ಬೆಳೆಗಳ ಇಳುವರಿ ಹೆಚ್ಚಿಸುವ ಜೀವಾಮೃತ ತಯಾರಿಸುವ ವಿಧಾನ । ಏಕಾಂತಪ್ಪ
ಭೂಮಿಗೆ ಯಾವುದೇ ರಾಸಾಯನಿಕಗಳನ್ನ ಸಿಂಪಡಿಸದೇ ಬೆಳೆಗಳಿಗೆ ಇಳುವರಿಯನ್ನ ಹೆಚ್ಚಿಸಲು ಸಾವಯವ ಕೃಷಿ ವಿಧಾನಲ್ಲಿ ವ್ಯವಸಾಯ ಮಾಡುವವರು ಜೀವಾಮೃತದ ಬಗ್ಗೆ ತಿಳಿದುಕೊಂಡಿರಲೇ ಬೇಕು. ಈ ಜೀವಾಮೃತ ಮಾಡಲು ಯಾವ ಯಾವ ಪದಾರ್ಥಗಳನ್ನ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎನ್ನುವುದನ್ನ ತಿಳಿಸಲು ಈ ವಿಡಿಯೋವನ್ನ ನಿಮ್ಮ ಮುಂದೆ ತರಲಾಗಿದೆ. ಇಲ್ಲಿ ಏಕಾಂತಪ್ಪ ಎಂಬ ರೈತರು ಜೀವಾಮೃತ ತಯಾರಿಕೆಯ ಪ್ರಾತ್ಯಕ್ಷಿತೆಯನ್ನ ತೋರಿಸಿಕೊಟ್ಟಿದ್ದಾರೆ.