvada Kendra
November 26, 2013
in News Digest
250
0
ಕನ್ನಡ ಪರಿಚಯ ವರ್ಗ – ಆರೆಸ್ಸೆಸ್ಸಿನ ಸಾಫ್ಟ್‌ವೇರಿಗರ ಒಂದು ವಿನೂತನ ಪ್ರಯೋಗ

RSS IT Milan's Kannada Parichaya Varg

491
SHARES
1.4k
VIEWS
Share on FacebookShare on Twitter

ಒಟ್ಟಿನಲ್ಲಿ, ಸಾಫ್ಟ್‌ವೇರಿಗರ ಕನ್ನಡ ಕಾಳಜಿಗೆ, ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಂತಿತ್ತು ಈ ವಿನೂತನ ಪ್ರಯೋಗ ಎಂದರೆ ತಪ್ಪಾಗಲಾರದು!

‘ನನ್ನ ಹೆಸರು ಅರ್ಪಿತಾ. ನಿಮ್ಮ ಹೆಸರು ಏನು?’ ಎಂಬ ಪ್ರಶ್ನೆಗೆ ’ನನ್ನ ಹೆಸರು ನಿಖಿಲ್ ಲಾಡ್’ ಎಂದು ಅಲ್ಲಿ ಕುಳಿತವರೊಬ್ಬರು ಉತ್ತರ ಕೊಡುತ್ತಿದ್ದರು. ’ನನ್ನ ಮನೆ ಜಯನಗರದಲ್ಲಿದೆ. ನಿಮ್ಮ ಮನೆ ಎಲ್ಲಿ ಇದೆ?’ ಎಂಬ ಪ್ರಶ್ನೆಗೂ ಥಟ್ಟನೇ ಉತ್ತರ ಬರುತ್ತಿತ್ತು. ಅರೇ! ಇದರಲ್ಲೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ?! ವಿಶೇಷವಿದೆ. ಪ್ರಶ್ನೆ ಕೇಳುತ್ತಿದ್ದವರು ಕನ್ನಡ ಕಲಿಸುತ್ತಿದ್ದವರು, ಉತ್ತರ ಹೇಳುತ್ತಿದ್ದವರು ಕನ್ನಡ ಕಲಿಯಲು ಬಂದ ಕನ್ನಡೇತರರು. ಕಳೆದ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಸುಮಾರು 200 ಅಪಾರ್ಟ್‌ಮೆಂಟ್‌ಗಳಲ್ಲಿ ಕಂಡುಬರುತ್ತಿದ್ದ ದೃಶ್ಯ ಇದು. ಅಲ್ಲಿ ನಡೆಯುತ್ತಿದ್ದುದು ’ಕನ್ನಡ ಪರಿಚಯ ವರ್ಗ’

RSS IT Milan’s Kannada Parichaya Varg

’ಬೆಂಗಳೂರು ಅಡ್ಡಾದಿಡ್ಡಿ ಬೆಳೀತಿದೆ. ಎಲ್ಲೆಲ್ಲಿಂದಲೋ ಬಂದವರೇ ಇಲ್ಲಿ ಜಾಸ್ತಿಯಾಗಿದ್ದಾರೆ. ಕೆಲವು ಕಡೆ ಹೋದ್ರಂತೂ ಕನ್ನಡಾನೇ ಕಿವಿಗೆ ಬೀಳಲ್ಲ. ಇದು ಕರ್ನಾಟಕ ಹೌದೋ ಅಲ್ವೋ ಅನ್ನೋ ಥರಾ ಆಗಿಬಿಟ್ಟಿದೆ. ಬೆಂಗಳೂರಲ್ಲಿ ಇನ್ನು ಕನ್ನಡಕ್ಕೆ ಉಳಿಗಾಲವಿಲ್ಲ!’ – ಇಂಥಾ ಮಾತುಗಳನ್ನು ನಾವೆಲ್ಲಾ ಆಗಾಗ ಕೇಳುತ್ತಿರುತ್ತೇವೆ. ಕನ್ನಡದ ಬಗ್ಗೆ ಕಾಳಜಿಯಿರುವ ಅನೇಕರಿಗೆ ಹೊರಗಡೆಯಿಂದ ಬಂದವರು ಕನ್ನಡ ಕಲೀತಿಲ್ಲ, ಹಾಗಾಗಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಕೊರಗು ಇರುವುದು ಸುಳ್ಳಲ್ಲ. ಆದರೆ, ನಾವೇ ಅವರ ಹತ್ತಿರ ಹಿಂದಿಯಲ್ಲೋ, ಇಂಗ್ಲಿಷಿನಲ್ಲೋ ಮಾತನಾಡಿದರೆ ಅವರು ಕನ್ನಡವನ್ನು ಕಲಿಯುವುದಾದರೂ ಹೇಗೆ ಎನ್ನುವುದೂ ಸತ್ಯವೇ. ಹಾಗಾದರೆ, ಅವರಿಗೆ ಕನ್ನಡ ಕಲಿಸುವರು ಯಾರು? ಅದಕ್ಕೇನು ವ್ಯವಸ್ಥೆಯಿದೆ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬುದು ಪ್ರಶ್ನೆ.

