• Samvada
  • Videos
  • Categories
  • Events
  • About Us
  • Contact Us
Thursday, February 2, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

‘ಸಮರ್ಥ ಭಾರತ’: ಎರಡು ದಿನಗಳ ರಾಷ್ಟ್ರಾಭಿಮಾನಿ ಸೇವಾಸಕ್ತರ ಸಮಾವೇಶಕ್ಕೆ ತೆರೆ

Vishwa Samvada Kendra by Vishwa Samvada Kendra
August 25, 2014
in News Digest
251
0
SAMARTHA BHARATA concludes; RSS Sahsarakaryavah Dattaji calls to participate in the activities of RSS

RSS Pranth Karyavah N Tippeswamy, RSS Sahasarakaryavah Dattatreya Hosabale, RSS Pranth Sanghachalak M Venkataram

492
SHARES
1.4k
VIEWS
Share on FacebookShare on Twitter

ಬೆಂಗಳೂರು ಆಗಸ್ಟ್, 24 : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ಆಗಸ್ಟ್ 23 ರಂದು ಉದ್ಘಾಟನೆಗೊಂಡ ಎರಡು ದಿನಗಳ ರಾಷ್ಟ್ರಾಭಿಮಾನಿ ಸೇವಾಸಕ್ತರ ಸಮಾವೇಶ ಇಂದು ಸಮಾರೋಪಗೊಂಡಿತು.  ಸಮಾರೋಪ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ  ದತ್ತಾತ್ರೇಯ ಹೊಸಬಾಳೆ  ಪಾಲ್ಗೊಂಡರು.

RSS Pranth Karyavah N Tippeswamy, RSS Sahasarakaryavah Dattatreya Hosabale, RSS Pranth Sanghachalak M Venkataram
RSS Pranth Karyavah N Tippeswamy, RSS Sahasarakaryavah Dattatreya Hosabale, RSS Pranth Sanghachalak M Venkataram

