• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಆನಂದ ಕುಮಾರಸ್ವಾಮಿ ಬರಹಗಳ ಪುಷ್ಕಳ ಯಾದಿ

Vishwa Samvada Kendra by Vishwa Samvada Kendra
August 25, 2021
in Articles
250
1
Ananda Coomaraswamy – A Rare Polymath and a Warrior of Dharma

Ananda Coomaraswamy

491
SHARES
1.4k
VIEWS
Share on FacebookShare on Twitter

ಆನಂದ ಕುಮಾರಸ್ವಾಮಿ ಬರಹಗಳ ಪುಷ್ಕಳ ಯಾದಿ

ಇತ್ತೀಚೆಗಷ್ಟೇ, ಆಗಸ್ಟ್ ೨೨ ರಂದು ಆನಂದ ಕುಮಾರಸ್ವಾಮಿಯವರ ಜನ್ಮದಿನವಿತ್ತು. ಭಾರತೀಯ ಕಲಾತತ್ತ್ವವನ್ನು ಪಾಶ್ಚಾತ್ಯ ವಿದ್ವದ್ವಲಯಕ್ಕೆ ಪರಿಣಾಮಕಾರಿಯಾಗಿ ಪರಿಚಯಿಸಿದವರಲ್ಲಿ ಕುಮಾರಸ್ವಾಮಿ ಪ್ರಮುಖರು. ಹದಿನೇಳನೇ ವಯಸ್ಸಿನಿಂದಲೆ ಬರವಣಿಗೆಯಲ್ಲಿ ತೊಡಗಿದ್ದ ಕುಮಾರಸ್ವಾಮಿ, ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಲೇಖನ ಕೃಷಿ ಮಾಡಿದವರು.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

Ananda Coomaraswamy

ಪುಸ್ತಕ, ಪ್ರಬಂಧ, ವಿಮರ್ಶೆ, ಅನುವಾದಗಳನ್ನೊಳಗೊಂಡಂತೆ ಸುಮಾರು ಸಾವಿರದೈನೂರಕ್ಕೂ ಹೆಚ್ಚು ಬರಹಗಳನ್ನು ಅವರು ಪ್ರಕಟಿಸಿದ್ದಾರೆ. ಸಾವಿರದೈನೂರು ಲೇಖನಗಳನ್ನು ಒಬ್ಬ ವ್ಯಕ್ತಿ ಬರೆಯುವುದೆಂದರೆ ತಮಾಷೆಯ ಮಾತಲ್ಲ. ಅಲ್ಲದೆ ಸ್ವಾಮಿಯವರು ಬರೆದಿರುವುದು ಸಾಮಾನ್ಯ/ಮಾಹಿತಿಯುಕ್ತ ಲೇಖನಗಳಂತಹ ಬರಹಗಳಲ್ಲ. ಅವೆಲ್ಲಾ ಪ್ರೌಢ ಪ್ರಬಂಧಗಳು (scholarly articles). ಅಂಥ ಒಂದೊಂದು ಪ್ರಬಂಧ ಬರೆಯುವುದಕ್ಕೂ ಹಲವು ಕಾಲದ ಓದು ಬೇಕಾಗುತ್ತದೆ. ಅಲ್ಲದೆ ಕೇವಲ ಓದಿನಿಂದ ಒಳನೋಟಗಳು ಬರುವುದಿಲ್ಲ, ನಿರಂತರ ಮನನ, ಆಲೋಚನೆಯ ಪಕ್ವತೆ ಬೇಕಾಗುತ್ತದೆ. ಹೀಗೆ ಗುಣ ಗಾತ್ರಗಳಲ್ಲಿ, ಆಳ ವಿಸ್ತಾರ ಹೊಂದಿರುವ ಬರಹಗಳು ಸ್ವಾಮಿಯವರದ್ದು.

