ಢೊಂಗಿ ಮಾತು, ಸುಳ್ಳು ಭರವಸೆ | ದಲಿತರ ಅನುದಾನಕ್ಕೆ ಕಾಂಗ್ರೆಸ್ ಕನ್ನ | ಗೋವಿಂದ ಕಾರಜೋಳ
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭರವಸೆಗಳನ್ನ ಈಡೇರಿಸುವ ಸಲುವಾಗಿ ಎಸ್ ಸಿ, ಎಸ್ ಟಿ ಹಣವನ್ನ ಬಳಸಿಕೊಳ್ಳುತ್ತಿದೆ. ಸುಳ್ಳು ಭರವಸೆ ಡೋಂಗಿ ಮಾತುಗಳನ್ನ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದಲಿತರ ಅನುದಾನಕ್ಕೆ ಕನ್ನ ಹಾಕುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ದಲಿತರ ಸಂವಿಧಾನವಾಗಿ ಸಿಕ್ಕ ಹಣ ದಲಿತರ ಅಭಿವೃದ್ದಿಗೆ ಸಿಗಬೇಕು. ಕಾಂಗ್ರೆಸಿಗೆ ಯಾವಾಗ ಓಟ್ ಬ್ಯಾಂಕ್ ನೆನಪಾಗುತ್ತೋ ಆಗೆಲ್ಲಾ ಅಂಬೇಂಡ್ಕರ್, ಸಂವಿಧಾನ ನೆನಪಾಗುತ್ತದೆ ಎಂದು ಬಿಜೆಪಿ ನಾಯಕರಾದ ಗೋವಿಂದ ಕಾರಜೋಳ ಅವರು ಮಾತನಾಡಿದ್ದಾರೆ.