• Samvada
Wednesday, May 25, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest Hindu Samajotsav

Shivamogga

Vishwa Samvada Kendra by Vishwa Samvada Kendra
December 12, 2010
in Hindu Samajotsav
250
0
Shivamogga
491
SHARES
1.4k
VIEWS
Share on FacebookShare on Twitter

ದೇವರು-ಧರ್ಮದ ನಂಬಿಕೆಗಳು ಕಂದಾಚಾರವಲ್ಲ

READ ALSO

Mangalore

MANGALORE Samajotsav Office Inaugurated

ಶಿವಮೊಗ್ಗ: ದೇವರು ಹಾಗೂ ಧರ್ಮದ ಬಗೆಗಿನ ನಂಬಿಕೆ ಕಂದಾಚಾರವಲ್ಲ. ಅದು ನೆಮ್ಮದಿ ನೀಡುವ ಸಂಗತಿಗಳಾಗಿವೆ ಎಂದು ಬೆಕ್ಕಿನಕಲ್ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ವಾಸವಿ ಶಾಲಾ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಹಿಂದು ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಸ್ತಿತ ಸಂದರ್ಭದಲ್ಲಿ ನಮ್ಮ ಸಮಾಜದ ಮಾತೆಯರಲ್ಲಿ ಧಮ್ದ ಬಗ್ಗೆ ನಂಬಿಕೆ ಹಾಗೂ ಶ್ರದ್ಧೆ ಹೆಚ್ಚುತ್ತಿದೆ. ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ. ಇಂದಿನ ಸಂದರ್ಭದಲ್ಲಿ ಮಾತೆಯರ ಮೇಲಿನ ಜವಬ್ದಾರಿಯೂ ಹೆಚ್ಚಿದೆ. ತನ್ನ ಮಕ್ಕಳು ಹಾಗೂ ಕುಟುಂಬವನ್ನು ಸರಿ ದಾರಿಯಲ್ಲಿ ಕೊಂಡೊಯ್ಯವ ಹಾಗೂ ಸತತವಾಗಿ ಧಾರ್ಮಿಕ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಹಾಗೂ ಅವಶ್ಯಕತೆ ಮಹಿಳೆಯರಿಗಿದೆ ಎಂದು ನುಡಿದರು.

ಇಂದು ಎಲ್ಲರಲ್ಲೂ ಅತಂತ್ರ ಭಾವ ಕಾಡುತ್ತಿದೆ. ಜೀವನ ಯಾಂತ್ರಿಕವಾಗಿದೆ. ಆಧುನಿಕ ಸಮಾಜದಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳು ಆತಂಕ ಮೂಡಿಸುತ್ತಿವೆ. ನಮ್ಮ ಉದ್ದೇಶದ ಈಡೇರಿಕೆಗಾಗಿ ಜೀವನ ನಡೆಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಲ್ಲೂ ಧರ್ಮ ಜಾಗೃತಿ ಹೆಚ್ಚಬೇಕು ಎಂದರು.

ಧರ್ಮವೆಂಬುದು ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗಬೇಕೇ ಹೊರತು ಅಂಧಾನುಕರಣೆಯಾಗಬಾರದು. ಇಂದಿನ ಸನ್ನಿವೇಶದಲ್ಲಿ ನಮ್ಮ ಸ್ವಾಭಿಮಾನವನ್ನು ಕೆಣಕುವಂತಹಾ ಘಟನೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ನಮ್ಮ ದೇಶದ ರಾಯಬಾರಿ ಮಹಿಳೆಯೊಬ್ಬರನ್ನು ಅಮೇರಿಕಾದಲ್ಲಿ ತೀವ್ರ ತಪಾಸಣೆಗೆ ಒಳಪಡಿಸುವ ಮೂಲಕ ಇಡೀ ದೇಶಕ್ಕೆ ಅವಮಾನ ಮಾಡಲಾಗಿದೆ. ಇಂತಹ ಗಟನೆಗಳ ವಿರುದ್ಧ ನಾವು ಸಿಡಿದೇಳಬೇಕಾದ ಅವಶ್ಯಕತೆಯಿದೆ ಎಂದು ಕಿವಿ ಮಾತು ಹೇಳಿದರು.

ಸರ್ವಧರ್ಮ ಸಹಿಷ್ಣುತೆ, ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದಿಂದಾಗಿ ಭಾರತೀಯರು ಎಂದರೆ ಇಡೀ ವಿಶ್ವದಲ್ಲೇ ವಿಶೇಷ  ಸ್ಥಾನಮಾನವಿದೆ. ನಾವೂ ಸಹಾ ಎಲ್ಲಾ ಕೀಳರಿಮೆ ಬಿಟ್ಟು ಪರೋಪಕಾರಿ ಜೀವನವನ್ನು ರೂಡಿಸಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.

