Categories

ಬದುಕ ರೂಪಿಸಿದವರ ನೆನಪು । ಡಾ. ವೀಣಾ ಬನ್ನಂಜೆ

ಆಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆಯವರು ತಮ್ಮ ಜೀವನದಲ್ಲಿ ಹಣದ ಬೆನ್ನು ಹತ್ತಿದವರಲ್ಲ. ಆದರೂ “ಅರ್ಥ” ಅವರ ಅಗತ್ಯಕ್ಕೆ ತಕ್ಕ ಹಾಗೆ ಅವರ ಹತ್ತಿರಕ್ಕೆ ಬಂದಿದೆ. ಕೈಯಲ್ಲಿ ಬಟ್ಟೆಯ ಬ್ಯಾಗು 10 ಸಾವಿರ ಹಿಡಿದು ಕಲ್ಲಹಳ್ಳಿ ಬಿಟ್ಟು ನಾಲ್ಕೈದು ತಿಂಗಳು ಸುತ್ತಿ ಬೆಂಗಳೂರಿಗೆ ಬಂದು ನೆಲೆಸಿದಾಗ ಕೈ ಖಾಲಿಯಾಗಿತ್ತು. ಆ ಹಣ ಇಲ್ಲದ ದಿನದಿಂದ ಇಲ್ಲಿಯವರೆಗೆ ಎಲ್ಲರಿಗೂ ಕುತೂಹಲ ವೀಣಾ ಅವರಿಗೆ ಹಣ ಎಲ್ಲಿಂದ ಬರುತ್ತೇ ಎಂದು ? ಇದರ ಕುರಿತಾಗಿ ಅವರೇ ಬರೆದಿರುವ ಪುಸ್ತಕ “ಅರ್ಥಯಾತ್ರೆ”. ಇಲ್ಲಿ ಅದರ ಪರಿಚಯವಿದೆ.