• Samvada
  • Videos
  • Categories
  • Events
  • About Us
  • Contact Us
Saturday, April 1, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಸಂಸ್ಕೃತ ಪ್ರಚಾರ ಹೆಚ್ಚು ಹೆಚ್ಚು ನಡೆಯಲಿ : ಡಾ. ಶಾಲಿನಿ ರಜನೀಶ್

Vishwa Samvada Kendra by Vishwa Samvada Kendra
January 3, 2021
in Others
250
0
ಸಂಸ್ಕೃತ ಪ್ರಚಾರ ಹೆಚ್ಚು ಹೆಚ್ಚು ನಡೆಯಲಿ : ಡಾ. ಶಾಲಿನಿ ರಜನೀಶ್
491
SHARES
1.4k
VIEWS
Share on FacebookShare on Twitter

ಸಂಸ್ಕೃತ ಪ್ರಚಾರ ಹೆಚ್ಚು ಹೆಚ್ಚು ನಡೆಯಲಿ : ಡಾ. ಶಾಲಿನಿ ರಜನೀಶ್

೨ ಜನವರಿ ೨೦೨೦, ಬೆಂಗಳೂರು: ಸಂಸ್ಕೃತ ಭಾರತಿ ಸಂಸ್ಥೆಯು ಇಂದು ಸಂಜೆ ಗಿರಿನಗರದ ತಮ್ಮ “ಅಕ್ಷರಂ” ಸಭಾಭವನದಲ್ಲಿ ಡಾ. ನಾಗರತ್ನಾ ಹೆಗಡೆ ಅವರು ರಚಿಸಿದ “ರಾಮಾಯಣೀಯಮ್”, “ರುಚಿರಾಃ ಬಾಲಕಥಾಃ”, ಡಾ. ಎಚ್. ಆರ್. ವಿಶ್ವಾಸ ಅವರ “ಮೂಲಮ್”, ಶ್ರೀ ತಂಗೇಡ ಜನಾರ್ದನ ರಾವ್ ಅವರ “ಅಂತಜ್ರ್ವಲನಮ್” ಎಂಬ ನಾಲ್ಕು ಸಂಸ್ಕೃತ ಗ್ರಂಥಗಳ ಲೋಕಾರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಪ್ರೊ. ಕೆ. ಈ. ದೇವನಾಥನ್, ಡಾ. ಶಾಲಿನೀ ರಜನೀಶ್, ಡಾ. ನಾಗರತ್ನಾ ಹೆಗಡೆ, ಶ್ರೀ ಸತ್ಯನಾರಾಯಣ ಭಟ್

ಮುಖ್ಯ ಅತಿಥಿಗಳಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಡಾ. ಶಾಲಿನೀ ರಜನೀಶ್ ಅವರು ಆಗಮಿಸಿದ್ದರು. ಇನ್‍ಫೋಸಿಸ್ ಫೌಂಡೇಷನ್‍ನ ಶ್ರೀಮತಿ ಸುಧಾಮೂರ್ತಿ ಅವರು ಆನ್ಲೈನ್ ಮುಖಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಈ. ದೇವನಾಥನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಭಾರತಿ ಸಂಸ್ಥೆಯ ವಿದ್ವಾನ್ ಸತ್ಯನಾರಾಯಣ ಭಟ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಶಾಲಿನೀ ರಜನೀಶ್ ಅವರು ತಮ್ಮ ಭಾಷಣದಲ್ಲಿ– “ಸಂಸ್ಕೃತ ಭಾಷೆ ನಮ್ಮ ಎಲ್ಲ ಭಾಷೆಗಳ ತಾಯಿ. ಈ ಭಾಷೆಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು. ತಾವು ಮೊದಲ ಬಾರಿಗೆ ಸರ್ಕಾರಿ ಸೇವೆಗೆ ನೇಮಕಗೊಂಡಾಗ ಸಂಸ್ಕೃತ ಭಾಷೆಯ ಸಹಾಯದಿಂದ ಕನ್ನಡವನ್ನು ಕಲಿಯಲು ಬಹಳ ಸಹಾಯವಾಯಿತೆಂದು ಈ ಸಂದರ್ಭದಲ್ಲಿ ಸ್ಮರಿಸಿದರು. ಸರ್ಕಾರದ ವತಿಯಿಂದಲೂ ಕೂಡ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ e book ಯೋಜನೆಯನ್ನು ಈ ಹಿಂದೆ ರೂಪಿಸಿದ್ದನ್ನು ಸ್ಮರಿಸಿ, ಈ ಕರೋನಾ ಸಂದರ್ಭದಲ್ಲಿ ಒಂದು ಕೋಟಿಗೂ ವಿದ್ಯಾರ್ಥಿಗಳು ಅದನ್ನು ಹೆಚ್ಚಾಗಿ ಉಪಯೋಗಿಸಿದರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಕೃತಭಾಷೆಯ ಗ್ರಂಥಗಳೂ ಕೂಡ e book ರೂಪದಲ್ಲಿ ಎಲ್ಲರಿಗೂ ದೊರೆಯುವಂತಾಗಲಿ ಎಂದು ಆಶಿಸಿದರು.