ರಾಮನಿಗೆ ಸೇರಿದ ಜಾಗವನ್ನು ರಹೀಮನಿಗೆ ನೀಡಲು ಸಾದ್ಯವಿಲ್ಲ

ಸಹನೆಗೂ ಒಂದು ಮಿತಿ ಇದೆ. ಹಿಂದು ಸಮಾಜದ ಸಹನೆ ದೌರ್ಬಲ್ಯವಲ್ಲ. ಕೇವಲ ರಾಮ ಮಂದಿರ ಮಾತ್ರವಲ್ಲ, ಮಥುರಾದಲ್ಲಿ ಕೃಷ್ಣನ ಹಾಗೂ ಕಾಶಿ ವಿಶ್ವನಾಥನ ದೇವಾಲಯವನ್ನೂ ನಿರ್ಮಿಸುತ್ತೇವೆ. ಇದಕ್ಕಾಗಿ ಹಿಂದು ಸಮಾಜ ಎಂತಹಾ ತ್ಯಾಗ-ಬಲಿದಾನಕ್ಕೂ ಸಿದ್ದವಿದೆ. ಸರ್ಕಾರಗಳು ಮುಸ್ಲಿಂ ತುಷ್ಟೀಕರಣ ನೀತಿಯನ್ನು ಕೈಬಿಡಿದ್ದರೆ ಹಿಂದು ಸಮಾಜ ಸಿಡಿದೇಳಬೇಕಾಗುತ್ತದೆ.

ಶಿವಮೊಗ್ಗ:  ಅಯೋಧ್ಯೆಯ ರಾಮಜನ್ಮಭೂಮಿಯಲ್ಲೇ ರಾಮಮಂದಿರವನ್ನು ನಿರ್ಮಾಣ ಮಾಡುತ್ತೇವೆ. ಮಂದಿರ ನಿರ್ಮಾಣದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ಅದೇ ರೀತಿ ರಾಮನಿಗೆ ಸೇರಿದ ಜಗವನ್ನು  ರಹೀಮನಿಗೆ ಬಿಟ್ಟುಕೊಡಲೂ ಸಾಧ್ಯವಿಲ್ಲ ಎಂದು ಧರ್ಮಜಗರಣ ಸಮಿತಿಯ ಪ್ರಾಂತ ಸಂಚಾಲಕ ಮುನಿಯಪ್ಪ ಹೇಳಿದ್ದಾರೆ.

ನಗರದ ವಾಸವಿ ಶಾಲಾ ಆವರಣದಲ್ಲಿ ಭಾನುವಾರ  ಹನೂಮತ್ ಶಕ್ತಿ ಜಗರಣ ಸಮಿತಿ ವತಿಯಿಂದ ಏರ್ಪಡಿಸಿದ್ದ ಹಿಂದೂ ಸಮಾವೇಶದಲ್ಲಿ ಪ್ರಮುಖ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಅಲಹಾಬಾದ್ ಕೋರ್ಟ್ ಅಯೋಧ್ಯೆ ರಾಮನ ಜನ್ಮಭೂಮಿ ಎಂದು ಒಪ್ಪಿಕೊಂಡಿರುವುದು ಸಂತಸ ತಂದಿದೆ. ಆದರೆ ಆ ಜಗವನ್ನು ಭಾಗ ಮಾಡಿರುವುದು ಬೇಸರವುಂಟುಮಾಡಿದೆ ಎಂದು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದುಗಳ ಶತಮಾನದ ಹೋರಾಟಕ್ಕೆ ಅಲಹಾಬಾದ್ ಕೋರ್ಟ್‌ನ ತೀರ್ಪು ಉತ್ತಮ ಫಲಿತಾಂಶವೆಂದೇ ಬಿಂಬಿತವಾಗಿದೆ. ಆ ಮೂಲಕ ಸಾವಿರಾರು ರಾಮಭಕ್ತರ ಬಲಿದಾನಕ್ಕೆ ಪ್ರತಿಫಲ ದೊರೆತಂತಾಗಿದೆ. ಬಾಬರಿ ಮಸೀದಿ ಕ್ರಿಯಾ ಸಮಿತಿಯ ಅರ್ಜಿ ವಜ ಆಗಿರುವುದರಿಂದ ಆ ಸಮಿತಿಗೆ ಜಮೀನು ನೀಡುವ ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದರು.

೧೯೯೨ ರ ಡಿಸೆಂಬರ್ ೬ ರಂದು ಕರ ಸೇವೆ ನಡೆದಾಗ ಕೆಲವು ಪ್ರಗತಿಪರರು ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹಾಕಿದರು. ಹಲವು ರಾಜಕಾರಣಿಗಳು ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದರು. ಆದರೆ ಕೋರ್ಟ್ ತೀರ್ಪು ಎಲ್ಲರಿಗೂ ಉತ್ತರ ನೀಡಿದೆ. ಕೇವಲ ರಾಮಮಂದಿರ ಮಾತ್ರವಲ್ಲ ಕಾಶಿಯಲ್ಲಿ ವಿಶ್ವನಾಥರ ದೇವಾಲಯ, ಮಥುರಾದಲ್ಲಿ ಶ್ರೀಕೃಷ್ಣನ ದೇವಾಸ್ಥಾನವನ್ನು ನಿರ್ಮಿಸುತ್ತಿವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕಾಶ್ಮೀರ ಭಾರತದ ಅವಿಬಾಜ್ಯ ಅಂಗ….

ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಿಸುವ ಮೂಲಕ ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ಕುತಂತ್ರ ನಡೆಸಿದೆ. ಕಾಶ್ಮೀರದಲ್ಲಿರುವ ಗೂರ್ಖಾಗಳು, ಬನಿಯಾಗಳು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ.  ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಯಾರೂ ಸಹ ಇದನ್ನು ಅತಿಕ್ರಮಿಸಿಕೊಳ್ಳಲು ಹಿಂದೂ ಸಮಾಜ ಬಿಡುವುದಿಲ್ಲ ಎಂದರು.

ದೇಶದಲ್ಲಿ ಸಂಭವಿಸಿರುವ ಅನೇಕ ಭಯೋತ್ಪಾದನಾ ಕೃತ್ಯಗಳಲ್ಲಿ ಮುಸ್ಲಿಂ ಸಮುದಾಯದಕ್ಕೆ ಸೇರಿದ ವ್ಯಕ್ತಿಗಳ ಕೈವಾಡವಿದೆ ಎಂಬುದು ಸಾಭೀತಾಗಿದೆ. ಆದರೆ ಯಾವ ರಾಜಕಾರಣಿಗಳೂ ಇದರ ಬಗ್ಗೆ ಮಾತನಾಡುತ್ತಿಲ್ಲ.

ಆದರೆ ಇತ್ತೀಚೆಗೆ ಸಂಘ ಪರಿವಾರಕ್ಕೆ ಕೇಸರಿ ಭಯೋತ್ಪಾದನೆಯ ಕಳಂಕ ಕಟ್ಟಲು ಕೆಲವು ರಾಜಕಾರಣಿಗಳು ಸಂಚು ರೂಪಿಸಿದ್ದಾರೆ.  ಆದರೆ ಎಂದೂ ಸಹ ಮುಸ್ಲಿಂ ಭಯೋತ್ಪಾದನೆ ಎಂಬ ಶಬ್ದವನ್ನು ಯಾರೂ ಬಳಸಲಿಲ್ಲ. ಸಂಘ ಪರಿವಾರದ ವ್ಯಕ್ತಿಗಳಿಗೆ ಸಂಚು ರೂಪಿಸಿ ಭಯೋತ್ಪಾದನೆಯ ಪಟ್ಟ ಕಟ್ಟಲಾಗುತ್ತಿದೆ ಎಂದು ದೂರಿದರು.

ಆರ್‌ಎಸ್‌ಎಸ್ ನ ಜಿಲ್ಲಾ ಸಂಘ ಚಾಲಕ ಚಕ್ಕೋಡಬೈಲು ಬೆನಕಭಟ್, ಜಿಲ್ಲಾ ಸಹ ಸಂಘ ಚಾಲಕ ಡಿ.ಎಚ್.ಸುಬ್ಬಣ್ಣ, ಹನೂಮತ್ ಶಕ್ತಿ ಜಗರಣಾ ಸಮಿತಿಯ ನಗರ ಸಮಿತಿ ಅಧ್ಯಕ್ಷ ಓಂಕಾರ್ ಸತೀಶ್, ಪ್ರಮುಖರಾದ ರಮೇಶ್‌ಬಾಬು, ಹಾ.ರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.


  • email
  • facebook
  • twitter
  • google+
  • WhatsApp

Related Posts

Mangalore
Hindu Samajotsav

Mangalore

January 4, 2011
Mangalore Hindu Samjotsav Office Inauguration
Hindu Samajotsav

MANGALORE Samajotsav Office Inaugurated

December 25, 2010
BANTWALA
Hindu Samajotsav

BANTWALA

December 25, 2010
BELTHANGADY
Hindu Samajotsav

BELTHANGADY

December 25, 2010
Hindu Samajotsav

KATEEL

December 25, 2010
MOODABIDIRE
Hindu Samajotsav

MOODABIDIRE

December 25, 2010
Next Post
Blogging With John Chow

Blogging With John Chow

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಒಂದು ಪಠ್ಯ – ಹಲವು ಪಾಠ

May 24, 2022

EDITOR'S PICK

RSS Press Release; Condemns Home Secretary statements, claims it as ‘Misleading’ & ‘Politically Motivated’

RSS Press Release; Condemns Home Secretary statements, claims it as ‘Misleading’ & ‘Politically Motivated’

January 25, 2013
RSS ABPS meet begins at Nagaur; RSS Annual report says Shakha increases upto 56859 at 36867 places

RSS ABPS meet begins at Nagaur; RSS Annual report says Shakha increases upto 56859 at 36867 places

March 11, 2016

Video: Assam Riots due to Bangladeshi infiltration (full report)

July 28, 2012
‘HINDU’ is our Nationality: RSS Sarasanghachalak Mohan Bhagwat at Hindu Sammelan at Betul, MP

‘HINDU’ is our Nationality: RSS Sarasanghachalak Mohan Bhagwat at Hindu Sammelan at Betul, MP

February 9, 2017

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In