ಗುಣಮಟ್ಟದ ಶಿಕ್ಷಣದಿಂದ ಮಾತ್ರ ಪ್ರಪಂಚದಲ್ಲಿ ಬದುಕಲು ಸಾಧ್ಯ | ಡಾ.ಸಿ.ಎನ್ ಅಶ್ವಥ್ ನಾರಾಯಣ
ಅಮೆರಿಕಾದ ಬೆಳವಣಿಗೆಗೆ ಕಾರಣವೇನೆಂದರೆ ಅಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ. ಹಾಗಾಗಿ ಭಾರತ ಸೇರಿದಂತೆ ಎಲ್ಲ ದೇಶಗಳ ಪ್ರತಿಭೆಗಳು ಅಮೇರಿಕದಂತಹ ವಿದೇಶಗಳಿಗೆ ತೆರಳುತ್ತವೆ. ಭಾರತದ ಪ್ರತಿಭೆಗಳು ಭಾರತದಲ್ಲಿಯೇ ಉಳಿದು ಭಾರತದ ಶಕ್ತಿಯನ್ನ ಹೆಚ್ಚಿಸಬೇಕೆಂದರೆ ಇಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಾಗುತ್ತದೆ. ಆ ಕಾರಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿಗೆ ತರಲಾಗಿದೆ ಎಂದು ಶಾಸಕರು, ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಎನ್ ಇ ಪಿ ಕಾರ್ಯಗಾರದಲ್ಲಿ ತಿಳಿಸಿದ್ದಾರೆ.