• Samvada
Tuesday, July 5, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

“ಎಲ್ಲರನ್ನು ಜೋಡಿಸುವುದೇ ಸಂಘಕಾರ್ಯ”- ಡಾ.ಮೋಹನ್ ಭಾಗವತ್

Vishwa Samvada Kendra by Vishwa Samvada Kendra
June 4, 2022
in News Digest
261
0
512
SHARES
1.5k
VIEWS
Share on FacebookShare on Twitter

“ಸತ್ಯ,ಕರುಣಾ,ಶುಚಿತ್ವ ಮತ್ತು ತಪಸ್ಸು ಈ ಧರ್ಮದ ನಾಲ್ಕು ಆಧಾರ ಸ್ಥಂಬಗಳ ಆಧಾರದ ಮೇಲೆ ಭಾರತ ನಿಂತಿದೆ.ಅದೇ ನಮ್ಮ ರಾಷ್ಟ್ರೀಯ ಜೀವನವಾಗಿದೆ.”ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸರಸಂಘಚಾಲಕರು ಮಾತನಾಡುತ್ತಾ “‘ಭಾರತ ಮಾತಾ ಕಿ ಜೈ’ ಘೋಷ ಇಡೀ ವಿಶ್ವದಲ್ಲಿ ಮೊಳಗಬೇಕಿದೆ.ಯಾಕೆಂದರೆ, ನಾವು ವಿಶ್ವವಿಜೇತರಾಗಬೇಕಿಲ್ಲ,ನಾವು ಯಾರನ್ನು ಗೆಲ್ಲಬೇಕಿಲ್ಲ ಬದಲಾಗಿ ನಾವು ಎಲ್ಲರನ್ನು ಜೋಡಿಸಬೇಕಿದೆ.ಇದೇ ಸಂಘ ಕಾರ್ಯ,ಅಂದರೆ ಜೋಡಿಸುವ ಕೆಲಸ. ಸ್ವತಂತ್ರದ ಅಮೃತ ಮಹೋತ್ಸವ ನಡೆಯುತ್ತಿದೆ ಅದರಲ್ಲಿ ‘ಸ್ವ’ ಯಾವುದು? ಈ ಜೋಡಿಸುವ ಕೆಲಸವೆ ನಮ್ಮ ಸ್ವ.” ಎಂದರು

READ ALSO

ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ

ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್

“ನಮ್ಮ ಪೂರ್ವಜರು ಪೂರ್ಣತೆಯ ಸತ್ಯವನ್ನು ಆವಿಷ್ಕಾರ ಮಾಡಿದವರು.ಅದು ನಮ್ಮೆಲ್ಲರಲ್ಲೂ ಏಕ ಮುಖವಾಗಿ ಪ್ರಕಟಗೊಳ್ಳುತ್ತದೆ ಎಂದು ಅರಿತವರು. ವಿವಿಧತೆ ಈ ಏಕತ್ವದ ಮತ್ತೊಂದು ಆಯಾಮ.ಅದು ಪ್ರತ್ಯೇಕತೆಯಲ್ಲ.ಪರಸ್ಪರ ನಮ್ಮಲ್ಲಿ ಸಂಬಂಧದ ಭಾವ,ಆತ್ಮೀಯತೆಯ ಭಾವವಿದೆ.ಈ ಭಾವನೆಯ ಮೂಲಕವೇ ಇಡೀ ವಿಶ್ವವನ್ನು ಸತ್ಯದ ಕಡೆಗೆ ಕರೆದೊಯ್ಯುಬೇಕಿದೆ. ಸತ್ಯ,ಕರುಣಾ,ಶುಚಿತ್ವ ಮತ್ತು ತಪಸ್ಸು ಈ ಧರ್ಮದ ನಾಲ್ಕು ಆಧಾರ ಸ್ಥಂಬಗಳ ಆಧಾರದ ಮೇಲೆ ಭಾರತ ನಿಂತಿದೆ.ಅದೇ ನಮ್ಮ ರಾಷ್ಟ್ರೀಯ ಜೀವನವಾಗಿದೆ.”

