• Samvada
Monday, May 16, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Organisation Profiles

SAMSKARA BHARATI- ಸಂಸ್ಕಾರ ಭಾರತಿ,

Vishwa Samvada Kendra by Vishwa Samvada Kendra
September 18, 2010
in Organisation Profiles
249
0
SAMSKARA BHARATI- ಸಂಸ್ಕಾರ ಭಾರತಿ,
494
SHARES
1.4k
VIEWS
Share on FacebookShare on Twitter

ಸಂಸ್ಕಾರ ಭಾರತಿ
‘ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮ ವಿಕಾಸಕ್ಕಾಗಿ’
ಭಾರತೀಯ ಸಂಸ್ಕೃತಿಯ ಪೋಷಣೆಗಾಗಿ ಲಲಿತಕಲೆಗಳ ಸಂವರ್ಧನೆಗೆ ವಿವಿಧ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಸಂಘಟನೆ ಸಂಸ್ಕಾರ ಭಾರತಿ. ‘ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮ ವಿಕಾಸಕ್ಕಾಗಿ’ ಎಂಬುದು ಸಂಸ್ಕಾರ ಭಾರತಿಯ ಧ್ಯೇಯ ವಾಕ್ಯ.
ವ್ಯಕ್ತಿಯನ್ನು ಸಮಾಜ-ದೇಶದೊಂದಿಗೆ ಜೋಡಿಸುವ ಶಕ್ತಿ ಭಾರತೀಯ ಕಲೆಗಳಿಗಿವೆ. ವ್ಯಕ್ತಿತ್ವವನ್ನು ಹೆಚ್ಚಿಸಲು ಕಲೆಯ ಆಸಕ್ತಿ-ಅಭಿವ್ಯಕ್ತಿ ಎಂದಿಗೂ ಸಹಕಾರಿ.
ಭಾವನಾತ್ಮಕವಾದ ಸಮಾಜ ಪರಿವರ್ತನೆ ಹಾಗೂ ಸಮನ್ವಯಪೂರ್ಣ ಸಮಾಜ ಜೀವನ ನಡೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಚಿಂತಕರಾಗಿದ್ದ ಭಾವೂರಾವ್ ದೇವರಸ್, ಹರಿಭಾವೂ ವಾಕಣಕರ್ ಮುಂತಾದವರ ಸಹಚಿಂತನದ ಪರಿಣಾಮವಾಗಿ ೧೯೫೪ ರಲ್ಲಿ ‘ಸಂಸ್ಕಾರ ಭಾರತಿ’ ಜನ್ಮ ತಾಳಿತು. ವಿಧ್ಯುಕ್ತವಾಗಿ ಸಂಸ್ಕಾರ ಭಾರತಿಯ ಆರಂಭ, ೧೯೬೧ ರಲ್ಲಿ ಲಕ್ನೋದಲ್ಲಿ. ಯೋಗೀಂದ್ರಜೀಯವರು ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿ ಯಾಗಿ ಇಂದಿಗೂ ಕಾರ‍್ಯನಿರ್ವಹಿಸುತ್ತಿದ್ದಾರೆ. ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ೧೫೦೦ಕ್ಕಿಂತ ಹೆಚ್ಚು ಸಮಿತಿಗಳ ಮೂಲಕ ಸಾವಿರಾರು ಚಟುವಟಿಕೆಗಳನ್ನು ‘ಸಂಸ್ಕಾರ ಭಾರತಿ’ ನಡೆಸುತ್ತಿದೆ. ಅಸ್ಸಾಂ, ಮಣಿಪುರದಂತಹ ಪೂರ್ವಾಂಚಲ ಭಾರತದ ಪ್ರದೇಶಗಳಲ್ಲೂ ಸಂಸ್ಕಾರ ಭಾರತಿಯ ನೂರಾರು ಚಟುವಟಿಕೆಗಳು ನಡೆಯತ್ತಿದ್ದು, ಅಲ್ಲಿಯ ಕಲೆಗಳನ್ನು ರಾಷ್ಟ್ರಜೀವನದ ಮುಖ್ಯ ಧಾರೆಯಲ್ಲಿ ಜೋಡಿಸುವಲ್ಲಿ ನೆರವಾಗುತ್ತವೆ.


