ಮನಸ್ಸಿಗೆ ಶಾಂತಿ ಬೇಕಾದರೆ ಅರಿಷಡ್ವರ್ಗಗಳನ್ನು ಬಿಟ್ಟುಬಿಡಿ । ಡಾ.ವಾಣಿಶ್ರೀ ಬಿ.ಎಂ
ಜೀವನದಲ್ಲಿ ಮುಂದೆ ಬರಬೇಕು, ನಾವೇನೋ ಸಾಧಿಸಿಬಿಡಬೇಕು ಎನ್ನುವಂಥ ಓಟದಲ್ಲಿ ಎಲ್ಲವನ್ನೂ ಕಡೆಗಣಿಸುತ್ತಿದ್ದೇವೆ. ಮನೆಯನ್ನ, ಮಡದಿ ಮಕ್ಕಳನ್ನ ಸಂಬಂಧಗಳನ್ನ, ಅಣ್ಣ ತಮ್ಮಂದಿರನ್ನ, ಅಕ್ಕ ತಂಗಿಯರನ್ನ ಯಾವುದನ್ನೂ ನಾವು ಲೆಕ್ಕಕ್ಕೆ ಇಡುತ್ತಿಲ್ಲ. ಎಲ್ಲರನ್ನೂ ಹೊರತುಪಡಿಸಿ ನಮ್ಮ ಅಭಿವೃದ್ದಿಯೇ ನಮಗೆ ಮುಖ್ಯ ಎನ್ನುವಂಥಹ ಈ ಸ್ಥಿತಿಯಲ್ಲಿ ಅಶಾಂತಿಯ ಗೂಡನ್ನಾಗಿ ಮಾಡಿಕೊಂಡು ತೊಳಲಾಡುತ್ತಿದ್ದೇವೆ. ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂಥಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವಂತದ್ದು ಶಿವ ಶರಣರ, ಹರ ಶರಣರ ನುಡಿಗಳು ಮಾತ್ರ. ಈ ರೀತಿ ವಚನ ಸಾಹಿತ್ಯದಲ್ಲಿ ಭಕ್ತಿಯ ಕುರಿತಾಗಿ ಮಾತನಾಡಿದ್ದಾರೆ ಉಪನ್ಯಾಸಕಿ ವಾಣಿಶ್ರೀ ಬಿ ಎಂ.