ಮೋಹ, ಸ್ವಾರ್ಥ,ಭೋಗ ಇದ್ದಲ್ಲಿ ಮಕ್ಕಳ ಏಳಿಗೆ ಸಾಧ್ಯವಿಲ್ಲ । ಡಾ. ಆರತಿ ವಿ. ಬಿ
ಬೆಂಗಳೂರಿನಲ್ಲಿರುವ ಉಡುಪಿ ಪುತ್ತಿಗೆ ಮಠದಲ್ಲಿ ಶ್ರೀಗಳ ಚಾತುರ್ಮಾಸ್ಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪ್ರವಚನದಲ್ಲಿ ಆಧ್ಯಾತ್ಮ ಚಿಂತಕಿ ಬಿ ವಿ ಆರತಿ ಅವರು ಮಾತನಾಡಿದರು. “ಜೀವನದಲ್ಲಿ ಲಕ್ಷ್ಯ ಇದ್ದಾಗ ಚಾಂಚಲ್ಯ ಚಾಪಲ್ಯ ಎಲ್ಲಾ ದೌರ್ಬಲ್ಯಗಳು ತಂತಾನೆ ಬಿಟ್ಟು ಹೋಗುತ್ತವೆ. ಆಚೆಯಿಂದ ಬಂದ ವಿದೇಶಿ ವ್ಯಾಮೋಹದ ಕಟ್ಟಲೆಯಲ್ಲೇ ಮಕ್ಕಳನ್ನ ಬೆಳಸಿ ಬೆಳಸಿ ಅವರ ನಿಜವಾದ ರಾಷ್ಟ್ರ ನಿರ್ಮಾಪಕ ಶಕ್ತಿ, ಧರ್ಮ ನಿರ್ಮಾಪಕ ಶಕ್ತಿ ಏನಿದೆ ಅದೆಲ್ಲವನ್ನ ಕುಂಠಿತಗೊಳಿಸುತ್ತಿದ್ದೇವೆ ಎಲ್ಲಿ ಮೋಹ ಸ್ವಾರ್ಥ ಭೋಗ ಇರುತ್ತೋ ಅಲ್ಲಿ ಮಕ್ಕಳು ಏಳಿಗ ಕಾಣುವುದಿಲ್ಲ” ಎಂದು ಪ್ರವಚನದಲ್ಲಿ ತಿಳಿಸಿದ್ದಾರೆ.