• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ವಿದೇಶಿ-ಸ್ವದೇಶಿ ಜೀವನಶೈಲಿಯಲ್ಲಿ ಅಜಗಜಾಂತರ : ಪ್ರಮೀಳಾ ತಾಯಿಜೀ ಮೇಢೆ

Vishwa Samvada Kendra by Vishwa Samvada Kendra
August 8, 2012
in Others
250
0
ವಿದೇಶಿ-ಸ್ವದೇಶಿ ಜೀವನಶೈಲಿಯಲ್ಲಿ ಅಜಗಜಾಂತರ : ಪ್ರಮೀಳಾ ತಾಯಿಜೀ ಮೇಢೆ
491
SHARES
1.4k
VIEWS
Share on FacebookShare on Twitter

ಉಪಭೋಗವಾದಿ ಜೀವನ ಬೇಡ

ಹುಬ್ಬಳ್ಳಿ : ಹಿಂದು ಜೀವನ ಶೈಲಿಗೂ, ಅನ್ಯ ದೇಶಗಳ ಜೀವನ ಪದ್ಧತಿಗೆ ಅಜಗಜಾಂತರ ಅಂತರವಿದೆ. ನಮ್ಮದು ಧರ್ಮ, ಸಂಸ್ಕೃತಿ, ಸಂಗಟಿತ ಜೀವನವಾದರೇ, ಕೆಲ ವಿದೇಶಗಳಲ್ಲಿ ಉಪಭೋಗವಾದಿ ಜೀವನ ನಡೆಸುತ್ತಿದ್ದಾರೆ. ಭಾರತೀಯರು ಅದರ ಬೆನ್ನು ಬೀಳುವುದು ಬೇಡ ಎಂದು ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖ ಸಂಚಾಲಿಕಾ ಪ್ರಮಿಲಾ ತಾಯಿಜೀ ಮೇಢೆ ಹೇಳಿದರು.

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ನಡೆದ ೧೫ ದಿನಗಳ ವಿಶ್ವಸಮಿತಿ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮುಕ್ತ ವಕ್ತಾರರಾಗಿ ಮಾತನಾಡಿದ ಅವರು, ಈ ಸತ್ಯವನ್ನು ಈಗಾಗಲೇ ಹಲವಾರು ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದರು.

ಉಪಭೋಗತಾವಧಿ ಜೀವನ ಶೈಲಿ ಅಳವಡಿಸಿಕೊಂಡ ದೇಶಗಳಲ್ಲಿ ನೆಮ್ಮದಿ ಹಾಳಾಗಿದೆ. ಆದರೆ ಭಾರತದಲ್ಲಿ ಅವಕಾಶವೇ ಇಲ್ಲ. ಕಾರಣ ಅಂಗಡಿಯಲ್ಲಿ ಮಾರಾಟವಾಗುವ ಮಿಠಾಯಿಯನ್ನು ದೇವರಿಗೆ ಅರ್ಪಿಸಿ ಪ್ರಸಾದವೆಂದು ಸ್ವೀಕರಿಸುವವರು ನಾವು. ಸದಾ ಶಾಂತಿ, ನೆಮ್ಮದಿ, ಸೇವಾ ಮನೋಭಾವ ನಮ್ಮದು ಎಂದರು.

 

ಮನುಷ್ಯತ್ವ ಬೋಧಿಸಬೇಕಿದೆ:

ಕಳ್ಳ ಮಾರ್ಗ ಅನುಸರಿಸಿ ಬೌದ್ಧಿಕ ವಸ್ತುಗಳ ಉತ್ಪಾದನೆ ಮಾಡಿ ಹಣ ಗಳಿಸುವ ಕಾರ್ಯ ನಡೆಯುತ್ತಿದೆ. ಅದನ್ನು ಮನಸ್ಸು ಮಾಡಿದ ಯಾವುದೇ ವ್ಯಕ್ತಿ ಮಾಡಬಹುದು. ಆದರೆ ಉತ್ತಮ ಮನುಷ್ಯನನ್ನು ರೂಪಿಸುವುದು ಕಷ್ಟ. ಅಂತಹ ಪ್ರಯತ್ನ ಮಾಡಬೇಕಿದೆ. ಅದು ರಾಷ್ಟ್ರ ಸೇವಿಕಾ ಸಮಿತಿಯ ಮೊದಲ ಗುರಿಯಾಗಿದೆ ಎಂದರು.