ಸರಸಂಘಚಾಲಕರು ಮಾತನಾಡುತ್ತಾ “ಸಮನ್ವಯವನ್ನು ಕಲಿಸುವುದೇ ಧರ್ಮ,ಸಂತುಲನವನ್ನು ಕಲಿಸುವುದೇ ಧರ್ಮ,ಎಲ್ಲರನ್ನು ಒಳಗೊಂಡು ಎಲ್ಲರ ಉನ್ನತಿಯನ್ನು ಬಯಸುತ್ತದೆ.ಧರ್ಮದ ಸಂರಕ್ಷಣೆ ಎರಡು ರೀತಿಯದ್ದು,ಒಂದು ಆಕ್ರಮಣದಿಂದ ತಪ್ಪಿಸಿಕೊಳ್ಳುವುದು,ಅದಕ್ಕಾಗಿ ಬಲಿದಾನವೂ ನಡೆಯುತ್ತದೆ,ಯುದ್ಧವೂ ನಡೆಯುತ್ತದೆ.ಎರಡನೇಯದ್ದು ಧರ್ಮವನ್ನು ಆಚರಣೆಯಲ್ಲಿ ತರುವುದು.” ಎಂದರು.

“ನಾವು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಮುಂದೆ ಸಾಗಬೇಕಿದೆ.ಉದಾಹರಣೆಗೆ ಗ್ಯಾನವಾಪಿಯ ವಿಚಾರ ಬಂದಿದೆ.ಇಲ್ಲಿ ಇತಿಹಾಸದ ಸಾಕ್ಷಿಯಂತೂ ಇದೆ‌,ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ.ಅದು ಇವತ್ತು ಬದುಕಿರುವ ಹಿಂದು,ಮುಸಲ್ಮಾನರಿಂದ ನಡೆದ ಇತಿಹಾಸವಲ್ಲ,ಹಿಂದೆಂದೋ ಆದದ್ದು.ಇಸ್ಲಾಂ ಹೊರಗಿನಿಂದ ಆಕ್ರಮಣ ಮಾಡುತ್ತಾ ಬಂದಾಗ,ಭಾರತದ ಸ್ವತಂತ್ರ ಸೇನಾನಿಗಳ ಶ್ರದ್ಧಾ ಭಂಗಕ್ಕಾಗಿ ದೇವಸ್ಥಾನವನ್ನು ಒಡೆದರು.ಆ ರೀತಿ ದೇಶಾದ್ಯಂತ ಸಾವಿರಾರು ಘಟನೆಗಳಾಗಿದೆ.ಈಗ ಹಿಂದು ಮುಸಲ್ಮಾನ ನಡುವೆ ಮನಸ್ತಾಪಕ್ಕೆ ಕಾರಣವಾಗಬಾರದು.ಹಿಂದು ಮುಸಲ್ಮಾನರು ಒಟ್ಟಿಗೆ ಕೂತು ಈ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕಿದೆ.ಹಾಗಾಗದಿದ್ದಾಗ ಕೋರ್ಟಿಗೆ ಹೋಗಬೇಕಾಗಬಹುದು, ಆಗ ಕೋರ್ಟಿನ ನಿರ್ಣಯವನ್ನು ನಾವು ಒಪ್ಪಬೇಕು. ನಮ್ಮ ಸಂವಿಧಾನ ಸಮ್ಮತ ನ್ಯಾಯವ್ಯವಸ್ಥೆಯನ್ನು ಪವಿತ್ರ, ಸರ್ವ ಶ್ರೇಷ್ಠವೆಂದು ಪರಿಗಣಿಸಿ ನಾವು ಪಾಲಿಸಬೇಕಿದೆ‌.ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಅಶ್ವಾಕ್ ಉಲ್ಲಾ ಖಾನ್‌ರಂತಹ ಮಹಾನ್ ಹೋರಾಟಗಾರರಿದ್ದಾರೆ.ಹಾಗಾಗಿ ಅವರಿಗೂ ಭಾರತ ಮಾತೃಭೂಮಿಯಾಗಿದೆ. “ಎಂದರು.

