• Samvada
Thursday, May 19, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ಆರೆಸ್ಸೆಸ್ ನ ಹಿರಿಯ ಪ್ರಚಾರಕ ಶ್ರೀ ‌ಶಿವಶಂಕರ್ ನಿಧನ #ಶ್ರದ್ಧಾಂಜಲಿ #ಓಂ_ಶಾಂತಿ

Vishwa Samvada Kendra by Vishwa Samvada Kendra
December 1, 2020
in Others
250
1
ಆರೆಸ್ಸೆಸ್ ನ ಹಿರಿಯ ಪ್ರಚಾರಕ ಶ್ರೀ ‌ಶಿವಶಂಕರ್ ನಿಧನ  #ಶ್ರದ್ಧಾಂಜಲಿ #ಓಂ_ಶಾಂತಿ

Sri Shivashankar

492
SHARES
1.4k
VIEWS
Share on FacebookShare on Twitter

ಆರೆಸ್ಸೆಸ್ ನ ಹಿರಿಯ ಪ್ರಚಾರಕ ಶ್ರೀ ‌ಶಿವಶಂಕರ್ ನವೆಂಬರ್ 30 ರ ಮಧ್ಯಾಹ್ನ ತಮ್ಮ ಬದುಕಿನ ಪಯಣವನ್ನು ಪೂರ್ಣಗೊಳಿಸಿದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.  ಇತ್ತೀಚಿನ ದಿನಗಳಲ್ಲಿ ಅವರು ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ವಾಸಿಸುತ್ತಿದ್ದರು. ಶಿವಶಂಕರ್ ಅವರದ್ದು 42 ವರ್ಷಗಳ ಸುದೀರ್ಘ ಪ್ರಚಾರಕ ಜೀವನ. 


ಪರಿಚಯ:
ಶಿವಶಂಕರ್ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿಯ ಕೆಮ್ಮಣ್ಣು ಗ್ರಾಮದಲ್ಲಿ. ಜನಾರ್ದನಯ್ಯ, ಗೌರಮ್ಮ ದಂಪತಿಗಳ ತುಂಬು ಕುಟುಂಬದ ಏಳು ಮಕ್ಕಳಲ್ಲಿ ಶಿವಶಂಕರ್ ಆರನೆಯವರು. ಶಾಲಾ ಶಿಕ್ಷಣ ಪೂರೈಸಿ ಕಾಲೇಜು ಮೆಟ್ಟಿಲೇರಿದ ಶಿವಶಂಕರ್ ಪಡೆದುಕೊಂಡಿದ್ದು ಬಿ. ಬಿ. ಎಂ. ಪದವಿಯನ್ನು. ನಾಲ್ಕು ದಶಕಗಳ ಹಿಂದಿನ ಬಿ. ಬಿ. ಎಂ. ಅಂದರೆ ಪ್ರಾಯಶಃ ಮೊದಲ ಗುಂಪಿನ ಪದವೀಧರರಿರಬೇಕು. ನಾನು ಮೊದಲ ಬ್ಯಾಚ್ ನ ಬಿ. ಬಿ. ಎಂ. ಪದವೀಧರ ಎಂದು ಅವರೇ ಕೆಲವೊಮ್ಮೆ ಹೇಳುತ್ತಿದ್ದರು. ವಿದ್ಯಾರ್ಥಿ ದಿನಗಳಲ್ಲೇ ಆರೆಸ್ಸೆಸ್ ನ‌ ಸಂಪರ್ಕ. ಶೃಂಗೇರಿ, ಕೊಪ್ಪ, ಕಳಸ, ಸಾಗರದ ಮಲೆನಾಡಿನ ಪರಿಸರದಲ್ಲಿ ಆರೆಸ್ಸೆಸ್ ಬಲಿಷ್ಠ ಹೆಜ್ಜೆಗಳನ್ನು ಇಡುತ್ತಿದ್ದ ದಿನಗಳಲ್ಲಿ ಅದಾಗಲೇ ಕೆಲವರು ಪ್ರಚಾರಕರಾಗಿ‌ ಹೊರಟಿದ್ದರು. ಅದೇ ಸಾಲಿನಲ್ಲಿ ಮಲೆನಾಡಿನಿಂದ ಹೊರಟ ಇನ್ನೋರ್ವ ಪ್ರಚಾರಕ ಶಿವಶಂಕರ್. 
ಆರಂಭದ ದಿನಗಳಲ್ಲಿ ಸಕಲೇಶಪುರ ನಂತರ ಬೆಂಗಳೂರು ದಕ್ಷಿಣ ಜಿಲ್ಲೆ, ಶಿವಮೊಗ್ಗದ ಸಹ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿದರು. ಹಲವು ಪ್ರದೇಶಗಳಲ್ಲಿ ಕೆಲಸ ಮಾಡಿದ ಅನುಭವ ಸಮೃದ್ಧಿ ಅವರದ್ದಾಗಿತ್ತು. ತೊಂಭತ್ತರ ದಶಕದ ಅಂತ್ಯದಲ್ಲಿ ಶಿವಮೊಗ್ಗ ಜಿಲ್ಲೆ ಕಂಡ ಸಂಘಕಾರ್ಯದ ತ್ವರಿತ ಏರಿಕೆಯನ್ನು ಸ್ಥಿರಗೊಳಿಸುವ ಹೊಣೆ ಹೊತ್ತವರು‌ ಶಿವಶಂಕರ್. 

