• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Organisation Profiles

SAHAKARA BHARATI – ಸಹಕಾರ ಭಾರತಿ :

Vishwa Samvada Kendra by Vishwa Samvada Kendra
September 18, 2010
in Organisation Profiles
252
0
SAHAKARA BHARATI – ಸಹಕಾರ ಭಾರತಿ :
501
SHARES
1.4k
VIEWS
Share on FacebookShare on Twitter

ಸಹಕಾರ ಭಾರತಿ : ಒಂದು ವಿಶಿಷ್ಟ ಹೆಜ್ಜೆ
ನಮ್ಮ ದೇಶದ ಸಹಕಾರಿ ರಂಗದ ವ್ಯಾಪ್ತಿ ಬಹಳ ದೊಡ್ಡದು. ಸ್ವಾತಂತ್ರ್ಯಪೂರ್ವದಿಂದಲೂ ಅನೇಕ ಸಹಕಾರಿ ಸಂಘಗಳು ಜನಸಾಮಾನ್ಯರನ್ನು ಸಂಘಟಿಸಿ, ಸ್ಥಳೀಯ ಕೃಷಿ, ವ್ಯಾಪಾರ, ವ್ಯವಹಾರಗಳಿಗೆ ಬೆನ್ನೆಲುಬಾಗಿ ನಿಂತಿವೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ಮಹತ್ತ್ವದ್ದು. ಈಗಂತೂ ಅವುಗಳ ಮಹತ್ತ್ವ, ವ್ಯಾಪ್ತಿ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಕೇವಲ ಸ್ವಾರ್ಥಸಾಧನೆಗಾಗಿ ಸಹಕಾರ ವಿಶೇಷವೇನಲ್ಲ. ಸಹಕಾರವು ಸಂಸ್ಕಾರಯುತ ವಾದಾಗ ಸಮಾಜಕ್ಕೆ ಹೆಚ್ಚು ಹಿತ. ಎಲ್ಲರೂ ಪ್ರತ್ಯೇಕವಾಗಿ ತಮ್ಮ ತಮ್ಮದೇ ಸಹಕಾರಿ ಸಂಘಗಳನ್ನು ನಡೆಸುತ್ತಾ ಒಬ್ಬರಿಗೊಬ್ಬರ ಪರಿಚಯವಿಲ್ಲದೇ ತಮ್ಮ ದಾರಿಯಲ್ಲಿ ತಾವು ನಡೆಯುವುದಕ್ಕಿಂತ ಎಲ್ಲರ ನಡುವೆ ಬಾಂಧವ್ಯ ಬೆಳೆದರೆ, ಪರಸ್ಪರ ಅನುಭವಗಳನ್ನು ಹಂಚಿಕೊಳ್ಳು ವಂತಾದರೆ, ಜನರಿಗೆ ಅನುಕೂಲವಾಗುವ ಹೊಸ ಹೊಸ ಪ್ರಯೋಗಗಳನ್ನು ನಡೆಸುವಂತಾದರೆ, ಹೊಸದಾಗಿ ಸಹಕಾರ ಸಂಘಗಳನ್ನು ರಚಿಸುವವರಿಗೆ ‘ಹೆದರಬೇಡಿ ನಾವಿದ್ದೇವೆ!’ ಎನ್ನುವ ಮಾರ್ಗದರ್ಶನ ಸಿಗುವಂತಾದರೆ ಎಷ್ಟು ಚೆನ್ನ! ಅಲ್ಲದೇ, ಸಹಕಾರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು, ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವ ಕಾನೂನುಗಳ ಜಾರಿ, ಸಹಕಾರ ಸಂಘಗಳಿಗೆ ಅನುದಾನ ಇಂತಹವುಗಳ ಬಗ್ಗೆ ಗಮನ ಹರಿಸಲು ಒಂದು ಸಂಘಟನೆಯಿದ್ದರೆ ಸಹಕಾರಿಗಳಿಗೆ ಖಂಡಿತಾ ಖುಷಿಯಲ್ಲವೇ? ಅಂತಹ ಒಂದು ಪ್ರಯತ್ನವೇ ಸಹಕಾರ ಭಾರತಿ!

