• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ನಾವೆಲ್ಲರೂ ಹುಟ್ಟಿರುವುದೇ ಧರ್ಮಕಾರ್ಯಕ್ಕೆ – ಮೋಹನ್ ಭಾಗವತ್‌ಜೀ ಅಭಿಮತ

Vishwa Samvada Kendra by Vishwa Samvada Kendra
March 25, 2022
in News Digest
253
0
497
SHARES
1.4k
VIEWS
Share on FacebookShare on Twitter

ಗಾಜಿಪುರ, ಕಾಶಿ (ವಿಸಂಕೆ). ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಮಾತನಾಡುತ್ತಾ  “ಪುಣ್ಯದ ಕೆಲಸದಲ್ಲಿ ಸಣ್ಣ ಪಾಲ್ಗೊಳ್ಳುವಿಕೆಯೂ ಕೂಡ ನಮ್ಮ ಅನೇಕ ತಲೆಮಾರುಗಳನ್ನು ಗೌರವಾನ್ವಿತರನ್ನಾಗಿಸುತ್ತದೆ.
ಸಿದ್ಧಪೀಠ ಹಥಿಯಾರಾಮ ಮಠಕ್ಕೆ ಭೇಟಿ ನೀಡಿರುವುದು ನನಗೆ ಅಪಾರವಾದ ಪುಷ್ಟಿಯನ್ನು ನೀಡಿದೆ. ಹೀಗೆ ದೊರೆತದ್ದನ್ನು ಲೋಕ ಕಲ್ಯಾಣದಲ್ಲಿ ಬಳಸುವುದು ಜೀವನದ ಉದ್ದೇಶವಾಗಿದೆ”ಎಂದರು.

ಬುಧವಾರ, ಕಾಶಿ ಪ್ರಾಂತ್ಯದ ಗಾಜಿಪುರ ಜಿಲ್ಲೆಯ ಸಿದ್ಧಿಪೀಠ ಹಥಿಯಾರಾಮ್ ಮಠಕ್ಕೆ ಭೇಟಿ ನೀಡಿದ ಸರಸಂಘಚಾಲಕರು ‘ಆಧ್ಯಾತ್ಮಿಕ ಜಾಗೃತಿಯಿಂದ ರಾಷ್ಟ್ರದ ಉತ್ಥಾನ’ ಎಂಬ ವಿಚಾರವನ್ನು ಕುರಿತು ಮಾತನಾಡಿದರು.

READ ALSO

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಮಠದಲ್ಲಿರುವ ಬುಧಿಯಾ ಮಾತಾ ಮಂದಿರದಲ್ಲಿ ಸರಸಂಘಚಾಲಕರು ದರ್ಶನ-ಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಮಹಂತ ಭವಾನಿನಂದನ್ ಯತಿ ಮಹಾರಾಜರು ಡಾ. ಮೋಹನ್ ಭಾಗವತ್ ಅವರಿಗೆ ಅಂಗವಸ್ತ್ರ ಹೊದಿಸಿ ಗೌರವಿಸಿದರು.

125 ವರ್ಷಗಳ ಹಿಂದೆಯೇ ಮಹರ್ಷಿ ಅರವಿಂದರು “ಸನಾತನ ಧರ್ಮದ ಉನ್ನತಿ, ಭಗವಂತನ ಸಂಕಲ್ಪವಾಗಿದೆ,ಭಗವಂತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ. ಸನಾತನ ಧರ್ಮದ ಉನ್ನತಿ ಯಾವಾಗ ಅವಶ್ಯಕವೋ ಆಗ ಭಗವಂತನು ಹಿಂದೂ ರಾಷ್ಟ್ರದ ಭಾರತದ ಉತ್ಥಾನವನ್ನು ನೆರವೇರಿಸುತ್ತಾನೆ” ಎಂದು ಹೇಳಿದ್ದರು.ಈಗ ಆ ಸಮಯ ಬಂದಿದೆ.ಅವೆಲ್ಲವೂ ಈಗ ನಡೆಯುತ್ತಿದೆ, ವಿಧಿಯ ಸೂತ್ರದ ಪ್ರಕಾರವೇ ನಡೆಯುತ್ತಿದೆ. ವಿಧಿಯು ತನ್ನ ಕೆಲಸವನ್ನು ಮಾಡುತ್ತಿದ್ದರೆ, ಆ ಧರ್ಮದ ಕಾರ್ಯಕ್ಕೆ, ಸತ್ಕಾರ್ಯಕ್ಕೆ, ಮನುಕುಲದ ಕಲ್ಯಾಣಕ್ಕೆ ನಾವೇ ಕಾರಣರಾಗಬೇಕೇ ಹೊರತು ಚಮತ್ಕಾರವನ್ನು ನೋಡುತ್ತಾ ಕೈ ಕಟ್ಟಿ ಕೂರಬಾರದು,ಅದು ನಮ್ಮ ಕಾರ್ಯ, ಆ ಕಾರ್ಯಕ್ಕಾಗಿಯೇ ನಾವು ಹುಟ್ಟಿರುವುದು.ನಾವೂ ಕೂಡ ಅಂತಹ ಕಾರ್ಯದ ಭಾಗವಾಗವುದೇ ನಮ್ಮ ಶೌರ್ಯತನದ ಸಂಕೇತ‌.

