• Samvada
  • Videos
  • Categories
  • Events
  • About Us
  • Contact Us
Wednesday, March 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ನಮ್ಮ ಇತಿಹಾಸ, ಪೂರ್ವಜರ ತ್ಯಾಗ-ಬಲಿದಾನ ಮುಂದಿನ ಪೀಳಿಗೆಗೆ ಅರ್ಥೈಸುವುದು ನಮ್ಮ ಕರ್ತವ್ಯವಾಗಿದೆ : ಸ್ವಾಂತರಂಜನ

Vishwa Samvada Kendra by Vishwa Samvada Kendra
July 20, 2022
in News Digest
257
0
506
SHARES
1.4k
VIEWS
Share on FacebookShare on Twitter

ಧಾರವಾಡ: ನಮ್ಮ ಇತಿಹಾಸ, ಪೂರ್ವಜರ ತ್ಯಾಗ-ಬಲಿದಾನ ಮುಂದಿನ ಪೀಳಿಗೆಗೆ ಅರ್ಥೈಸುವುದು ನಮ್ಮ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಬೌದ್ಧಿಕ್ ಪ್ರಮುಖ ಸ್ವಾಂತರಂಜನ ಜಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಯೋಜಿಸಿದ್ದ ಸ್ವರಾಜ್ಯ 75ರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ಸ್ವಾಧಿನತೆ ಹಾಗೂ ಸ್ವತಂತ್ರತೆ  ಎರಡು ಶಬ್ದಗಳನ್ನು ಸಾಮಾನ್ಯವಾಗಿ ಒಂದೇ ಅರ್ಥದಲ್ಲಿ ಭಾವಿಸಲಾಗುತ್ತದೆ. ಆದರೆ ಎರಡರ‌ ಮಧ್ಯೆ ಅಂತರವಿದೆ. ನಾವು ಮುಂಚೆ ಪರರ ಅಧಿನದಲ್ಲಿದ್ದೆವು. ಭಾರತ ಮೊದಲಿನಿಂದಲೂ ಸಂಪನ್ನ ದೇಶವಾಗಿತ್ತು.‌ ಆದರೆ ಅನೇಕ ಆಕ್ರಮಣಕಾರರು ಇಲ್ಲಿನ ಸಂಪತ್ತನ್ನು ಲೂಟಿ ಮಾಡಿದರು. ಕೇವಲ ಸಂಪತ್ತು ಅಲ್ಲದೇ  ಬೌದ್ಧಿಕ್ ಹಾಗೂ ಸಾಂಸ್ಕೃತಿಕವಾಗಿಯೂ ಆಕ್ರಮಿಸಿ, ಭಾರತವನ್ನು ಪರಾಧಿನತೆಗೆ ಒಳಪಡಿಸಲಾಯಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಭಕ್ತಿ ಪಂಥದ ಕಾರ್ಯ ಮಹತ್ವದಾಗಿತ್ತು. ದಕ್ಷಿಣದ ಭಾರತದಲ್ಲಿ ಭಕ್ತಿ ಆಂದೋಲನ ಮೊದಲ ಆರಂಭವಾಗಿ, ಉತ್ತರದಲ್ಲಿ ರಾಮಾನಂದ ಆಚಾರ್ಯರು ಭಕ್ತಿ ಆಂದೋಲನ ವಿಸ್ತರಿಸಿದರು. ಸಮಾಜದ ಎಲ್ಲ ಜಾತಿಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು.  ಅವರ ಆಂದೋಲನದ ನೇತೃತ್ವದಲ್ಲಿ ಸಂತ  ಕಬೀರದಾಸ, ಸಂತ ರವಿದಾಸ ಮುಂತಾದವರು ಪ್ರಖ್ಯಾತ ಸಂತರಾಗಿ ಹೊರಹೊಮ್ಮಿದರು.