READ ALSO

ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್

Alapuzha – One arrested for provocative sloganeering during PFI rally

ಇದನ್ನು ಗಮನಿಸಿದ ಆರೆಸ್ಸೆಸ್ ಐಟಿ ಮಿಲನ್‌ನ ಸ್ವಯಂಸೇವಕರಾದ ಕೆಲವು ಸಾಫ್ಟ್‌ವೇರಿಗರು ತಾವೇಕೆ ಈ ಕೆಲಸ ಮಾಡಬಾರದು ಎಂದು ಯೋಚಿಸಿದರು. ಅದರ ಫಲವಾಗಿಯೇ ಕಳೆದ ಫೆಬ್ರವರಿ ೧೧ ಮತ್ತು ೧೨ರ ಶನಿವಾರ ಭಾನುವಾರದಂದು ’ಕನ್ನಡ ಪರಿಚಯ ವರ್ಗ’ ನಡೆಯಿತು! ಎರಡೂ ದಿನ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ನಡೆದ ಕನ್ನಡ ಕಲಿಕೆಯ ಈ ಕಾರ್ಯಕ್ರಮದಲ್ಲಿ ಸುಮಾರು ೩೦೦೦ ಜನ ಕನ್ನಡಿಗರಲ್ಲದವರು ಕನ್ನಡದ ಪರಿಚಯ ಮಾಡಿಕೊಂಡರು. ಐಟಿ ಮಿಲನ್‌ನ ಸ್ವಯಂಸೇವಕರಲ್ಲದೇ ಇತರ ಸಾಫ್ಟ್‌ವೇರ್ ಉದ್ಯೋಗಿಗಳೂ ಸೇರಿದಂತೆ ಸುಮಾರು ೩೩೦ ಜನರು ಕನ್ನಡ ಕಲಿಸಲು ಉತ್ಸಾಹದಿಂದ ಇದರಲ್ಲಿ ತೊಡಗಿಸಿಕೊಂಡಿದ್ದರು. ಕೆಲವೆಡೆ ಗಂಡ ಹೆಂಡರಿಬ್ಬರೂ, ಇನ್ನು ಕೆಲವೆಡೆ ಸಾಫ್ಟ್‌ವೇರಿನ ಹುಡುಗಿಯರೂ ಶಿಕ್ಷಕರಾಗಿ ದೂರದ ಅಪಾರ್ಟ್‌ಮೆಂಟಿಗೆ ಹೋಗಿ ಕನ್ನಡ ಕಲಿಸಿದ್ದು ವಿಶೇಷವಾಗಿತ್ತು. ಕನ್ನಡದ ಗಂಧಗಾಳಿಯೂ ಇಲ್ಲದವರು ಕೇವಲ ಎರಡೇ ದಿನದಲ್ಲಿ ’ನನ್ನ ಹೆಸರು …. ನಿಮ್ಮ ಹೆಸರು ಏನು?’  ಎಂಬ ಮಂತ್ರ ಶುರು ಮಾಡಿದರು. ದಿನಬಳಕೆಯಲ್ಲಿ ಮಾತನಾಡಲು ಬೇಕಾಗುವಷ್ಟು ಕನ್ನಡ ಕಲಿತರು, ಅದೂ ಯಾವುದೇ ಶುಲ್ಕ ನೀಡದೇ!

