Categories

ಬಹುತ್ವ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು । ರಾಘವೇಂದ್ರ ಕುಲಕರ್ಣಿ

ಬಹುತ್ವ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು । ರಾಘವೇಂದ್ರ ಕುಲಕರ್ಣಿ

 

ಬಹುತ್ವ.  ಇದರಲ್ಲಿ ತ್ವ ಅಂತ  ಇದೆ.  ನಿಮಗನ್ನಿಸಬಹುದು ಏನಿದು ಹೊಸದೊಂದು ಶೈಲಿ ನಡೆಯುತ್ತಿದೆ. ಎಲ್ಲದಕ್ಕೂ ತ್ವ ತ್ವ ತ್ವ  ಸೇರಿಸುತ್ತಿದ್ದಾರೆ ಎಂದು.  ತ್ವ  ಎನ್ನುವುದನ್ನ  ನಾವು ಅಸಾಧಾರಣವಾದ ಗುಣವಾಚಕವಾಗಿ ನೋಡಬಹುದು.  ತ್ವ ಎನ್ನುವುದು ಪದಗಳಲ್ಲಿಯೇ ಗುಣಗಳನ್ನ ಕಂಡು ಹಿಡಿಯುವುದಕ್ಕೆ ಸಹಾಯ ಮಾಡುತ್ತದೆ.  ಇದು ಹೊಸದಲ್ಲ. ಈಗಾಗಲೇ ನಾವು ಇದನ್ನ ಬಳಸುತ್ತಿದ್ದೇವೆ. ಉದಾ : ಪ್ರಜಾಪ್ರಭುತ್ವ.  ಇದೇ ರೀತಿ ಇತ್ತೀಚೆಗೆ ಕೇಳಿಬರುತ್ತಿರುವ ಬಹುತ್ವ ಎನ್ನುವ ಪದ ಮತ್ತು ಅದರ ಗುಣಗಳು ಉಳಿಯಬೇಕಾದರೇ ಹಿಂದುತ್ವ ಎನ್ನವುದು ಉಳಿಯಬೇಕು ಎಂದು ತಿಳಿಸಿದ್ದಾರೆ  ಸಂವಾದ ಫೌಂಡೇಶನ್ ನಿರ್ದೇಶಕರಾದ ರಾಘವೇಂದ್ರ ಕುಲಕರ್ಣಿಯವರು.