ಒಳ್ಳೆಯ ಮಾನವನನ್ನು ರೂಪಿಸುವ ಕಾರ್ಯ ಪರಿವಾರದಿಂದಲೇ ಆಗಬೇಕು. ಕುಟುಂಬದ ಮೇಟಿಯಾಗಿರುವ ತಾಯಿಯ ಪಾತ್ರ ದೊಡ್ಡದು. ತಾಯಿಯಿಂದ ಮಗುವಿಗೆ ದೊರೆಯುವ ಸಂಸ್ಕಾರ ಕೊಡುವ ಪಾಠ ಯುವತಿಯರಿಗೆ ನೀಡುತ್ತಿದ್ದೇವೆ. ನಮ್ಮ ಯುವತಿಯರು ಮಾತೃಗಳಾಗಿ, ಸೃಜನಶೀಲರಾಗಿ, ಸಂರಕ್ಷಕರಾಗಿ, ಸಂಗೋಪನಾ ಜವಾಬ್ದಾರಿ ಹೊರಬೇಕಿದೆ ಎಂದು ತಿಳಿಸಿದರು.

ಮಹಿಳೆಯರುಲ್ಲಿ ದೈವಿ ಶಕ್ತಿ, ಚಾರಿತ್ರ್ಯ ಶಕ್ತಿ, ಭಕ್ತಿ, ಸಮರ್ಪಣಾ ಮನೋಭಾವ ಬೆಳೆಯಬೇಕಿದೆ. ನಾವು ನಮ್ಮ ನೆಮ್ಮದಿ ಜೀವನದೊಂದಿಗೆ ಮತ್ತೊಬ್ಬರ ಒಳಿತಿನ ಬಗ್ಗೆ ವಿಚಾರ ಮಾಡಬೇಕಿದೆ. ಅಂತಹ ಪಾಠವನ್ನು ತಾಯಿಗಿಂತ ಉತ್ತಮವಾಗಿ ಕಲಿಸುವ ಗುರು ಮತ್ತೊಬ್ಬಳಿಲ್ಲ ಎಂದರು.

ಮಹಿಳೆಯನ್ನು ಹೆಣ್ಣಾಗಿ ಕಾಣುಬ ಬದಲು ತಾಯಿಯಾಗಿ ನೋಡಬೇಕಿದೆ. ದುರಾಚಾರ, ದುಷ್ಕೃತ್ಯ ಮುಖ್ಯವಾಗಿ ಭಸ್ಮಾಸುರನಂತೆ ಬೆಳೆದು ನಿಂತಿರುವ ಭ್ರಷ್ಟಾಚಾರಕ್ಕೆ ತಿಲಾಂಜಲಿ ನೀಡಬೇಕಿದೆ. ಅಂತಹ ಪಾಠವನ್ನು ಪ್ರತಿಯೊಬ್ಬರಿಗೂ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ಮೀನಾ ಚಂದಾವರಕರ ಮಾತನಾಡಿ, ಒಂದು ಮರದಿಂದ ಲಕ್ಷಾಂತರ ಬೆಂಕಿಕಡ್ಡಿಗಳನ್ನು ತಯಾರಿಸಬಹುದು. ಆದರೆ ಜಗತ್ತನ್ನೇ ನಾಶಮಾಡುವ ಶಕ್ತಿ ಒಂದೇ ಒಂದು ಕಡ್ಡಿಗೆ ಇದೆ. ನಾವು ಯಾವುದೇ ಕಾರಣಕ್ಕು ಉರಿ ಹಚ್ಚುವ ಕಾರ್ಯಕ್ಕೆ ಒತ್ತು ನೀಡಬಾರದು. ಮರ ಬೆಳೆಸುವ, ಕುಟುಂಬ, ಸಂಸ್ಥೆ, ದೇಶ ಕಟ್ಟುವ ಕಾರ್ಯದಲ್ಲಿ ಮಗ್ನರಾಗಬೇಕು. ಅಂತ ಶಿಕ್ಷಣವನ್ನು ಕೊಡುವ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ. ಅದರ ಸದಸ್ಯತ್ವ ಪಡೆದರೇ ಧನ್ಯರು ಎಂದರು.

ಒಂದು ದೇಶದ ಆಸ್ತಿ ಅಲ್ಲಿನ ನದಿ, ಅರಣ್ಯ, ಬೆಟ್ಟ-ಗುಡ್ಡಗಳು ಸೇರಿದಂತೆ ಪ್ರಾಕೃತಿಕ ಸಂಪತ್ತುಗಳಲ್ಲ. ಮಾನವನೇ ಪ್ರಮುಖ ಆಸ್ತಿ. ಅವನಲ್ಲಿ ರಾಷ್ಟ್ರಭಕ್ತಿ, ಚಾರಿತ್ರ್ಯ, ಸಂಪ್ರಿತಿ, ಉತ್ತಮ ನಡೆ-ನುಡಿಗಳಿರಬೇಕು. ಅಂದಾಗಿ ಆತ ದೇಶದ ಆಸ್ತಿಯಾಗಲು ಸಾಧ್ಯ. ಅಂತಹ ಸಂಸ್ಕಾರವನ್ನು ತಾಯಿ ನೀಡಬೇಕು ಎಂದು ಸಲಹೆ ನೀಡಿದರು.

