• Samvada
  • Videos
  • Categories
  • Events
  • About Us
  • Contact Us
Wednesday, February 1, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others ABPS

ಸ್ವ’ ಆಧಾರಿತ ಜೀವನ ದೃಷ್ಟಿಯನ್ನು ಮರು ಸ್ಥಾಪಿಸಲು ಬದ್ಧರಾಗಿ – ಶ್ರೀ ದತ್ತಾತ್ರೇಯ ಹೊಸಬಾಳೆ

Vishwa Samvada Kendra by Vishwa Samvada Kendra
March 12, 2022
in ABPS, RSS ABPS 2022
272
0
534
SHARES
1.5k
VIEWS
Share on FacebookShare on Twitter

ಕರ್ಣಾವತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಭೆಯಲ್ಲಿ  ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಮಾತನಾಡಿದರು.

“ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯ ಚಳುವಳಿಯು ಸಾರ್ವತ್ರಿಕವಾಗಿತ್ತು ಮತ್ತು ಎಲ್ಲರನ್ನೂ ಒಳಗೊಂಡಿತ್ತು. ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರು ಮುಂತಾದವರ ಆಧ್ಯಾತ್ಮಿಕ ನಾಯಕತ್ವವು ದೇಶದ ಜನರನ್ನು ಮತ್ತು ಜನನಾಯಕರನ್ನು ಬ್ರಿಟಿಷ್ ಪ್ರಾಬಲ್ಯದ ವಿರುದ್ಧ ಸುದೀರ್ಘ ಪ್ರತಿರೋಧಕ್ಕೆ ಪ್ರೇರೇಪಿಸಿತು.ಮಹಿಳೆಯರು, ಬುಡಕಟ್ಟು ಸಮಾಜ ಅಷ್ಟು ಮಾತ್ರವೇ ಅಲ್ಲದೆ ಕಲೆ, ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಸೇರಿದಂತೆ ರಾಷ್ಟ್ರೀಯ ಜೀವನದ ಎಲ್ಲಾ ಆಯಾಮಗಳಲ್ಲಿ ಸ್ವಾತಂತ್ರ್ಯದ ಪ್ರಜ್ಞೆ ಜಾಗೃತವಾಯಿತು.

READ ALSO

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

ಲಾಲ್-ಬಾಲ್-ಪಾಲ್, ಮಹಾತ್ಮಾ ಗಾಂಧಿ, ವೀರ್ ಸಾವರ್ಕರ್, ನೇತಾಜಿ-ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ವೇಲು ನಾಚಿಯಾರ್, ರಾಣಿ ಗೈದಿನ್ಲು, ಮುಂತಾದವರು ತಿಳಿದಿರುವ ಮತ್ತು ಅದೆಷ್ಟೋ ಮಂದಿ ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರು ಸ್ವಾಭಿಮಾನ ಮತ್ತು ದೇಶಭಕ್ತಿಯ ಭಾವನೆಯನ್ನು ಮತ್ತಷ್ಟು ಬಲಪಡಿಸಿದರು. ಪ್ರಖರ ದೇಶಭಕ್ತ ಡಾ. ಹೆಡಗೇವಾರ್ ನೇತೃತ್ವದಲ್ಲಿ ಸಂಘ ಸ್ಥಾಪನೆಗೊಂಡು, ಸ್ವಯಂಸೇವಕರು ತಮ್ಮ ಭೂಮಿಕೆಯನ್ನು ನಿರ್ವಹಿಸಿದರು.”

