• Samvada
  • Videos
  • Categories
  • Events
  • About Us
  • Contact Us
Saturday, March 25, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ವ್ಯಾಟಿಕನ್ ಮತ್ತು ಮಾಧ್ಯಮ

Vishwa Samvada Kendra by Vishwa Samvada Kendra
December 17, 2021
in Articles
250
0
ವ್ಯಾಟಿಕನ್ ಮತ್ತು ಮಾಧ್ಯಮ
492
SHARES
1.4k
VIEWS
Share on FacebookShare on Twitter

ಅಕ್ಟೋಬರ್ ಕೊನೆಯ ವಾರದಲ್ಲಿ ಯೋಜನೆಯಾಗಿದ್ದ ಜಿ-20 ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಹಲವು ದೇಶಗಳ ಮುಖ್ಯಸ್ಥರು ಇಟಲಿಯ ಮಧ್ಯಭಾಗದಲ್ಲಿರುವ ವ್ಯಾಟಿಕನ್ ನಲ್ಲಿ ಇರುವ ಪೋಪ್ ಫ್ರಾನ್ಸಿಸ್ ಅವರನ್ನೂ ಭೇಟಿಮಾಡುವ ಕಾರ್ಯಕ್ರಮ ಜೋಡಿಸಿಕೊಂಡಿದ್ದರು. ಇವರಲ್ಲಿ ಮುಖ್ಯವಾಗಿ ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರುಗಳು ಪೋಪ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.   ಚರ್ಚೆಗೆ ಮುಂಚೆ ಚರ್ಚೆಯ ವಿಷಯಗಳ ಬಗ್ಗೆ ಯಾವ ಸುಳಿವೂ ಸಾರ್ವಜನಿಕರಿಗೆ ಇರಲಿಲ್ಲ.   ಅಮೇರಿಕಾ ಮತ್ತು ಭಾರತದ ಮಾಧ್ಯಮ ಪ್ರತಿನಿಧಿಗಳಿಗೆ ಈ ಭೇಟಿಯನ್ನು ಪ್ರತ್ಯಕ್ಷ ನೋಡಲಾಗಲೀ, ಅಥವಾ ವರದಿಮಾಡಲು ವ್ಯಾಟಿಕನ್ ಚರ್ಚ್ ನ ಸಂಪರ್ಕ ವಿಭಾಗವು ಅನುಮತಿ ನೀಡಲಿಲ್ಲ.  ಭೇಟಿಯ ನಂತರ ವ್ಯಾಟಿಕನ್ ಸಂಪಾದಿಸಿ ಬಿಡುಗಡೆ ಮಾಡಿದ ವಿಡಿಯೋ ಮತ್ತು ವರದಿಗಳು ಜಗತ್ತಿಗೆ ತಲುಪಿದವು.  

ಜಾಗತಿಕ ಮಟ್ಟದ ಪ್ರಮುಖ ಮತೀಯ ನಾಯಕರಲ್ಲೊಬ್ಬರಾದ ಪೋಪ್ ಅವರ ಮಾಧ್ಯಮ ನೀತಿ ಇಷ್ಟು ಬಿಗಿಯಾಗಿರುವುದು ಏಕೆ? ಎಂಬುದು ಸಾರ್ವಜನಿಕ ಕುತೂಹಲವನ್ನು ಕೆರಳಿಸಿರುವುದು ಸಹಜ. 

