• Samvada
  • Videos
  • Categories
  • Events
  • About Us
  • Contact Us
Thursday, February 9, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ತಿಳಿಯಲೇಬೇಕಾದ ಮಾಣಿಕ್ಯ – ಶಾಹಜಿ ರಾಜೆ ಭೋಂಸ್ಲೆ

Vishwa Samvada Kendra by Vishwa Samvada Kendra
January 23, 2022
in Articles, Blog, Others
252
0
496
SHARES
1.4k
VIEWS
Share on FacebookShare on Twitter

ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವ ಹೆದ್ದಾರಿಯಲ್ಲಿ ಚೆನ್ನಗಿರಿಗಿಂತ ಮುಂಚೆ ಬಲಕ್ಕೆ ತಿರುಗಿ ಹತ್ತು ಕಿ.ಮಿ. ಹೋದರೆ, ಹೊದಿಗೆರೆ ಎಂಬ ಕುಗ್ರಾಮವಿದೆ. ಇದೊಂದು ಪುಟ್ಟ ಹಳ್ಳಿ. ಸಣ್ಣ ಮಾರ್ಗ, ಒಂದು ಕಾರು ಹೋಗುವಷ್ಟು ಜಾಗ, ರೈತಾಪಿ ವರ್ಗವೇ ಅಧಿಕವಾಗಿರುವ ಇಲ್ಲಿ ಹೊಲ-ಗದ್ದೆಗಳು ಸಾಮಾನ್ಯ. ಆದರೆ ನಮ್ಮಲ್ಲಿ ಬಹುತೇಕ ಜನರಿಗೆ ತಿಳಿಯದ ವಿಷಯ – ಈ ಸ್ಥಳವು ಯಾವ ಪುಣ್ಯಕ್ಷೇತ್ರಕ್ಕೂ ಕಡಿಮೆ ಏನಲ್ಲ ಎಂದು. ಏಕೆಂದರೆ ಇಲ್ಲಿದೆ ಹೈಂದವೀ ಸ್ವರಾಜ್ಯದ ಹರಿಕಾರ ಶಹಜಿ ರಾಜೆ ಭೋಂಸ್ಲೆಯ ಸಮಾಧಿ. ಆ ಮಹಾತ್ಮನ ಒಂದು ಚಿಕ್ಕ ಪರಿಚಯ ಈ ಲೇಖನದ ಪ್ರಯತ್ನ.

READ ALSO

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

ಮೊಘಲರು ಹಾಗು ದಕ್ಷಿಣದ ಸುಲ್ತಾನರು ಇವರುಗಳ ನಡುವೆ ಒಂದು ಹಿಂದೂ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ಗುರಿಯಿಂದ ಶಿವಾಜಿ ತನ್ನ ಜೀವನವನ್ನು ಸವೆಸಿ ಅದನ್ನು ಸಾಧಿಸಿದನು. ನಾವು ಹಲವು ಕಡೆ ಓದಿದ್ದೇವೆ ತಿಳಿದಿದ್ದೇವೆ ಶಿವಾಜಿ ಮಹಾರಾಜರಿಗೆ ಮಹಾನ್ ಪ್ರೇರಕಶಕ್ತಿಯಾಗಿ ನಿಂತದ್ದು ಅವರ ತಾಯಿ ಜೀಜಾಮಾತೆ ಎಂದು. ಆದರೆ ಹಲವರಿಗೆ ತಿಳಿಯದ ವಿಷಯವೆಂದರೆ ಈ ಹೈಂದವಿ ಸ್ವರಾಜ್ಯದ ಕಲ್ಪನೆ ಮೈ ತಾಳಿದ್ದು ಜೀಜಾಮಾತೆ ಹಾಗೂ ಆಕೆಯ ಪತಿ ಶಹಜೀ ರಾಜೆ ಭೋಂಸ್ಲೆ ಇಬ್ಬರಿಂದಲೂ ಎಂದು.