“ಸ್ವಾತಂತ್ರ್ಯವು ಶತಮಾನಗಳ ಐತಿಹಾಸಿಕ ಸ್ವಾತಂತ್ರ್ಯ ಹೋರಾಟದ ಫಲವಾಗಿದ್ದು, ನಮ್ಮ ವೀರ ಸೇನಾನಿಗಳ ತ್ಯಾಗ ಮತ್ತು ಸಮರ್ಪಣೆಯ ಉಜ್ವಲ ಸಂಕೇತವಾಗಿದೆ.ಸ್ವಾತಂತ್ರ್ಯ ಚಳವಳಿಯ ಬಹಳ ಹಿರಿಯ ವೈಶಿಷ್ಟ್ಯವೆಂದರೆ ಅದು ಕೇವಲ ರಾಜಕೀಯ ಮಾತ್ರವಲ್ಲ, ರಾಷ್ಟ್ರೀಯ ಜೀವನದ ಎಲ್ಲಾ ಆಯಾಮಗಳು ಮತ್ತು ಸಮಾಜದ ಎಲ್ಲಾ ವರ್ಗಗಳ ಭಾಗವಹಿಸುವಿಕೆಯೊಂದಿಗೆ ಸಾಮಾಜಿಕ-ಸಾಂಸ್ಕೃತಿಕ ಚಳುವಳಿಯಾಗಿ ಹೊರಹೊಮ್ಮಿತ್ತು.ಈ ಸ್ವಾತಂತ್ರ್ಯ ಆಂದೋಲನವು ರಾಷ್ಟ್ರದ ಮೂಲಭೂತ ಅಡಿಪಾಯವನ್ನು ‘ಸ್ವ’ದ ಬಲದ ಮೇಲೆ ಅನಾವರಣಗೊಳಿಸುವ ನಿರಂತರ ಪ್ರಯತ್ನವಾಗಿ ನೋಡುವುದು ಬಹಳ ಸೂಕ್ತವೆನಿಸುತ್ತದೆ.”

ಸರಕಾರ್ಯವಾಹರು ಮಾತನಾಡುತ್ತಾ – ” ಬ್ರಿಟಿಷರು ಭಾರತೀಯರ ಐಕ್ಯತೆಯ ಮೂಲ ಮನೋಭಾವದ ಮೇಲೆ ದಾಳಿ ಮಾಡುವ ಮೂಲಕ ಮಾತೃಭೂಮಿಯೊಂದಿಗಿನ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ದುರ್ಬಲಗೊಳಿಸಲು ಸಂಚು ರೂಪಿಸಿದರು.ಅವರು ನಮ್ಮ ಸ್ಥಳೀಯ ಆರ್ಥಿಕತೆ, ರಾಜಕೀಯ ವ್ಯವಸ್ಥೆ, ನಂಬಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಮೂಲಕ ಸ್ವಾವಲಂಬಿ ವ್ಯವಸ್ಥೆಯನ್ನು ಶಾಶ್ವತವಾಗಿ ನಾಶಮಾಡಲು ಪ್ರಯತ್ನಿಸಿದರು.”

“ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ, ಕೆಲವು ಕಾರಣಗಳಿಂದ, ‘ಸ್ವ’ ಎಂಬ ಪ್ರೇರಣೆ ಕ್ರಮೇಣ ಕ್ಷೀಣಿಸಿತು ಮತ್ತು ದೇಶವು ವಿಭಜನೆಯ ಭೀಕರತೆಯನ್ನು ಎದುರಿಸಬೇಕಾಯಿತು. ಸ್ವಾತಂತ್ರ್ಯಾನಂತರ ರಾಷ್ಟ್ರೀಯ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಈ ‘ಸ್ವ’ ಪ್ರಜ್ಞೆಯನ್ನು ಅಭಿವ್ಯಕ್ತಪಡಿಸುವ ಸುಸಂದರ್ಭ ಎಷ್ಟರ ಮಟ್ಟಿಗೆ ಒದಗಿ ಬಂದಿದೆ ಎಂಬುದನ್ನು ಅವಲೋಕಿಸಲು ಇದು ಸಕಾಲವಾಗಿದೆ‌”