ಭಕ್ತಿ ಆಂದೋಲನದ ಮೂಲಕ ದೇವಸ್ಥಾನದ‌ ಕುರಿತು ಶ್ರದ್ಧೆ ಬೆಳೆಸಲಾಯಿತು. ಸಂತ ತುಳಸಿದಾಸ ರಾಮಾಯಣ ಕುರಿತು ಎಲ್ಲೆಡೆ ಪ್ರಚಾರ ನಡೆಸಿ, ಜನರಲ್ಲಿ ರಾಜಾ ಶ್ರೀರಾಮಚಂದ್ರನ ಕುರಿತು ಶ್ರದ್ಧೆ ಬೆಳೆಸಿ, ಸಾಂಸ್ಕೃತಿಕವಾಗಿ ಒಂದುಗೂಡಿಸಿದರು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಏಕಾಏಕಿ ನಡೆದ ಯುದ್ಧವಲ್ಲ. ನಾನಾಸಾಹೇಬ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆ, ಮಂಗಲ ಪಾಂಡೆ ಮುಂತಾದವರು ಮೊದಲಿನಿಂದಲೂ ಬ್ರಿಟಿಷರನ್ನು ವಿರೋಧಿಸಿದ್ದರು. ಆ ಸಂದರ್ಭದಲ್ಲಿ 21 ಮೇ, 1857 ದೇಶದೆಲ್ಲೆಡೆ ಏಕಕಾಲಕ್ಕೆ ಬ್ರಿಟಿಷರ ವಿರುದ್ಧ ಧಂಗೆ ಏಳಲು ಪ್ರತಿ ಗ್ರಾಮಗಳಿಗೆ ಗುಪ್ತ ಸಂದೇಶ ಕಳಿಸಲಾಗಿತ್ತು. ಆದರೆ ಮಂಗಲ ಪಾಂಡೆ ಅವರ ಅವಸರದಿಂದ 10 ಮೇ, 1857ರಲ್ಲೇ ಸಂಗ್ರಾಮ ಆರಂಭವಾಯಿತು. ಬಂಗಾಳ, ಬಿಹಾರ, ಉತ್ತರ ಪ್ರದೇಶ, ಖಾನಪುರ, ಲಕನೌ ಮುಂತಾದ ಕಡೆ ಸಂಗ್ರಾಮ ವಿಸ್ತಾರವಾಯಿತು. ಈ ಯುದ್ಧದಲ್ಲಿ ಸೈನಿಕರು, ವ್ಯಾಪರಿಗಳು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಸೇರಿದಂತೆ ಸುಮಾರು 3 ರಿಂದ 4 ಲಕ್ಷ ಜನ ದೇಶದ ಸ್ವಾತಂತ್ರ್ಯಕ್ಕೊಸ್ಕರ ಬಲಿದಾನಗೈದರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕೇವಲ ಅಹಿಂಸೆ ಹೋರಾಟದಿಂದ ಎಂದು ಕೆಲವರು ಹೇಳುವುದು ವಿಪರ್ಯಾಸ. ಮಾನಗರ್, ಜಲಿಯನ್ ವಾಲಾಬಾಗ್ ಮುಂತಾದ ಹತ್ಯಾಕಾಂಡಗಳಲ್ಲಿ ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದರು.

ಗಾಂಧೀಜಿಯ ಗ್ರಾಮ ಸ್ವರಾಜ್ಯ ಪುಸ್ತಕದಲ್ಲಿ ಆಡಳಿತ ವಿಕೇಂದ್ರೀಕರಣ ಕುರಿತು ವಿವರಿಸಿದ್ದಾರೆ. ಇದನ್ನೆ ರಾಮರಾಜ್ಯವೆಂದು ಅವರು ಕರೆದಿದ್ದರು. ಆದರೆ ಸ್ವಾತಂತ್ರ್ಯ ನಂತರ ಗಾಂಧೀಜಿ ಅವರ ಕಲ್ಪನೆಯನ್ನು ಕಾಂಗ್ರೆಸ್ ಸರ್ಕಾರ ಕ್ರಿಯಾನ್ವಯಗೊಳಿಸಲಿಲ್ಲ. ಮೆಕಾಲೆ ಶಿಕ್ಷಣದಿಂದ ಪಠ್ಯ ಪುಸ್ತಕದಲ್ಲಿ ಭಾರತ ಮೊದಲಿನಿಂದಲೂ ಬಡ ದೇಶವೆಂದು ಬಿಂಬಿತವಾಗಿ, ಬ್ರಿಟಿಷರು ಬಂದ ನಂತರ ಅಭಿವೃದ್ಧಿಗೊಂಡಿತು ಎಂಬ ವಿಚಾರ ವ್ಯಾಪಕವಾಗಿದ್ದು ದುರ್ದೈವ. ಆದರೆ ಭಾರತದಲ್ಲಿ ವಿದೇಶಿಯರ ಆಗಮನಕ್ಕಿಂತ ಮೊದಲೂ ಪ್ರತಿ ಹಳ್ಳಿಯಲ್ಲಿ ಪಾಠಶಾಲೆಗಳಿದ್ದವು. ಅಲ್ಲಿ ಎಲ್ಲ ಜಾತಿಯವರು, ಮಹಿಳೆಯರು ಬಂದು ಶಿಕ್ಷಣ ಪಡೆಯುತ್ತಿದ್ದರು. ಆದರೆ ಬ್ರಿಟಿಷರು ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದರು.