ಸಮಾರಂಭದಲ್ಲಿ ಹೈದರಾಬಾದಿನ ರಾಮಚಂದ್ರ ಮಿಷನ್ನಿನ ಶ್ರೀ ಕಮಲೇಶ್ ಪಟೇಲ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಲ್ಲದೆ ಸಮಾರಂಭದಲ್ಲಿ ಸ್ವಯಂಸೇವಕರು ಆಕರ್ಷಕವಾದ ಶಾರೀರಿಕ ಪ್ರದರ್ಶನವನ್ನು ನಡೆಸಿದರು.

  • email
  • facebook
  • twitter
  • google+
  • WhatsApp
Tags: Mohanji BhagwatRSS Sangh Shiksha VargRSS sangha shiksha Vargas valedictorySangh Shiksha VargSarsanghachalakSarsanghachalak Dr Mohan BhagwatSarsanghachalak Mohan Bhagwattruteeya varsh

Related Posts

News Digest

ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ

July 1, 2022
News Digest

ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್

June 30, 2022
News Digest

ಪತ್ರಕರ್ತರು ಸತ್ಯ ಪಕ್ಷಪಾತಿಗಳಾಗಬೇಕು – ಶ್ರೀ ರಘುನಂದನ

June 26, 2022
News Digest

‘ಪತ್ರಕರ್ತರ ಮೇಲಿನ ಹಲ್ಲೆ – ಸಂವಿಧಾನಕ್ಕೆ ಮಾಡುವ ಅಪಚಾರ’ – ಶ್ರೀ ವಿವೇಕ್ ಸುಬ್ಬಾರೆಡ್ಡಿ

June 24, 2022
News Digest

ಜುಲೈ 7,8 ಮತ್ತು 9ರಂದು ರಾಜಾಸ್ಥಾನದಲ್ಲಿ ಪ್ರಾಂತ ಪ್ರಚಾರಕರ ಸಭೆ – ಶ್ರೀ ಸುನಿಲ್ ಅಂಬೇಕರ್

June 23, 2022
News Digest

ಕಲಾ ಕ್ಷೇತ್ರದಲ್ಲಿ ಸತ್ಯಂ – ಶಿವಂ – ಸುಂದರಂ‌ನ ಭಾವ ಸ್ಥಾಪಿಸುವುದೇ ಬಾಬಾ ಯೋಗೇಂದ್ರಜೀ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ – ಡಾ.ಮೋಹನ್ ಭಾಗವತ್

June 22, 2022
Next Post

ಸೃಷ್ಟಿ ಜಡವಸ್ತುವಲ್ಲ - ಮಾತೃ ರೂಪಿ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

VHP condemns attack on Sarabjit Singh, demands International Litigation against Pakistan

RSS expressed grief/sadness on Sarabjit Sing’s death, says ‘It is an open assault on India’s Constitution’

May 2, 2013
New York: Indian American Hindus held massive protest against UPA govt, calls it ‘Anti–Hindu’

New York: Indian American Hindus held massive protest against UPA govt, calls it ‘Anti–Hindu’

December 9, 2013
‘RSS Shakha adds values in a citizens life’: RSS Sarasanghachalak Mohan Bhagwat, Yuva Sankalp Shivir Concludes

‘RSS Shakha adds values in a citizens life’: RSS Sarasanghachalak Mohan Bhagwat, Yuva Sankalp Shivir Concludes

November 3, 2014
ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೋಮಿಯೋಪತಿ ಅರ್ಸೆನಿಕ್ ಅಲ್ಬಂ 30 ಔಷಧವನ್ನು ಉಚಿತವಾಗಿ ಹಂಚಲು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಯೋಜನೆ

ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೋಮಿಯೋಪತಿ ಅರ್ಸೆನಿಕ್ ಅಲ್ಬಂ 30 ಔಷಧವನ್ನು ಉಚಿತವಾಗಿ ಹಂಚಲು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಯೋಜನೆ

January 2, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ
  • ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್
  • ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!
  • PM Modi calls for Food Security, Gender Equality and Investment in Clean Energy at G7 Summit in Germany
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In