ಕರ್ನಾಟಕದಲ್ಲಿ ಸಂಸ್ಕಾರ ಭಾರತಿಯು ೧೯೯೫ ರಲ್ಲಿ ವಿಧ್ಯುಕ್ತವಾಗಿ ಚಾಲನೆಗೊಂಡಿತು. ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ನೂರಾರು ಚಟುವಟಿಕೆಗಳನ್ನು ಈಗಾಗಲೇ ಮಾಡಿರುವ ಸಂಸ್ಕಾರ ಭಾರತಿ, ಕರ್ನಾಟಕದ ಕಲಾಜಗತ್ತಿನಲ್ಲಿ ತನ್ನ ಛಾಪನ್ನು ಮೂಡಿಸುತ್ತಿದೆ. ಹಂಪಿಯಲ್ಲಿ ನಡೆದ ಅಖಿಲ ಭಾರತೀಯ ಚಿತ್ರಕಲಾ ಶಿಬಿರ, ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ರಂಗೋಲಿ ತರಬೇತಿ ಶಿಬಿರ, ಚನ್ನೇನಹಳ್ಳಿಯಲ್ಲಿ ಅಖಿಲಭಾರತೀಯ ಕಲಾಸಾಧಕ ಸಂಗಮ, ಮೈಸೂರಿನಲ್ಲಿ ಅಖಿಲಭಾರತ ಸಂಗೀತ ಕಲಾವಿದರಿಂದ ನಾದ ವೈಭವ, ಅನೇಕ ನಾಟಕ ಕಾರ‍್ಯಾಗಾರಗಳು, ನೃತ್ಯ ಅಧ್ಯಾಪಕರ ಸಮಾವೇಶ, ಇತ್ಯಾದಿ ಚಟುವಟಿಕೆಗಳು ಸಮಾಜದ ಕಲಾಸಕ್ತರ ಗಮನ ಸೆಳೆದಿದೆ.
ಇದಲ್ಲದೆ ಭಾರತೀಯ ಕಲೆಗಳಿಗೆ ಪೂರಕವಾಗುವ ದೇಶಭಕ್ತಿಗೀತೆಗಳ ನೃತ್ಯ, ಕಲೆಯ ಕುರಿತ ವಿಚಾರ ಸಂಕಿರಣ, ಉಪನ್ಯಾಸ ಮಾಲೆಗಳು, ಕೃಷ್ಣಲೋಕ ಕಾರ‍್ಯಕ್ರಮ, ಸಂಸ್ಕಾರ ಶಿಬಿರಗಳು, ಗಮಕವಾಚನ, ವಂದೇ ಮಾತರಂ ಉತ್ಸವಗಳು, ಭಜನಾ ಶಿಬಿರಗಳು, ಪ್ರತಿಷ್ಠಿತ, ಸಮಾರಂಭಗಳಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು, ಯಕ್ಷಗಾನ ತರಬೇತಿ ಶಿಬಿರ- ಹೀಗೆ ಬಗೆಬಗೆ ಚಟುವಟಿಕೆಗಳಿಂದ ಸಂಸ್ಕಾರ ಭಾರತಿ ಸದಾಸಕ್ರಿಯ.
ಎರಡು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಲಾ ಉತ್ಸವ, ವರ್ಷಕ್ಕೊಮ್ಮೆ ಪ್ರಾಂತ ಮಟ್ಟದ ಕಲಾ ಉತ್ಸವ, ಯುಗಾದಿ, ಗುರುಪೂರ್ಣಿಮೆ ಯಂದು ಗುರುವಂದನಾ ಕಾರ‍್ಯಕ್ರಮ, ಕೃಷ್ಣಾಷ್ಟಮಿ ದಿನ ಕೃಷ್ಣಲೋಕ ಕಾರ‍್ಯಕ್ರಮ, ದೀಪಾವಳಿ ದಿನ ‘ಮಿಲನ’ ಉತ್ಸವ, ಜನವರಿ ೨೬ ರಂದು ಭಾರತ್ ಮಾತಾ ಪೂಜನ ಕಾರ‍್ಯಕ್ರಮ, ಭಾರತೀಯ ಕಲೆಗಳ ಪಿತಾಮಹ ಎಂದೇ ಗುರುತಿಸಲ್ಪಟ್ಟ ಭರತ ಮುನಿಯ ಜಯಂತಿ ಅಲ್ಲಲ್ಲಿ ಆಚರಿಸಲಾಗುತ್ತದೆ.
ಯುವಜನರಲ್ಲಿ ರಾಷ್ಟ್ರಭಾವನೆಯ ಜಾಗೃತಿ ಮೂಡಿಸಿ, ನಾಡು-ನುಡಿಗೆ ಸಂಬಂಧಿಸಿದ ಕಥನಶೈಲಿಯ ನಿರೂಪಣೆಯೊಂದಿಗೆ ದೇಶಭಕ್ತಿಗೀತೆಗಳಿಂದ ಕೂಡಿದ ವಿಶಿಷ್ಟ ಕಾರ‍್ಯಕ್ರಮ ‘ಜಾಗೋಭಾರತ್’ ಕರ್ನಾಟಕದಲ್ಲಿ ಜನಪ್ರಿಯ ಗೊಳ್ಳುತ್ತದೆ.
ಈ ರೀತಿ ಸಂಸ್ಕಾರ ಭಾರತಿಯು ಎಲ್ಲಾ ವರ್ಗದ ಜನರ ಮನಸ್ಸಿನಲ್ಲಿ ಕಲೆಯನ್ನು ಸಾಕಾರಗೊಳಿಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ‍್ಯಕ್ರಮದಲ್ಲಿ ಮುಂದೆ ಹೆಜ್ಜೆಯಿಡುತ್ತಾ ಸಾಗಿದೆ.
ವಿವರಗಳಿಗೆ.
ಸಂಸ್ಕಾರ ಭಾರತಿ, ಕರ್ನಾಟಕ
‘ಯಾರವ ಸ್ಮೃತಿ’, ೧ನೇ ಮುಖ್ಯರಸ್ತೆ
ಶೇಷಾದ್ರಿಪುರಂ, ಬೆಂಗಳೂರು – ೫೬೦ ೦೨೦