1917 ರಲ್ಲಿ ಬಿಹಾರದಲ್ಲಿ ಗಾಂಧೀಜಿ ಮೊದಲ ಸತ್ಯಾಗ್ರಹ ಮಾಡಿದ್ದರು. ಕಾರಣ ಬ್ರಿಟಿಷರು ರೈತರ ಮೇಲೆ ನಡೆಸಿದ ಅನ್ಯಾಯ, ಆಕ್ರಮಣ. ಆಹಾರ ಧಾನ್ಯಗಳ ಬದಲಾಗಿ ವಾಣಿಜ್ಯ ಕೃಷಿ ಮಾಡಲು ಬ್ರಿಟಿಷರು ರೈತರಿಗೆ ಒತ್ತಾಯಿಸುತ್ತಿದ್ದರು. ಬಂಗಾಳದಲ್ಲಿ ಪ್ಲೇಗ್ ರೋಗ ವ್ಯಾಪಿಸಿದಾಗ, ಬ್ರಿಟಿಷರು ಯಾವುದೇ ಚಿಕಿತ್ಸೆ, ಪರಿಹಾರ ತೆಗೆದುಕೊಳ್ಳಲಿಲ್ಲ ಬದಲಾಗಿ ಭಾರತೀಯರನ್ನು ಸಾಯಲು ಬಿಟ್ಟರು. ವನವಾಸಿಗಳ ಮೇಲೆ ನಿರ್ಬಂಧ ವಿಧಿಸಿದಾಗ, ಸಂಘಸ್ಥಾಪಕ ಡಾಕ್ಟರ್ ಹೆಡಗೆವಾರ ಜಂಗಲ್ ಸತ್ಯಾಗ್ರಹ ನಡೆಸಿ ಬ್ರಿಟಿಷರನ್ನು ವಿರೋಧಿಸಿದ್ದರು. ಇದೇ ದಿಶೆಯಲ್ಲಿ ಕಾರ್ಯನಿರ್ವಹಿಸಿದ ಸಾವರಕರ್, ಆಝಾದ, ಸುಭಾಷ್ ಚಂದ್ರ ಬೋಸ್ ಮುಂತಾದವರ ತ್ಯಾಗ, ಬಲಿದಾನವನ್ನು ಸದಾ ಸ್ಮರಿಸಬೇಕು.

ನಮ್ಮ ಇತಿಹಾಸ, ಪೂರ್ವಜರ ತ್ಯಾಗ-ಬಲಿದಾನ ಮುಂದಿನ ಪೀಳಿಗೆಗೆ ಅರ್ಥೈಸುವುದು ನಮ್ಮ ಕರ್ತವ್ಯವಾಗಿದೆ. ಸರ್ವೆ ಭವಂತು ಸುಖಿನಃ ಎಂದು ಹೇಳಿದ ದೇಶ ನಮ್ಮದು. ಕೊರೋನಾ ಲಸಿಕೆ ತಯಾರಿಸಿದ ನಂತರ ಕೇವಲ ನಾವಷ್ಟೆ ತೆಗೆದುಕೊಳ್ಳಲಿಲ್ಲ. ಬದಲಾಗಿ ಎಲ್ಲ ದೇಶಗಳಿಗೆ ರಫ್ತು ಮಾಡಿದೆವು. ಪ್ರಸ್ತುತ ಶ್ರೀಲಂಕಾದ ಸಂದಿಗ್ಧ ಸ್ಥಿತಿಯಲ್ಲಿ ಚೀನಾ ಕೈಬಿಟ್ಟರು, ಭಾರತ ಶ್ರೀಲಂಕಾಗೆ ಸಹಕರಿಸುತ್ತಿರುವುದು ನಮ್ಮ ದೇಶದ ಹೆಮ್ಮೆಯ ವಿಷಯ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೀರ, ವಿಭಾಗ ಕಾರ್ಯವಾಹ ಮಧುಸೂದನ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

  • email
  • facebook
  • twitter
  • google+
  • WhatsApp
Tags: DharwadfreedomRSS in freedom struggleswantaranjanaswarajya@75

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post

"ಸ್ವಾತಂತ್ರ್ಯ ಹೋರಾಟದ ಕುರಿತು ಹೆಚ್ಚು ಸಾಹಿತ್ಯ ರಚನೆಯಾಗಬೇಕು" -
ಶ್ರೀ ಸ್ವಾಂತರಂಜನ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

ABVP's new building's Bhoomi Poojan held at Mysore.

ABVP's new building's Bhoomi Poojan held at Mysore.

August 25, 2019
RSS Sarasanghachalak Mohan Bhagwat released a book “Compassion in 4 Dharmic Tradition” at New Delhi

RSS Sarasanghachalak Mohan Bhagwat released a book “Compassion in 4 Dharmic Tradition” at New Delhi

July 26, 2016
Dr APJ Abdul Kalam offered tributes to RSS Founder Dr Keshav Baliram Hedgewar at ‘Smruti Mandir’ Nagpur

Dr APJ Abdul Kalam offered tributes to RSS Founder Dr Keshav Baliram Hedgewar at ‘Smruti Mandir’ Nagpur

July 31, 2014
BODU BALA SENA – A NEW BUDDHIST MOVEMENT IN SRI LANKA: writes Ram Madhav

BODU BALA SENA – A NEW BUDDHIST MOVEMENT IN SRI LANKA: writes Ram Madhav

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In