ಅವರ ಬರಹಗಳನ್ನು ಓದುವುದು ಒಂದೆಡೆಯಾದರೆ, ಕಾಲಾನುಕಾಲಕ್ಕೆ ಬೇರೆ ಬೇರೆ ದೇಶದ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅವರ ಬರಹಗಳು ಎಷ್ಟಿವೆ, ಎಲ್ಲಿ ಸಿಗುತ್ತವೆ ಎಂದು ಹುಡುಕುವುದೇ ಕಷ್ಟಕರವಾಗಿತ್ತು. ಅವರ ಮಗ ರಾಮ ಕುಮಾರಸ್ವಾಮಿಯವರು, ದೊರೈ ರಾಜ ಅವರು ಮತ್ತು ಇನ್ನಿತರರು ಲಭ್ಯವಿರುವ ಅವರ ಬರಹಗಳ ಪಟ್ಟಿಯನ್ನು ಆಗಾಗ ಮಾಡಿದ್ದರಾದರೂ  ಅವೆಲ್ಲಾ  ಅಪೂರ್ಣವೆ ಆಗಿತ್ತು.

ಹೀಗಾಗಿ ಸ್ವಾಮಿಯವರ ಬರಹಗಳ ಅಷ್ಟೂ ವಿವರಗಳನ್ನು ಕಲೆ ಹಾಕಲು IGNCA (INDIRA GANDHI  NATIONAL CENTER FOR THE ARTS) ನಿರ್ಧರಿಸಿ ಆ ಕೆಲಸವನ್ನು ಜೇಮ್ಸ್ ಎಸ್ ಕ್ರೌಚ್ (JAMES S CROUCH) ರವರಿಗೆ ಒಪ್ಪಿಸಿತು. ಅದರ ಫಲವೇ ೨೦೦೨ರಲ್ಲಿ ಪ್ರಕಟವಾದ ‘A BIBLIOGRAPHY OF ANANDA KENTISH COOMARASWAMY’ ಪುಸ್ತಕ.

ಬರೋಬ್ಬರಿ ಐನೂರು ಪುಟಗಳ ಈ ಪುಸ್ತಕದಲ್ಲಿ ಸ್ವಾಮಿಯವರ ಬರಹಗಳ ಪಟ್ಟಿಯಲ್ಲದೆ ಇನ್ನೇನೂ ಇಲ್ಲ. ಆದರೆ ಒಬ್ಬ ಸಂಶೋಧನಾ ವಿದ್ಯಾರ್ಥಿಗೆ ಸುಮ್ಮನೆ ಈ ಪುಸ್ತಕವನ್ನು ಅವಲೋಕಿಸುವುದೂ ಒಂದು ಶಿಕ್ಷಣವೇ. ಮಾಹಿತಿ ಸಂಗ್ರಹ, ಆಕರ ಪರಿಶೀಲನೆ, ಕಾರ್ಯಸಮಗ್ರತೆಗಳಿಗೆ ಈ ಪುಸ್ತಕ ಕೈಗನ್ನಡಿಯಾಗಿದೆ. ಇಪ್ಪತು ವರ್ಷಗಳ ಶ್ರಮ ಈ ಪುಸ್ತಕದ ಹಿಂದಿದೆ. ಹಲವು ದೇಶಗಳ ಗ್ರಂಥಾಲಯ, ಪತ್ರಿಕಾ ಕಛೇರಿಗಳಿಗೆ ತಾವೇ ಭೇಟಿ ಕೊಟ್ಟು, ಸ್ವಾಮಿಯವರ ಲಭ್ಯವಿರುವ ಎಲ್ಲಾ ಬರಹಗಳನ್ನೂ ಗುಡ್ಡೆ ಹಾಕಿದ್ದಾರೆ ಜೇಮ್ಸ್. ನಂತರ ಐದು ವಿಭಾಗಗಳನ್ನು ಮಾಡಿದ್ದಾರೆ.

  • ಸ್ವಾಮಿಯವರ ಒಟ್ಟು ೯೫ ಪುಸ್ತಕಗಳು. ಪುಸ್ತಕದ ಪ್ರಕಟಣಾ ವಿವರಗಳು, ವಿಷಯ ಸೂಚಿ ಮತ್ತು ಆ ಕೃತಿಗೆ ಬಂದ ವಿಮರ್ಶೆಗಳು.
  • ಬೇರೆ ಬೇರೆ ಪುಸ್ತಕಗಳಿಗೆ ಸ್ವಾಮಿ ಬರೆದಿರುವ ೯೬ ಲೇಖನಗಳು, ಲೇಖನದ ವಿಷಯ ಮತ್ತು ಸಂದರ್ಭ ಸೂಚಿ.
  • ಪತ್ರಿಕೆ, ನಿಯತಕಾಲಿಕೆ ಇತ್ಯಾದಿಗಳಲ್ಲಿ  ಪ್ರಕಟಗೊಂಡ ಸ್ವಾಮಿಯವರ ೯೦೯ ಲೇಖನಗಳು. ಲೇಖನದ ವಿಷಯ ಮತ್ತು ಸಂದರ್ಭ ಸೂಚಿ.
  • ಇತರ ಪ್ರಕಟಣೆಗಳು ೩
  • ಸ್ವಾಮಿಯವರ ಬಗ್ಗೆ ಇತರರು ಉಲ್ಲೇಖಿಸಿರುವ, ವಿಮರ್ಶಿಸಿರುವ ೨೧೬ ಬರಹಗಳು ಮತ್ತು ಅದರ ಸಂದರ್ಭ ಸೂಚಿ.