’ನಮಸ್ಕಾರ ಅಣ್ಣಾ’ ಎಂದೇ ಮಾತಿಗೆ ಶುರುಮಾಡಿದ ಗ್ಲೋಮಂತ್ರ ಕಂಪೆನಿಯಲ್ಲಿ ಕೆಲಸ ಮಾಡುವ ಒರಿಸ್ಸಾ ಮೂಲದವರಾದ, ಐಟಿ ಮಿಲನ್‌ನ ಪ್ರಭಾತಚಂದ್ರ ಪಾತ್ರ (ಅಂದ ಹಾಗೆ, ಐಟಿ ಮಿಲನ್ ಎನ್ನುವುದು ಸಾಫ್ಟ್‌ವೇರ್ ಉದ್ಯೋಗಿಗಳಿಗಾಗಿಯೇ ಪ್ರತೀ ಭಾನುವಾರ ನಡೆಯುವ ಆರೆಸ್ಸೆಸ್ಸಿನ ಶಾಖೆ.) ಹೇಳುವ ಹಾಗೆ ಕನ್ನಡ ಕಲಿಸುವ ಈ ಐಡಿಯಾ ಬಂದಿದ್ದೇ ತಡ, ಅವರ ಮಿತ್ರರೆಲ್ಲಾ ಯಾವುದೇ ಚರ್ಚೆಯಿಲ್ಲದೇ ಇದನ್ನು ಒಪ್ಪಿದರಂತೆ. ಸರಿ, ಇನ್ನೇಕೆ ತಡ ಎಂದು ತಮ್ಮ ಇಡೀ ತಂಡವನ್ನು ಇದಕ್ಕಾಗಿ ತೊಡಗಿಸಿದರು. ಬೇರೆ ಬೇರೆ ಅಪಾರ್ಟ್‌ಮೆಂಟ್‌ಗಳನ್ನು ಸಂಪರ್ಕಿಸಿ ಅಲ್ಲಿ ಕಲಿಕಾ ಕೇಂದ್ರಗಳನ್ನು ಗುರುತಿಸುವ ಗುಂಪು ಒಂದಾದರೆ, ತಮ್ಮ ತಮ್ಮ ಸ್ನೇಹಿತರು ಸಹೋದ್ಯೋಗಿಗಳು ಮತ್ತು ಸಂಬಂಧಿಕರ ಬಳಿ ಮಾತನಾಡಿ ಶಿಕ್ಷಕರಾಗಿ ಬರಲು ಮನವೊಲಿಸಿ, ಅವರಿಗೆ ಒಂದು ಗಂಟೆಯ ಪ್ರಾತ್ಯಕ್ಷಿಕೆ ನಡೆಸಿ ತರಬೇತಿ ಕೊಡುವ ಗುಂಪು ಇನ್ನೊಂದು. ಯಾರ‍್ಯಾರು ಯಾವ್ಯಾವ ಅಪಾರ್ಟ್‌ಮೆಂಟಿಗೆ ಹೋಗಬೇಕು ಎನ್ನುವುದನ್ನು ನಿರ್ಧರಿಸಿ ಅವರಿಗೆ ವಾಹನ ವ್ಯವಸ್ಥೆ ಮಾಡುವ ಗುಂಪು ಮತ್ತೊಂದು. ಹೀಗೆ ಸುಮಾರು ೬೦೦ ಜನ ಕಾರ್ಯಕರ್ತರು ಇದರಲ್ಲಿ ಮೂರು ತಿಂಗಳಿನಿಂದ ತೊಡಗಿಸಿಕೊಂಡದ್ದರಂತೆ. ಅದರಿಂದಾಗಿಯೇ ಏಕಕಾಲದಲ್ಲಿ ಇಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಕನ್ನಡ ಪರಿಚಯ ವರ್ಗ ನಡೆಸಲು ಸಾಧ್ಯವಾಯಿತು ಎಂಬ ಪ್ರಭಾತಚಂದ್ರರ ಮಾತಿಗೆ, ಅಲ್ಲಿ ಕಲಿಸುವ ಸಿಲಬಸ್ ಏನಿರಬೇಕು ಎನ್ನುವುದನ್ನು ಸಿದ್ಧಪಡಿಸಿ ಪರಿಷ್ಕರಿಸಲು ಮತ್ತೊಂದು ಗುಂಪು ಒಂದು ತಿಂಗಳಿನಿಂದ ಕೆಲಸ ಮಾಡಿದೆ ಎಂದು ಇನ್ನೊಬ್ಬ ಕಾರ್ಯಕರ್ತ ಅಕಾರ್ಡ್ ಸಾಫ್ಟ್‌ವೇರ್‌ನ ಉದ್ಯೋಗಿ ರಾಘವೇಂದ್ರ ಕುಲಕರ್ಣಿ ದನಿಗೂಡಿಸಿದರು.