ಇನ್‍ಫೋಸಿಸ್ ಫೌಂಡೇಷನ್‍ನ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ ಅವರು ಆನ್ಲೈನ್ ಮುಖಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ – “ತಾವು ರಚಿಸಿದ – ‘ಮಕ್ಕಳಿಗಾಗಿ ನನ್ನ ನೆಚ್ಚಿನ ಕಥೆಗಳು’ ಎಂಬ ಕನ್ನಡ ಪುಸ್ತಕದ ಅನುವಾದ (ರುಚಿರಾಃ ಬಾಲಕಥಾಃ) ಸಂಸ್ಕೃತದಲ್ಲಿ ಆಗಿರುವುದು ಬಹಳ ಖುಷಿ ತಂದಿದೆ. ಸಂಸ್ಕೃತ ಭಾರತಿ ಸಂಸ್ಥೆಯ ಸಾರಸ್ವತ ಸೇವೆ ಪ್ರಶಂಸನೀಯ. ಭಾರತದ ಈ ಸಂಸ್ಕೃತ ಜ್ಞಾನಸಂಪತ್ತನ್ನು ನಾವು ಸಂರಕ್ಷಿಸಬೇಕು. ವಾರಾಣಸಿಯಲ್ಲಿರುವ ಸರಸ್ವತೀ ಗ್ರಂಥ ಭಂಡಾರ ಮುಂತಾದ ಅನೇಕ ಕಡೆಗಳಲ್ಲಿ ಲಕ್ಷಾಂತರ ಅಮೂಲ್ಯ ತಾಳೆಗರಿಗಳ ಸಂಗ್ರಹವಿದೆ. ಅವುಗಳನ್ನು ನಾವೆಲ್ಲರೂ ಸೇರಿ ಸಂರಕ್ಷಿಸಬೇಕು” ಎಂದು ಕರೆ ಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಕೆ. ಈ. ದೇವನಾಥನ್ ಅವರು ಮಾತನಾಡಿ, ಸಂಸ್ಕೃತ ಭಾರತಿ ಸಂಸ್ಥೆಯು ಈಗಾಗಲೇ ಸುಮಾರು 350ಕ್ಕೂ ಹೆಚ್ಚು ಗ್ರಂಥಗಳನ್ನು ಜನಸಾಮಾನ್ಯರಿಗಾಗಿ ಹೊರತಂದಿದೆ. ಲೋಕಾರ್ಪಣೆಗೊಂಡ ಈ ನಾಲ್ಕು ಪುಸ್ತಕಗಳು ಅವುಗಳಿಗೆ ಹೊಸ ಸೇರ್ಪಡೆ. ಸಂಸ್ಥೆಯ ಈ ಕಾಯಕ ಪ್ರಶಂಸನೀಯವಾದುದು. ಕರ್ನಾಟಕ
ಸಂಸ್ಕೃತ ವಿಶ್ವವಿದ್ಯಾಲಯದ ಮೂಲಕವೂ ಕೂಡ ಜನಸಾಮಾನ್ಯರಿಗಾಗಿ ಅನೇಕ ಅಲ್ಪಾವಧಿ ಕೋರ್ಸುಗಳನ್ನು ರೂಪಿಸಲಾಗಿದೆ. ಸಂಸ್ಕೃತ ಭಾಷೆಯನ್ನು ಜನಭಾಷೆಯಾಗಿಸುವತ್ತ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ನಾಗರತ್ನಾ ಹೆಗಡೆ, ಡಾ. ಎಚ್. ಆರ್. ವಿಶ್ವಾಸ (ಅನ್ಲೈನ್ ಮುಖಾಂತರ), ಶ್ರೀ ತಂಗೇಡ ಜನಾರ್ದನ ರಾವ್ (ಅನ್ಲೈನ್ ಮುಖಾಂತರ) ಅವರು ಉಪಸ್ಥಿತರಿದ್ದರು. ವಿದ್ವಾನ್ ಸೂರ್ಯ ಹೆಬ್ಬಾರ ಇವರು ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ಸತ್ಯನಾರಾಯಣ ಭಟ್ ಆಗಮಿಸಿದವರ ಸ್ವಾಗತ ಕೋರಿದರು. ಸಂಸ್ಕೃತ ಸಂಭಾಷಣಾ ಸಂದೇಶ ಪತ್ರಿಕೆಯ ಸಂಪಾದಕರಾದ ವಿದ್ವಾನ್ ಜನಾರ್ದನ ಹೆಗಡೆ, ಸಂಸ್ಕೃತ ಸಂಭಾಷಣಾ ಸಂದೇಶ ಪತ್ರಿಕೆಯ ಸಹ ಸಂಪಾದಕರಾದ ಡಾ. ಸಚಿನ್ ಕಠಾಳೆ, ಸಂಸ್ಕೃತ ಸಂವರ್ಧನ ಪ್ರತಿಷ್ಠಾನದ ಪದ್ಮಶ್ರೀ ಚಮೂ ಕೃಷ್ಣಶಾಸ್ತ್ರಿ, ಹಿರಿಯ ಸಂಸ್ಕೃತ ವಿದ್ವಾಂಸರಾದ ಶ್ರೀಮತಿ ಅರುಣಾ ಗೋಯಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