ಶಹಜಿ ಹುಟ್ಟಿದ್ದು 1600 ಆಸುಪಾಸಿನಲ್ಲಿ. ವಿಜಯನಗರ ಸಾಮ್ರಾಜ್ಯದ ಪತನದ ನೋವು ಜನಮಾನಸದಲ್ಲಿ ಹಸಿಹಸಿಯಾಗಿರುವಂತೆಯೇ, ದಕ್ಕನ್ನಿನಲ್ಲಿ ಐದು ಬಹಮನಿ ಸುಲ್ತಾನರ ಆಳ್ವಿಕೆ ಚಾಲ್ತಿಯಲ್ಲಿತ್ತು. ಶಹಜಿಯ ಬಾಲ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ ಅವರ ತಂದೆ ಮಾಲೋಜಿ ಹಾಗು ಸಹೋದರ ಶರೀಫಜಿ ಎಂದು ತಿಳಿದಿದೆ. ಮಾಲೋಜಿ ಅಹಮದ್ ನಗರದ ನಿಜಾಮ್ ಶಾಹ್ ಬಳಿ ಸೇನಾಧಿಕಾರಿಯಾಗಿದ್ದನು. ಬಿಜಾಪುರದ ವಿರುದ್ಧದ ಒಂದು ಯುದ್ಧದಲ್ಲಿ ಮಾಲೋಜಿ ಹಾಗೂ ಶರೀಫಜಿ ಮರಣಾನಂತರ ಅವನ ಸ್ಥಾನ ಹಾಗು ಪುಣೆಯ ಜಹಗಿರ್ದಾರಿ ಮಗನ ಪಾಲಾಯಿತು.

ಶಹಜಿಯು ಸೇನಾಧಿಪತಿ ಮಾಲಿಕ್ ಅಂಬರ್‌ನ ಆಶ್ರಯದಲ್ಲಿ ಹಾಗು ಗೆಳೆತನದಲ್ಲಿ ಬೆಳೆದನು. ಆಗಲೇ ಶಹಜಿ ತನ್ನ ಚಾಣಾಕ್ಷತೆ ಹಾಗು ಬುದ್ಧಿವಂತಿಕೆಯಿಂದ ಹೆಣೆದ ಸಮರ ಕಲೆ – ಗೆರಿಲ್ಲಾ ಯುದ್ಧ. ಎದುರಾಳಿ ಎಂತಹ ದೊಡ್ಡ ಸೇನೆ ಹೊಂದಿದ್ದರೂ ಅತಿ ಕಡಿಮೆ ಸೈನ್ಯದೊಡನೆ ಚಾಲಾಕಿ ನಡೆಯಿಂದ ಯುದ್ಧ ಗೆಲ್ಲುವ ಅಡಗು ಕಲೆಯೇ ಇದು. ಇದಕ್ಕೆ ಅವನು ‘ಗಣೀಮಿ ಕಾವ’ ಎಂದು ಹೆಸರಿಸಿದನು.
ಈ ಯುದ್ಧ ಶೈಲಿಗೆ ಒಂದು ಉತ್ತಮ ಉದಾಹರಣೆ: ಶಹಜಹಾನ್ ಇನ್ನೂ ಯುವರಾಜನಾಗಿದ್ದಾಗ ಅಹಮದ್ ನಗರದ ಮೇಲೆ ದಂಡೆತ್ತಿ ಬರುತ್ತಾನೆ. ಅವನ ಸೈನ್ಯದ ಬಲ 1 ಲಕ್ಷ. ಶಾಜಿಯ ಬಳಿ ಇದ್ದದ್ದು ಕೇವಲ 20000ದ ಸೈನ್ಯ. ಮುಖಾಮುಖಿ ಯುದ್ಧದಲ್ಲಿ ಶಹಜಾನ್‌ನನ್ನು ಎದುರಿಸಿದರೆ ನಿರ್ನಾಮ ಶತಃಸಿದ್ಧ. ಇದಕ್ಕಾಗಿ ಶಾಜಿ ಒಂದು ಉಪಾಯ ಹೆಣೆಯುತ್ತಾನೆ. ವೈರಿ ಪಡೆ ತನ್ನನ್ನು ಬೆನ್ನಟ್ಟಿ ಬರುವಂತೆ ಮಾಡಿ, ಬೆನ್ನಟ್ಟುತ್ತಾ ಬೆನ್ನಟ್ಟುತ್ತಾ ಅವರು ಸಂಜೆ ಒಂದು ನದಿತಟದಲ್ಲಿ ವಿಶ್ರಮಿಸುವಂತೆ ಮಾಡುತ್ತಾನೆ. ಇನ್ನೊಂದೆಡೆ ತನ್ನ ಸೈನ್ಯವನ್ನು ಒಂದು ಸುರಕ್ಷಿತ ಸ್ಥಳದಲ್ಲಿರಿಸಿ, ಆ ನದಿಗೆ ಕಟ್ಟಿದ್ದ ಅಣೆಕಟ್ಟನ್ನು ಒಡೆಸುತ್ತಾನೆ. ನೀರಿನ ಪ್ರವಾಹದಲ್ಲಿ ಶಹಜಹಾನನ ಪಡೆ ಕೊಚ್ಚಿ ಹೋಗುತ್ತದೆ. ಈ ವಿಜಯದಿಂದ ಎಂತಹ ವೈರಿಯನ್ನೂ ಸೋಲಿಸಬಲ್ಲೆ ಎಂಬ ಆತ್ಮವಿಶ್ವಾಸ ಶಾಜಿಗೆ ಬಂದಿತು. ಇಡೀ ಪ್ರದೇಶಕ್ಕೆ ಶಾಜಿಯ ಶೌರ್ಯದ ಪರಿಚಯವಾಯಿತು.