ಹೊರ ರಾಜ್ಯಗಳಿಂದ ಬಂದವರಿಗೆ ಕನ್ನಡ ಕಲಿಯಲು ಆಸಕ್ತಿಯಿಲ್ಲ ಎನ್ನುವುದು ಸತ್ಯವಲ್ಲ ಎನ್ನುವುದು ನಮಗೆ ಮನವರಿಕೆಯಾಯಿತು. ಸುಮಾರು 5 ಕೇಂದ್ರಗಳಲ್ಲಿ 40 ಕ್ಕೂ ಹೆಚ್ಚು ಜನ ಕನ್ನಡ ಕಲಿಯಲು ಬಂದಿದ್ದು, ಹೆಚ್ಚೂ ಕಮ್ಮಿ ಎಲ್ಲಾ ಕೇಂದ್ರಗಳಲ್ಲೂ ಇದನ್ನು ಪ್ರತೀವಾರವೂ ಮುಂದುವರಿಸಿ ಎಂಬ ಬೇಡಿಕೆ ಬಂದಿದ್ದು ಇದಕ್ಕೆ ಸಾಕ್ಷಿಯಾಗಿತ್ತು ಎನ್ನುತ್ತಾರೆ ಶಿಕ್ಷಕರಾಗಿ ಭಾಗವಹಿಸಿದ್ದ ಸಾಫ್ಟ್‌ವೇರಿಗ ಸುಪ್ರದೀಪ್ ಸುಬ್ರಹ್ಮಣ್ಯ ಅವರು. ಅಲ್ಲದೇ, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾ, ಪಂಜಾಬ್, ಬಿಹಾರ ಮೊದಲಾದ ರಾಜ್ಯಗಳಿಂದ ಬಂದ ಕಾರ್ಯಕರ್ತರು ಇದರಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು ಎನ್ನುತ್ತಾರೆ ಅವರು.

ಒಟ್ಟಿನಲ್ಲಿ, ಸಾಫ್ಟ್‌ವೇರಿಗರ ಕನ್ನಡ ಕಾಳಜಿಗೆ, ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಂತಿತ್ತು ಈ ವಿನೂತನ ಪ್ರಯೋಗ ಎಂದರೆ ತಪ್ಪಾಗಲಾರದು!

  • email
  • facebook
  • twitter
  • google+
  • WhatsApp

Related Posts

News Digest

ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್

May 27, 2022
News Digest

Alapuzha – One arrested for provocative sloganeering during PFI rally

May 26, 2022
News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
Next Post
‘United Farmer for Prosperous India’ : 3 day national meet of Bharatiya Kisan Sangh at Mysore

‘United Farmer for Prosperous India’ : 3 day national meet of Bharatiya Kisan Sangh at Mysore

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

EDITOR'S PICK

ತಮಿಳುನಾಡಿನಲ್ಲಿ ವಿವೇಕಾನಂದ ಸಭಾಗೃಹ ಉದ್ಘಾಟಿಸಿದ ಆರ್‌ಎಸ್‌ಎಸ್‌ನ ಸರಸಂಘಚಾಲಕರಾದ ಶ್ರೀಮೋಹನ್ ಭಾಗವತ್

January 21, 2022
RSS Condoles Gopinath Munde’s Death; RSS Sarasanghachalak Mohan Bhagwat paid tributes

RSS Condoles Gopinath Munde’s Death; RSS Sarasanghachalak Mohan Bhagwat paid tributes

June 3, 2014
VHP welcomes Bombay High Court decision on refusal to lift beef ban during Bakrid in Maharashtra

VHP welcomes Bombay High Court decision on refusal to lift beef ban during Bakrid in Maharashtra

September 23, 2015

ABVP National Council Meet: Resolution 3

June 1, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಹಿಂದೂರಾಷ್ಟ್ರದ ಸಮರ್ಥಕ – ಸಾವರ್ಕರ್ : ಶ್ರೀ ಗುರೂಜಿ
  • ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್
  • ಅಧೋಗತಿಯತ್ತ ರೆಕ್ಕೆಯ ದ್ವಿಪಾದಿಗಳು
  • Alapuzha – One arrested for provocative sloganeering during PFI rally
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In