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಸಾಮಾನ್ಯವಾಗಿ ಎರಡು ದೇಶಗಳ ಮುಖ್ಯಸ್ಥರು ಭೇಟಿ ಆದಾಗ ಅವರ ಚರ್ಚೆಯ ವಿಷಯಗಳನ್ನು ಮೊದಲೇ ಮಾಧ್ಯಮಗಳಿಗೆ ತಿಳಿಸುವುದು ಒಂದು ಪದ್ಧತಿ.  ಆದರೆ, ಪೋಪ್ ಜೊತೆಗಿನ ಯಾವುದೇ ದೇಶದ ಪ್ರತಿನಿಧಿಯ ಜೊತೆಗಿನ ಭೇಟಿಗೆ ವಿಷಯವನ್ನು ಮೊದಲೇ ನಿರ್ಧರಿಸಲಾಗದು ಎಂಬುದು ವ್ಯಾಟಿಕನ್ ನಿಲುವು.  ಈ ನಿಲುವನ್ನು ಅಮೇರಿಕಾ ಮತ್ತು ಭಾರತದ ಸರ್ಕಾರಗಳು ಒಪ್ಪಿಕೊಂಡಿದ್ದವು.  ಹಾಗೆಯೇ, ಸ್ವತಂತ್ರ್ಯ ಮಾಧ್ಯಮ ಸಂಸ್ಥೆಗಳ, ವರದಿಗಾರರ, ಅಥವಾ ಇತರ ದೇಶಗಳ ಅಧಿಕೃತ ಮಾಧ್ಯಮ ಸಂಸ್ಥೆಗಳ ಉಪಸ್ಥಿತಿಗೆ ವ್ಯಾಟಿಕನ್ ಸಂಪರ್ಕ ವಿಭಾಗವು ಅನುಮತಿಯನ್ನು ನೀಡುವುದಿಲ್ಲ.  ತನ್ನದೇ ಮಾಧ್ಯಮ ಪ್ರತಿನಿಧಿಗಳು ತಯಾರಿಸಿದ ವರದಿ, ತೆಗೆದ ಫೋಟೋ ಮತ್ತು ವಿಡಿಯೋಗಳನ್ನು ನಂತರದಲ್ಲಿ ಸಂಪಾದಿಸಿ ಸಾರ್ವಜನಿಕರಿಗೆ ಬಿಡುಗಡೆ ಮಾಡುವುದೇ ವ್ಯಾಟಿಕನ್ ಅನುಸರಿಸುವ ಪದ್ಧತಿ ಎಂದು ಹೇಳಲಾಯಿತು.  

ಜೋ-ಬಿಡೆನ್ ತನ್ನ ಪತ್ನಿ ಸಮೇತರಾಗಿ ಪೋಪ್ ಅವರನ್ನು ಭೇಟಿ ಆದರು.  ಭೇಟಿಯನ್ನು ಮಾಧ್ಯಮಗಳಿಂದ ಮುಚ್ಚಿಟ್ಟ ಇತರ ಕಾರಣಗಳನ್ನು ಅಮೇರಿಕಾದ ಮಾಧ್ಯಮಗಳು ಚರ್ಚಿಸಿದವು.  ಅಮೇರಿಕಾದ ಸರ್ಕಾರವು ಗರ್ಭಪಾತದ ಆಯ್ಕೆಯನ್ನು ಬೆಂಬಲಿಸುತ್ತದೆ. ಆದರೆ, ಚರ್ಚ್ ಈ ಆಯ್ಕೆಯನ್ನು ಒಪ್ಪುವುದಿಲ್ಲ. ಜೋಬಿಡೆನ್ ಕ್ಯಾಥೊಲಿಕ್ ಆದರೂ ಸಹ, ಅವರು ಗರ್ಭಪಾತದ ಆಯ್ಕೆಯ ಪರವಾಗಿದ್ದಾರೆ. ಈ ಕಾರಣಕ್ಕಾಗಿ ಅವರ ಮೇಲೆ ಅಮೇರಿಕಾದ ಚರ್ಚ್ ಗೆ ಅವರ ಮೇಲೆ ಅಸಮಧಾನವಿದೆ.  ಅನೇಕ ಅಮೇರಿಕಾದ ಕ್ರೈಸ್ತ ನಾಯಕರು ಬಿಡೆನ್ ಅವರನ್ನು ಬಹಿಷ್ಕರಿಸಬೇಕೆಂದು ಪೋಪ್ ಅವರಲ್ಲಿ ಮನವಿಯನ್ನೂ  ಸಹ ಮಾಡಿದ್ದಾರೆ.  ಈ ವಿಷಯವು ಪೋಪ್ ಮತ್ತು ಬಿಡೆನ್ ಮಧ್ಯೆ ಚರ್ಚೆಯಲ್ಲಿ ಬಂದರೂ ಅದು ಜಗತ್ತಿಗೆ ತಿಳಿಯಬಾರದೆಂಬುದು ಮಾಧ್ಯಮಗಳ ಅನುಮತಿನಿರಾಕರಣೆಗೆ ಮೊದಲ ಕಾರಣ. 

