• Samvada
Wednesday, August 10, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಅಪೂರ್ವ ಸೇವೆ

Vishwa Samvada Kendra by Vishwa Samvada Kendra
November 1, 2020
in News Digest
250
0
ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಅಪೂರ್ವ ಸೇವೆ
491
SHARES
1.4k
VIEWS
Share on FacebookShare on Twitter

ರಾಜ್ಯದಿಂದ ರಾಜ್ಯಕ್ಕೆ ಕೆಲಸದ ಸಲುವಾಗಿ ಜನರು ವಲಸೆ ಹೋಗುವುದು ಸಾಮಾನ್ಯ. ತಮ್ಮ ಹೊಟ್ಟೆ ಪಾಡು, ತಮ್ಮ ಕುಟುಂಬ, ಊರಲ್ಲಿರುವ ತಂದೆ ತಾಯಿಯರನ್ನು ಸಾಕುವುದು ಮತ್ತೆಲ್ಲೋ ಸಾಲ ತೀರಿಸಬೇಕು. ಕಷ್ಟವಾದರೇನಂತೆ ಊರು ಬಿಟ್ಟು ಕೆಲಸ ಹುಡುಕೋಣವೆಂದು, ತಾವಿದ್ದ ಊರಿನಲ್ಲಿ ಕೆಲಸವೂ ಸಿಗದಿದ್ದಾಗ ಧಿಡೀರನೆ ಊರು ಬಿಟ್ಟು ಹೊರಟುಬಿಡುತ್ತಾರೆ. ಹಾಗೆ ಕರ್ನಾಟಕಕ್ಕೂ ವಲಸೆ ಬಂದು ಜೀವನ ಕಟ್ಟಿಕೊಳ್ಳುವವರು ಸಾಕಷ್ಟು ಮಂದಿಯಿದ್ದಾರೆ. ಕೆಲವರು ಹವಾನಿಯಂತ್ರಿತ ಆಫೀಸ್ ಒಳಗೆ ಕುಳಿತು ಕೆಲಸ ಮಾಡಿ ದುಡ್ಡು ಎಣಿಸಿಕೊಳ್ಳುತ್ತಾರೆ; ಹಲವಾರು ಮಂದಿ ಕೆಲಸ ಅರಸಿ ಬರುವುದು ಸಣ್ಣ ಪುಟ್ಟ ಕೆಲಸಕ್ಕಾಗಿಯೇ. ಗಾರ್ಮೆಂಟ್ಸ್, ಗ್ರೆನೈಟ್, ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಎಂಬ ಹೆಸರಿನಲ್ಲಿ ಭಾರತದ ಮೂಲೆ ಮೂಲೆಗಳಿಂದ ಕರ್ನಾಟಕಕ್ಕೆ ಬರುತ್ತಾರೆ. ಹವಾನಿಯಂತ್ರಿತ ಕಚೇರಿಯಲ್ಲಿ ಕೆಲಸ ಮಾಡುವವರು ಇಲ್ಲಿಯ ಭಾಷೆ ಕಲಿಯಲೇ ಬೇಕು ಎಂಬ ತೀವ್ರ ಹಠ ಇಟ್ಟುಕೊಂಡಿರುವುದಿಲ್ಲ. ವ್ಯವಹಾರಕ್ಕೆ ಇಂಗ್ಲಿಷ್, ಹಿಂದಿ ಬಂದರೆ ಸಾಕೆ ಸಾಕು. ಕನ್ನಡಿಗರು ಸ್ವಲ್ಪ ಉದಾರವಾದಿಗಳೇ ಅಲ್ಲವೇ? ಅಂಗಡಿ, ಮಾರುಕಟ್ಟೆಗೆ ಇವರು ಹೋದರೆ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿಯೇ ಸಂವಹನ. ಕನ್ನಡ ಕಲಿಯಲೇ ಬೇಕು ಎಂಬ ವಾಂಛೆ ವಲಸೆ ಬಂದವರಿಗೂ ಇರುವುದಿಲ್ಲ. ಅವರಿಗೆ ಕನ್ನಡ ಕಲಿಸಬೇಕೆಂಬ ಉತ್ಸಾಹವನ್ನು ನಾವೂ ತೋರುವುದಿಲ್ಲ.