ಕಾಲಾನುಕ್ರಮೇಣ ಶಾಜಿಗೆ ಜಾದವ ಮನೆತನದ ಜೀಜಾಬಾಯಿಯೊಡನೆ ವಿವಾಹವಾಯಿತು. ಜಾದವರು ಮೂಲತಃ ಯಾದವ ರಾಜವಂಶಸ್ಥರು. ನಿಜಾಮ್‌ಶಾಹಿ ಸುಲ್ತಾನನಿಗೆ ಬಹಳ ನಿಯತ್ತಿನ ಸೇನಾಧಿಕಾರಿಗಳಾಗಿದ್ದರು. ಹೀಗೆ ಸೇನಾ ಮುಖ್ಯಸ್ಥರಾಗಿದ್ದ ಜೀಜಾಬಾಯಿಯ ತಂದೆ ಹಾಗು ಮೂವರು ಅಣ್ಣಂದಿರನ್ನು ಸುಲ್ತಾನ ರಾಜಸಭೆಯಲ್ಲೇ ಘೋರವಾಗಿ ಕೊಂದು ರಕ್ತದೋಕುಳಿ ಹರಿಸುತ್ತಾನೆ. ಇದು ಶಾಜಿ ಮತ್ತು ಜೀಜಾಬಾಯಿಗೆ ತೀವ್ರ ಆಘಾತ, ನೋವು ಮತ್ತು ರೋಷ ತರಿಸಿತು. ಅಲ್ಲಿಂದಲೇ ಹಿಂದವೀ ಸ್ವರಾಜ್ಯದ ಕನಸು ಇಬ್ಬರಲ್ಲೂ ಟಿಸಿಲೊಡೆಯಿತು.
ಇದರ ಪರಿಣಾಮ ಶಾಜಿ ತನ್ನ ಸುತ್ತಮುತ್ತಲಿನ ಎಲ್ಲಾ ಹಿಂದು ಸೇನಾ ಸರದಾರರ ಒಂದು ಪರಿಷತ್ ಕರೆದು ಅಲ್ಲಿ ಹಿಂದೂ ಪುನರುತ್ಥಾನದ ಬಗ್ಗೆ ರೋಮಾಂಚಕ ಮಾತುಗಳನ್ನಾಡಿ ಅವರೆಲ್ಲಾ ತಲೆದೂಗುವಂತೆ ಮಾಡುತ್ತಾನೆ. ಇದರ ಫಲವೇನೋ ಎಂಬಂತೆ ಅಹಮದ್ ನಗರದ ರಾಜವಂಶ ಪತನವಾಗುತ್ತದೆ. ಶಾಜಿ ಪುಣೆಯನ್ನು ಸ್ವರಾಜ್ಯ ಎಂದು ಘೋಷಿಸಿ ಬಿಜಾಪುರದ ಸುಲ್ತಾನನನ್ನು ಎದುರಿಸಿ ನಿಲ್ಲುತ್ತಾನೆ. ಮರ್ಸೆನರಿಗಳಾಗಿದ್ದ (ಬಾಡಿಗೆ ಸೈನಿಕರು) ಮರಾಠರಿಗೆ ಒಂದು ಹೊಸ ಆಶಾಕಿರಣ ಸಿಕ್ಕಿತು.
ಇದರ ನಂತರದ ವರ್ಷಗಳಲ್ಲಿ ಹಲವಾರು ಪ್ರಸಂಗಗಳ ನಡೆದು ಆದಿಲ್ ಶಾಹನ ಬಳಿಯೇ ಶಾಜಿ ಸೇನಾಧಿಕಾರಿಯಾಗಬೇಕಾಗುತ್ತದೆ. ಆದಿಲ್ ಶಾ ಇಡೀ ಕರ್ನಾಟಕದ ಸಣ್ಣ ಸಣ್ಣ ರಾಜರನ್ನು ಮಟ್ಟಹಾಕಿ, ಅವರನ್ನು ಇಲ್ಲವಾಗಿಸಿ, ಅವರ ರಾಜ್ಯವನ್ನು ಬಿಜಾಪುರದ ಆಡಳಿತಕ್ಕೆ ತರಬೇಕೆಂದು ಶಾಜಿಗೆ ಆಜ್ಞಾಪಿಸುತ್ತಾನೆ. ಈ ದಂಡಯಾತ್ರೆಗೆ ರಣದುಲ್ಲಾಖಾನನನ್ನು ಶಾಜಿಯೊಡನೆ ಕಳಿಸುತ್ತಾನೆ. ಎಂದೂ ಸೋಲರಿಯದ ಶಾಜಿಗೆ ಈ ಗೆಲುವುಗಳು ಕಷ್ಟವಾಗಿರಲಿಲ್ಲ. ಆದರೆ ಕಾಟಾಚಾರಕ್ಕೆ ಯುದ್ಧ ಮಾಡುವಂತೆ ಮಾಡಿ ಎಲ್ಲಾ ಹಿಂದೂ ರಾಜರಿಗೂ ತಪ್ಪಿಸಿಕೊಳ್ಳಲು ಶಾಜಿ ಅವಕಾಶ ಮಾಡಿಕೊಟ್ಟನು. ಹೀಗೆ ಬೆಂಗಳೂರಿನ ಮುಮ್ಮುಡಿ ಕೆಂಪೇಗೌಡನನ್ನೂ ಆದಿಲ್ ಶಾಹನ ಸೈನ್ಯದಿಂದ ಮುಕ್ತಗೊಳಿಸಿ ಸುರಕ್ಷಿತವಾಗಿ ತೆರಳಲು ಅನುವು ಮಾಡಿಕೊಟ್ಟನು. ಈ ಎಲ್ಲಾ ಸತ್ಯಗಳು ತಿಳಿದೂ ಸಹ ಆದಿಲ್ ಶಾ ಶಾಜಿಯ ಶಕ್ತಿಯ ಅರಿವಿದ್ದದ್ದರಿಂದ ಇಡೀ ಬೆಂಗಳೂರಿನ ಜಹಗೀರನ್ನು ಅವನಿಗೆ ಬಿಟ್ಟುಕೊಡುತ್ತಾನೆ. ಹೀಗೆ ಶುರುವಾದ ಬೆಂಗಳೂರಿನ ನಂಟು, ಕೊನೇ ಘಳಿಗೆಯವರೆಗೆಯವರೆಗೂ ಮುಂದುವರಿಯಿತು. ಸುಲ್ತಾನನು ಶಾಜಿಯ ಭಯದಿಂದ ಬೆಂಗಳೂರು ಹಾಗೂ ಇದರಿಂದ ದಕ್ಷಿಣದ ಪ್ರದೇಶಗಳಿಗೆ ತಲೆ ಹಾಕಲೇ ಇಲ್ಲ. ಬೆಂಗಳೂರಿನಲ್ಲಿ ಹಲವು ದೇವಾಲಯಗಳನ್ನು ಕಟ್ಟಿಸಿದ ಶಾಜಿ, ಹಲವನ್ನು ಜೀರ್ಣೋದ್ಧಾರ ಕೂಡ ಮಾಡಿಸಿದ.