  • email
  • facebook
  • twitter
  • google+
  • WhatsApp
Tags: Dr H R VishwasDr Nagaratna HegdeSamskrita BharatiSudhamurthy book in samskrita

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
ವಿಶೇಷಚೇತನ ಬಾಲಕ ಗೋಲಕದಲ್ಲಿ ಸಂಗ್ರಹಿಸಿದ ಹಣವನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ಸಮರ್ಪಣೆ

ವಿಶೇಷಚೇತನ ಬಾಲಕ ಗೋಲಕದಲ್ಲಿ ಸಂಗ್ರಹಿಸಿದ ಹಣವನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ಸಮರ್ಪಣೆ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

First ever non-Brahmin Thanthri apponited for Dewaswom Board temples in Kerala; RSS welcomes

First ever non-Brahmin Thanthri apponited for Dewaswom Board temples in Kerala; RSS welcomes

August 25, 2019

Srinagar – 13 arrested for raising “anti-national” slogans in Jamia Masjid after prayers

April 11, 2022

NEWS IN BRIEF – DEC 30, 2011

December 30, 2011
VHP veteran Ashok Singhal, BJP’s Rajnath Sing arrives in for ABPS meet

VHP veteran Ashok Singhal, BJP’s Rajnath Sing arrives in for ABPS meet

March 9, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In