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ದಿ| ಲಕ್ಷ್ಮಣರಾವ್ ಇನಾಂದಾರ್‌ರವರ ಮಾರ್ಗದರ್ಶನದಲ್ಲಿ ೧೯೭೮ರ ಸೆಪ್ಟೆಂಬರ್ ೧೫, ಅನಂತ ಚತುರ್ದಶಿಯ ದಿನದಂದು ದಿ| ಮಾಧವರಾವ್ ಗೋಡ್‌ಬೋಲೆ ಯವರಿಂದ ಮಹಾರಾಷ್ಟ್ರದ ಪುಣೆಯಲ್ಲಿ ಸಹಕಾರ ಭಾರತಿಯು ಜನ್ಮ ತಳೆಯಿತು. ಇಂದು ೨೩ ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿರುವ ಸಹಕಾರ ಭಾರತಿಯು ಸಹಕಾರ ರಂಗದ ಬೆಳವಣಿಗೆಗಾಗಿ ಸಂಘಟನೆ, ಆಂದೋಲನ, ಪ್ರಕಲ್ಪ ಮತ್ತು ಸಹಕಾರ ಸಂಘಗಳ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ’ಸಹಕಾರಿ ರಂಗದ ಏಕೈಕ ಸ್ವಯಂಸೇವಾ ಸಂಘಟನೆ’ ಎಂದು ಗುರುತಿಸಲ್ಪಟ್ಟಿದೆ.
ಭ್ರಷ್ಟಾಚಾರರಹಿತ ಮತ್ತು ಆದರ್ಶ ಸಹಕಾರಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಸಹಕಾರ ಭಾರತಿಯು ಸಾಮಾಜಿಕ ಕಳಕಳಿಯುಳ್ಳ ರಾಜಕೀಯೇತರ ಸಂಘಟನೆ ಯಾಗಿ ಸಹಕಾರ ರಂಗದಲ್ಲಿ ತನ್ನ ವಿಶಿಷ್ಟ ಛಾಪನ್ನು ಮೂಡಿಸಿದೆ. ಕರ್ನಾಟಕದಲ್ಲಿ ಸಹಕಾರ ಭಾರತಿಯ ಸಾಧನೆಗಳ ಬಗೆಗಿನ ಕಿರುನೋಟ ಇಲ್ಲಿದೆ.
ಸಂಘಟನಾತ್ಮಕ ಚಟುವಟಿಕೆಗಳು
ಟ    ಆಗಾಗ ಕಾರ್ಯಕರ್ತರ ಅಭ್ಯಾಸ ವರ್ಗಗಳು, ಸಹಕಾರಿಗಳ ಸಮಾವೇಶಗಳು, ನಾಯಕತ್ವ ಶಿಬಿರ, ಸಹಕಾರಿ ಸಂಘಗಳ ನಿರ್ದೇಶಕರ ತರಬೇತಿ ಕಾರ್ಯಕ್ರಮ, ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರಗಳು, ವಿಚಾರಗೋಷ್ಠಿ, ಹೊಸ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳು – ಹೀಗೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಟ    ಸದಸ್ಯರಲ್ಲಿ ಸಹಕಾರಿ ರಂಗದ ಅರಿವಿನ ಜೊತೆಗೆ ರಾಷ್ಟ್ರೀಯತೆ ಹಾಗೂ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಲು ’ಮಾಹಿತಿ ಸಿಂಚನ’ ಕೈಪಿಡಿ.
ಟ    ಸಹಕಾರ ಭಾರತಿಯ ಚಟುವಟಿಕೆಗಳು ಮತ್ತು ಸಹಕಾರಿ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಸಹಕಾರಿಗಳಿಗೆ ತಿಳಿಸಲು ’ಸಹಕಾರ ಕುಸುಮ’ ತ್ರೈಮಾಸಿಕ.
ಟ    ಸದಸ್ಯತ್ವ ನೋಂದಣಿ ಅಭಿಯಾನ. ಸುಮಾರು ೨೦೦ ಸಹಕಾರಿ ಸಂಘಗಳು ಮತ್ತು ೫೦೦೦ ವ್ಯಕ್ತಿ ಸದಸ್ಯರ ಸದಸ್ಯತ್ವ ನೋಂದಣಿ.
ಆಂದೋಲನಾತ್ಮಕ ಚಟುವಟಿಕೆಗಳು