ಜೊ ಬಿಡೆನ್ ಪತ್ನಿ ಪೋಪ್ ಅವರನ್ನು ಭೇಟಿಮಾಡಲು ಬಂದಾಗ ಕ್ರೈಸ್ತ ಪದ್ಧತಿಯಂತೆ ವಸ್ತ್ರಧಾರಣೆಯನ್ನು ಮಾಡಿ ಬಂದಿದ್ದರು. ಇದು ಅಮೇರಿಕಾದ ಅಧ್ಯಕ್ಷರು ಮತ್ತು ಅವರ ಪತ್ನಿಯವರ ಕ್ಯಾಥೋಲಿಕ್ ಮತ ಶ್ರದ್ಧೆಯನ್ನು ತೋರಿಸುತ್ತದೆ. ಜೊತೆಗೆ, ಜೋ ಬಿಡೆನ್ ಅಥವಾ ಅವರ ಪತ್ನಿಯವರು ಪೋಪ್ ಅವರ ಬಳಿ ಕ್ರೈಸ್ತ ಮತೀಯ ಆಚರಣೆಗಳಾದ ‘ತಪ್ಪೊಪ್ಪಿಗೆ’ ಮತ್ತು ‘ಪಶ್ಚಾತ್ತಾಪ’ ಗಳ ವಿಧಿಗಳನ್ನು ಆಚರಿಸಬಹುದೆಂದೂ ಮತ್ತು ಅದು ಮಾಧ್ಯಮಗಳಿಗೆ ತಿಳಿಯದಿರುವುದು ಸೂಕ್ತವೆಂದೂ ವಿಶ್ಲೇಷಿಸಲಾಯಿತು. 

ಅದೇ ರೀತಿ ಭಾರತದ ಪ್ರಧಾನಿಯವರ ಭೇಟಿಯ ಮಾಹಿತಿಯನ್ನೂ ಸಹ ಭೇಟಿಯ ನಂತರದಲ್ಲೇ ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ನೀಡಲಾಯಿತು.  ಮತಾಂತರದಿಂದ ನೊಂದ ಭಾರತದ ಪ್ರಧಾನಿ ಅದರ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇರುವುದರಿಂದ ಅದು ನೇರವಾಗಿ ಸಾರ್ವಜನಿಕರಿಗೆ ತಲುಪುವುದು ಸೂಕ್ತವಾಗಿರಲಿಲ್ಲ.  ಮೋದಿಯವರು ಪಾಗನ್ ರೀತಿ-ನೀತಿ-ಶಿಷ್ಟಾಚಾರಗಳನ್ನು ಆಚರಿಸುವುದರಿಂದ ನೇರ ಪ್ರಸಾರವಾಗಲೀ, ಮಾಧ್ಯಮಗಳಿಗೆ ಮುಕ್ತ ಅವಕಾಶಗಳಾಗಲೀ ನೀಡುವುದು ಸಂಪರ್ಕ ವಿಭಾಗಕ್ಕೆ ಸಾಧ್ಯವಾಗಲಿಲ್ಲ.  

ನವೆಂಬರ್ ತಿಂಗಳ ಕೊನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದ ಅಧ್ಯಕ್ಷರಾದ ಎಮ್ಯಾನ್ಯುಯಲ್ ಮ್ಯಾಕ್ರೋನ್ ಅವರನ್ನು ವ್ಯಾಟಿಕನ್ ಪದ್ಧತಿಯಲ್ಲೇ ಭೇಟಿಯಾದರು.  ಭೇಟಿಯ ನಂತರದಲ್ಲಿ ಭೇಟಿಯ ಪ್ರಾರಂಭದಲ್ಲೇ ಅವರಿಬ್ಬರ ನಡುವೆ ನಡೆದ ಸಂಭಾಷಣೆಯ ತುಣುಕೊಂದು ಸಾರ್ವಜನಿಕರಿಗೆ ಸಿಕ್ಕಿತು.   ‘ಎಲ್ಲಾ ಹೇಗೆ ನಡೆಯುತ್ತಿದೆ” ಎಂದು ಅಧ್ಯಕ್ಷರು ಕೇಳಿದರೆ, ‘ಇನ್ನೂ ಬದುಕಿದ್ದೇನೆ” ಎಂದು ಪೋಪ್ ಉತ್ತರಿಸುತ್ತಾರೆ.  ಪೋಪ್ ಅವರ ಈ ಮಾತುಗಳು ದುಃಖಪಟ್ಟು ಅಥವಾ ಮನನೊಂದು ಆಡಿದ ಮಾತುಗಳೇ, ಅದನ್ನು ಫ್ರಾನ್ಸ್ ಅಧ್ಯಕ್ಷರ ಮುಂದೆ ಆಡಿದ್ದೇಕೆ ಎನ್ನುವ ಪ್ರಶ್ನೆಗಳು ಎದ್ದವು. 