ಶಾಜಿ-ಜೀಜಾಬಾಯಿಗೆ ಇಬ್ಬರು ಪರಾಕ್ರಮಿ ಮಕ್ಕಳು, ಸಂಭಾಜಿ ಹಾಗು ಶಿವಾಜಿ. ಶಾಜಿಯ ಮೇಲೆ ಸೇಡು ತೀರಿಸಿಕೊಳ್ಳಲು ಸಂಭಾಜಿಯನ್ನು 25ನೇ ವರ್ಷದವನಿದ್ದಾಗ ಅಫಜಲ್ ಖಾನ್ ಮೋಸದಿಂದ ಕೊಲ್ಲಿಸಿ ಆಕಸ್ಮಿಕ ಎಂಬಂತೆ ಬಿಂಬಿಸಿದ. ಇದು ಶಾಜಿ ತೀವ್ರವಾಗಿ ಘಾಸಿಗೊಳಿಸಿತು. ಆದರೆ ಕಾಲಾನುಕ್ರಮೇಣ ಶಿವಾಜಿ ಇದಕ್ಕೆ ಪ್ರತೀಕಾರವನ್ನು ತೆಗೆದುಕೊಂಡಾಗ ಗತಿಸಿದ ಹಿರಿ ಮಗನ ಆತ್ಮಕ್ಕೆ ಶಾಂತಿ ಸಿಕ್ಕಂತಾಯಿತು. ಶಿವಾಜಿಗೆ ತನ್ನ ಸರ್ವ ಯುದ್ಧಕಲೆಗಳನ್ನು ಕಲಿಸಿದ ಶಾಜಿ, ಹೈಂದವಿ ಸ್ವರಾಜ್ಯದ ಪರಿಕಲ್ಪನೆ ಹಾಗೂ ಗಣೀಮಿ ಕಾವ ಕಲೆಯನ್ನು ಧಾರೆ ಎರೆದನು. ಇದರ ಫಲವೆಂಬಂತೆ ಶಿವಾಜಿಗೆ ಸರ್ವ ಯಶ ಪ್ರಾಪ್ತವಾಯಿತು. ಶಾಜಿಯ ಅಂತ್ಯ 1664ರಲ್ಲಿ ಕುದುರೆ ಸವಾರಿ ವೇಳೆ ಆದ ಆಕಸ್ಮಿಕದಿಂದ ಆಯಿತು. ಅವರ ಚಿತಾಭಸ್ಮವನ್ನು ಈಗ ಹೊದಿಗೆರೆಯಲ್ಲಿ ಸ್ಮಾರಕವಾಗಿಸಿದ್ದಾರೆ. ಭಾರತದ ಜನಮಾನಸದಲ್ಲಿ ಮೆರೆಯಲೇ ಬೇಕಾದ ಯುಗಪುರಷರಲ್ಲಿ ಶಹಜಿ ರಾಜೇ ಭೋಂಸ್ಲೆ ಕೂಡ ನಿಸ್ಸಂಶಯವಾಗಿ ಒಬ್ಬರು.

