EDP ಉಚಿತ ತರಬೇತಿ ಪಡೆದು ನೀವೂ ಉದ್ಯಮಿಗಳಾಗಿ | ಡಾ. ವಿನಾಯಕ್ ನಿರಂಜನ್
ಇತ್ತೀಚೆಗೆ ಜನ ಆರೋಗ್ಯದ ಕಡೆ ಗಮನ ಹರಿಸುವುದು ಹೆಚ್ಚಾಗಿರುವುದರಿಂದ ಸಿರಿಧಾನ್ಯಗಳ ಕಡೆ ಆಸಕ್ತಿಯೂ ಹೆಚ್ಚಾಗಿದೆ. ಹಾಗಾಗಿ ಕೃಷಿ ವಿಜ್ಞಾನ ಕೇಂದ್ರಗಳಿಂದ ರೈತರಿಗೆ, ರೈತ ಮಹಿಳೆಯರಿಗೆ, ಯುವಕ ಯುವತಿಯರಿಗೆ ಸಿರಿಧಾನ್ಯಗಳಿಂದ ಮೌಲ್ಯವರ್ಧಿತ ಪದಾರ್ಥಗಳನ್ನ ತಯಾರಿಸುವ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಇದರ ಜೊತೆ ಜೊತೆಗೆ ಎಂಪ್ಲಾಯ್ಮೆಂಟ್ ಡೆವಲಪ್ಮೆಂಟ್ ಪ್ರೋಗ್ರಾಂ ಮುಖಾಂತರ ವಿವಿಧ ಪದಾರ್ಥಗಳನ್ನ ತಯಾರು ಮಾಡಲಿಕ್ಕೆ ಮತ್ತು ಮಾರಾಟ ಮಾಡಲಿಕ್ಕೆ ಹಲವು ರೀತಿಯಲ್ಲಿ ಸಹಾಯ ಕೂಡ ಮಾಡಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ ಡಾ. ವಿನಾಯಕ್ ನಿರಂಜನ್