• Samvada
Sunday, May 29, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

RSS youth gathering ‘Taruna Sangama’ held Davanagere in Karnataka

Vishwa Samvada Kendra by Vishwa Samvada Kendra
January 12, 2015
in Others
250
0
RSS youth gathering ‘Taruna Sangama’ held Davanagere in Karnataka
491
SHARES
1.4k
VIEWS
Share on FacebookShare on Twitter

Davanagere Jan 12, 2015: RSS Unit of Davanagere Nagar organised Taruna Sangama, a youth gathering held at Governmrnt Boys Highschool Grounds at Davanagere in Karnataka on Sunday evening. RSS Karnataka Dakshin Pranth Sah Karyavah Prof BV Sreedhar Swamy addressed the gathering. Swayamsevaks performed physical exercises, Surya Namaskar, Ghosh the RSS Bandset etc. Former president of Lawyers Association V Thimmesh, Nagar Sanghachalak GT Suresh were on the dais.

11dvg100

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

11dvg38

‘ಜೀವನ ಸಮಾಜಕ್ಕಾಗಿಯೇ ಹೊರತು ಸ್ವಂತಕ್ಕಾಗಿ ಅಲ್ಲ’: ಆರ್‌ಎಸ್‌ಎಸ್‌ನ ತರುಣ ಸಂಗಮದಲ್ಲಿ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶ್ರೀಧರಸ್ವಾಮಿ

ದಾವಣಗೆರೆ: ಮಾನವತಾವಾದಿ ಬಸವಣ್ಣನವರು ಪ್ರತಿಪಾದಿಸಿದ ತತ್ವಗಳನ್ನು ಮೈಗೂಡಿಸಿಕೊಂಡವರೇ ರಾಷ್ಟ್ರೀಯ ಸ್ವಯಂಸೇವಕರು. ಈ ಜೀವನ ಸಮಾಜಕ್ಕಾಗಿಯೇ ಹೊರತು ಸ್ವಂತಕ್ಕಾಗಿ ಅಲ್ಲ ಎಂಬ ಶರಣತತ್ವವೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ದೃಷ್ಟಿಕೋನ ಎಂದು ಆರ್‌ಎಸ್‌ಎಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶ್ರೀಧರಸ್ವಾಮಿ ವ್ಯಾಖ್ಯಾನಿಸಿದರು.

ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ತರುಣ ಸಂಗಮದ ಅಂಗವಾಗಿ ನಡೆದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಅವರು ಬೌದ್ಧಿಕ್ ನೀಡಿದರು.

ಆಧುನಿಕ ಯುಗದಲ್ಲಿ ಮಕ್ಕಳು ಉನ್ನತ ಪದವಿ ಗಳಿಸಬೇಕೆಂಬ ಭರದಲ್ಲಿ ಅತಿಮುಖ್ಯವಾದ ಚಾರಿತ್ರ್ಯವೇ ಗೌಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಪಂಚಶೀಲಗಳನ್ನೇ ಸಂಘವೂ ಪಾಲಿಸುತ್ತಿದೆ. ಸ್ವಯಂಸೇವಕರು ಶರಣರಂತೆ ಸಮಾಜಕ್ಕಾಗಿ ಬದುಕುವವರು. ಸ್ವಾಮಿ ವಿವೇಕಾನಂದರ ಪರಿಕಲ್ಪನೆಯ ಸ್ವಯಂಸೇವಕರೂ ಇವರೇ ಎಂದು ನುಡಿದರು.

ಮಲ್ಯಗಳ ಕೊರತೆಯಿಂದ ಇಂದು ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ಜತಿಯ ಭಾವನೆಯಿಂದ ಸಮಾಜ ವಿಘಟನೆಯಾಗುತ್ತಿದೆ. ಸಮಾಜ ಸಶಕ್ತವಾದರೆ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಜ್ಜನ ಶಕ್ತಿಗಳು ಒಂದಾದರೆ ದುಷ್ಟಕೂಟದ ಆಟ ನಡೆಯುವುದಿಲ್ಲ. ಆದ್ದರಿಂದ ಸಮಾಜದಲ್ಲಿ ಒಗ್ಗಟ್ಟಿನ ಅವಶ್ಯಕತೆ ಇದೆ. ಆದ್ದರಿಂದ ಹಿಂದೂ ಸಮಾಜ ಸಂಘಟನೆಯೊಂದಿಗೆ ಸಾಮರ್ಥ್ಯ, ಚಾರಿತ್ರ್ಯ ನಿರ್ಮಾಣ ಕೆಲಸವನ್ನು ಸಂಘ ಮಾಡುತ್ತಿದೆ ಎಂದರು.

ಸಮಾಜಕ್ಕಾಗಿ ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಸಂಸ್ಕಾರವನ್ನು ಸಂಘ ನೀಡುತ್ತಿದೆ. ಹಾಗಾಗಿಯೇ ಸಮಾಜದಲ್ಲಿ ಸಂಘದ ಬಗ್ಗೆ ಅಪಾರ ಗೌರವವಿದೆ. ತಮ್ಮ ಮಕ್ಕಳಿಗೆ ಶ್ರೀರಾಮ, ಶ್ರೀಕೃಷ್ಣನ ವೇಷ ತೊಡಿಸುವ ಅದೇ ತಾಯಂದಿರು ಮಕ್ಕಳನ್ನು ಸಂಘದ ಗಣವೇಷದಲ್ಲಿ ನೋಡುವುದನ್ನು ಇಷ್ಟಪಡುತ್ತಿದ್ದಾರೆ. ನಾವೆಲ್ಲರೂ ವಿಶಾಲ ಹಿಂದೂ ಪರಿವಾರಕ್ಕೆ ಸೇರಿದವರು ಎಂಬ ಮನೋಭಾವವೇ ಈ ಉತ್ಸಾಹಕ್ಕೆ ಕಾರಣ. ಸಂಘವು ಕಳೆದ ೯ ದಶಕಗಳಿಂದ ಸಮಾಜದಲ್ಲಿನ ಅಭೂತಪೂರ್ವ ಪರಿವರ್ತನೆಗೆ ಕಾರಣವಾಗಿದೆ. ಸಮಾಜದಲ್ಲಿ ಏಕೀಭಾವ ಜಗೃತಗೊಳಿಸಿ, ಅದಕ್ಕೆ ಶಕ್ತಿ ತುಂಬುವ ಮೂಲಕ ಸಮಗ್ರ ವಿಕಾಸದ ನಿಟ್ಟಿನಲ್ಲಿ ಸಂಘ ಸಾಗುತ್ತಿದೆ ಎಂದು ನುಡಿದರು.