  • email
  • facebook
  • twitter
  • google+
  • WhatsApp
Tags: Chatrapati Shivaji Maharajjeejabaishahaji

Related Posts

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
Blog

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

September 6, 2022
Blog

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

August 15, 2022
ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
Blog

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

August 15, 2022
ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
Blog

ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

August 14, 2022
Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Next Post

ಧಾರವಾಡದಲ್ಲಿ ಉತ್ತುಂಗ ಮತ್ತು ಪ್ರಬಂಧ ಸಂಚಯ ಕೃತಿ ಬಿಡುಗಡೆ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Press Statement by Dr SUBRAMANIAN SWAMY on complaint against Sonia Gandhi

Press Statement by Dr SUBRAMANIAN SWAMY on complaint against Sonia Gandhi

October 26, 2011
JK governor reduced Amaranath Yatra duration for 39 days

JK governor reduced Amaranath Yatra duration for 39 days

July 5, 2012
RSS Media Chief Dr Vaidya speaks on ‘Political Parties, Media and Social Bodies’ at Adhivakta Meet

RSS Media Chief Dr Vaidya speaks on ‘Political Parties, Media and Social Bodies’ at Adhivakta Meet

December 28, 2012
ಹಿಂದುತ್ವ ಮತ್ತು ಆಧುನಿಕ ಆರ್ಥಿಕ ಸವಾಲುಗಳು: ಎಸ್. ಗುರುಮೂರ್ತಿ

ಹಿಂದುತ್ವ ಮತ್ತು ಆಧುನಿಕ ಆರ್ಥಿಕ ಸವಾಲುಗಳು: ಎಸ್. ಗುರುಮೂರ್ತಿ

September 7, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In