ಅವರ ವಕ್ತವ್ಯದ ಸಾರಾಂಶ:
ಸಮರ್ಥ ಭಾರತ ಸಮಾವೇಶದಲ್ಲಿ ಪಾಲ್ಗೊಂಡ ಉತ್ಸಾಹಿ ಸೇವಾಸಕ್ತರನ್ನು ಕಂಡು, ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ನಂಬಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕತರ ನಂಬಿಕೆ ಬಲಗೊಂಡಿದೆ. ಒಳ್ಳೆಯ ದಿನಗಳು ಬರಲಿವೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಆ ಒಳ್ಳೆಯ ದಿನಗಳು ದೈವ ಕೃಪೆಯಿಂದಲೋ ಸರಕಾರಿ ಕಾರ್ಯದಿಂದಲೋ ಅಥವಾ ಸಮಾಜ ಸುಧಾರಕರ ಸೇವೆಯಿಂದಲೋ ಮಾತ್ರ ಬರುವುದಲ್ಲ. ಈ ದೇಶದ ಸಾಮಾನ್ಯ ಜನರಲ್ಲಿ ನಾವು ಸಮರ್ಥ ಭಾರತ ಕಟ್ಟಬೇಕೆಂದು ಸಂಕಲ್ಪ ಮೂಡದಿರುವವರೆಗೆ ಉಳಿದೆಲ್ಲ ಪ್ರಯತ್ನಗಳು ವ್ಯರ್ಥ. ನಮ್ಮೆಲ್ಲರ ಶಕ್ತಿ ಸೇರಿದ್ದರೆ ಈ ದೇಶದ ಮುಖಚಿತ್ರವನ್ನು ಬದಲಿಸಬಲ್ಲೆವು ಎನ್ನುವ ವಿಶ್ವಾಸ ಜನಸಾಮಾನ್ಯರಲ್ಲಿ ಬರಬೇಕು.
ಪ್ರತಿಯೊಬ್ಬರಲ್ಲೂ ಸಮಾಜಹಿತ ಕೆಲಸಗಳನ್ನು ಮಾಡುವ ಆಸಕ್ತಿ ಇರುತ್ತದೆ. ಆದರೆ ಅವರಲ್ಲಿ ತಾನೊಬ್ಬ ಮಾತ್ರ ಏನು ಮಾಡಬಲ್ಲೆ? ಎಂಬ ಅವಿಶ್ವಾಸವಿರುತ್ತದೆ. ಅವರಿಗೆ ಅನುಕೂಲಕರ ವಾತಾವರಣ, ಸಹಕಾರದ ಅಗತ್ಯವಿದೆ.
೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿಫಲವಾಯಿತು. ಆದರೆ ಈ ಸಂಗ್ರಾಮದಲ್ಲಿ ಅತಿ ದೊಡ್ಡ ಪಾಠವನ್ನು ಕಲಿತವರು ಬ್ರಿಟಿಷರು. ಆದ್ದರಿಂದಲೇ ಅವರು ಮುಂದಿನ ೯ ದಶಕಗಳ ಕಾಲ ಭಾರತವನ್ನು ಆಳುವಲ್ಲಿ ಸಫಲರಾದರು. ಆ ಯುದ್ಧದ ನಂತರದ ಕಾಲದಲ್ಲಿ ಒಂದು ಗುಂಪಿನ ಜನ ಕ್ರಾಂತಿಕಾರಿ ಮಾರ್ಗವನ್ನು ತುಳಿದರು. ಉಗ್ರ ಹೋರಾಟ ಪಾರ್ಣಾರ್ಪಣೆ ತ್ಯಾಗಗಳ ಮೂಲಕ ದೇಶವನ್ನು ಬ್ರಿಟಿಷ್ ಮುಕ್ತಗೊಳಿಸುವ ಪ್ರಯತ್ನ ನಡೆಸಿದರು. ಇನ್ನೊಂದು ಗುಂಪಿನ ಜನ ಸಮಾಜ ಸುಧಾರಣೆಯ ಮೂಲಕ ದೇಶವನ್ನು ಜಾಗೃತಗೊಳಿಸುವ ಪ್ರಯತ್ನಪಟ್ಟರು. ಈ ಎರಡೂ ಮಾರ್ಗಗಳಲ್ಲಿ ಕಾರ್ಯಮಾಡಿ ಅನುಭವ ಹೊಂದಿದ ಡಾ|| ಹೆಡಗೆವಾರ್ರು ಬ್ರಿಟಿಷರನ್ನು ಭಾರತದಿಂದ ಓಡಿಸುವುದರ ಜೊತೆಗೆ ಅವರು ಯಾಕೆ ಭಾರತವನ್ನು ಆಳಬಲ್ಲವರಾದರು? ಅದಕ್ಕೆ ಏನು ಕಾರಣ? ಸಾವಿರಾರು ವರ್ಷಗಳ ಶ್ರೇಷ್ಠ ಪರಂಫರೆ-ಇತಿಹಾಸ ಹೊಂದಿರುವ ಈ ದೇಶ ಬ್ರಿಟಿಷರ ಗುಲಾಮಗಿರಿಗೆ ಒಳಗಾದುದ್ದು ಹೇಗೆ? ಎಂದು ಪ್ರಶ್ನಿಸಿಕೊಂಡರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ಆತ್ಮಶ್ರದ್ಧೆ. ಆತ್ಮವಿಶ್ವಾಸವಿಲ್ಲದ ಸಮಾಜ ವಿದೇಶಿಯರ ಎದುರಿಗೆ ಮಂಡಿಯೂರಿ ಗುಲಾಮವಾಯಿತು. ಆದ್ದರಿಂದ ಈ ದೇಶದ ಜನತೆಯಲ್ಲಿ ಆತ್ಮವಿಶ್ವಾಸ ತುಂಬಬೇಕಾದ ಅಗತ್ಯವಿದೆ. ಇದು ಒಂದೆರಡು ದಿನಗಳ ಕೆಲಸವಲ್ಲ. ಪ್ರೀತಿ ವಿಶ್ವಾಸ ಪಾರಿವಾರಿಕ ಆತ್ಮೀಯತೆಯೊಂದಿಗೆ ಸತತ ಪ್ರಯತ್ನಗಳಿಂದ ಇದು ಸಾಧ್ಯ ಎಂದು ಕಂಡುಕೊಂಡ ಡಾ|| ಹೆಡಗೆವಾರ್ ದೇಶಭಕ್ತ ಸಾಮರ್ಥ್ಯಶೀಲ ವ್ಯಕ್ತಿಗಳನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸಿದರು. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಟ್ಟಿಗೆ ನಾಂದಿಯಾಯಿತು. ಈ ದೇಶದ ಅಂತಶ್ರದ್ಧೆಯನ್ನು ಬಡಿದೆಬ್ಬಿಸಿ, ಅದು ಸದಾ ಕಾಲ ಜಾಗೃತವಾಗಿ ಸಕ್ರಿಯವಾಗಿ ಇರುವಂತೆ ಮಾಡುವುದು, ಈ ದೇಶದ ಜನತೆಗೆ ವೈಶ್ವಿಕ ಪ್ರಜ್ಞೆಯನ್ನು ಬೆಳೆಸುವುದು ಸಂಘದ ಧ್ಯೇಯವಾಗಿದೆ.