ಎಲ್ಲರಲ್ಲೂ ಸದ್ಭಾವನೆ ಮೂಡಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಆಗ ಮಹಿಳಾ ದೌರ್ಜನ್ಯ ಸೇರಿದಂತೆ ಯಾವುದೇ ಹಿಂಸಾಕೃತ್ಯಕ್ಕೂ ಅವಕಾಶವಾಗದೆ, ಜಗತ್ತು ಸುಂದರವಾಗುತ್ತದೆ. ಆದ್ದರಿಂದಲೇ ಒಳ್ಳೆಯವನಾಗಿರು-ಒಳ್ಳೆಯದನ್ನು ಮಾಡು ಎಂಬ ಸಂದೇಶದೊಂದಿಗೆ ವಿವೇಕ್ ಬ್ಯಾಂಡ್ ಅಭಿಯಾನವನ್ನು ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜ.12ರಿಂದ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆ, ನಶಾಮುಕ್ತಿ, ಆರೋಗ್ಯ, ಶಿಕ್ಷಣ ಹೀಗೆ ಯಾವುದಾದರೊಂದು ಒಳ್ಳೆಯ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಸಮಾಜವನ್ನು ಕಾಡುತ್ತಿರುವ ಸವಾಲುಗಳಿಗೆ ಉತ್ತರ ರೂಪದಲ್ಲಿ ಸೇವಾ ಕಾರ್ಯ ಕೈಗೊಳ್ಳಿ. ಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.

ದೇಶದ ಹಿತರಕ್ಷಣೆಯು ಸಂಘದ ಕೆಲಸ ಮಾತ್ರವಲ್ಲ, ದೇಶವನ್ನು ಪೂಜಿಸುವ ಪ್ರತಿಯೊಬ್ಬರ ಕರ್ತವ್ಯವೂ ಹೌದು. ಸಂಘದ ಕಾರ್ಯಕ್ಕೆ ಕೈಜೋಡಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಸಮಾಜದ ಸರ್ವಾಂಗೀಣ ಪ್ರಗತಿಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ದೇಶಭಕ್ತಿಯ ಸುಗಂಧವನ್ನು ಎಲ್ಲೆಡೆ ಹರಡಿ. ದೇಶವನ್ನು ಕಾಡುತ್ತಿರುವ ಸವಾಲುಗಳ ಪರಿಹಾರಕ್ಕೆ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ವಯಂಸೇವಕರಿಂದ ಧ್ವಜವಂದನೆ, ಉಪವಿಷ್ಟ ವ್ಯಾಯಾಮ, ಸೂರ್ಯ ನಮಸ್ಕಾರ, ಸ್ಥಿರದಲ್ಲಿ ಘೋಷ್ ಪ್ರದರ್ಶನ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿ. ತಿಮ್ಮೇಶ್ ವಹಿಸಿದ್ದರು. ನಗರ ಸಂಘಚಾಲಕ ಜಿ.ಟಿ. ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಕಾರ್ಯವಾಹ ಅರುಣ ಗುಡ್ಡದಕೇರಿ ವರದಿ ಮಂಡಿಸಿದರು. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ವಂದಿಸಿದರು.

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
SEVA SANGHIK: RSS Swayamsevaks cleans public streets at Tiptur, Karnataka

SEVA SANGHIK: RSS Swayamsevaks cleans public streets at Tiptur, Karnataka

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

EDITOR'S PICK

Ahead of verdict, RSS harps on Ayodhya temple

Ahead of verdict, RSS harps on Ayodhya temple

September 15, 2010

Gram Vikas project seeks public help

June 13, 2011
ಆಸೆ-ಆಮಿಷಗಳನ್ನು ಒಡ್ಡಿ ನಡೆಸುವ ಬಲವಂತದ ಮತಾಂತರ ತಡೆಗೆ ಕಾನೂನು ಅಗತ್ಯ : ರಾಮಾಜೋಯಿಸ್

ಆಸೆ-ಆಮಿಷಗಳನ್ನು ಒಡ್ಡಿ ನಡೆಸುವ ಬಲವಂತದ ಮತಾಂತರ ತಡೆಗೆ ಕಾನೂನು ಅಗತ್ಯ : ರಾಮಾಜೋಯಿಸ್

March 29, 2011

ನೇರನೋಟ: ಕಾಡುತ್ತಿವೆ ರಂಝಾನ್ ಮಾಸದ ಕಹಿ ನೆನಪುಗಳು

August 9, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಹಿಂದೂರಾಷ್ಟ್ರದ ಸಮರ್ಥಕ – ಸಾವರ್ಕರ್ : ಶ್ರೀ ಗುರೂಜಿ
  • ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್
  • ಅಧೋಗತಿಯತ್ತ ರೆಕ್ಕೆಯ ದ್ವಿಪಾದಿಗಳು
  • Alapuzha – One arrested for provocative sloganeering during PFI rally
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In