ಶ್ರೀ ನರಸಿಂಹರಾಜು. ಊರು: ತುಮಕೂರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ಊರಿಗೆ ಹತ್ತಿರವಿರುವ ಡಾಬಸ್ಬೇಟೆ ಹಲವು ವರ್ಷಗಳಿಂದ ಬೇರೆ ಊರುಗಳಿಂದ – ವಿಶೇಷವಾಗಿ ಒಡಿಶಾ, ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳಿಂದ ಕೆಲಸ ಅರಸಿ ಬರುವವರನ್ನು ನೋಡುತ್ತಲಿದ್ದರು. ಆದರೆ ಸುಮ್ಮನೆ ಕೂರಲಿಲ್ಲ. ಕಳೆದ ಐದು ವರ್ಷಗಳಿಂದ ಹೀಗೆ ತಮ್ಮ ಊರಿಗೆ ವಲಸೆ ಬರುವವರಿಗೆ ಕನ್ನಡ ಹೇಳಿಕೊಡುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಬಂದವರಿಗೆ ಕನ್ನಡ ಹೇಳಿಕೊಡಬೇಕು ಎಂಬ ಯೋಚನೆ ಬಂದದ್ದಾದರೂ ಹೇಗೆ ಎಂದು ಕೇಳಿದರೆ, ನರಸಿಂಹ ರಾಜು ಹೇಳುತ್ತಾರೆ “ಬೆಂಗಳೂರಿನಂತಹ ಊರುಗಳಲ್ಲಿ ಹಿಂದಿಯಲ್ಲೋ ಇಂಗ್ಲಿಷ್ ನಲ್ಲಿಯೂ ಮಾತನಾಡುವ ಕನ್ನಡಿಗರು ಸಿಗುತ್ತಾರೆ. ತುಮಕೂರಿನಲ್ಲಿ ಆ ಸಂಖ್ಯೆ ಕಡಿಮೆ. ಅಲ್ಲದೇ ಅನ್ಯ ರಾಜ್ಯಗಳಿಂದ ಬರುವವರು ನಮ್ಮ ಸೊಗಸಾದ ಭಾಷೆ ಕಲಿತರೆ ಸಂವಹನಕ್ಕೆ ಸುಲಭವಲ್ಲವೇ?” ಅಲ್ಲದೆ, ಪ್ರತಿಬಾರಿಯೂ ಹೊರಗಿನಿಂದ ಬಂದವರು ಎಂಬುದನ್ನೇ ಹೇಳಿ ಅವರಿಗೆ ನಮ್ಮ ಕೈಲಾದ ಸಹಾಯ ಮಾಡದಿದ್ದರೆ ಹೇಗೆ ಎಂದು ಯೋಚಿಸಿ ನರಸಿಂಹ ರಾಜು ಅವರು ಶನಿವಾರ ಭಾನುವಾರಗಳಂದು ಇವರಿದ್ದಲ್ಲಿಗೆ ಹೋಗಿಯೋ ಅಥವಾ ಅವರು ಇವರಲ್ಲಿಗೆ ಬಂದು ಭಾಷೆ ಕಲಿಯುವ ವ್ಯವಸ್ಥೆ ರೂಪಿಸಿದ್ದಾರೆ.

