ಬಿಟ್ಟಿಭಾಗ್ಯಕ್ಕಾಗಿ ಖಜಾನೆ ಖಾಲಿ | ಬರಪೀಡಿತರಿಗೆ ನೀಡಲು ಇಲ್ಲ ಹಣ | ಡಾ. ಸಮೀರ್ ಕಾಗಲ್ಕರ್
ಚುನಾವಣೆ ಗೆಲ್ಲಬೇಕು ಎನ್ನುವ ಒಂದೇ ಕಾರಣಕ್ಕೆ ಬಿಟ್ಟಿ ಭಾಗ್ಯಗಳ ಹೆಸರಲ್ಲಿ ಆಮಿಷವನ್ನ ನೀಡಿ ಗೆದ್ದು ಬಂದದ್ದು ಕಾಂಗ್ರೆಸ್ ಸರ್ಕಾರ. ಗ್ಯಾರಂಟಿಗಳನ್ನ ಹೀಡೆರಿಸುವ ಖಜಾನೆಯನ್ನ ಖಾಲಿ ಮಾಡಿದ ಸರ್ಕಾರ ಬರ ಪರಿಹಾರಕ್ಕೆ, ಮತ್ತು ಅಭಿವೃದ್ದಿಗೆ ಹಣ ನೀಡಲಾಗದ ಪರಿಸ್ಥಿತಿಗೆ ಬಂದು ನಿಂತಿದೆ. ಅಲ್ಲದೇ ಗ್ಯಾರಂಟಿಗಳಿಂದ ಹಣ ಜನರ ಬಳಿ ಚಲಾವಣೆಯಾಗುತ್ತಿದೆ. ಹಲವು ಇಲಾಖೆಗಳು ಲಾಭದಲ್ಲಿದೆ ಎಂದು ರಾಜ್ಯದ ಸಚಿವರು ಜನರಿಗೆ ಮಂಕು ಬೂದಿಯನ್ನ ಎರಚುತ್ತಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಸರ್ಕಾರದ ರಾಜಕೀಯ ನೀತಿಗಳನ್ನ ವಿಶ್ಲೇಷಿಸಿದ್ದಾರೆ ಸಮೀರ್ ಕಾಗಲ್ಕರ್ ರವರು.