“ಭಾರತೀಯ ಸಮಾಜವನ್ನು ಒಂದು ರಾಷ್ಟ್ರವಾಗಿ ರೂಪಿಸುವ ಮತ್ತು ಭವಿಷ್ಯದ ಬಿಕ್ಕಟ್ಟುಗಳಿಂದ ರಾಷ್ಟ್ರವನ್ನು ರಕ್ಷಿಸುವ ಸಂಕಲ್ಪದೊಂದಿಗೆ ‘ಸ್ವ’ ಆಧಾರಿತ ಜೀವನದ ದೃಷ್ಟಿಕೋನವನ್ನು ಮರುಸ್ಥಾಪಿಸಲು ದೃಢವಾಗಿ ಬದ್ಧರಾಗಲು ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವವು ಒಂದು ಅವಕಾಶವಾಗಿದೆ” ಎಂದು ಹೇಳಿದರು.

“ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಮತ್ತು ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ ಭಾರತವನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರಬುದ್ಧ ಸಮಾಜವಾಗಿ ರೂಪಿಸುವುದು ಅತ್ಯಂತ ಸಮಯೋಚಿತ, ಭಾರತ ಕೇಂದ್ರಿತ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರ ಮೂಲಕ ಭಾರತ ಮತ್ತೆ ವಿಶ್ವಗುರುವಿನ ಪಾತ್ರವನ್ನು ವಹಿಸಲು ಅನುವು ಮಾಡಿಕೊಡುವುದು ಈ ಸಂದರ್ಭದ ಅಗತ್ಯವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ನಾವು ನಮ್ಮ ‘ಸ್ವ’ವನ್ನು ಮರುಶೋಧಿಸಲು ಸಂಕಲ್ಪ ಮಾಡಬೇಕಿದೆ” ಎಂದು ಕರೆ ನೀಡಿದರು.

  • email
  • facebook
  • twitter
  • google+
  • WhatsApp
Tags: #ABPSABPS 2022Abps rss

Related Posts

ABPS

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022
ABPS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022
ABPS

ABPS Resolution – Need to promote work opportunities to make Bharat Self Reliant

March 13, 2022
RSS ABPS 2022

RSS-ABPS 2022 pays homage to departed souls

March 12, 2022
ABPS

ಅಖಿಲ ಭಾರತ ಪ್ರತಿನಿಧಿ ಸಭಾ ಕುರಿತಾಗಿ ಅಖಿಲ ಭಾರತ ಪ್ರಚಾರ ಪ್ರಮುಖರ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು.

March 9, 2022
Changes in Responsibilities and the new RSS team #RSSABPS #RSSABPS2021
ABPS

Changes in Responsibilities and the new RSS team #RSSABPS #RSSABPS2021

March 20, 2021
Next Post

ABPS Resolution – Need to promote work opportunities to make Bharat Self Reliant

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Day-407: Bharat Parikrama Yatra to enter HARYANA on Sept 24, to travel for 33days till Oct 26

ಸೆಪ್ಟೆಂಬರ್ 24 ರಂದು ಹರ್ಯಾಣಕ್ಕೆ ಕಾಲಿರಿಸಲಿರುವ ಭಾರತ ಪರಿಕ್ರಮ ಯಾತ್ರೆ

August 25, 2019
ಧಾರವಾಡ: ಆರೆಸ್ಸೆಸ್ ನ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್ ಆರಂಭ

RSS’ ABKM baithak commences today at Dharwad

October 28, 2021
ಖಿಲಾಫತ್ ಚಳುವಳಿಗೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ!?

ಖಿಲಾಫತ್ ಚಳುವಳಿಗೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ!?

September 25, 2021
ನೇರನೋಟ: ಇದು ಪಂಚೆಗಾದ ಅವಮಾನವಷ್ಟೇ ಅಲ್ಲ…!

ನೇರನೋಟ: ಇದು ಪಂಚೆಗಾದ ಅವಮಾನವಷ್ಟೇ ಅಲ್ಲ…!

August 11, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In