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

ಶ್ರೀ ‌ಶಿವಶಂಕರ್, 1954-2020


ಮಂಗಳೂರು ಮತ್ತು ಬೆಂಗಳೂರಿನ ಆರೆಸ್ಸೆಸ್ ಕಾರ್ಯಾಲಯಗಳ ಪ್ರಮುಖರಾಗಿ ಹಲವು ವರ್ಷ ಶಿವಶಂಕರ್ ಕೆಲಸ ಮಾಡಿದ್ದಾರೆ. ಅವರ ಸದಾ ಹಸನ್ಮುಖಿ, ನಿರುದ್ವಿಗ್ನ, ಮೃದು – ಮಿತ ಭಾಷಿ ಗುಣಗಳು ಶಿವಶಂಕರ್ ಅವರ ಸಂಪರ್ಕಕ್ಕೆ ಬಂದವರು ಗುರುತಿಸುತ್ತಿದ್ದರು. ಅವರೊಂದಿಗಿನ ಬಹುತೇಕ ಎಲ್ಲರ ಅನುಭವವೂ ಇದೇ ಅಗಿತ್ತು. ಆಪ್ತವಲಯದಲ್ಲಿ ಅವರು “ಅಣ್ಣಯ್ಯ” ಎಂದೇ ಪರಿಚಿತರು. 


ಶಿವಶಂಕರ್ ಅವರಿಗೆ ಆತ್ಮೀಯರಾಗಿದ್ದವರನ್ನು ಸಂಪರ್ಕಿಸಿದಾಗ, ಭಗವದ್ಗೀತೆಯ “ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್”‌ ಸಾಲನ್ನು ಉದ್ಧರಿಸುತ್ತ ಇದು ನಮ್ಮ ಅಣ್ಣಯ್ಯನ ಬದುಕನ್ನು, ಸ್ವಭಾವವನ್ನು ಸರಿಯಾಗಿ ಹಿಡಿದಿಡುತ್ತದೆ ಎಂದರು. 

ಆರೆಸ್ಸೆಸ್ ನ‌ ಸಹ ಸರಕಾರ್ಯವಾಹ ಶ್ರೀ ಮುಕುಂದ, ಕ್ಷೇತ್ರ ‌ಸಂಘಚಾಲಕ ವಿ. ನಾಗರಾಜ್, ಪ್ರಾಂತ ಸಂಘಚಾಲಕ ಮ. ವೆಂಕಟರಾಮು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

  • email
  • facebook
  • twitter
  • google+
  • WhatsApp
Tags: Shivashankar RSS pracharak

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ : ಒಂದು ವಿಶ್ಲೇಷಣೆ  #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

“ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

Comments 1

  1. ವೆಂ. ರಾಜೇಂದ್ರ ಪ್ರಸಾದ್ says:
    1 year ago

    ನಮ್ಮ ಮನೆಯ ಎಲ್ಲರಿಗೂ ಅತ್ಯಂತ ಆತ್ಮೀಯ, ಅಚ್ಚುಮೆಚ್ಚಿನ ಬಂಧುವಾಗಿದ್ದರು. ಅವರ ಸಂಪರ್ಕಕ್ಕೆ ಬಂದವರೆಲ್ಲರಿಗೂ ನಿಷ್ಕಲ್ಮಶ ಪ್ರೀತಿಯನ್ನು ಉಣಬಡಿಸುತ್ತಿದ್ದ ಶಿವಶಂಕರ್ ಜೀ, ಯಾರೊಂದಿಗೂ ಕೋಪಿಸಿಕೊಂಡ ಉದಾಹರಣೆ ಇಲ್ಲ. ಆಗಿನ ಕಾಲದಲ್ಲೇ ಬಿಬಿಎಂ ಪದವಿ ಪಡೆದ ಮೇಧಾವಿಗಳಾಗಿದ್ದರೂ ಎಂದಿಗೂ ಅಹಂಕಾರದಿಂದ ವರ್ತಿಸಿದವರಲ್ಲ. ಸುದೀರ್ಘ 42 ವರ್ಷಗಳ ಪ್ರಚಾರಕ್ ಜೀವನದ ಅನುಭವವಿದ್ದರೂ ನಿಗರ್ವಿಯಾಗಿಯೇ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದ ಶಿವಶಂಕರ್ ಜೀ ಇನ್ನಿಲ್ಲ ಎನ್ನುವುದು ನಿಜಕ್ಕೂ ಸಂಘಟನೆಗೆ ಮಾತ್ರವಲ್ಲ ಅವರ ಆತ್ಮೀಯತೆಯ ಸವಿಯನ್ಟು ಸವಿದ ಎಲ್ಲ ಕಾರ್ಯಕರ್ತರ ಪರಿವಾರಗಳಿಗೆ ತುಂಬಲಾರದ ನಷ್ಟವೇ.
    ಶಿವಶಂಕರ್ ಜೀ ಸದ್ಗತಿಗೆ ಅಕ್ಷರಶಃ ಅರ್ಹರು.
    ಓಂ ಶಾಂತಿಃ ಶಾಂತಿಃ ಶಾಂತಿಃ.

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Vande Mataram & Bharat Mata Ki Jai are anti-Islam says Syed Ahmed Bukhari

Vande Mataram & Bharat Mata Ki Jai are anti-Islam says Syed Ahmed Bukhari

August 22, 2011
ಕೊಡಗು ಜಿಲ್ಲೆಯ ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ ಸಮಾರಂಭ

ಕೊಡಗು ಜಿಲ್ಲೆಯ ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ ಸಮಾರಂಭ

October 15, 2017
July 6: Nation-wide massive protest against Jammu-Kashmir Interlocutors Report

July 6: Nation-wide massive protest against Jammu-Kashmir Interlocutors Report

July 5, 2012
‘Hindutva is the only way to bring about change in the country’: RSS Chief Bhagwat

‘Hindutva is the only way to bring about change in the country’: RSS Chief Bhagwat

June 19, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In