ಮಕ್ಕಳಲ್ಲಿ ಸಂಸ್ಕಾರ ಮತ್ತು ಜೀವನ ಮೌಲ್ಯದ ವಿಕಾಸಕ್ಕೆ ಕುಟುಂಬ ಪದ್ಧತಿ ಅತ್ಯವಶ್ಯಕ । ಕಜಂಪಾಡಿ ಸುಬ್ರಹ್ಮಣ್ಯ ಭಟ್
ಜಗತ್ತಿಗೆ ಭಾರತ ಕೊಟ್ಟ ಕೊಡುಗೆಗಳಲ್ಲಿ ಮಹತ್ತರವಾದ ಮತ್ತು ಅತ್ಯಂತ ಶ್ರೇಷ್ಠವಾದ ಕೊಡುಗೆ ಎಂದರೇ ನಮ್ಮ ಕುಟುಂಬ ಪದ್ಧತಿ. ಮಕ್ಕಳಲ್ಲಿ ಸಂಸ್ಕಾರ ಜೀವನಮೌಲ್ಯಗಳು ವಿಕಾಸ ಆಗಲಿಕ್ಕೆ ಮನೆಯ ನಮ್ಮ ದೈನಂದಿನ ಚಟುವಟಿಕೆಗಳು ಅನೇಕ ರೀತಿಯಲ್ಲಿ ಸಹಾಯಕವಾಗುತ್ತವೆ. ವಾರಕ್ಕೊಮ್ಮೆಯಾದರೂ ಒಟ್ಟಿಗೆ ಭಜನೆ, ಭೋಜನ ಮಾಡುವುದು, ಮನೆಯಲ್ಲಿ ನಮ್ಮ ಭಾಷೆ ಮಾತನಾಡುವುದು, ನಮ್ಮ ನಡವಳಿಕೆ, ವರ್ಷಕ್ಕೊಂದು ತೀರ್ಥಯಾತ್ರೆ ಇವುಗಳು ಮಕ್ಕಳಲ್ಲಿ ಜೀವನ ಮೌಲ್ಯದ ವಿಕಾಸವನ್ನ ತುಂಬುತ್ತವೆ ಎಂದು ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.