ಸಮಾಜವು ಸದಾ ಜಾಗೃತವಾಗಿರಬೇಕು. ಪ್ರಕೃತಿ ವಿಕೋಪದಲ್ಲಿ ಜಾಗೃತಿ, ಯುದ್ಧಕಾಲದಲ್ಲಿ ಜಾಗೃತಿ, ಚುನಾವಣೆ ಬಂದಾಗ ಜಾಗೃತಿ – ಇಂತಹ ತಾತ್ಕಾಲಿಕ ಜಾಗೃತಿಯಿಂದ ದೇಶದ ಉನ್ನತಿ ಸಾಧ್ಯವಿಲ್ಲ. ಬುದ್ಧ, ಚಾಣಕ್ಯ, ಸ್ವಾಮೀ ವಿವೇಕಾನಂದ, ಗಾಂದಿಜೀಯವರಂತಹ ಎಷ್ಟೋ ಜನ ಮಹಾಪುರುಷರು ಜನಿಸಿದರೂ ಭಾರತ ಇನ್ನೂ ಏಕೆ ಜಾಗೃತವಾಗಿಲ್ಲ? ಭಾರತ ವೈಶ್ವಿಕ ಪಾತ್ರ ವಹಿಸಬೇಕು. ಹಾಗಾಗಬೇಕಾದರೆ ಭಾರತ ತನ್ನ ಕಾಲ ಮೇಲೆ ತಾನು ನಿಲ್ಲಬೇಕು. ಅದನ್ನು ಸಾಧಿಸಬಲ್ಲ ಸಮಥ ವ್ಯಕ್ತಿಗಳನ್ನು ನಿರ್ಮಿಸುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಾಡುತ್ತಿದೆ. ಸಂಘದ ಸ್ವಯಂಸೇವಕರು ಒಂದೂವರೆ ಲಕ್ಷಕ್ಕೂ ಅಧಿಕ ಸೇವಾಚಟುವಟಿಕೆಗಳನ್ನು ಸಮಾಜವನ್ನು ಸೇರಿಸಿಕೊಂಡು ನಡೆಸುತ್ತಿದ್ದಾರೆ. ಸಂಘದ ಸ್ವಯಂಸೇವಕರು ಸಮಾಜದಲ್ಲಿ ಆತ್ಮವಿಶ್ವಾಸ ಬೆಳೆಸುವ, ಅಸ್ಪೃಶ್ಯತೆ, ಅಸಮಾನತೆಗಳನ್ನು ಹೊಡದೋಡಿಸುವ ಕೆಲಸಗಳಲ್ಲಿ ಜೋಡಿಸಿಕೊಂಡಿದ್ದಾರೆ.

ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಜೀವನದ ಕೇಂದ್ರ ಸ್ಥಾನದಲ್ಲಿದೆ. ಇದು ಯಾವುದೇ ರಾಜಕೀಯ ಸಾಧನೆಯಿಂದಲೋ, ಸಮರ್ಥ ನಾಯಕತ್ವದಿಂದ ಮಾತ್ರ ಸಾಧ್ಯವಾದುದಲ್ಲ. ಇದು ಲಕ್ಷಾಂತರ ಸ್ವಯಂಸೇವಕರ, ಅವರ ಪರಿವಾರದ ಪ್ರಯತ್ನ ಮತ್ತು ತ್ಯಾಗಗಳಿಂದ ಸಾಧ್ಯವಾದುದು. ಸಮಾಜಹಿತಕ್ಕಾಗಿ ಶ್ರಮಿಸುವ ಸಾಮರ್ಥ್ಯವನ್ನು ಸಂಘದ ಶಾಖೆಗಳಲ್ಲಿ ಕಲಿಸಿಕೊಡಲಾಗುತ್ತದೆ.