ನಯನಾ ದೇಸಾಯಿ, ಅಲಕಾ ಇನಾಮದಾರ, ವೇದಾ ಕುಲಕರ್ಣಿ, ಸುಲೋಚನಾ ನಾಯಕ, ಶಾಂತಕ್ಕ, ಮಂಗೇಶ ಭೇಂಡೆ, ಹರಿಬಾವು, ನಾಗಭೂಷಣ, ರವಿ, ಚಿತ್ರಾತಾಯಿ ಮತ್ತಿತರರು ಇದ್ದರು.

ನುಸುಳುಕೋರರಿಗೆ ತಡೆ ಒಡ್ಡಬೇಕು

ಪರವಾನಿಗೆ ಇಲ್ಲದೆ ಭಾರತವನ್ನು ಪ್ರವೇಶಿಸುವ ನುಸುಳುಕೋರರಿಂದ ಅಪಾಯವಿದೆ. ಬಾಂಗ್ಲಾ ದೇಶದ ಸುಮಾರು ೧೨ ಲಕ್ಷ  ಜನರು ದೇಶವನ್ನು ಪ್ರವೇಶಿಸಿದ್ದಾರೆ. ಅವರ ನೆಲೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲವೆಂದು ಸಮೀಕ್ಷೆಯಿಂದ ದೃಢಪಟ್ಟಿದೆ. ಅವರು ನಮ್ಮ ದೇಶಕ್ಕೆ ಆತಂಕವಾಗಿದ್ದಾರೆ ಎಂದು ಪ್ರಮಿಲಾ ತಾಯಿಜೀ ಮೇಢೆ ಕಳವಳ ವ್ಯಕ್ತಪಡಿಸಿದರು.

ಗಡಿಯಲ್ಲಿ ಕಾವಲು ಕಾಯುವ ಯೋಧನಿಂದ ಬಂಧಿಸಲ್ಪಟ್ಟ ನುಸುಳುಕೋರರನ್ನು ಬಿಟ್ಟು ಬಿಡಿ ಎಂಬ ಆದೇಶ ಮೇಲಾಧಿಕಾರಿಗಳಿಂದ ಬರತ್ತದೆಂಬ ಮಾತುಗಳು ಕೇಳಿಬರುತ್ತವೆ. ಇದಕ್ಕೆ ಕಡಿವಾಣ ಹಾಕಬೇಕು. ಉತ್ತಮ ಸೈನಿಕರನ್ನು ದೇಶಕ್ಕೆ ನೀಡುವ ಕಾರ್ಯ ತಾಯಂದಿರಿಂದಾಗಬೇಕು ಎಂದು ಸಲಹೆ ನೀಡಿದರು.

 

ವಿಶ್ವ ಸಮಿತಿ ಶಿಕ್ಷಾ ವರ್ಗ ೨೦೧೨ ಪಥ ಸಂಚಲನ

ಹುಬ್ಬಳ್ಳಿ: ವಯಂ ವಿಶ್ವಶಾಂತೈ  ಚಿರಂ ಯತ್ನ ಶೀಲಾಃ ಎಂಬ ಧ್ಯೇಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ೧೪ (ಜು. ೨೩ ರಿಂದ ಆ. ೫ರವರೆಗೆ) ದಿನಗಳಿಂದ ನಡೆದ ರಾಷ್ಟ್ರ ಸೇವಿಕಾ ಸಮಿತಿಯ ವಿಶ್ವ ಸಮಿತಿ ಶಿಕ್ಷಾ ವರ್ಗ ೨೦೧೨ ದ ಸಮಾರೋಪ ಸಮಾರಂಭದ ಅಂಗವಾಗಿ ರವಿವಾರ ನಗರದಲ್ಲಿ ಸ್ವಯಂ ಸೇವಕಿಯರು ಪಥ ಸಂಚಲನ ನಡೆಸಿದರು.