ಅದೇ ದಿನ ಪ್ಯಾರಿಸ್ ನ ಆರ್ಚ್ ಬಿಷಪ್ ಮೈಖೇಲ್ ಆಪೆಟಿಟ್ ಅವರು ಫ್ರಾನ್ಸಿಸ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಕಳಿಸಿದ್ದರು.  ಫ್ರಾನ್ಸಿನ ಮಾಧ್ಯಮಗಳು ಆರ್ಚ್ ಬಿಷಪ್ ಅವರು ಮಹಿಳೆಯೊಬ್ಬರ ಜೊತೆ ಹೊಂದಿದ್ದ ವಿವಾದಾತ್ಮಕ ಸಂಬಂಧಗಳನ್ನು ಬಹಿರಂಗಗೊಳಿಸಿದ ನಂತರ ಅದನ್ನು ಒಪ್ಪಿಕೊಂಡು ಅವರು ತಮ್ಮ ರಾಜಿನಾಮೆಯನ್ನು ನೀಡಿದ್ದರು.   ಇದಕ್ಕೂ ಕೆಲ ಸಮಯದ ಮೊದಲು ಒಂದು ವಿಸ್ಫೋಟಕ ತನಿಖಾ ವರದಿಯು ಫ್ರಾನ್ಸ್ ದೇಶದಲ್ಲಿ ಪ್ರಕಟವಾಗಿತ್ತು. ಈ ವರದಿಯ ಪ್ರಕಾರ 1950 ರಿಂದ ಎಪ್ಪತ್ತು ವರ್ಷಗಳಲ್ಲಿ ದೇಶದಲ್ಲಿ ಸುಮಾರು 3.5 ಲಕ್ಷ ಮಕ್ಕಳನ್ನು ಕ್ಯಾಥೋಲಿಕ್ ಚರ್ಚ ನ ಪಾದ್ರಿಗಳು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದರು.  

ಈ ಪ್ರಕರಣಗಳಲ್ಲಿ ಫ್ರಾನ್ಸ್ ದೇಶದ ರಾಜಕಾರಣ ಮತ್ತು ಮಾಧ್ಯಮಗಳ ಪಾತ್ರದ ಬಗ್ಗೆ ಬಹುಶಃ ಕ್ಯಾಥೋಲಿಕ್ ನಾಯಕರಿಗೆ ಅಸಮಾಧಾನ ಇರಬಹುದು.  ಆ ಕಾರಣಕ್ಕಾಗಿಯೇ, ಪೋಪ್ ಅವರು ‘ಇನ್ನೂ ಬದುಕಿದ್ದೇನೆ’ ಎಂಬಂಥಹ ಮಾತುಗಳನ್ನು ಆಡಿರಬಹುದು ಎಂಬ ವಿವರಣೆಗಳು ದೊರೆತವು. 

ಇಂದು ವ್ಯಾಟಿಕನ್ ಸಂಪರ್ಕ ವಿಭಾಗವು ಪೋಪ್ ಮತ್ತು ಕ್ಯಾಥೋಲಿಕ್ ಚರ್ಚ್ ನ ಎಲ್ಲಾ ಸಂವಹನ ಅಗತ್ಯಗಳನ್ನೂ ಪೂರೈಸುತ್ತದೆ.  2015 ರಲ್ಲಿ ಪೋಪ್ ಫ್ರಾನ್ಸಿಸ್ ಈ ವಿಭಾಗವನ್ನು ಪ್ರಾರಂಭಿಸಿದರು.  ಈ ಹಿಂದೆ ಚರ್ಚಿನ ಅಗತ್ಯಗಳನ್ನು ಪೂರೈಸಲು ವಿವಿಧ ಕಾಲಘಟ್ಟಗಳಲ್ಲಿ ಸ್ಥಾಪಿತವಾಗಿದ್ದ ಮುದ್ರಣಾಲಯ, ಅಂತರ್ಜಾಲ, ದಿನ ಪತ್ರಿಕೆ, ವ್ಯಾಟಿಕನ್ ಸುದ್ದಿಮಾಧ್ಯಮ, ವ್ಯಾಟಿಕನ್ ಪ್ರಕಾಶನ ಸಂಸ್ಥೆ, ಚಿತ್ರ, ಧ್ವನಿ ಮತ್ತು ಚಲನಚಿತ್ರ ಮಾಧ್ಯಮಗಳು, ವ್ಯಾಟಿಕನ್ ರೇಡಿಯೋ ಗಳು ಈ ವಿಭಾಗದ ಭಾಗಗಳಾಗಿವೆ.  ವ್ಯಾಟಿಕನ್ ಸಂಪರ್ಕ ವಿಭಾಗವನ್ನು ನಿರ್ವಹಿಸಲು ಡಿಸೆಂಬರ್, 2021 ರ ಮೊದಲವಾರದಲ್ಲಿ ಐದು ಮಂದಿಯ ಹೊಸ ತಂಡವನ್ನು ನೇಮಕಮಾಡಲಾಗಿದೆ.  ಇವರಲ್ಲಿ ಇಬ್ಬರು ಹಿರಿಯ ಬಿಷಪ್ ಗಳೂ, ಒಬ್ಬರು ಕಿರಿಯ ಬಿಷಪ್, ಒಬ್ಬರು ಕಾರ್ಡಿನಲ್ ಮತ್ತು ಒಬ್ಬರು ಸಿಸ್ಟರ್ ಇದ್ದಾರೆ.  