ಹೊರಗೆ ನಿಂತು ನೋಡುವುದಲ್ಲ; ಒಳಗೆ ಬಂದು ಸಂಘವನ್ನು ಕಾಣಬೇಕು. ಸಮಾಜದಲ್ಲಿರುವ ಸಜ್ಜನ ಶಕ್ತಿಯನ್ನು ಸಕ್ರಿಯಗೊಳಿಸುವ ಮತ್ತು ಸಂಘಟಿತಗೊಳಿಸುವ ಕೆಲಸಕ್ಕೆ ನಾವೆಲ್ಲ ತೊಡಗಿಕೊಳ್ಳಬೇಕು. ನಾವು ಕೇವಲ ಪ್ರಶ್ನೆ ಕೇಳುವವರಾಗಬಾರದು. ಪ್ರಶ್ನೆಗೆ ಉತ್ತರವಾಗಬೇಕು. ಶ್ರೇಷ್ಠ ದೇಶದ ಚಿಕ್ಕದೀಪಗಳಾಗಿ ನಮ್ಮ ಸುತ್ತಲಿನ ಕತ್ತಲೆಯನ್ನು ಕಳೆಯುವಂತವರಾಗಬೇಕು. ನಮ್ಮೆಲ್ಲರ ಪ್ರಯತ್ನದಿಂದ ಸಮರ್ಥ ಭಾರತ, ಆಧ್ಯಾತ್ನ ಭಾರತ. ಸಮೃದ್ಧ ಭಾರತ ನಿರ್ಮಾಣವಾಗಬೇಕು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹರಾದ ಶ್ರೀ ತಿಪ್ಪೆಸ್ವಾಮಿಯವರು ಪರಿಚಯಿಸಿದರು. ಮಾನ್ಯ ಸಂಘಚಾಲಕರಾದ ಶ್ರೀ ಮ. ವೆಂಕಟರಾಮು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮೂಹಿಕ ಸಾಂಘಿಕ ಗೀತೆ ಹಾಗೂ ಉಪವಿಷ್ಠ ವ್ಯಾಯಾಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ನಿನ್ನೆ (ಆಗಸ್ಟ್ ೨೩ ಭಾನುವಾರ) ಬೆಳಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಭೌದ್ಧಿಕ್ ಪ್ರಮುಖ್ ಶ್ರೀ ಭಾಗಯ್ಯನವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಸುಮಾರು ೫೦೦೦ಕ್ಕೂ ಅಧಿಕ ಸೇವಾಸಕ್ತರು ಪಾಲ್ಗೊಂಡರು. ಎರಡು ದಿನಗಳ ಕಾಲ ನಡೆದ ಸಮಾವೇಶದಲ್ಲಿ ವಿವಿಧ ಸೇವಾಸಂಘಟನೆಗಳನ್ನು ಹಾಗೂ ಅವುಗಳ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪರಿಚಯ ನೀಡಲಾಯಿತು.

IMG_5326 IMG_5314 IMG_5256 IMG_5268

RSS Sahsarakaryavah Dattatreya Hosabale during his valedictory address at SAMARTHA  BHARATA convention Aug 24-2014
RSS Sahsarakaryavah Dattatreya Hosabale during his valedictory address at SAMARTHA BHARATA convention Aug 24-2014
  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Photos Part-1 : SAMARTHA BHARATA Convention Bangalore

Photos Part-1 : SAMARTHA BHARATA Convention Bangalore

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

​President Pranab Mukherjee inaugurated #IdeaOfBharat Conference by Bharatiya Shikshan Mandal at NewDelhi

​President Pranab Mukherjee inaugurated #IdeaOfBharat Conference by Bharatiya Shikshan Mandal at NewDelhi

February 23, 2017
Veteran RSS Functionary Tumuluri Lakshmi Narayana expires

Veteran RSS Functionary Tumuluri Lakshmi Narayana expires

December 9, 2011
Jayanagar MLA fears questions and blocks Karnataka’s RSS Media in charge

ಟ್ವಿಟರ್ ನಲ್ಲಿ ಬ್ಲಾಕ್, ಅನ್ ಬ್ಲಾಕ್ ಆಟ. ಮೂಲ ಪ್ರಶ್ನೆಗಳಿಗೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ನಿರುತ್ತರ

November 27, 2020
Attended by RSS Chief Bhagwat, the 3day State level Conference concludes at Jamakhandi, Karnataka

Attended by RSS Chief Bhagwat, the 3day State level Conference concludes at Jamakhandi, Karnataka

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In