ಬೆಳಗ್ಗೆ ೧೧ ಕ್ಕೆ ನಗರದ ಶ್ರೀ ಮೂರುಸಾವಿರ ಮಠದ ಆವರಣದಿಂದ ಪ್ರಾರಂಭಗೊಂಡ ಪಥ ಸಂಚಲನಕ್ಕೆ ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖ ಸಂಚಾಲಿಕಾ ಪ್ರಮಿಲಾ ತಾಯೀಜಿ ಮೇಢೆ ಚಾಲನೆ ನೀಡಿದರು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಶಿಕ್ಷಾರ್ಥಿಗಳು ಸಮಿತಿಯ ಸಮವಸ್ತ್ರಗಳಲ್ಲಿ  ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಕೈಯಲ್ಲಿ ಲಾಠಿ ಹಿಡಿದು ಸ್ವಯಂ ಸೇವಕರು ತಮ್ಮ ಸಹಪಾಠಿಗಳು ಘೋಷ್ ವಾದನಕ್ಕೆ ಲಯಬದ್ಧ  ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಭಾರತೀಯ ಸಾಂಸ್ಕೃತಿಕ ವೈಭವನ್ನು ಪ್ರದರ್ಶಿಸಿದರು.

ಸಂಸ್ಥಾಪಕಿಯರ ಭಾವಚಿತ್ರ ಮೆರವಣಿಗೆ

ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಸ್ವಯಂ ಸೇವಕಿಯರ ಹಿಂದೆ ಸಾಲಂಕೃತವಾಗಿ ಹೊರಟ ತೆರೆದ ವಾಹನದಲ್ಲಿ ದೇವಿ ಭಾರತ ಮಾತೆಯ ಭಾವಚಿತ್ರದೊಂದಿಗೆ ವಿಶ್ವಸಮಿತಿ ಸ್ಥಾಪಕರಾದ ಲಕ್ಷ್ಮೀಬಾಯಿ ಕೇಳಕರ್, ತಾಯಿಜೀ ಸರಸ್ವತೀಬಾಯಿ ಆಪ್ಟೆ ಭಾವಚಿತ್ರಗಳನ್ನು ಮೆರವಣಿಗೆ ನಡೆಯಿತು.

ಕರ್ನಾಟಕ ಸೇರಿದಂತೆ ಮಹರಾಷ್ಟ್ರ, ಆಧ್ರಪ್ರದೇಶಗಳಿಂದ ಶಿಕ್ಷಾ ಸಮಿತಿಯ ಕಾರ್ಯಕರ್ತರು ಸೇರಿದಂತೆ ಒಟ್ಟು ೫೨೦ ಶಿಕ್ಷಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಮಠದ ಆವರಣದಿಂದ ಹೊರಟ ಪಥಸಂಚಲನ ಬೆಳಗಾವಿ ಗಲ್ಲಿ, ನ್ಯೂ ಮೈಸೂರ ಸ್ಟೋರ‍್ಸ್, ದುರ್ಗದಬೈಲ್, ಕೊಪ್ಪಿಕರ ರೋಡ, ಚೆನ್ನಮ್ಮಾ ವರ್ತುಲ ಸುತ್ತುವರೆದು ಹಾಗೂ ಹಳೆ ಬಸ್ ನಿಲ್ದಾಣ ಎದುರಿನಿಂದ ಹಾಯ್ದು ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮುಕ್ತಾಯಗೊಂಡಿತು.

ಸಮಿತಿ ಮುಖ್ಯ ವಕ್ತಾರ ಪ್ರಮಿಲಾ ತಾಯಿಜೀ ಮೇಢೆ, ಸರ್ವಾಽಕಾರಿ ಅಲಕಾ ಇನಾಮದಾರ, ವರ್ಗ ಕಾರ್ಯವಾಹಿಕಾ ವೇದಾ ಕುಲಕರ್ಣಿ, ಶಾಂತಕ್ಕಾ ಮುಂತಾದವರು ಇದ್ದರು.

  • email
  • facebook
  • twitter
  • google+
  • WhatsApp

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post
VHP demands JUDICIAL investigation on Assam Violence, not CBI probe

VHP demands JUDICIAL investigation on Assam Violence, not CBI probe

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

प्राकृतिक संसाधनों पर जनता का अधिकार बरकरार रहें:  दत्तात्रयजी होसबले

प्राकृतिक संसाधनों पर जनता का अधिकार बरकरार रहें: दत्तात्रयजी होसबले

March 16, 2012
IISc organised a legal conversation on CAA.

IISc organised a legal conversation on CAA.

December 21, 2019
Allahabad HC verdict minus trifurcation is RSS’s demand: Ram Madhav

Allahabad HC verdict minus trifurcation is RSS’s demand: Ram Madhav

May 9, 2011
Suresh Bhaiyyaji Joshi re-elected as SARAKARYAVAH of RSS till 2021

ವೈಮಾನಿಕ ದಾಳಿಗೆ ಆರೆಸ್ಸೆಸ್ ಭಾರತೀಯ ವಾಯುಪಡೆ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತದೆ : ಸರಕಾರ್ಯವಾಹ

February 26, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In