ಟ    ಕರ್ನಾಟಕದಲ್ಲಿ ೫% ಸಹಕಾರ ಕಲ್ಯಾಣ ನಿಧಿ ರದ್ದತಿಗೆ ನ್ಯಾಯಾಲಯದ ಮೂಲಕ ಹೋರಾಟ. ಅದರಲ್ಲಿ ಯಶಸ್ಸು. ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿಯಲ್ಲಿ ಸಹಕಾರ ಭಾರತಿಯ ಶಿಫಾರಸ್ಸುಗಳಿಗೆ ಮನ್ನಣೆ.
ಟ    ಕಾನೂನು ತಿದ್ದುಪಡಿಯ ಮೂಲಕ ಸಹಕಾರ ಸಂಘಗಳ ಆಡಳಿತ ಮಂಡಳಿಗಳಿಗೆ ಹೆಚ್ಚಿನ ಅಧಿಕಾರ ಸಿಗುವಂತೆ ಮಾಡುವಲ್ಲಿ ಯಶಸ್ವಿ.
ಟ    ಕೃಷಿ ಪತ್ತಿನ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ಪ್ರೊ| ವೈದ್ಯನಾಥನ್ ಸಮಿತಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಸತತ ಹೋರಾಟ.
ಟ    ಸಹಕಾರ ಸಂಘಗಳ ಮೂಲಕ ಖರೀದಿಸಿದ ಹಾಲಿಗೆ ೨ ರೂಪಾಯಿ ಬೆಂಬಲ ಬೆಲೆ ಸಿಗುವಂತೆ ಮಾಡುವಲ್ಲಿ ಯಶಸ್ವಿ.
ಟ    ಸಹಕಾರಿ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಕರಡು ತಯಾರಿ. ಸಚಿವರಿಗೆ ಮನವಿ.
ಪ್ರಕಲ್ಪಾತ್ಮಕ ಚಟುವಟಿಕೆಗಳು
ಟ    ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯ ರಚನೆಯಲ್ಲಿ ಸಹಕಾರ ಭಾರತಿಯ ವಿಶೇಷ ಪ್ರಯತ್ನ ಹಾಗೂ ಈ ಕಾಯ್ದೆಯಡಿ ಹೊಸ ಸಂಘಗಳ ಸ್ಥಾಪನೆ.
ಟ    ಪ್ರತಿ ಗ್ರಾಮದಲ್ಲಿ ಸಹಕಾರಿ ಸಂಘ ಮತ್ತು ಪ್ರತಿ ಜಿಲ್ಲೆಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕು ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ.
ಚುನಾವಣೆಗಳಲ್ಲಿ ಯಶಸ್ಸು
ಟ    ಕರ್ನಾಟಕ ಸೌಹಾರ್ದ ಸಹಕಾರಿ ಮಹಾಮಂಡಳಕ್ಕೆ ಸಹಕಾರ ಭಾರತಿಯ ನೇತೃತ್ವ.
ಟ    ಕ್ಯಾಂಪ್ಕೋ, ಮ್ಯಾಮ್‌ಕೋಸ್, ತುಮ್‌ಕೋಸ್, ಕೆ.ಸಿ.ಸಿ. ಬ್ಯಾಂಕ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲದೇ ರಾಜ್ಯದ ಸುಮಾರು ೫೦೦೦ ಸಹಕಾರ ಸಂಸ್ಥೆಗಳಿಗೆ ಸಹಕಾರ ಭಾರತಿಯ ಕಾರ್ಯಕರ್ತರ ನೇತೃತ್ವ. ನಿಮ್ಮ ಊರಿನಲ್ಲಿನ ಸಹಕಾರ ಸಂಘವನ್ನೂ ಸಹಕಾರ ಭಾರತಿಯೊಂದಿಗೆ ಜೋಡಿಸ ಬೇಕೆನಿಸುತ್ತಿ ದೆಯೇ? ಅಥವಾ ಹೊಸ ಸಹಕಾರ ಸಂಘ ಶುರು ಮಾಡಬೇಕೆನಿಸುತ್ತಿದೆಯೇ? ಹಾಗಿದ್ದರೆ, ಇಲ್ಲಿದೆ ನೋಡಿ ವಿಳಾಸ.
ಸಹಕಾರ ಭಾರತಿ ಕರ್ನಾಟಕ
ನಂ. ೧೭೨/೧೧, ಮೊದಲನೆಯ ಮಹಡಿ,
೩ನೆಯ ಮುಖ್ಯರಸ್ತೆ, ೧ನೆಯ ಅಡ್ಡರಸ್ತೆ, ದೇವಯ್ಯ ಪಾರ್ಕ್,
ರಾಮಮೋಹನಪುರ, ಬೆಂಗಳೂರು – ೫೬೦ ೦೨೧
ದೂರವಾಣಿ : 080 6565 0717 / 98458 93455