READ ALSO

Swaraj@75 – Refrain from politics over Amrit Mahotsava

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

ಕೆಲವರಿಗೆ ವ್ಯವಹಾರಕ್ಕೆ ಬೇಕಾದ ಕನ್ನಡ ಕಲಿತರೆ ಸಾಕು. ಮತ್ತೆ ಕೆಲವರು ಜೀವನವನ್ನು ಇಲ್ಲಿಯೇ ಕಟ್ಟಿಕೊಳ್ಳಬೇಕು ಎಂದು ಪಾತ್ರೆ ಪಗಡಿ ಸಮೇತ ಈ ಊರಿಗೆ ಬಂದವರಿರುತ್ತಾರೆ. ಅವರ ಮಕ್ಕಳಿಗೂ ಕನ್ನಡ ಹೇಳಿಕೊಡುತ್ತಾರೆ ನರಸಿಂಹರಾಜು. ಹೀಗೆ ವಲಸೆ ಬಂದ ಕಾರ್ಮಿಕರ ಮಕ್ಕಳೂ ಕನ್ನಡವನ್ನು ಚೆನ್ನಾಗಿಯೇ ಕಲಿತಿದ್ದಾರೆ. ಕೇವಲ ಮಾತುಗಳಲ್ಲಿ ಎಲ್ಲರೂ ಕನ್ನಡವನ್ನಷ್ಟೇ ಮಾತನಾಡಬೇಕು ಎಂಬುದನ್ನು ಹೇಳುವವರ ಮಧ್ಯದಲ್ಲಿ, ಅನ್ಯ ಭಾಷಿಗರು ಭಾರತದವರೇ ಅಲ್ಲ ಎಂಬಂತೆ ವರ್ತಿಸುವವರ ಮಧ್ಯದಲ್ಲಿ, ಈ ತರಹದ ಸೇವೆ ಅಪೂರ್ವ ಹಾಗೂ ಅನುಪುಮ. ಇವರಿಂದ ಪ್ರೇರಿತರಾಗಿ ಇನ್ನಷ್ಟು ಜನರಿಗೆ ಕನ್ನಡ ಕಲಿಸುವ ಕೆಲಸಕ್ಕೆ ನಾವೆಲ್ಲರೂ ಮುಂದಾಗೊಣ. ನರಸಿಂಹರಾಜು ಅವರ ಕಾವ್ಯ ಸೇವೆಗೆ ಹಾಗೂ ಅನ್ಯ ಭಾಷಿಗರಿಗೆ ಕನ್ನಡ ಕಲಿಸುವ ಸೇವೆಯನ್ನು ಪರಿಗಣಿಸಿ ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡ ಸೇವಾ ರತ್ನ’ ಪ್ರಶಸ್ತಿಯನ್ನು ನರಸಿಂಹರಾಜು ಅವರಿಗೆ ಘೋಷಿಸಿದೆ. ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ ಅವರನ್ನು ಲಿ ಸನ್ಮಾನಿಸಲಾಗಿದೆ.

ನರಸಿಂಹರಾಜು ಅವರ ಕನ್ನಡ ಸೇವೆ ಮತ್ತಷ್ಟು ಮೈಲಿಗಲ್ಲು ದಾಟಲಿ ಎಂಬುದು ವಿಶ್ವ ಸಂವಾದ ಕೇಂದ್ರದ ಹಾರೈಕೆ.

  • email
  • facebook
  • twitter
  • google+
  • WhatsApp

Related Posts

News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
News Digest

ಭಾರತದ ಮಣ್ಣೇ ತೀರ್ಥ ಕ್ಷೇತ್ರ,ಇಲ್ಲಿನ ಕಣಕಣವೂ ವಂದನೀಯ – ದತ್ತಾತ್ರೇಯ ಹೊಸಬಾಳೆ

July 25, 2022
News Digest

ವಿಕ್ರಮ ವಾರಪತ್ರಿಕೆಗೆ 75 ವಸಂತಗಳು – ಶುಭಕೋರಿದ ಮುಖ್ಯಮಂತ್ರಿ ಬೊಮ್ಮಾಯಿ

July 22, 2022
Next Post
‘ನನ್ನ ಹೆಮ್ಮೆಯ ಕರ್ನಾಟಕ’ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ 2020 ಫಲಿತಾಂಶ

‘ನನ್ನ ಹೆಮ್ಮೆಯ ಕರ್ನಾಟಕ’ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ 2020 ಫಲಿತಾಂಶ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

ಸಮ್ಮತಿಯ ಲೈಂಗಿಕ ಸಂಬಂಧ ವಿವಾಹವಂತೆ! ಬಾಡಿಗೆ ತಾಯ್ತನವಂತೆ, ಛೆ!

June 25, 2013
Government diverting attention from the Real Problem of Bangla Infiltration: Dr Togadia

Government diverting attention from the Real Problem of Bangla Infiltration: Dr Togadia

August 21, 2012
Udaipur: Virat Hindu Shakti Sangam’ held, Patha Sanchalan inspires the youth

Udaipur: Virat Hindu Shakti Sangam’ held, Patha Sanchalan inspires the youth

February 24, 2014
ಹುಬ್ಬಳ್ಳಿ: 2012 ಜನವರಿ 27, 28, 29ರ ‘ಹಿಂದು ಶಕ್ತಿ ಸಂಗಮ’ ಶಿಬಿರಕ್ಕೆ ತೀವ್ರಗತಿಯ ಸಿದ್ಧತೆ

ಹುಬ್ಬಳ್ಳಿ: 2012 ಜನವರಿ 27, 28, 29ರ ‘ಹಿಂದು ಶಕ್ತಿ ಸಂಗಮ’ ಶಿಬಿರಕ್ಕೆ ತೀವ್ರಗತಿಯ ಸಿದ್ಧತೆ

January 20, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In