READ ALSO

Reaching the Unreached : Vanavasi Kalyana Karnataka’s seva to tribal community during #Covid19 lockdown

Applications invited for TAPAS and SAADHANA projects

ಸಂಪರ್ಕ : ಶ್ರೀಪತಿ –  9945629991

ಚಕ್ರವರ್ತಿ ತಿರುಮಗನ್ – 9449837360

  • email
  • facebook
  • twitter
  • google+
  • WhatsApp

Related Posts

Reaching the Unreached : Vanavasi Kalyana Karnataka’s seva to tribal community during #Covid19 lockdown
Organisation Profiles

Reaching the Unreached : Vanavasi Kalyana Karnataka’s seva to tribal community during #Covid19 lockdown

January 7, 2021
Applications invited for TAPAS and SAADHANA projects
News Digest

Applications invited for TAPAS and SAADHANA projects

August 29, 2018
ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌
News Digest

ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌

August 19, 2018
VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ
Organisation Profiles

VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ

April 11, 2011
Organisation Profiles

KRUSHI PRAYOG PARIVAR – ಕೃಷಿ ಪ್ರಯೋಗ ಪರಿವಾರ

April 11, 2011
VISHWA HINDU PARISHAD – ವಿಶ್ವ ಹಿಂದು ಪರಿಷತ್
Organisation Profiles

VISHWA HINDU PARISHAD – ವಿಶ್ವ ಹಿಂದು ಪರಿಷತ್

April 1, 2011
Next Post
SAMSKRITA BHARATI –  ಸಂಸ್ಕೃತ ಭಾರತಿ

SAMSKRITA BHARATI - ಸಂಸ್ಕೃತ ಭಾರತಿ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಮಾದರಿ ಶಿಕ್ಷಕಿ : ಮಕ್ಕಳನ್ನು ಸರ್ಕಾರೀ ಶಾಲೆಗಳತ್ತ ಕರೆತರಲು ವಿನೂತನ ಪ್ರಯತ್ನ ಮಾಡಿದ ರೇಖಾ ಪ್ರಭಾಕರ್

ಮಾದರಿ ಶಿಕ್ಷಕಿ : ಮಕ್ಕಳನ್ನು ಸರ್ಕಾರೀ ಶಾಲೆಗಳತ್ತ ಕರೆತರಲು ವಿನೂತನ ಪ್ರಯತ್ನ ಮಾಡಿದ ರೇಖಾ ಪ್ರಭಾಕರ್

March 27, 2021
Sevabharathi dedicates 473 houses for flood victims at North Karnataka

Sevabharathi dedicates 473 houses for flood victims at North Karnataka

March 18, 2011
Saving industries of Bharat is in the hands of WE citizens : Prof Ashwani Mahajan

Saving industries of Bharat is in the hands of WE citizens : Prof Ashwani Mahajan

August 19, 2017

After 31 years,Trial against Bitta Karate begins in Shrinagar

March 30, 2022

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In