ತಮಿಳುನಾಡಿಗೆ ಬೆಣ್ಣೆ,ಕರ್ನಾಟಕಕ್ಕೆ ಸುಣ್ಣ । ಕಾವೇರಿ ನೀರಿಗಾಗಿ ಅರೆನಗ್ನ ಪ್ರತಿಭಟನೆ
ಕಾಂಗ್ರೆಸ್ ಸರ್ಕಾರ ಬಂದಿದ್ದೇ ಬಂದಿದ್ದು, ಕಾಲ್ಗುಣವೋ ಎಂಬಂತೆ ಬರಗಾಲವೂ ವಕ್ಕರಿಸಿದೆ. ಮಳೆ ಇಲ್ಲದೆ ಡ್ಯಾಂಗಳಲ್ಲಿ ನೆಲ ಕಾಣಿಸುವ ಪರಿಸ್ಥಿತಿ ಬಂದೊದಗಿದೆ. ಇಷ್ಟಾದರೂ ಸಹ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಟ್ಟಿದೆ. ಇದರಿಂದ ಕಾವೇರಿ ಕೊಳ್ಳದ ರೈತರ ಆಕ್ರೋಶದ ಕಟ್ಟೆಹೊಡೆದಿದೆ. ಕಾವೇರಿ ನೀರಿಗಾಗಿ ಅರೆನಗ್ನ ಪ್ರತಿಭಟನೆ ಮಾಡಿದ ರೈತರು ಸಂವಾದದೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.