ಜಗತ್ತಿನಾದ್ಯಂತ ಮತ ಪ್ರಚಾರದ ಬಿರುಸನ್ನು ಹೆಚ್ಚಿಸುವ ಚರ್ಚ್ ನ ಪ್ರಯತ್ನಗಳಿಗೆ ಹೆಚ್ಚಿನ ಕೊಡುಗೆಯನ್ನು ಪೋಪ್ ಫ್ರಾನ್ಸಿಸ್ ಅವರು ಸಂಪರ್ಕವಿಭಾಗದಿಂದ ನಿರೀಕ್ಷಿಸುತ್ತಿದ್ದಾರೆ.  ಪೋಪ್ ಮತ್ತು ವ್ಯಾಟಿಕನ್ ಇವೆರಡನ್ನೂ ಜಗತ್ತಿನ ಮುಂದಿಡುವ ಗುರುತರ ಕೆಲಸ ಸಂಪರ್ಕವಿಭಾಗ ಜಾಗರೂಕತೆಯಿಂದ ನಿರ್ವಹಿಸುತ್ತದೆ.  ಅತಿ ನಿಯಂತ್ರಿತವಾಗಿ ಬಿಡುಗಡೆಮಾಡುವ ತುಣುಕುಗಳೇ ಇಷ್ಟು ಚರ್ಚೆಯನ್ನು ಸೃಷ್ಟಿಸುವುದಾದರೆ,  ಮಾಧ್ಯಮಗಳಿಗೆ ಪೋಪ್ ಅವರ ಭೇಟಿಯ ಎಲ್ಲಾ ವಿವರಗಳೂ ಸಿಕ್ಕರೆ ಆಗಬಹುದಾದ ಪರಿಣಾಮಗಳನ್ನು ಗಮನಿಸಿಯೇ, ವ್ಯಾಟಿಕನ್ ಮಾಧ್ಯಮ ನೀತಿ ರೂಪಿತವಾಗಿದೆ ಎಂದೆನಿಸುತ್ತದೆ.

  • email
  • facebook
  • twitter
  • google+
  • WhatsApp
Tags: freedommediapopepressvatican

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಸಾವರ್ಕರರ ಅತಿ ಮಹತ್ವದ ಚಿಂತನೆ “ದೇಶ ಮೊದಲು” – ಉದಯ್ ಮೆಹ್ರೂರ್ಕರ್

ಸಾವರ್ಕರರ ಅತಿ ಮಹತ್ವದ ಚಿಂತನೆ "ದೇಶ ಮೊದಲು" - ಉದಯ್ ಮೆಹ್ರೂರ್ಕರ್

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

Naykapu: RSS PATH SANCHALAN

Naykapu: RSS PATH SANCHALAN

January 28, 2013
Allahabad HC verdict minus trifurcation is RSS’s demand: Ram Madhav

Allahabad HC verdict minus trifurcation is RSS’s demand: Ram Madhav

May 9, 2011

Download Ram Madhav’s book on COMMUNAL VIOLENCE BILL

December 5, 2013
Memories of RSS ABPS-2011 at Puttur – Karnataka

Memories of RSS ABPS-2011 at Puttur – Karnataka

November 9, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In