ಮೇಲ್ನೋಟಕ್ಕೆ ಈ ಪುಸ್ತಕ ಸಪ್ಪೆ ಎನಿಸಬಹುದಾದರೂ, ಗಂಭೀರ ವಿದ್ವಾಂಸನೊಬ್ಬನ ಬರಹದ ಹರಹು (ಸನಾತನ ಧರ್ಮ, ಕಲಾತತ್ವ, ತತ್ವಶಾಸ್ತ್ರ, ಅಧ್ಯಾತ್ಮ, ವಿಜ್ಞಾನ, mythology ಇತ್ಯಾದಿ) ಮತ್ತು ಅದರ ಮಹತ್ವವನ್ನು ಅರಿತ ವಿದ್ವಾಂಸನೊಬ್ಬ, ಅವನ್ನೆಲ್ಲಾ ಕಲೆ ಹಾಕಲು ಪಟ್ಟಿರುವ ಶ್ರಮದ ಬಗ್ಗೆ ಮೆಚ್ಚುಗೆ ಮೂಡದಿರದು.

ಕುಮಾರಸ್ವಾಮಿಯವರ  ಬರಹಗಳನ್ನೇ ನೇರವಾಗಿ ಓದಬಯಸುವವರಿಗೆ ಅವರ ಹಲವಾರು ಪುಸ್ತಕಗಳು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ. Archive.org ಯಲ್ಲಿ ಅವರ ಪ್ರಮುಖ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳಹುದು.

ಇನ್ನು ಕುಮಾರಸ್ವಾಮಿಯವರ ಬರಹಗಳನ್ನು ಏಕೆ ಓದಬೇಕು? ಅದನ್ನು ಕ್ರಮವಾಗಿ ನೋಡೋಣ.

(ಸಶೇಷ)

  • email
  • facebook
  • twitter
  • google+
  • WhatsApp
Tags: Anand Coomaraswamy

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಕ್ಲಬ್ ಹೌಸ್ ನ ‘ವಿರಾಟ್ ಹಿಂದೂ ಸಮಾವೇಶ’ದಲ್ಲಿ ಡಾ. ಕಲ್ಲಡ್ಕ ಭಟ್ಟರ ದಿಕ್ಸೂಚಿ ಭಾಷಣ

ಕ್ಲಬ್ ಹೌಸ್ ನ 'ವಿರಾಟ್ ಹಿಂದೂ ಸಮಾವೇಶ'ದಲ್ಲಿ ಡಾ. ಕಲ್ಲಡ್ಕ ಭಟ್ಟರ ದಿಕ್ಸೂಚಿ ಭಾಷಣ

Comments 1

  1. Anup Kulkarni says:
    9 months ago

    ಇದನ್ನು ಓದಿದ ಮೇಲೆ ಇವರ ಲೇಖನಗಳ ಬಗ್ಗೆ, ಮತ್ತು ವಿಷಯಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆನಿಸುತ್ತದೆ.

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Voice of India Kannada Series books released by Mujaffar Hussain at Bangalore

Voice of India Kannada Series books released by Mujaffar Hussain at Bangalore

April 25, 2012
Day-4 : Pledged to conserve environment, thousands of students performed Prakruti Vandana at HSSF Bengaluru

Day-4 : Pledged to conserve environment, thousands of students performed Prakruti Vandana at HSSF Bengaluru

December 13, 2015

‘No Hindutva; No Support’ says Dr Togadia on Politicians

June 13, 2013
VHP Chief Dr Pravin Togadia denied entry in to Jammu, stopped at Air Port by officials

VHP Chief Dr Pravin Togadia denied entry in to Jammu, stopped at Air Port by officials

March 27, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In