ವಿಧಿ ತನ್ನ ಕೆಲಸವನ್ನು ಮಾಡುತ್ತದೆ, ಪ್ರಕೃತಿ ತನ್ನ ಚಕ್ರವನ್ನು ಪೂರ್ಣಗೊಳಿಸುತ್ತದೆ, ದೇವರ ಇಚ್ಛೆಯಿಂದ ಏನಾಗಬೇಕೋ ಅದೆಲ್ಲವೂ ಸಂಭವಿಸುತ್ತದೆ. ಭಗವಂತನ ಸಂಕಲ್ಪದಂತೆ ನಡೆಯುವ ಕಾರ್ಯಕ್ಕೆ ಕೈ ಹಾಕುವುದು ನಮ್ಮ ಕರ್ತವ್ಯ. ಪುಣ್ಯ ಕಾರ್ಯಗಳಲ್ಲಿ ತೊಡಗುವುದರಿಂದ ನಮ್ಮ ಜೀವನ ಸುಖಮಯವಾಗುತ್ತದೆ, ನಮ್ಮ ಮಾನವ ಜನ್ಮ ಸಾರ್ಥಕವಾಗುತ್ತದೆ. ರಾಮಸೇತು ನಿರ್ಮಾಣದಲ್ಲಿ ಅಳಿಲುಗಳ ಕೊಡುಗೆ ಕುರಿತು ಮಾತನಾಡಿದ ಅವರು,ಅಳಿಲುಗಳಿಗೇನಾದರೂ ಮಾತು ಬಂದಿದ್ದರೆ ರಾಮಸೇತು ನಿರ್ಮಾಣಕ್ಕೆ ತಮ್ಮ ಕುಲ ಎಷ್ಟು ಕೊಡುಗೆ ನೀಡಿದೆ ಎಂಬುದನ್ನು ತಮ್ಮ ಮುಂದಿನ ಪೀಳಿಗೆಗಳಿಗೂ ತಲುಪಿಸುವಂತೆ ಹೇಳುತ್ತಿದ್ದವು ಎಂದರು.