READ ALSO

Reaching the Unreached : Vanavasi Kalyana Karnataka’s seva to tribal community during #Covid19 lockdown

Applications invited for TAPAS and SAADHANA projects

  • email
  • facebook
  • twitter
  • google+
  • WhatsApp

Related Posts

Reaching the Unreached : Vanavasi Kalyana Karnataka’s seva to tribal community during #Covid19 lockdown
Organisation Profiles

Reaching the Unreached : Vanavasi Kalyana Karnataka’s seva to tribal community during #Covid19 lockdown

January 7, 2021
Applications invited for TAPAS and SAADHANA projects
News Digest

Applications invited for TAPAS and SAADHANA projects

August 29, 2018
ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌
News Digest

ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌

August 19, 2018
VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ
Organisation Profiles

VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ

April 11, 2011
Organisation Profiles

KRUSHI PRAYOG PARIVAR – ಕೃಷಿ ಪ್ರಯೋಗ ಪರಿವಾರ

April 11, 2011
VISHWA HINDU PARISHAD – ವಿಶ್ವ ಹಿಂದು ಪರಿಷತ್
Organisation Profiles

VISHWA HINDU PARISHAD – ವಿಶ್ವ ಹಿಂದು ಪರಿಷತ್

April 1, 2011
Next Post

Kashmir Articles

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Crores of Indians participates in Surya Namaskar Campaign across Nation; lead by RSS local units

Crores of Indians participates in Surya Namaskar Campaign across Nation; lead by RSS local units

April 7, 2013
TWO UNIQUE EVENTS: LK Advani writes

TWO UNIQUE EVENTS: LK Advani writes

September 11, 2012
‘Secular fanaticism’ leads to Communal Riots in Muzaffarnagar: ORGANISER Editorial

‘Secular fanaticism’ leads to Communal Riots in Muzaffarnagar: ORGANISER Editorial

August 25, 2019
‘Reforms in Education System is need of the hour’: Goa CM Parikkar at Intellectual Meet Bangalore

Rashtra Sevika Samiti condoles over sad demise of Goa CM Manohar Parikkar

March 17, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In