ಸರಸಂಘಚಾಲಕರು ಮಾತನಾಡುತ್ತಾ, ” ಈ ನಾಡಿನಲ್ಲಿ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಜೀವನವೇ ಇಂದಿಗೂ ಕಾಣಸಿಗುತ್ತದೆ.ಹಾಗೆ ನಡೆಸಿಕೊಂಡು ಬಂದ ಜೀವನವು ಮನುಷ್ಯ ಮಾತ್ರರ ಉದ್ಧಾರಕ್ಕೆ ,ಮುಕ್ತಿಗೆ ದಾರಿ ಮಾಡಿಕೊಟ್ಟಿತು.ಈ ಮೂಲಕ ಈ ದೇಶ,ದೇಶದ ಜನ ಜಗತ್ತಿನ ಯಾವುದೇ ಜನರನ್ನು, ದೇಶವನ್ನು ನೋಯಿಸಲಿಲ್ಲ,ದಂಡೆತ್ತಿ ಹೋಗಲಿಲ್ಲ. ಜಗತ್ತಿನ ತುಂಬೆಲ್ಲ  ಹೋದರೂ ಸಹ,  ಧ್ಯಾನವನ್ನು ತೆಗೆದುಕೊಂಡು ಹೋದರು, ನಾಗರಿಕತೆ ಮತ್ತು ಸಂಸ್ಕೃತಿಯನ್ನು ತೆಗೆದುಕೊಂಡು ಹೋದರು,ತಮ್ಮ ಹೃದಯದ ಪ್ರೀತಿಯನ್ನು ತೆಗೆದುಕೊಂಡು ಹೋದರು. ನಮ್ಮ ದೇಶವು ಜಗತ್ತನ್ನು ಒಂದು ಕುಟುಂಬವನ್ನಾಗಿ ಮಾಡಿದೆ, ಮಾರುಕಟ್ಟೆಯನ್ನಲ್ಲ. ನಾವು ಇಂತಹ ದೇಶದ ಪ್ರಜೆಗಳು, ನಾವು ಇಂತಹ ದೇಶದ ಮಕ್ಕಳು, ಆದ್ದರಿಂದ ನಾವು ಪರಸ್ಪರರನ್ನು ಸಹೋದರರಂತೆ ಕಾಣುತ್ತೇವೆ.
ನಮ್ಮಲ್ಲಿ ಹಲವಾರು ಭಾಷೆ, ಜಾತಿ, ಪಂಥಗಳಿವೆ, ಆದರೆ ನಾವು ಅದನ್ನು ಭೇದವೆಂದು ಪರಿಗಣಿಸುವುದಿಲ್ಲ. ಇದು ನಮ್ಮ ವೈಶಿಷ್ಟ್ಯತೆ ಎಂದು ನಾವು ಹೇಳುತ್ತೇವೆ,ನಾವೆಲ್ಲರೂ ಒಂದೇ ಉದ್ಯಾನದ ಬಣ್ಣಬಣ್ಣದ ಹೂವುಗಳಂತೆ, ಎಲ್ಲರೂ ಒಂದೇ ಮಣ್ಣಿನಿಂದ ಜೀವನದ ರಸವನ್ನು ಪಡೆದಿದ್ದೇವೆ.

ಸಿದ್ಧಪೀಠ ಶ್ರೀ ಹಥಿಯಾರಾಮ ಮಠದ ಯಾತ್ರೆ ಸಂಪನ್ನವಾದ ಸಂದರ್ಭದಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ‘ಬಲಿದಾನ ದಿನ’ದಂದು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುಗಳಿಗೆ ಗೌರವ ಸಲ್ಲಿಸಿದರು.

ಅಲ್ಲದೆ ಜಿಲ್ಲೆಯ ಬಲಿದಾನಿ ಯೋಧರಿಗೆ ನಮನ ಸಲ್ಲಿಸಿದ ಅವರು, ಅವರ ಬಂಧುಗಳಿಗೆ ಹಾಗೂ ಪ್ರತಿನಿಧಿಗಳಿಗೆ ಅಂಗವಸ್ತ್ರ ನೀಡಿ ಗೌರವಿಸಿದರು.ಇದರಲ್ಲಿ ಪರಮವೀರ ಚಕ್ರ ವಿಜೇತ ವೀರ ಅಬ್ದುಲ್ ಹಮೀದ್ ಅವರ ಪುತ್ರ ಜೈನುಲ್ ಬಾಸರ್, ಮಹಾವೀರ ಚಕ್ರ ವಿಜೇತ ರಾಮ‌ಉಗ್ರಹ ಪಾಂಡೆ ಪುತ್ರಿ ಸುನೀತಾ ಪಾಂಡೆ, ಬಲಿದಾನಿ ಪರಸನಾಥ್ ಸಿಂಗ್ ಅವರ ಪುತ್ರ ಸಚೀಂದ್ರ ಸಿಂಗ್, ಬಲಿದಾನಿ ರಾಮಚಂದ್ರ ಮಿಶ್ರಾ ಅವರ ಪತ್ನಿ ರಾಮಲಾಲಿ ದೇವಿ ಮತ್ತು ಬಲಿದಾನಿ ರಿತೇಶ್ವರ ರೈ ಅವರ ಪ್ರತಿನಿಧಿ ರಾಮನಾರಾಯಣ ರೈ ಅವರನ್ನು ಸನ್ಮಾನಿಸಿದರು‌.

  • email
  • facebook
  • twitter
  • google+
  • WhatsApp
Tags: adhyatmahinduSarsanghachalakSarsanghachalak Dr Mohan BhagwatSarsanghachalak Mohan Bhagwat

Related Posts

News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
Next Post

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Baba Ramdev fasting on for the 8th day

Ramdev ends his fast on 9th day, assures protest will continue till last breath

June 12, 2011
VIDEO: Balochistan demands a divorce from Pakistan

VIDEO: Balochistan demands a divorce from Pakistan

July 10, 2013

NEWS IN BRIEF – NOV 19, 2011

November 20, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In